ETV Bharat / state

ವಾಲ್ಮೀಕಿ ನಿಗಮ ಅವ್ಯವಹಾರ ಪ್ರಸ್ತಾಪ: ಪರಿಷತ್​ನಲ್ಲೂ ಆಡಳಿತ, ವಿಪಕ್ಷಗಳ ಮಧ್ಯೆ ಆರೋಪ-ಪ್ರತ್ಯಾರೋಪ - Legislative Council Session

author img

By ETV Bharat Karnataka Team

Published : Jul 15, 2024, 7:09 PM IST

Updated : Jul 15, 2024, 9:29 PM IST

ಪರಿಷತ್​ನಲ್ಲಿ ವಾಲ್ಮೀಕಿ ನಿಗಮ ಅವ್ಯವಹಾರ ಪ್ರಸ್ತಾಪವಾಗುತ್ತಿದ್ದಂತೆ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ಮಧ್ಯೆ ಆರೋಪ-ಪ್ರತ್ಯಾರೋಪದ ಸುರಿಮಳೆ ಆಯಿತು.

LEGISLATIVE COUNCIL SESSION
ಪರಿಷತ್​ (ETV Bharat)

ಬೆಂಗಳೂರು: ವಾಲ್ಮೀಕಿ‌ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರ ನಡೆದಿರುವ ಕುರಿತಂತೆ ನಿಯಮ 59ರದಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯ ಸಿ.ಟಿ.ರವಿ‌ ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಸಭಾಪತಿಗಳು ಚರ್ಚೆಗೆ ಅನುಮತಿ ನೀಡಿಲ್ಲ, ಈಗ ಯಾಕೆ‌ ಪ್ರಸ್ತಾಪ ಮಾಡುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಎದ್ದು ನಿಂತು‌ ಆಕ್ಷೇಪಿಸಿದರು.‌ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷಗಳು ಆರೋಪ-ಪ್ರತ್ಯಾರೋಪದ ಸುರಿಮಳೆ ಸುರಿಸಿದರು.

ಈ ವೇಳೆ ಗೃಹ ಸಚಿವ ಪರಮೇಶ್ವರ್ ಅವರು ಮಧ್ಯಪ್ರವೇಶಿಸಿ ವಾಲ್ಮೀಕಿ ಅಭಿವೃದ್ದಿ ನಿಗಮ ಅವ್ಯವಹಾರ ಸಂಬಂಧ ಎಸ್ಐಟಿ ತಂಡ ರಚಿಸಲಾಗಿದೆ. ಸಿಬಿಐ‌ ಕೂಡಾ‌ ಪ್ರತ್ಯೇಕವಾಗಿ ಎಫ್​​ಐಆರ್ ದಾಖಲಿಕೊಂಡು ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ನಡವಳಿಕೆ ನಿಯಮ 59ರಡಿ ಚರ್ಚೆಗೆ ಅವಕಾಶ ನೀಡಕೂಡದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿಕೊಂಡರು.

ಬಳಿಕ ಸಿ.ಟಿ.ರವಿ ರವಿ ಮಾತನಾಡಿ, ವಾಲ್ಮೀಕಿ ನಿಗಮ ಅವ್ಯವಹಾರ ಸಂಬಂಧ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ.‌ ಇದರಿಂದ ವಾಲ್ಮೀಕಿ ಸಮುದಾಯಕ್ಕೆ ಅಪಾರ ನಷ್ಟವಾಗಿದೆ.‌ ಈ ನಿಟ್ಟಿನಲ್ಲಿ ಚರ್ಚೆ ಅವಕಾಶ ನೀಡಬೇಕು.‌ ನಿಲುವಳಿ ಮಂಡಿಸಲು ಅವಕಾಶ ಸಭಾಪತಿಯವರ ವಿವೇಚನೆಗಿದೆ. ಹೀಗಾಗಿ ನಿಲುವಳಿ ಮಂಡಿಸಲು ಅನುಮತಿ ನೀಡಬೇಕು ಎಂದು‌ ಮನವಿ ಮಾಡಿದರು.

ಈ ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಅವ್ಯವಹಾರದ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ನಡವಳಿಕೆಯಂತೆ‌ ನಿಯಮ 59ರಡಿ ಚರ್ಚೆಗೆ ಅವಕಾಶವಿಲ್ಲ.‌‌ ಇದನ್ನ‌ ಖಚಿತಪಡಿಸಿಕೊಳ್ಳಲು ಅಡ್ವೋಕೇಟ್ ಜನರಲ್ ಬಳಿ ಸಲಹೆ‌ ಪಡೆದು ನಾಳೆಗೆ ಈ ಬಗ್ಗೆ ಸ್ಪಷ್ಪಪಡಿಸುತ್ತೇನೆ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.‌ ಈ ವೇಳೆ‌ ಸಭಾಪತಿ ಅವರು 10 ನಿಮಿಷ‌ಗಳ ಕಾಲ ಸದನವನ್ನ ಮುಂದೂಡಿದರು.

ಖಾದರ್ ಗರಂ: ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ನಾಯಕರು ಮಾತನಾಡುತ್ತಿದ್ದ ವೇಳೆ ಇತರೆ ಶಾಸಕರು ಮಾತನಾಡುತ್ತಿರುವುದನ್ನು ಗಮನಿಸಿದ ಸ್ಪೀಕರ್ ಯು.ಟಿ.ಖಾದರ್ ಗರಂ ಆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು. ಸದನ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆ ಸ್ಪೀಕರ್ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.

ಸಂತಾಪ ಸೂಚನೆಗೆ ಬೆಂಬಲಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಕೆಲ ಶಾಸಕರು ಸದನದಲ್ಲಿ ಓಡಾಡುತ್ತಿದ್ದರು. ಆಗ ಸ್ಪೀಕರ್ ಶಾಸಕರನ್ನು ಕುಳಿತುಕೊಳ್ಳುವಂತೆ ಹೇಳಿದರು. ನಂತರ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡುತ್ತಿದ್ದ ವೇಳೆ ಮತ್ತೆ ಶಾಸಕರು ಮಧ್ಯೆ ಎದ್ದು ಹೋಗುತ್ತಿದ್ದರು. ಜೊತೆ ಜೋರಾಗಿ ಮಾತನಾಡುತ್ತಿದ್ದರು. ಇದರಿಂದ ಸಿಟ್ಟಾದ ಸ್ಪೀಕರ್, ಸಂತಾಪ ಸೂಚನೆ ಮೇಲೆ ಮಾತನಾಡುವಾಗ ನಿಶಬ್ಧವಾಗಿರಿ, ಸದನಕ್ಕೆ ಗೌರವ ಕೊಡಿ ಎಂದು ಗರಂ ಆದರು.

ಸಂತಾಪ ಸೂಚನೆ ಮಾಡುವಾಗಲಾದರೂ ಸುಮ್ಮನಿರಿ ಎಂದು ಸ್ಪೀಕರ್ ಮನವಿ ಮಾಡಿದರು. ಆಗ ಅಶೋಕ್ ಅವರು, ಫೈಲ್​ಗೆ ಆ ಮೇಲೆ ಸಹಿ ಮಾಡಿಸಿಕೊಳ್ಳುವಂತೆ ಹೇಳಿ ಎಂದು ಸಭಾದ್ಯಕ್ಷರಿಗೆ ಕೋರಿದರು.

ಇದನ್ನೂ ಓದಿ: ಶ್ರೀನಿವಾಸ ಪ್ರಸಾದ್, ದ್ವಾರಕೀಶ್, ಅಪರ್ಣಾ ಸೇರಿ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ - Heartfelt Condolence

ಬೆಂಗಳೂರು: ವಾಲ್ಮೀಕಿ‌ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರ ನಡೆದಿರುವ ಕುರಿತಂತೆ ನಿಯಮ 59ರದಡಿ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯ ಸಿ.ಟಿ.ರವಿ‌ ವಿಧಾನ ಪರಿಷತ್​ನಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಸಭಾಪತಿಗಳು ಚರ್ಚೆಗೆ ಅನುಮತಿ ನೀಡಿಲ್ಲ, ಈಗ ಯಾಕೆ‌ ಪ್ರಸ್ತಾಪ ಮಾಡುತ್ತೀರಿ ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಎದ್ದು ನಿಂತು‌ ಆಕ್ಷೇಪಿಸಿದರು.‌ ಕೆಲಕಾಲ ಆಡಳಿತ ಹಾಗೂ ಪ್ರತಿಪಕ್ಷಗಳು ಆರೋಪ-ಪ್ರತ್ಯಾರೋಪದ ಸುರಿಮಳೆ ಸುರಿಸಿದರು.

ಈ ವೇಳೆ ಗೃಹ ಸಚಿವ ಪರಮೇಶ್ವರ್ ಅವರು ಮಧ್ಯಪ್ರವೇಶಿಸಿ ವಾಲ್ಮೀಕಿ ಅಭಿವೃದ್ದಿ ನಿಗಮ ಅವ್ಯವಹಾರ ಸಂಬಂಧ ಎಸ್ಐಟಿ ತಂಡ ರಚಿಸಲಾಗಿದೆ. ಸಿಬಿಐ‌ ಕೂಡಾ‌ ಪ್ರತ್ಯೇಕವಾಗಿ ಎಫ್​​ಐಆರ್ ದಾಖಲಿಕೊಂಡು ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಸಹ ತನಿಖೆ ನಡೆಸುತ್ತಿದೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ನಡವಳಿಕೆ ನಿಯಮ 59ರಡಿ ಚರ್ಚೆಗೆ ಅವಕಾಶ ನೀಡಕೂಡದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಮನವಿ ಮಾಡಿಕೊಂಡರು.

ಬಳಿಕ ಸಿ.ಟಿ.ರವಿ ರವಿ ಮಾತನಾಡಿ, ವಾಲ್ಮೀಕಿ ನಿಗಮ ಅವ್ಯವಹಾರ ಸಂಬಂಧ ನೂರಾರು ಕೋಟಿ ಭ್ರಷ್ಟಾಚಾರವಾಗಿದೆ.‌ ಇದರಿಂದ ವಾಲ್ಮೀಕಿ ಸಮುದಾಯಕ್ಕೆ ಅಪಾರ ನಷ್ಟವಾಗಿದೆ.‌ ಈ ನಿಟ್ಟಿನಲ್ಲಿ ಚರ್ಚೆ ಅವಕಾಶ ನೀಡಬೇಕು.‌ ನಿಲುವಳಿ ಮಂಡಿಸಲು ಅವಕಾಶ ಸಭಾಪತಿಯವರ ವಿವೇಚನೆಗಿದೆ. ಹೀಗಾಗಿ ನಿಲುವಳಿ ಮಂಡಿಸಲು ಅನುಮತಿ ನೀಡಬೇಕು ಎಂದು‌ ಮನವಿ ಮಾಡಿದರು.

ಈ ಬಗ್ಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಅವ್ಯವಹಾರದ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಕರ್ನಾಟಕ ವಿಧಾನಸಭಾ ಕಾರ್ಯವಿಧಾನ ನಡವಳಿಕೆಯಂತೆ‌ ನಿಯಮ 59ರಡಿ ಚರ್ಚೆಗೆ ಅವಕಾಶವಿಲ್ಲ.‌‌ ಇದನ್ನ‌ ಖಚಿತಪಡಿಸಿಕೊಳ್ಳಲು ಅಡ್ವೋಕೇಟ್ ಜನರಲ್ ಬಳಿ ಸಲಹೆ‌ ಪಡೆದು ನಾಳೆಗೆ ಈ ಬಗ್ಗೆ ಸ್ಪಷ್ಪಪಡಿಸುತ್ತೇನೆ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು.‌ ಈ ವೇಳೆ‌ ಸಭಾಪತಿ ಅವರು 10 ನಿಮಿಷ‌ಗಳ ಕಾಲ ಸದನವನ್ನ ಮುಂದೂಡಿದರು.

ಖಾದರ್ ಗರಂ: ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ನಾಯಕರು ಮಾತನಾಡುತ್ತಿದ್ದ ವೇಳೆ ಇತರೆ ಶಾಸಕರು ಮಾತನಾಡುತ್ತಿರುವುದನ್ನು ಗಮನಿಸಿದ ಸ್ಪೀಕರ್ ಯು.ಟಿ.ಖಾದರ್ ಗರಂ ಆದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು. ಸದನ ಇಂದು ಬೆಳಗ್ಗೆ ಆರಂಭವಾಗುತ್ತಿದ್ದಂತೆ ಸ್ಪೀಕರ್ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.

ಸಂತಾಪ ಸೂಚನೆಗೆ ಬೆಂಬಲಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ಆಗ ಆಡಳಿತ ಮತ್ತು ಪ್ರತಿಪಕ್ಷದ ಕೆಲ ಶಾಸಕರು ಸದನದಲ್ಲಿ ಓಡಾಡುತ್ತಿದ್ದರು. ಆಗ ಸ್ಪೀಕರ್ ಶಾಸಕರನ್ನು ಕುಳಿತುಕೊಳ್ಳುವಂತೆ ಹೇಳಿದರು. ನಂತರ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡುತ್ತಿದ್ದ ವೇಳೆ ಮತ್ತೆ ಶಾಸಕರು ಮಧ್ಯೆ ಎದ್ದು ಹೋಗುತ್ತಿದ್ದರು. ಜೊತೆ ಜೋರಾಗಿ ಮಾತನಾಡುತ್ತಿದ್ದರು. ಇದರಿಂದ ಸಿಟ್ಟಾದ ಸ್ಪೀಕರ್, ಸಂತಾಪ ಸೂಚನೆ ಮೇಲೆ ಮಾತನಾಡುವಾಗ ನಿಶಬ್ಧವಾಗಿರಿ, ಸದನಕ್ಕೆ ಗೌರವ ಕೊಡಿ ಎಂದು ಗರಂ ಆದರು.

ಸಂತಾಪ ಸೂಚನೆ ಮಾಡುವಾಗಲಾದರೂ ಸುಮ್ಮನಿರಿ ಎಂದು ಸ್ಪೀಕರ್ ಮನವಿ ಮಾಡಿದರು. ಆಗ ಅಶೋಕ್ ಅವರು, ಫೈಲ್​ಗೆ ಆ ಮೇಲೆ ಸಹಿ ಮಾಡಿಸಿಕೊಳ್ಳುವಂತೆ ಹೇಳಿ ಎಂದು ಸಭಾದ್ಯಕ್ಷರಿಗೆ ಕೋರಿದರು.

ಇದನ್ನೂ ಓದಿ: ಶ್ರೀನಿವಾಸ ಪ್ರಸಾದ್, ದ್ವಾರಕೀಶ್, ಅಪರ್ಣಾ ಸೇರಿ ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಭಾವಪೂರ್ಣ ಸಂತಾಪ - Heartfelt Condolence

Last Updated : Jul 15, 2024, 9:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.