ಉಡುಪಿ: ಖಾಸಗಿ ಬಸ್ ಚಾಲಕ ಹಾಗೂ ಆತನ ಪ್ರಿಯತಮೆಯ ನಡುವೆ ವಾಗ್ವಾದ ನಡೆದು ಆತ ಬಸ್ಸನ್ನು ನಡುರಸ್ತೆಯಲ್ಲಿಯೇ ನಿಲ್ಲಿಸಿ ಹೋದ ಘಟನೆ ನಡೆದಿದೆ. ಉಡುಪಿಯಿಂದ ಸಂತೆಕಟ್ಟೆ ಭಾಗಕ್ಕೆ ತೆರಳುತ್ತಿದ್ದ ಬಸ್ಗೆ ನಿಟ್ಟೂರು ಬಳಿ ಚಾಲಕನ ಪ್ರೇಯಸಿ ಹತ್ತಿದ್ದಾಳೆ. ಅಲ್ಲಿಂದಲೇ ಅವರ ನಡುವೆ ವಾಗ್ಯುದ್ಧ ಶುರುವಾಗಿತ್ತು.
ನಿರ್ವಾಹಕ ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಪ್ರೇಯಸಿಯ ಕಿರಿಕಿರಿಯಿಂದ ರೋಸಿ ಹೋದ ಚಾಲಕ ಆಶೀರ್ವಾದ್ ಚಿತ್ರಮಂದಿರದ ಸ್ವಲ್ಪ ಮುಂದಕ್ಕೆ ಬಸ್ ನಿಲ್ಲಿಸಿ ತಾನೂ ಇಳಿದು ಹೋಗಿದ್ದಾನೆ. ಇತ್ತ ಪ್ರೇಯಸಿ ಕೂಡಾ ಬೇರೆಡೆ ತೆರಳಿದ್ದಾಳೆ.
ಪ್ರಯಾಣಿಕರು ಇದನ್ನೆಲ್ಲಾ ನೋಡಿಯೇ ಬಾಕಿಯಾದರು. ಬಳಿಕ ಬಸ್ ನಿರ್ವಾಹಕನೇ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ. ಸಂಜೆಯ ವೇಳೆ ಘಟನೆ ನಡೆದಿದ್ದು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: 300 ಕೋಟಿ ದರೋಡೆಗೆ ಸಂಚು; 9 ಲಕ್ಷ ಕದ್ದ ಗ್ರಾಪಂ ಸದಸ್ಯ ಸೇರಿ 10 ಜನರ ಬಂಧನ - house robbery in Mangaluru