ETV Bharat / state

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ, ಟ್ರಾಫಿಕ್ ಜಾಮ್‌; ಕೊಟ್ಟಿಗೆಹಾರದಿಂದಲೇ ವಾಹನಗಳು ವಾಪಸ್​ - Charmadi Ghat Hill Collapse

author img

By ETV Bharat Karnataka Team

Published : Jul 28, 2024, 8:11 AM IST

ಚಾರ್ಮಾಡಿ ಘಾಟ್​ ರಸ್ತೆ ಮೇಲೆ ನಿನ್ನೆ ರಾತ್ರಿ ಗುಡ್ಡ ಕುಸಿದು ಸಂಚಾರ ದಟ್ಟಣೆ ಉಂಟಾಯಿತು. ಈ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.

ಚಾರ್ಮಾಡಿ ಘಾಟ್
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಟ್ರಾಫಿಕ್ ಜಾಮ್ (ETV Bharat)
ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತದಿಂದ ಟ್ರಾಫಿಕ್ ಜಾಮ್‌ (ETV Bharat)

ಚಿಕ್ಕಮಗಳೂರು: ಕೊಟ್ಟಿಗೆಹಾರ ಸಮೀಪದಲ್ಲಿರುವ ಚಾರ್ಮಾಡಿ ಘಾಟ್​ ರಸ್ತೆಯ 10ನೇ ತಿರುವಿನಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿಯಿತು. ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮತ್ತೆ ಗಾಳಿಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಮರಗಳು ರಸ್ತೆಗಳ ಮೇಲೆ ಬೀಳುತ್ತಿವೆ. ಹೀಗಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ಮೂಲಕ ಹಾದು ಹೋಗುತ್ತದೆ. ಶನಿವಾರ ಮಳೆ ಹೆಚ್ಚಿದ್ದರಿಂದ ಮಣ್ಣಿನೊಂದಿಗೆ ಕಲ್ಲುಬಂಡೆ, ಮರದ ಕೊಂಬೆ ಸಮೇತ ಮರಗಳು ರಸ್ತೆಯ ಮೇಲೆ ಬಿದ್ದಿದೆ. ಹೀಗಾಗಿ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಕೊನೆಗೆ ಸ್ಥಳೀಯರು ಹಾಗು ಪೊಲೀಸರು ಜೆಸಿಬಿ ಮೂಲಕ ವಾಹನಗಳು ಸಾಗುವಷ್ಟು ರಸ್ತೆಯನ್ನು ತೆರವುಗೊಳಿಸಿದರು. ಬಳಿಕ ಒಂದೊಂದಾಗಿ ವಾಹನಗಳು ಸಂಚರಿಸಿದವು. ಘಾಟ್‌ಗೆ ಯಾವುದೇ ವಾಹನಗಳು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದು, ಕೊಟ್ಟಿಗೆಹಾರದಿಂದ ವಾಹನಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆ ಮೇಲೆ ಬಿದ್ದಿರುವ ಮರ
ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆ ಮೇಲೆ ಮರ ಬಿದ್ದಿರುವುದು. (ETV Bharat)

ಮೂಡಿಗೆರೆ, ಕಳಸ, ಕೊಪ್ಪ, ಜಯಪುರ, ಶೃಂಗೇರಿ, ಎನ್​.ಆರ್.​ಪುರ ಹಾಗು ಬಾಳೆಹೊನ್ನೂರು ಪ್ರದೇಶಗಳಲ್ಲಿ ಮಳೆ ತಗ್ಗಿದರೂ ಗಾಳಿ ಬಲವಾಗಿ ಬೀಸುತ್ತಿದೆ. ಎನ್.​ಆರ್.​ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆಯಲ್ಲಿ ಬೃಹತ್​ ಮರ ಬಿದ್ದು 2 ಗಂಟೆ ರಸ್ತೆ ಸಂಚಾರ ಬಂದ್​ ಆಗಿತ್ತು. ಮೆಸ್ಕಾಂ, ಅರಣ್ಯ ಸಿಬ್ಬಂದಿ, ಸ್ಥಳೀಯರು ಮರ ತೆರವು ಮಾಡಿದರು.

ಇದನ್ನೂ ಓದಿ: ಉಡುಪಿ: ಭಾರಿ ಗಾಳಿ - ಮಳೆಯಿಂದ ಅವಾಂತರ, ಒಂದೇ ದಿನ ₹40 ಲಕ್ಷದಷ್ಟು ಆಸ್ತಿ - ಪಾಸ್ತಿಗೆ ಹಾನಿ - heavy rain in udupi

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತದಿಂದ ಟ್ರಾಫಿಕ್ ಜಾಮ್‌ (ETV Bharat)

ಚಿಕ್ಕಮಗಳೂರು: ಕೊಟ್ಟಿಗೆಹಾರ ಸಮೀಪದಲ್ಲಿರುವ ಚಾರ್ಮಾಡಿ ಘಾಟ್​ ರಸ್ತೆಯ 10ನೇ ತಿರುವಿನಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿಯಿತು. ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮತ್ತೆ ಗಾಳಿಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಮರಗಳು ರಸ್ತೆಗಳ ಮೇಲೆ ಬೀಳುತ್ತಿವೆ. ಹೀಗಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ಮೂಲಕ ಹಾದು ಹೋಗುತ್ತದೆ. ಶನಿವಾರ ಮಳೆ ಹೆಚ್ಚಿದ್ದರಿಂದ ಮಣ್ಣಿನೊಂದಿಗೆ ಕಲ್ಲುಬಂಡೆ, ಮರದ ಕೊಂಬೆ ಸಮೇತ ಮರಗಳು ರಸ್ತೆಯ ಮೇಲೆ ಬಿದ್ದಿದೆ. ಹೀಗಾಗಿ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಕೊನೆಗೆ ಸ್ಥಳೀಯರು ಹಾಗು ಪೊಲೀಸರು ಜೆಸಿಬಿ ಮೂಲಕ ವಾಹನಗಳು ಸಾಗುವಷ್ಟು ರಸ್ತೆಯನ್ನು ತೆರವುಗೊಳಿಸಿದರು. ಬಳಿಕ ಒಂದೊಂದಾಗಿ ವಾಹನಗಳು ಸಂಚರಿಸಿದವು. ಘಾಟ್‌ಗೆ ಯಾವುದೇ ವಾಹನಗಳು ತೆರಳದಂತೆ ಪೊಲೀಸರು ಸೂಚನೆ ನೀಡಿದ್ದು, ಕೊಟ್ಟಿಗೆಹಾರದಿಂದ ವಾಹನಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ.

ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆ ಮೇಲೆ ಬಿದ್ದಿರುವ ಮರ
ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆ ಮೇಲೆ ಮರ ಬಿದ್ದಿರುವುದು. (ETV Bharat)

ಮೂಡಿಗೆರೆ, ಕಳಸ, ಕೊಪ್ಪ, ಜಯಪುರ, ಶೃಂಗೇರಿ, ಎನ್​.ಆರ್.​ಪುರ ಹಾಗು ಬಾಳೆಹೊನ್ನೂರು ಪ್ರದೇಶಗಳಲ್ಲಿ ಮಳೆ ತಗ್ಗಿದರೂ ಗಾಳಿ ಬಲವಾಗಿ ಬೀಸುತ್ತಿದೆ. ಎನ್.​ಆರ್.​ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಸಂಪಿ ಕಟ್ಟೆ-ಬಾಳೆಹೊಳೆ ರಸ್ತೆಯಲ್ಲಿ ಬೃಹತ್​ ಮರ ಬಿದ್ದು 2 ಗಂಟೆ ರಸ್ತೆ ಸಂಚಾರ ಬಂದ್​ ಆಗಿತ್ತು. ಮೆಸ್ಕಾಂ, ಅರಣ್ಯ ಸಿಬ್ಬಂದಿ, ಸ್ಥಳೀಯರು ಮರ ತೆರವು ಮಾಡಿದರು.

ಇದನ್ನೂ ಓದಿ: ಉಡುಪಿ: ಭಾರಿ ಗಾಳಿ - ಮಳೆಯಿಂದ ಅವಾಂತರ, ಒಂದೇ ದಿನ ₹40 ಲಕ್ಷದಷ್ಟು ಆಸ್ತಿ - ಪಾಸ್ತಿಗೆ ಹಾನಿ - heavy rain in udupi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.