ETV Bharat / technology

ಹೈದರಾಬಾದ್​ನ ಮೈಕ್ರೋಸಾಫ್ಟ್ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಬಿಲ್ ಗೇಟ್ಸ್​

author img

By ETV Bharat Karnataka Team

Published : Feb 28, 2024, 2:12 PM IST

ಹೈದರಾಬಾದ್​ನಲ್ಲಿರುವ ಇಂಡಿಯಾ ಡೆವಲಪ್ ಮೆಂಟ್ ಸೆಂಟರ್​ಗೆ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಬುಧವಾರ ಭೇಟಿ ನೀಡಿದ್ದಾರೆ.

Bill Gates visits Microsoft India Development Centre
Bill Gates visits Microsoft India Development Centre

ನವದೆಹಲಿ : ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಬುಧವಾರ ಹೈದರಾಬಾದ್​ನಲ್ಲಿರುವ ಕಂಪನಿಯ ಇಂಡಿಯಾ ಡೆವಲಪ್ ಮೆಂಟ್ ಸೆಂಟರ್ (ಐಡಿಸಿ) ಗೆ ಭೇಟಿ ನೀಡಿದರು. 1998 ರಲ್ಲಿ ಬಿಲ್ ಗೇಟ್ಸ್ ಸ್ವತಃ ಈ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದರು. ಐಡಿಸಿ ತನ್ನ ಉತ್ತಮ ಸಂಶೋಧನೆ, ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯ 25 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂಶೋಧನಾ ಕೇಂದ್ರವು ಅಜೂರ್, ವಿಂಡೋಸ್, ಆಫೀಸ್, ಬಿಂಗ್, ಕೋಪೈಲಟ್ ಮತ್ತು ಇತರ ಎಐ ಅಪ್ಲಿಕೇಶನ್​ಗಳಂಥ ವಿಶ್ವ ದರ್ಜೆಯ ಉತ್ಪನ್ನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಬಿಲ್ ಗೇಟ್ಸ್​ ಭೇಟಿಯ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಐಡಿಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಕ್ಸ್ಪೀರಿಯನ್ಸ್ + ಡಿವೈಸಸ್ ಇಂಡಿಯಾದ ಸಿವಿಪಿ ರಾಜೀವ್ ಕುಮಾರ್, "ಬಿಲ್ ನಮ್ಮ ಅತಿದೊಡ್ಡ ಸಂಶೋಧನಾ ಕೇಂದ್ರವಾದ ಐಡಿಸಿಯಲ್ಲಿ ಭಾರತದ ಅತ್ಯಂತ ಪ್ರತಿಭಾವಂತ ಎಂಜಿನಿಯರುಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನೋಡುವುದು ರೋಮಾಂಚಕಾರಿಯಾಗಿದೆ" ಎಂದು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ತಾವು ಭಾರತಕ್ಕೆ ಭೇಟಿ ನೀಡುವ ವಿಷಯವನ್ನು ಗೇಟ್ಸ್ ಲಿಂಕ್ಡ್ಇನ್ ಪೋಸ್ಟ್​ನಲ್ಲಿ ತಿಳಿಸಿದ್ದರು. "ಶತಕೋಟಿ ಜನರ ಜೀವನವನ್ನು ಸುಧಾರಿಸಲು ಆರೋಗ್ಯ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಹವಾಮಾನ ಸುಧಾರಣೆಗೆ ಭಾರತವು ಹೇಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ ಎಂಬುದರ ಬಗ್ಗೆ ತಿಳಿಯಲು ನಾನು ಉತ್ಸುಕನಾಗಿದ್ದೇನೆ" ಎಂದು ಗೇಟ್ಸ್​ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ತಿಳಿಸಿದ್ದರು.

"ಭಾರತದ ಆಲೋಚನೆಗಳು ಮತ್ತು ಆವಿಷ್ಕಾರಗಳು ವಿಶ್ವದಲ್ಲಿ ಎಲ್ಲಿಯೇ ವಾಸಿಸುವ, ಅಗತ್ಯವಿರುವ ವ್ಯಕ್ತಿಗಳಿಗೆ ತಲುಪಿಸಲು ಭಾರತದೊಂದಿಗೆ ಯಾವ ರೀತಿಯಾಗಿ ನಾವು ಕೆಲಸ ಮಾಡಬಹುದು ಎಂಬುದನ್ನು ತಿಳಿಯಲು ನಾನು ಈ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಈ ವಾರ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಇದು ಮುಖ್ಯ ಚರ್ಚೆಯ ವಿಷಯವಾಗಲಿದೆ" ಎಂದು ಬಿಲ್ ಗೇಟ್ಸ್​ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೆಳವಣಿಗೆಯನ್ನು ಬಲವಾಗಿ ಪ್ರತಿಪಾದಿಸುವವರಲ್ಲಿ ಗೇಟ್ಸ್ ಕೂಡ ಒಬ್ಬರು. ಈ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ಅವರು ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದರೂ, ಅದರ ಸಂಭಾವ್ಯ ಅಪಾಯಗಳ ಬಗ್ಗೆಯೂ ಎಚ್ಚರಿಸಿದ್ದಾರೆ. ಬ್ಲಾಗ್ ನಲ್ಲಿ ಎಐ ಬಗ್ಗೆ ತಮ್ಮ ಆಲೋಚನೆಗಳನ್ನು ಗೇಟ್ಸ್​ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಭಾರತಕ್ಕೆ ಭೇಟಿ ನೀಡಿ ಎಐ ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ದೇಶದ ಹೆಚ್ಚುತ್ತಿರುವ ಮಹತ್ವವನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ : ಗ್ಲಾಕೋಮಾ & ರೆಟಿನಾ ರೋಗಪತ್ತೆ: ತಜ್ಞರನ್ನೂ ಮೀರಿಸಿದ GPT-4

ನವದೆಹಲಿ : ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಬುಧವಾರ ಹೈದರಾಬಾದ್​ನಲ್ಲಿರುವ ಕಂಪನಿಯ ಇಂಡಿಯಾ ಡೆವಲಪ್ ಮೆಂಟ್ ಸೆಂಟರ್ (ಐಡಿಸಿ) ಗೆ ಭೇಟಿ ನೀಡಿದರು. 1998 ರಲ್ಲಿ ಬಿಲ್ ಗೇಟ್ಸ್ ಸ್ವತಃ ಈ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದರು. ಐಡಿಸಿ ತನ್ನ ಉತ್ತಮ ಸಂಶೋಧನೆ, ಎಂಜಿನಿಯರಿಂಗ್ ಮತ್ತು ಅಭಿವೃದ್ಧಿಯ 25 ನೇ ವರ್ಷವನ್ನು ಆಚರಿಸುತ್ತಿದೆ. ಈ ಸಂಶೋಧನಾ ಕೇಂದ್ರವು ಅಜೂರ್, ವಿಂಡೋಸ್, ಆಫೀಸ್, ಬಿಂಗ್, ಕೋಪೈಲಟ್ ಮತ್ತು ಇತರ ಎಐ ಅಪ್ಲಿಕೇಶನ್​ಗಳಂಥ ವಿಶ್ವ ದರ್ಜೆಯ ಉತ್ಪನ್ನಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಬಿಲ್ ಗೇಟ್ಸ್​ ಭೇಟಿಯ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಐಡಿಸಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಎಕ್ಸ್ಪೀರಿಯನ್ಸ್ + ಡಿವೈಸಸ್ ಇಂಡಿಯಾದ ಸಿವಿಪಿ ರಾಜೀವ್ ಕುಮಾರ್, "ಬಿಲ್ ನಮ್ಮ ಅತಿದೊಡ್ಡ ಸಂಶೋಧನಾ ಕೇಂದ್ರವಾದ ಐಡಿಸಿಯಲ್ಲಿ ಭಾರತದ ಅತ್ಯಂತ ಪ್ರತಿಭಾವಂತ ಎಂಜಿನಿಯರುಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನೋಡುವುದು ರೋಮಾಂಚಕಾರಿಯಾಗಿದೆ" ಎಂದು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ತಾವು ಭಾರತಕ್ಕೆ ಭೇಟಿ ನೀಡುವ ವಿಷಯವನ್ನು ಗೇಟ್ಸ್ ಲಿಂಕ್ಡ್ಇನ್ ಪೋಸ್ಟ್​ನಲ್ಲಿ ತಿಳಿಸಿದ್ದರು. "ಶತಕೋಟಿ ಜನರ ಜೀವನವನ್ನು ಸುಧಾರಿಸಲು ಆರೋಗ್ಯ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಹವಾಮಾನ ಸುಧಾರಣೆಗೆ ಭಾರತವು ಹೇಗೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ ಎಂಬುದರ ಬಗ್ಗೆ ತಿಳಿಯಲು ನಾನು ಉತ್ಸುಕನಾಗಿದ್ದೇನೆ" ಎಂದು ಗೇಟ್ಸ್​ ಲಿಂಕ್ಡ್​ಇನ್ ಪೋಸ್ಟ್​ನಲ್ಲಿ ತಿಳಿಸಿದ್ದರು.

"ಭಾರತದ ಆಲೋಚನೆಗಳು ಮತ್ತು ಆವಿಷ್ಕಾರಗಳು ವಿಶ್ವದಲ್ಲಿ ಎಲ್ಲಿಯೇ ವಾಸಿಸುವ, ಅಗತ್ಯವಿರುವ ವ್ಯಕ್ತಿಗಳಿಗೆ ತಲುಪಿಸಲು ಭಾರತದೊಂದಿಗೆ ಯಾವ ರೀತಿಯಾಗಿ ನಾವು ಕೆಲಸ ಮಾಡಬಹುದು ಎಂಬುದನ್ನು ತಿಳಿಯಲು ನಾನು ಈ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಈ ವಾರ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಇದು ಮುಖ್ಯ ಚರ್ಚೆಯ ವಿಷಯವಾಗಲಿದೆ" ಎಂದು ಬಿಲ್ ಗೇಟ್ಸ್​ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬೆಳವಣಿಗೆಯನ್ನು ಬಲವಾಗಿ ಪ್ರತಿಪಾದಿಸುವವರಲ್ಲಿ ಗೇಟ್ಸ್ ಕೂಡ ಒಬ್ಬರು. ಈ ತಂತ್ರಜ್ಞಾನದ ಉಪಯೋಗಗಳ ಬಗ್ಗೆ ಅವರು ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದರೂ, ಅದರ ಸಂಭಾವ್ಯ ಅಪಾಯಗಳ ಬಗ್ಗೆಯೂ ಎಚ್ಚರಿಸಿದ್ದಾರೆ. ಬ್ಲಾಗ್ ನಲ್ಲಿ ಎಐ ಬಗ್ಗೆ ತಮ್ಮ ಆಲೋಚನೆಗಳನ್ನು ಗೇಟ್ಸ್​ ಸುದೀರ್ಘವಾಗಿ ಹಂಚಿಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಭಾರತಕ್ಕೆ ಭೇಟಿ ನೀಡಿ ಎಐ ಅಭಿವೃದ್ಧಿ ಮತ್ತು ನಿಯೋಜನೆಯಲ್ಲಿ ದೇಶದ ಹೆಚ್ಚುತ್ತಿರುವ ಮಹತ್ವವನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ : ಗ್ಲಾಕೋಮಾ & ರೆಟಿನಾ ರೋಗಪತ್ತೆ: ತಜ್ಞರನ್ನೂ ಮೀರಿಸಿದ GPT-4

ETV Bharat Logo

Copyright © 2024 Ushodaya Enterprises Pvt. Ltd., All Rights Reserved.