ETV Bharat / snippets

ನೀರಿನ ಮೋಟರ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಗೃಹಿಣಿ ಸಾವು

author img

By ETV Bharat Karnataka Team

Published : Jul 5, 2024, 10:46 PM IST

ELECTRIC SHOCK
ಹೊನ್ನಾಳಿ ಪೊಲೀಸ್​ ಠಾಣೆ (ETV Bharat)

ದಾವಣಗೆರೆ: ನೀರಿನ ಮೋಟರ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಗೃಹಿಣಿಯೊಬ್ವಳು ಮೃತಪಟ್ಟಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ. ಸೌಭಾಗ್ಯ ನರಸಿಂಹಪ್ಪ (46) ಮೃತ ಮಹಿಳೆ. ಈ ಘಟನೆ ಗುರುವಾರ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಸೌಭಾಗ್ಯ ಬೇಲಿಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯಲ್ಲಿ ಮುಖ್ಯ ಅಡುಗೆ ತಯಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶಾಲೆಗೆ ರಜೆ ಹಾಕಿ ಬಿತ್ತನೆ ಕಾರ್ಯಕ್ಕೆ ಹೋಗಲು ಮನೆಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಮನೆಯಲ್ಲಿ ನೀರು ತುಂಬಿಸುವ ಸಲುವಾಗಿ ಮೋಟಾರ್ ಆನ್ ಮಾಡಿದಾಗ ಈ ಘಟನೆ ನಡೆದಿದೆ.

ಘಟನೆ ಸಂಬಂಧ ಹೊನ್ನಾಳಿ ಪೊಲೀಸರು, ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಿಸೇರಿಯನ್ ಮಾಡಿ ಮಗು ತೆಗೆಯುವ ವೇಳೆ ಯಡವಟ್ಟು, ನವಜಾತ ಶಿಶು ಸಾವು: ಪೋಷಕರ ಆಕ್ರೋಶ - Protest Over Baby Died

ದಾವಣಗೆರೆ: ನೀರಿನ ಮೋಟರ್ ಆನ್ ಮಾಡಲು ಹೋದಾಗ ವಿದ್ಯುತ್ ಸ್ಪರ್ಶಿಸಿ ಗೃಹಿಣಿಯೊಬ್ವಳು ಮೃತಪಟ್ಟಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ. ಸೌಭಾಗ್ಯ ನರಸಿಂಹಪ್ಪ (46) ಮೃತ ಮಹಿಳೆ. ಈ ಘಟನೆ ಗುರುವಾರ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ಸೌಭಾಗ್ಯ ಬೇಲಿಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯಲ್ಲಿ ಮುಖ್ಯ ಅಡುಗೆ ತಯಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಶಾಲೆಗೆ ರಜೆ ಹಾಕಿ ಬಿತ್ತನೆ ಕಾರ್ಯಕ್ಕೆ ಹೋಗಲು ಮನೆಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಮನೆಯಲ್ಲಿ ನೀರು ತುಂಬಿಸುವ ಸಲುವಾಗಿ ಮೋಟಾರ್ ಆನ್ ಮಾಡಿದಾಗ ಈ ಘಟನೆ ನಡೆದಿದೆ.

ಘಟನೆ ಸಂಬಂಧ ಹೊನ್ನಾಳಿ ಪೊಲೀಸರು, ಘಟನಾ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಮೂಲಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಿಸೇರಿಯನ್ ಮಾಡಿ ಮಗು ತೆಗೆಯುವ ವೇಳೆ ಯಡವಟ್ಟು, ನವಜಾತ ಶಿಶು ಸಾವು: ಪೋಷಕರ ಆಕ್ರೋಶ - Protest Over Baby Died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.