ETV Bharat / technology

3ನೇ ವಾರಕ್ಕೆ ಕಾಲಿಟ್ಟ ಮುಷ್ಕರ; ವಿವಾದ ಬಗೆಹರಿಸಲು ಕಾರ್ಮಿಕರೊಂದಿಗೆ ಮಾತುಕತೆಗೆ ಸಿದ್ಧ ಎಂದ ಸ್ಯಾಮ್‌ಸಂಗ್ - Protest Against Samsung India

author img

By ETV Bharat Tech Team

Published : 2 hours ago

ತಮಿಳುನಾಡಿನ ಚೆನ್ನೈನಲ್ಲಿ ನಡೆಯುತ್ತಿರುವ ಸ್ಯಾಮಸಂಗ್​ ವಿರುದ್ಧದ ಮುಷ್ಕರ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿವಾದ ಬಗೆಹರಿಸಲು ನಾವು ನೇರವಾಗಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಲು ಸಿದ್ಧವೆಂದು ಸ್ಯಾಮ್‌ಸಂಗ್ ಇಂಡಿಯಾ ತಿಳಿಸಿದೆ.

DIRECTLY TO RESOLVE DISPUTE  SAMSUNG PLANT WORKERS IN CHENNAI  SAMSUNG INDIA DISPUTE  SAMSUNG INDIA NEWS
3ನೇ ವಾರಕ್ಕೆ ಕಾಲಿಟ್ಟ ಮುಷ್ಕರ (IANS, ETV Bharat)

ಚೆನ್ನೈ (ತಮಿಳುನಾಡು): ಶ್ರೀಪೆರಂಬದೂರಿನಲ್ಲಿರುವ ಸ್ಯಾಮ್‌ಸಂಗ್ ಇಂಡಿಯಾದ ಸ್ಥಾವರದಲ್ಲಿ ನಡೆಯುತ್ತಿರುವ ಸಾವಿರಾರು ಕಾರ್ಮಿಕರ ಮುಷ್ಕರ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿವಾದ ಕುರಿತು ಸೌಹಾರ್ದಯುತ ಪರಿಹಾರಕ್ಕಾಗಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಲು ಆಡಳಿತವು ಸಿದ್ಧವಾಗಿದೆ ಎಂದು ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ಕಂಪನಿ ಹೇಳಿದೆ.

ಮದ್ರಾಸ್ ಹೈಕೋರ್ಟ್ ಮತ್ತು ಕಾಂಚೀಪುರಂ ಜಿಲ್ಲಾ ನ್ಯಾಯಾಲಯದಲ್ಲಿ ಕಂಪನಿಯನ್ನು ಪ್ರತಿನಿಧಿಸುವ ಸ್ಯಾಮ್‌ಸಂಗ್ ಇಂಡಿಯಾ ವಕೀಲರು ತಮ್ಮ ಹೇಳಿಕೆಯಲ್ಲಿ, ತಮಿಳುನಾಡಿನ ಕಾರ್ಖಾನೆಯ ಕಾರ್ಮಿಕರು ಎಲ್ಲಾ ಶಾಸನಬದ್ಧ ಸವಲತ್ತುಗಳನ್ನು ಪಡೆಯುತ್ತಾರೆ ಮತ್ತು ಅವರ ವೇತನವು ಸರ್ಕಾರವು ನಿಗದಿಪಡಿಸುವುದಕ್ಕಿಂತ ಹೆಚ್ಚಿನದಾಗಿದೆ ಎಂದು ಹೇಳಿದರು.

"ನಡೆಯುತ್ತಿರುವ ಮುಷ್ಕರ ಕಾನೂನುಬಾಹಿರ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಏಕೆಂದರೆ ಕಾರ್ಮಿಕರು ಮಾಡಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಮತ್ತು ನೌಕರರ ಸಂಘವು ಇಂದಿನವರೆಗೂ ನೋಂದಣಿಯಾಗಿಲ್ಲ. ಸ್ಯಾಮ್‌ಸಂಗ್ ಇಂಡಿಯಾದ ಆಡಳಿತವು ಮುಷ್ಕರನಿರತ ಕಾರ್ಮಿಕರ ಮೇಲೆ ಸೂಕ್ತ ಕ್ರಮವನ್ನು ಹೇರಲು ಸಮರ್ಥನೆಯಾಗಿದೆ" ಎಂದು ವಕೀಲರು ಹೇಳಿದರು.

"ಆದರೂ ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ತಾಳ್ಮೆಯಿಂದಿದೆ ಮತ್ತು ವಿವಾದದ ಸೌಹಾರ್ದಯುತ ಪರಿಹಾರಕ್ಕಾಗಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಲು ಸಿದ್ಧವಾಗಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ಕಾರ್ಮಿಕರೊಂದಿಗೆ ಕುಳಿತುಕೊಳ್ಳಲು ಸಿದ್ಧವಾಗಿದೆ" ಎಂದು ವಕೀಲರು ತಿಳಿಸಿದರು.

ವೇತನ ಹೆಚ್ಚಳ, ಯೂನಿಯನ್ ಮಾನ್ಯತೆ ಮತ್ತು 8 ಗಂಟೆ ಕೆಲಸ ಸೇರಿದಂತೆ ತಮ್ಮ ಬೇಡಿಕೆಗಳನ್ನು ಜಾರಿಗೆ ತರಲು ಸೆ.9 ರಿಂದ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಕಾರ್ಖಾನೆಯ ಮುಷ್ಕರವು ಆರಂಭದಲ್ಲಿ ಟೆಲಿವಿಷನ್, ರೆಫ್ರಿಜರೇಟರ್ ಮತ್ತು ವಾಷಿಂಗ್ ಮಷಿನ್‌ಗಳಂತಹ ಗ್ರಾಹಕ ವಸ್ತುಗಳ ಉತ್ಪಾದನೆಗೆ ಹೊಡೆತ ನೀಡಿದೆ. ವಕೀಲರ ಪ್ರಕಾರ, ಕಾರ್ಮಿಕರೊಂದಿಗೆ ದೀರ್ಘಾವಧಿಯ ವೇತನ ಒಪ್ಪಂದಕ್ಕೆ ಸಹಿ ಹಾಕಲು ಮ್ಯಾನೇಜ್‌ಮೆಂಟ್ ತನ್ನ ಇಚ್ಛೆಯನ್ನು ತಿಳಿಸಿದೆ.

“ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ನಮ್ಮ ಕಾರ್ಮಿಕರೊಂದಿಗೆ ಮಾತ್ರ ಮಾತುಕತೆ ನಡೆಸುತ್ತದೆ ಮತ್ತು ಮೂರನೇ ವ್ಯಕ್ತಿಯೊಂದಿಗೆ ಅಲ್ಲ. ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ಪರವಾಗಿ, ಕಾರ್ಮಿಕರು ಕಾನೂನುಬಾಹಿರ ಮುಷ್ಕರವನ್ನು ಹಿಂತೆಗೆದುಕೊಳ್ಳಲು, ಕೆಲಸಕ್ಕೆ ಮರಳಲು ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಶೀಘ್ರವಾಗಿ ಸೌಹಾರ್ದಯುತ ರೀತಿಯಲ್ಲಿ ಪರಿಹರಿಸುವ ಉದ್ದೇಶದಿಂದ ಮಾತುಕತೆಗೆ ಮುಂದಾಗುವಂತೆ ವಿನಂತಿಸುತ್ತೇವೆ” ಎಂದು ಕಂಪನಿ ಪರ ವಕೀಲರು ಹೇಳಿದರು.

ಕಾರ್ಮಿಕರಿಗೆ ಶೋಕಾಸ್​ ನೋಟಿಸ್​: ಸ್ಯಾಮ್‌ಸಂಗ್ ಇಂಡಿಯಾದ ಚೆನ್ನೈ ಘಟಕದಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆ ಕಂಪನಿ ಶೋಕಾಸ್ ನೋಟಿಸ್ ನೀಡಿತ್ತು. ಶೋಕಾಸ್​ ನೋಟಿಸ್​ ನೀಡಿದ ಬಳಿಕ ಕೆಲ ಕಾರ್ಮಿಕರು ಕೆಲಸಕ್ಕೆ ಮರಳಿದ್ದರು. ಕೆಲಸಕ್ಕೆ ಮರಳದೇ ಇದ್ದರೆ ವೇತನ ತಡೆಹಿಡಿಯಲಾಗುವುದು ಎಂದು ಕಂಪನಿ ಎಚ್ಚರಿಸಿತ್ತು. ಹೆಚ್ಚಿನ ವಿವರಕ್ಕಾಗಿ ಈ ಲಿಂಕ್​ ಕ್ಲಿಕ್​ ಮಾಡಿ: 15ನೇ ದಿನಕ್ಕೆ ಕಾಲಿಟ್ಟ ಸ್ಯಾಮ್​ಸಂಗ್ ಕಾರ್ಮಿಕರ ಪ್ರತಿಭಟನೆ; ಶೋಕಾಸ್ ನೋಟಿಸ್‌ ಬಳಿಕ ಕೆಲವರು ಕೆಲಸಕ್ಕೆ ಹಾಜರ್ - Samsung Workers Strike

ಚೆನ್ನೈ (ತಮಿಳುನಾಡು): ಶ್ರೀಪೆರಂಬದೂರಿನಲ್ಲಿರುವ ಸ್ಯಾಮ್‌ಸಂಗ್ ಇಂಡಿಯಾದ ಸ್ಥಾವರದಲ್ಲಿ ನಡೆಯುತ್ತಿರುವ ಸಾವಿರಾರು ಕಾರ್ಮಿಕರ ಮುಷ್ಕರ ಮೂರನೇ ವಾರಕ್ಕೆ ಕಾಲಿಟ್ಟಿದೆ. ವಿವಾದ ಕುರಿತು ಸೌಹಾರ್ದಯುತ ಪರಿಹಾರಕ್ಕಾಗಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಲು ಆಡಳಿತವು ಸಿದ್ಧವಾಗಿದೆ ಎಂದು ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ಕಂಪನಿ ಹೇಳಿದೆ.

ಮದ್ರಾಸ್ ಹೈಕೋರ್ಟ್ ಮತ್ತು ಕಾಂಚೀಪುರಂ ಜಿಲ್ಲಾ ನ್ಯಾಯಾಲಯದಲ್ಲಿ ಕಂಪನಿಯನ್ನು ಪ್ರತಿನಿಧಿಸುವ ಸ್ಯಾಮ್‌ಸಂಗ್ ಇಂಡಿಯಾ ವಕೀಲರು ತಮ್ಮ ಹೇಳಿಕೆಯಲ್ಲಿ, ತಮಿಳುನಾಡಿನ ಕಾರ್ಖಾನೆಯ ಕಾರ್ಮಿಕರು ಎಲ್ಲಾ ಶಾಸನಬದ್ಧ ಸವಲತ್ತುಗಳನ್ನು ಪಡೆಯುತ್ತಾರೆ ಮತ್ತು ಅವರ ವೇತನವು ಸರ್ಕಾರವು ನಿಗದಿಪಡಿಸುವುದಕ್ಕಿಂತ ಹೆಚ್ಚಿನದಾಗಿದೆ ಎಂದು ಹೇಳಿದರು.

"ನಡೆಯುತ್ತಿರುವ ಮುಷ್ಕರ ಕಾನೂನುಬಾಹಿರ ಎಂದು ನಿಮಗೆ ತಿಳಿಸಲು ಬಯಸುತ್ತೇನೆ. ಏಕೆಂದರೆ ಕಾರ್ಮಿಕರು ಮಾಡಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ ರಾಜಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಮತ್ತು ನೌಕರರ ಸಂಘವು ಇಂದಿನವರೆಗೂ ನೋಂದಣಿಯಾಗಿಲ್ಲ. ಸ್ಯಾಮ್‌ಸಂಗ್ ಇಂಡಿಯಾದ ಆಡಳಿತವು ಮುಷ್ಕರನಿರತ ಕಾರ್ಮಿಕರ ಮೇಲೆ ಸೂಕ್ತ ಕ್ರಮವನ್ನು ಹೇರಲು ಸಮರ್ಥನೆಯಾಗಿದೆ" ಎಂದು ವಕೀಲರು ಹೇಳಿದರು.

"ಆದರೂ ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ತಾಳ್ಮೆಯಿಂದಿದೆ ಮತ್ತು ವಿವಾದದ ಸೌಹಾರ್ದಯುತ ಪರಿಹಾರಕ್ಕಾಗಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಲು ಸಿದ್ಧವಾಗಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ಕಾರ್ಮಿಕರೊಂದಿಗೆ ಕುಳಿತುಕೊಳ್ಳಲು ಸಿದ್ಧವಾಗಿದೆ" ಎಂದು ವಕೀಲರು ತಿಳಿಸಿದರು.

ವೇತನ ಹೆಚ್ಚಳ, ಯೂನಿಯನ್ ಮಾನ್ಯತೆ ಮತ್ತು 8 ಗಂಟೆ ಕೆಲಸ ಸೇರಿದಂತೆ ತಮ್ಮ ಬೇಡಿಕೆಗಳನ್ನು ಜಾರಿಗೆ ತರಲು ಸೆ.9 ರಿಂದ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಕಾರ್ಖಾನೆಯ ಮುಷ್ಕರವು ಆರಂಭದಲ್ಲಿ ಟೆಲಿವಿಷನ್, ರೆಫ್ರಿಜರೇಟರ್ ಮತ್ತು ವಾಷಿಂಗ್ ಮಷಿನ್‌ಗಳಂತಹ ಗ್ರಾಹಕ ವಸ್ತುಗಳ ಉತ್ಪಾದನೆಗೆ ಹೊಡೆತ ನೀಡಿದೆ. ವಕೀಲರ ಪ್ರಕಾರ, ಕಾರ್ಮಿಕರೊಂದಿಗೆ ದೀರ್ಘಾವಧಿಯ ವೇತನ ಒಪ್ಪಂದಕ್ಕೆ ಸಹಿ ಹಾಕಲು ಮ್ಯಾನೇಜ್‌ಮೆಂಟ್ ತನ್ನ ಇಚ್ಛೆಯನ್ನು ತಿಳಿಸಿದೆ.

“ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ನಮ್ಮ ಕಾರ್ಮಿಕರೊಂದಿಗೆ ಮಾತ್ರ ಮಾತುಕತೆ ನಡೆಸುತ್ತದೆ ಮತ್ತು ಮೂರನೇ ವ್ಯಕ್ತಿಯೊಂದಿಗೆ ಅಲ್ಲ. ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ಪರವಾಗಿ, ಕಾರ್ಮಿಕರು ಕಾನೂನುಬಾಹಿರ ಮುಷ್ಕರವನ್ನು ಹಿಂತೆಗೆದುಕೊಳ್ಳಲು, ಕೆಲಸಕ್ಕೆ ಮರಳಲು ಮತ್ತು ಎಲ್ಲಾ ಭಿನ್ನಾಭಿಪ್ರಾಯಗಳನ್ನು ಶೀಘ್ರವಾಗಿ ಸೌಹಾರ್ದಯುತ ರೀತಿಯಲ್ಲಿ ಪರಿಹರಿಸುವ ಉದ್ದೇಶದಿಂದ ಮಾತುಕತೆಗೆ ಮುಂದಾಗುವಂತೆ ವಿನಂತಿಸುತ್ತೇವೆ” ಎಂದು ಕಂಪನಿ ಪರ ವಕೀಲರು ಹೇಳಿದರು.

ಕಾರ್ಮಿಕರಿಗೆ ಶೋಕಾಸ್​ ನೋಟಿಸ್​: ಸ್ಯಾಮ್‌ಸಂಗ್ ಇಂಡಿಯಾದ ಚೆನ್ನೈ ಘಟಕದಲ್ಲಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆ ಕಂಪನಿ ಶೋಕಾಸ್ ನೋಟಿಸ್ ನೀಡಿತ್ತು. ಶೋಕಾಸ್​ ನೋಟಿಸ್​ ನೀಡಿದ ಬಳಿಕ ಕೆಲ ಕಾರ್ಮಿಕರು ಕೆಲಸಕ್ಕೆ ಮರಳಿದ್ದರು. ಕೆಲಸಕ್ಕೆ ಮರಳದೇ ಇದ್ದರೆ ವೇತನ ತಡೆಹಿಡಿಯಲಾಗುವುದು ಎಂದು ಕಂಪನಿ ಎಚ್ಚರಿಸಿತ್ತು. ಹೆಚ್ಚಿನ ವಿವರಕ್ಕಾಗಿ ಈ ಲಿಂಕ್​ ಕ್ಲಿಕ್​ ಮಾಡಿ: 15ನೇ ದಿನಕ್ಕೆ ಕಾಲಿಟ್ಟ ಸ್ಯಾಮ್​ಸಂಗ್ ಕಾರ್ಮಿಕರ ಪ್ರತಿಭಟನೆ; ಶೋಕಾಸ್ ನೋಟಿಸ್‌ ಬಳಿಕ ಕೆಲವರು ಕೆಲಸಕ್ಕೆ ಹಾಜರ್ - Samsung Workers Strike

ETV Bharat Logo

Copyright © 2024 Ushodaya Enterprises Pvt. Ltd., All Rights Reserved.