ಬೆಂಗಳೂರು: ಚಿನ್ನದಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರು, ಪೊಲೀಸರು ಬರುತ್ತಿದ್ದಂತೆ ಕಾಲ್ಕಿತ್ತ ಘಟನೆ ಭಾನುವಾರ ನಸುಕಿನಜಾವ ಅವೆನ್ಯೂ ರಸ್ತೆಯಲ್ಲಿ ನಡೆದಿದೆ. ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ. ಇಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಅವೆನ್ಯೂ ರಸ್ತೆಗೆ ಬಂದಿದ್ದ ಆರೇಳು ಮಂದಿ ಖದೀಮರು ಸಂಕೇಶ್ವರ ಜ್ಯೂವೆಲರ್ಸ್ ಹಾಗೂ ಧರ್ಮೇಶ್ ಜ್ಯೂವೆಲರ್ಸ್ ಅಂಗಡಿಗಳಲ್ಲಿ ಶಟರ್ಸ್ ಮುರಿಯಲು ಯತ್ನಿಸಿದ್ದಾರೆ. ಬೀಗ ಒಡೆಯುವ ಶಬ್ಧ ಕೇಳಿದ ವಾಚ್ ಮ್ಯಾನ್ ಒಬ್ಬರು ಪೊಲೀಸರಿಗೆ ಕರೆ ಮಾಡಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.
ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆ ಖದೀಮರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಕಳ್ಳತನದ ದೃಶ್ಯಗಳು ಸೆರೆಯಾಗದಂತೆ ಆರೋಪಿಗಳು ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ಕ್ಯಾಮೆರಾದ ಕೇಬಲ್ಗಳನ್ನ ಕತ್ತರಿಸಿರುವುದು ಸಹ ಕಂಡು ಬಂದಿದೆ. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಫ್ಲ್ಯಾಟ್, ನಿವೇಶನ ಖರೀದಿದಾರರಿಗೆ 'ರೇರಾ ಕಾಯ್ದೆ'ಯಿಂದಾಗುವ ಉಪಯೋಗವೇನು? ಇಲ್ಲಿದೆ ಸಂಪೂರ್ಣ ಮಾಹಿತಿ - RERA Act