ETV Bharat / state

ಮೈಸೂರು ದಸರಾದಲ್ಲಿ ತೆರೆಮರೆಯಲ್ಲಿ ಸೇವೆ ಮಾಡುವ 'ಮುಕ'ದ ಪರಿಚಯ

ಕಳೆದ 20 ವರ್ಷಗಳಿಂದಲೂ ಮುಕ ಎಂಬ ವ್ಯಕ್ತಿಯೊಬ್ಬರು ಮೈಸೂರು ದಸರಾದಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ, ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

author img

By ETV Bharat Karnataka Team

Published : 2 hours ago

Updated : 2 hours ago

Muka
ಮುಕ ಅವರ ಪ್ರತಿಕ್ರಿಯೆ (ETV Bharat)

ಮೈಸೂರು: ನಾಡಹಬ್ಬ ದಸರಾ ಎಂದರೆ ಆನೆ, ಅಂಬಾರಿ, ಅರಮನೆ, ಕಲಾತಂಡಗಳು ಹಾಗೂ ಇತರ ಸಾಂಸ್ಕೃತಿಕ ಲೋಕದ ಕಲರ್​ಫುಲ್​ ಚಿತ್ರಣ ಕಣ್ಮುಂದೆ ಬರುತ್ತದೆ. ಇಂತಹ ವೈಭವದ ಮಧ್ಯೆ ಒಬ್ಬ ವ್ಯಕ್ತಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಹೌದು, ನಾವೀಗ ಹೇಳಹೊರಟಿರುವ ವ್ಯಕ್ತಿಯ ಹೆಸರು ಮುಕ. ಕಳೆದ 20 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಇವರು ಮೈಸೂರಿಗೆ ಬರುತ್ತಿದ್ದಾರೆ. ಕೈಯಲ್ಲೊಂದು ನೀರಿನ ಬಕೆಟ್‌ ಹಾಗೂ ಬಾಟಲಿಯೊಂದಿಗೆ ಕಾರ್ಯಕ್ರಮಗಳ ಸಂದರ್ಭದಲ್ಲಿ ದಣಿವ ಜನರಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ.

ಮೈಸೂರು ದಸರಾದಲ್ಲಿ ಸೇವೆ ಸಲ್ಲಿಸುತ್ತಿರುವ ಮುಕ ಮಾತನಾಡಿದ್ದಾರೆ (ETV Bharat)

ಮುಕ ಅವರು ಅರಮನೆ ಮುಂಭಾಗದ ಆನೆ ಶಿಬಿರದ ಬಳಿ ಕೋಡಿ ಸೋಮೇಶ್ವರ ದೇವಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ 'ಈಟಿವಿ ಭಾರತ' ಪ್ರತಿನಿಧಿ ಅವರನ್ನು ಮಾತಿಗೆಳೆದರು. ಈ ಸಂದರ್ಭದಲ್ಲಿ ತನ್ನ ಹೆಸರು 'ಮುಕ' ಎಂದಾಗಲು ಕಾರಣವೇನು? ತಮ್ಮ ವಿಳಾಸವೇನು? ದಸರಾದಲ್ಲಿ ತಮ್ಮ ಸೇವೆ ಏನು ಎಂಬೆಲ್ಲ ವಿಚಾರಗಳನ್ನು ಹಂಚಿಕೊಂಡರು.

ನನ್ನ ವಿಳಾಸ ಬೆಂಗಳೂರಿನ ರಾಜಭವನ. ನಾನು ಮೌನಾಚರಣೆ‌ ಮಾಡಿರುವ ಕಾರಣಕ್ಕೆ ಹೆಸರು 'ಮುಕ' ಎಂದಾಯಿತು. ಕುಟುಂಬದಲ್ಲಿ ಜಗಳವಾಗಿ ಬೇಸರವಾಗಿ 15 ವರ್ಷಗಳ ಕಾಲ ಮಾತು ಬಿಟ್ಟಿದ್ದೆ. ನಾನೊಮ್ಮೆ ಪಾಸ್​ಬುಕ್ ಮಾಡಿಸಲು ಹೋಗಿದ್ದಾಗ ನನ್ನ ಹೆಸರು 'ಮೌನ' ಆಗುವುದಿಲ್ಲ ಎಂದರು. ಅದಕ್ಕಾಗಿ 'ಮುಕ' ಎಂದು ಹೆಸರು ಬರೆದು ರಾಜಭವನವನ್ನೇ ವಿಳಾಸ ಮಾಡಿ‌ಕೊಟ್ಟಿದ್ದಾರೆ ಎಂದು ಹೇಳಿದರು.

Muka
ಜನರಿಗೆ ಕುಡಿಯುವ ನೀರು ಪೂರೈಸುತ್ತಿರುವ ಮುಕ (ETV Bharat)

ನನ್ನ ತಂದೆ, ತಾಯಿ ನಾನು ಹುಟ್ಟಿದ ದಿನಾಂಕವನ್ನು ಬರೆದುಕೊಟ್ಟಿಲ್ಲ. ಹೀಗಾಗಿ ಒಂದು ಅಂದಾಜಿನ ಮೇಲೆ ಆಧಾರ್‌ನಲ್ಲಿ 54 ವರ್ಷ ಎಂದು ಬರೆಯಲಾಗಿದೆ. ಹುಟ್ಟಿದ ಸ್ಥಳವನ್ನು ನನ್ನ ತಾಯಿ‌-ತಂದೆ ನನಗೆ ಕೊಟ್ಟಿಲ್ಲ. ನಮಗೆ ಯಾರೂ ಕೂಡಾ ಬುದ್ಧಿ ಹೇಳಿಲ್ಲ. ಉಪನ್ಯಾಸ, ಪುಣ್ಯ ಸ್ಥಳಗಳು, ಪುರಾಣ ಹೇಳುವ ಸ್ಥಳಗಳಲ್ಲಿ ಕಾಲ ಕಳೆಯುವುದರಿಂದ ನನಗೆ ಉತ್ತಮ ಸಂಸ್ಕಾರ ಬಂದಿದೆ‌ ಎಂದರು.

20 ವರ್ಷಗಳಿಂದ ಮೈಸೂರು ದಸಾರದಲ್ಲಿ ಭಾಗವಹಿಸುತ್ತಿದ್ದೇನೆ: ನಾನು ರಾಜಭವನದಲ್ಲಿ‌ ಬಹಳ ದಿನಗಳಿಂದ ಕಲಸ ಮಾಡುತ್ತಿದ್ದೇನೆ. ದಸರಾದಲ್ಲಿ 20 ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ಇಲ್ಲಿ ನಾನು ದೇವಸ್ಥಾನದ ಕಸ ಗುಡಿಸುವುದು, ಸಭೆ-ಸಮಾರಂಭಗಳಲ್ಲಿ ಕುರ್ಚಿ ಹಾಕುವುದು, ಸಾರ್ವಜನಿಕರಿಗೆ ನೀರು ಹಂಚುವುದನ್ನು ಮಾಡುತ್ತಿದ್ದೇನೆ ಎಂದರು.

ಬೆಂಗಳೂರಿನಲ್ಲಿ ವಿವಿಧೆಡೆ ಪ್ರತಿಭಟನೆಗಳು ನಡೆಯುವ ಸಮಯದಲ್ಲಿ ಜನರಿಗೆ ನೀರು ಹಂಚುತ್ತೇನೆ. ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೇನೆ. ಬೇರೆಯವರಲ್ಲಿ ಏನನ್ನೂ ಬೇಡುವುದಿಲ್ಲ. ಇಲ್ಲೂ ಕೂಡಾ ಸಾಕಷ್ಟು ಜನ ದುಡ್ಡು ಮತ್ತು ಊಟ ಕೊಡಲು ಬರುತ್ತಾರೆ. ಆದರೆ, ನಾನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ನಾನೇ ಸಣ್ಣಪುಟ್ಟ ವ್ಯಾಪಾರ ನಡೆಸಿ ಅದರಲ್ಲೇ ಬದುಕಲು ವ್ಯವಸ್ಥೆ ಮಾಡಿಕೊಂಡಿದ್ದೇನೆ. ನನಗೆ ಸಂಘಟನೆಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಎಲ್ಲರೂ ಗೊತ್ತು. ಅವರಿರುವ ಕಡೆ ಹೋಗಿಬಿಡುತ್ತೇನೆ ಎಂದರು.

ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ನನ್ನ ವಾಸ. ಅಲ್ಲಿಯೇ ಸ್ಪಲ್ಪ ಟೀ ವ್ಯಾಪಾರ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಇತ್ತೀಚಿಗೆ ಪೊಲೀಸರು ನನಗೆ ಹಿಂಸೆ ನೀಡುತ್ತಿದ್ದಾರೆ. ನಾನು ಯಾರಿಗೂ ಕೆಟ್ಟದ್ದು ಮಾಡಿಲ್ಲ. ವಿಧಾನಸೌಧದ ಮುಂದೆ ಟೀ ಮಾರಾಟ ಮಾಡಬೇಡ ಎಂದು ತಡೆದರು ಎಂದು ಬೇಸರದಿಂದ ನುಡಿದರು.

ಇದನ್ನೂ ಓದಿ: ದಸರಾ ಅಂಬಾರಿ ಆನೆಯ ಬೆನ್ನಿನ ಮೇಲೆ ಹಾಕುವ ನಮ್ದಾ ಹೇಗೆ ಸಿದ್ಧವಾಗುತ್ತೆ; ಇಲ್ಲಿದೆ ಪ್ರತ್ಯಕ್ಷ ವರದಿ - Namda Preparation

ಮೈಸೂರು: ನಾಡಹಬ್ಬ ದಸರಾ ಎಂದರೆ ಆನೆ, ಅಂಬಾರಿ, ಅರಮನೆ, ಕಲಾತಂಡಗಳು ಹಾಗೂ ಇತರ ಸಾಂಸ್ಕೃತಿಕ ಲೋಕದ ಕಲರ್​ಫುಲ್​ ಚಿತ್ರಣ ಕಣ್ಮುಂದೆ ಬರುತ್ತದೆ. ಇಂತಹ ವೈಭವದ ಮಧ್ಯೆ ಒಬ್ಬ ವ್ಯಕ್ತಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಹೌದು, ನಾವೀಗ ಹೇಳಹೊರಟಿರುವ ವ್ಯಕ್ತಿಯ ಹೆಸರು ಮುಕ. ಕಳೆದ 20 ವರ್ಷಗಳಿಂದ ನವರಾತ್ರಿ ಸಂದರ್ಭದಲ್ಲಿ ಇವರು ಮೈಸೂರಿಗೆ ಬರುತ್ತಿದ್ದಾರೆ. ಕೈಯಲ್ಲೊಂದು ನೀರಿನ ಬಕೆಟ್‌ ಹಾಗೂ ಬಾಟಲಿಯೊಂದಿಗೆ ಕಾರ್ಯಕ್ರಮಗಳ ಸಂದರ್ಭದಲ್ಲಿ ದಣಿವ ಜನರಿಗೆ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ.

ಮೈಸೂರು ದಸರಾದಲ್ಲಿ ಸೇವೆ ಸಲ್ಲಿಸುತ್ತಿರುವ ಮುಕ ಮಾತನಾಡಿದ್ದಾರೆ (ETV Bharat)

ಮುಕ ಅವರು ಅರಮನೆ ಮುಂಭಾಗದ ಆನೆ ಶಿಬಿರದ ಬಳಿ ಕೋಡಿ ಸೋಮೇಶ್ವರ ದೇವಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ನಮ್ಮ 'ಈಟಿವಿ ಭಾರತ' ಪ್ರತಿನಿಧಿ ಅವರನ್ನು ಮಾತಿಗೆಳೆದರು. ಈ ಸಂದರ್ಭದಲ್ಲಿ ತನ್ನ ಹೆಸರು 'ಮುಕ' ಎಂದಾಗಲು ಕಾರಣವೇನು? ತಮ್ಮ ವಿಳಾಸವೇನು? ದಸರಾದಲ್ಲಿ ತಮ್ಮ ಸೇವೆ ಏನು ಎಂಬೆಲ್ಲ ವಿಚಾರಗಳನ್ನು ಹಂಚಿಕೊಂಡರು.

ನನ್ನ ವಿಳಾಸ ಬೆಂಗಳೂರಿನ ರಾಜಭವನ. ನಾನು ಮೌನಾಚರಣೆ‌ ಮಾಡಿರುವ ಕಾರಣಕ್ಕೆ ಹೆಸರು 'ಮುಕ' ಎಂದಾಯಿತು. ಕುಟುಂಬದಲ್ಲಿ ಜಗಳವಾಗಿ ಬೇಸರವಾಗಿ 15 ವರ್ಷಗಳ ಕಾಲ ಮಾತು ಬಿಟ್ಟಿದ್ದೆ. ನಾನೊಮ್ಮೆ ಪಾಸ್​ಬುಕ್ ಮಾಡಿಸಲು ಹೋಗಿದ್ದಾಗ ನನ್ನ ಹೆಸರು 'ಮೌನ' ಆಗುವುದಿಲ್ಲ ಎಂದರು. ಅದಕ್ಕಾಗಿ 'ಮುಕ' ಎಂದು ಹೆಸರು ಬರೆದು ರಾಜಭವನವನ್ನೇ ವಿಳಾಸ ಮಾಡಿ‌ಕೊಟ್ಟಿದ್ದಾರೆ ಎಂದು ಹೇಳಿದರು.

Muka
ಜನರಿಗೆ ಕುಡಿಯುವ ನೀರು ಪೂರೈಸುತ್ತಿರುವ ಮುಕ (ETV Bharat)

ನನ್ನ ತಂದೆ, ತಾಯಿ ನಾನು ಹುಟ್ಟಿದ ದಿನಾಂಕವನ್ನು ಬರೆದುಕೊಟ್ಟಿಲ್ಲ. ಹೀಗಾಗಿ ಒಂದು ಅಂದಾಜಿನ ಮೇಲೆ ಆಧಾರ್‌ನಲ್ಲಿ 54 ವರ್ಷ ಎಂದು ಬರೆಯಲಾಗಿದೆ. ಹುಟ್ಟಿದ ಸ್ಥಳವನ್ನು ನನ್ನ ತಾಯಿ‌-ತಂದೆ ನನಗೆ ಕೊಟ್ಟಿಲ್ಲ. ನಮಗೆ ಯಾರೂ ಕೂಡಾ ಬುದ್ಧಿ ಹೇಳಿಲ್ಲ. ಉಪನ್ಯಾಸ, ಪುಣ್ಯ ಸ್ಥಳಗಳು, ಪುರಾಣ ಹೇಳುವ ಸ್ಥಳಗಳಲ್ಲಿ ಕಾಲ ಕಳೆಯುವುದರಿಂದ ನನಗೆ ಉತ್ತಮ ಸಂಸ್ಕಾರ ಬಂದಿದೆ‌ ಎಂದರು.

20 ವರ್ಷಗಳಿಂದ ಮೈಸೂರು ದಸಾರದಲ್ಲಿ ಭಾಗವಹಿಸುತ್ತಿದ್ದೇನೆ: ನಾನು ರಾಜಭವನದಲ್ಲಿ‌ ಬಹಳ ದಿನಗಳಿಂದ ಕಲಸ ಮಾಡುತ್ತಿದ್ದೇನೆ. ದಸರಾದಲ್ಲಿ 20 ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. ಇಲ್ಲಿ ನಾನು ದೇವಸ್ಥಾನದ ಕಸ ಗುಡಿಸುವುದು, ಸಭೆ-ಸಮಾರಂಭಗಳಲ್ಲಿ ಕುರ್ಚಿ ಹಾಕುವುದು, ಸಾರ್ವಜನಿಕರಿಗೆ ನೀರು ಹಂಚುವುದನ್ನು ಮಾಡುತ್ತಿದ್ದೇನೆ ಎಂದರು.

ಬೆಂಗಳೂರಿನಲ್ಲಿ ವಿವಿಧೆಡೆ ಪ್ರತಿಭಟನೆಗಳು ನಡೆಯುವ ಸಮಯದಲ್ಲಿ ಜನರಿಗೆ ನೀರು ಹಂಚುತ್ತೇನೆ. ಜೀವನದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದೇನೆ. ಬೇರೆಯವರಲ್ಲಿ ಏನನ್ನೂ ಬೇಡುವುದಿಲ್ಲ. ಇಲ್ಲೂ ಕೂಡಾ ಸಾಕಷ್ಟು ಜನ ದುಡ್ಡು ಮತ್ತು ಊಟ ಕೊಡಲು ಬರುತ್ತಾರೆ. ಆದರೆ, ನಾನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

ನಾನೇ ಸಣ್ಣಪುಟ್ಟ ವ್ಯಾಪಾರ ನಡೆಸಿ ಅದರಲ್ಲೇ ಬದುಕಲು ವ್ಯವಸ್ಥೆ ಮಾಡಿಕೊಂಡಿದ್ದೇನೆ. ನನಗೆ ಸಂಘಟನೆಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಎಲ್ಲರೂ ಗೊತ್ತು. ಅವರಿರುವ ಕಡೆ ಹೋಗಿಬಿಡುತ್ತೇನೆ ಎಂದರು.

ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ನನ್ನ ವಾಸ. ಅಲ್ಲಿಯೇ ಸ್ಪಲ್ಪ ಟೀ ವ್ಯಾಪಾರ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತೇನೆ. ಇತ್ತೀಚಿಗೆ ಪೊಲೀಸರು ನನಗೆ ಹಿಂಸೆ ನೀಡುತ್ತಿದ್ದಾರೆ. ನಾನು ಯಾರಿಗೂ ಕೆಟ್ಟದ್ದು ಮಾಡಿಲ್ಲ. ವಿಧಾನಸೌಧದ ಮುಂದೆ ಟೀ ಮಾರಾಟ ಮಾಡಬೇಡ ಎಂದು ತಡೆದರು ಎಂದು ಬೇಸರದಿಂದ ನುಡಿದರು.

ಇದನ್ನೂ ಓದಿ: ದಸರಾ ಅಂಬಾರಿ ಆನೆಯ ಬೆನ್ನಿನ ಮೇಲೆ ಹಾಕುವ ನಮ್ದಾ ಹೇಗೆ ಸಿದ್ಧವಾಗುತ್ತೆ; ಇಲ್ಲಿದೆ ಪ್ರತ್ಯಕ್ಷ ವರದಿ - Namda Preparation

Last Updated : 2 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.