ETV Bharat / state

ಕೊಳಲು ಊದುತ್ತಿರುವಾಗಲೇ ರೋಗಿಗೆ ಯಶಸ್ವಿ ಮೆದುಳು ಆಪರೇಷನ್: ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ವೈದ್ಯರ ಅಪರೂಪದ ದಾಖಲೆ - Surgery while playing flute

author img

By ETV Bharat Karnataka Team

Published : 7 hours ago

Updated : 6 hours ago

ಚಿಕಿತ್ಸೆಗೆ ಬಂದವರು ಹಣವಿಲ್ಲವೆಂದು ಹಾಗೇ ವಾಪಸ್​ ಹೋಗಬಾರದು ಎಂಬ ಉದ್ದೇಶದಿಂದ ನಮ್ಮ ಆಸ್ಪತ್ರೆಯಲ್ಲಿ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತಿದೆ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.

Press meet by Hospital Doctors
ಆಸ್ಪತ್ರೆ ವೈದ್ಯರಿಂದ ಸುದ್ದಿಗೋಷ್ಠಿ (ETV Bharat)

ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು,‌ ರೋಗಿ ಕೊಳಲು ಊದುತ್ತಿರುವಾಗಲೇ ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಟ್ಯೂಮರ್​ ಗೆಡ್ಡೆ ತೆಗೆಯುವ ಮೂಲಕ ಅಪರೂಪದ ದಾಖಲೆಗೆ ಕೊಲ್ಲಾಪುರದ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಪಾತ್ರವಾಗಿದ್ದಾರೆ. ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ‌. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಕೆ ತಜ್ಞ ಪ್ರಕಾಶ ಭರಮಗೌಡ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ‌ ವೈದ್ಯ ಲೋಕ ಅಚ್ಚರಿಯಿಂದ ತಮ್ಮತ್ತ ನೋಡುವಂತೆ ಮಾಡಿದ್ದಾರೆ.

ಕೊಳಲು ಊದುತ್ತಿರುವಾಗಲೇ ರೋಗಿಗೆ ಯಶಸ್ವಿ ಮೆದುಳು ಆಪರೇಷನ್ (ETV Bharat)

ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ: ರೋಗಿಗೆ ಯಾವುದೇ ತೊಂದರೆ ಆಗದಂತೆ, ಆರಾಮವಾಗಿ ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ‌. ಈವರೆಗೂ ಒಟ್ಟು 103 ಮೆದುಳು ಶಸ್ತ್ರ‌ಚಿಕಿತ್ಸೆ ಮಾಡಿರುವ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವೈದ್ಯರ ತಂಡ, ಕೊಳಲು ಊದುತ್ತಿದ್ದ ವ್ಯಕ್ತಿಗೆ ಸುಮಾರು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಸಿದ್ಧಗಿರಿ ಆಸ್ಪತ್ರೆ ಪ್ರಖ್ಯಾತಿ ಪಡೆದುಕೊಂಡಿದೆ. ವೈದ್ಯರ ಸಾಧನೆಗೆ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಪರೇಷನ್​ ಸಕ್ಸಸ್​ ಬಗ್ಗೆ ವೈದ್ಯರು ಹೇಳಿದ್ದಿಷ್ಟು: ಆಪರೇಷನ್ ಕುರಿತು ಡಾ.ಶಿವಶಂಕರ್ ಮರಜಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗೆ ಅರವಳಿಕೆ ಇಂಜಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸುತ್ತೇವೆ. ಆಗ ರೋಗಿಗೆ ಯಾವುದೇ ಅರಿವು ಇರುವುದಿಲ್ಲ. ಆದರೆ, ಇಲ್ಲಿ ನಾವು ತಲೆಯ ಮೇಲಿನ‌ ಭಾಗಕ್ಕೆ ಮಾತ್ರ ಅರವಳಿಕೆ ಕೊಟ್ಟಿದ್ದೆವು. ಆ ರೋಗಿಯ‌ ದೇಹದ ಬಾಯಿ, ಮೂಗು, ಕಣ್ಣು, ಕೈ, ಕಾಲುಗಳು ಸೇರಿ ಎಲ್ಲಾ ಭಾಗಗಳು ಕಾರ್ಯನಿರ್ವಹಿಸುತ್ತಿದ್ದವು. ಹೀಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಗೆ ಕೊಳಲು ನುಡಿಸುವುದು ಹವ್ಯಾಸ. ಹಾಗಾಗಿ, ಅವರಿಗೆ ಕೊಳಲು ನುಡಿಸಲು ಕೊಟ್ಟೆವು. ನಾವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಅವರ ಮೆದುಳಿನಲ್ಲಿದ್ದ ಗಡ್ಡೆ ಹೊರ ತೆಗೆದೆವು" ಎಂದು ವಿವರಿಸಿದರು.

ದೇಶದ 10-12 ಕಡೆ ಮಾತ್ರ ಇಂಥ ಮೆದುಳು ಶಸ್ತ್ರಚಿಕಿತ್ಸೆ: "ದೇಶದ 10-12 ಕಡೆ ಮಾತ್ರ ಇಂಥ ಮೆದುಳು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಲ್ಲೆಲ್ಲಾ 10-15 ಲಕ್ಷ ರೂ. ಬಿಲ್ ಆಗುತ್ತದೆ. ಆದರೆ, ನಮ್ಮ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 1 ಲಕ್ಷ 25 ಸಾವಿರ ರೂಪಾಯಿಯಲ್ಲಿ ಮಾಡುತ್ತಿದ್ದೇವೆ. ಇದಕ್ಕೆಲ್ಲಾ ಬಡ ರೋಗಿಗಳ ಮೇಲೆ ಕನೇರಿ ಮಠದ ಸ್ವಾಮೀಜಿ ಕಳಕಳಿಯೇ ಕಾರಣ" ಎಂದು ಹೇಳಿದರು.

ಆಪರೇಷನ್​ ಬಗ್ಗೆ ಶ್ರೀಗಳ ಸಂತಸ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, "ರೋಗಿ ಎಚ್ಚರ ಇರುವಾಗಲೇ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ಇಡೀ ಏಷಿಯಾದಲ್ಲೇ ಯಾರೂ ಮಾಡಿಲ್ಲ. ಅಂಥ ವಿಶಿಷ್ಟ ದಾಖಲೆಗೆ ನಮ್ಮ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಪಾತ್ರವಾಗಿದೆ. ರೋಗಿಯ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕೊಳಲು ಊದುವಾಗ, ಐಸ್ ಕ್ರೀಮ್ ತಿನ್ನುವಾಗ ಆಪರೇಶನ್ ಮಾಡಲಾಗಿದೆ. ಇನ್ನು ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ 1.25 ಲಕ್ಷ ರೂಪಾಯಿಗೆ ಕಡಿಮೆಗೊಳಿಸಿ, ನಮ್ಮ ನಿಧಿಯಿಂದ ಹಣ ಹೊಂದಿಸಿ, ಶೇ.50ರಷ್ಟು ಮಾತ್ರ ಬಿಲ್ ತೆಗೆದುಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.

ಕಡಿಮೆ ಖರ್ಚಿನಲ್ಲಿ ಹೇಗೆ ಸಾಧ್ಯ?: "ನಮ್ಮ ವೈದ್ಯರು ಕಂಪನಿ ಜೊತೆಗೆ ನೇರವಾಗಿ ಅತೀ ಕಡಿಮೆ ಬೆಲೆಯಲ್ಲಿ ಔಷಧ ಖರೀದಿಸುತ್ತಾರೆ. ಆಸ್ಪತ್ರೆಯ ಶುಲ್ಕವನ್ನೂ ಹೆಚ್ಚಿಗೆ ತೆಗೆದುಕೊಳ್ಳುವುದಿಲ್ಲ. ಇನ್ನು ಯಂತ್ರೋಪಕರಣಗಳನ್ನು ದಾನಿಗಳಿಂದ ಬಂದ ಹಣದಿಂದ ಖರೀದಿಸುತ್ತೇವೆ. ಹಾಗಾಗಿ, ನಮ್ಮ ಆಸ್ಪತ್ರೆ ಮೇಲೆ ಯಾವುದೇ ಬ್ಯಾಂಕ್ ಲೋನ್ ಇಲ್ಲ. ಪ್ರತಿ ತಿಂಗಳೂ ಕಂತು ತುಂಬಬೇಕು ಎನ್ನುವ ಚಿಂತೆ ಇಲ್ಲ. ಆದ್ದರಿಂದ ಯಾರೂ ಹಣ ಇಲ್ಲವೆಂದು ಚಿಕಿತ್ಸೆ ಇಲ್ಲದೆ ವಾಪಸ್ ಹೋಗಬಾರದೆಂಬುದು ವೈದ್ಯರ ಯೋಚನೆ. ಹಾಗಾಗಿ ಈ ರೀತಿ ಕಡಿಮೆ ಖರ್ಚಿನಲ್ಲಿ ಆಪರೇಶನ್ ಮಾಡಲು ಸಾಧ್ಯವಾಗುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು: ಲಿವರ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೃದ್ಧರಿಗೆ ಮರು ಜೀವ ನೀಡಿದ ಕೆಆರ್​ ಆಸ್ಪತ್ರೆ ವೈದ್ಯರು - Liver cancer surgery

ಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು,‌ ರೋಗಿ ಕೊಳಲು ಊದುತ್ತಿರುವಾಗಲೇ ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಟ್ಯೂಮರ್​ ಗೆಡ್ಡೆ ತೆಗೆಯುವ ಮೂಲಕ ಅಪರೂಪದ ದಾಖಲೆಗೆ ಕೊಲ್ಲಾಪುರದ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಪಾತ್ರವಾಗಿದ್ದಾರೆ. ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ‌. ಶಿವಶಂಕರ್ ಮರಜಕ್ಕೆ ಹಾಗೂ ಅರವಳಿಕೆ ತಜ್ಞ ಪ್ರಕಾಶ ಭರಮಗೌಡ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ‌ ವೈದ್ಯ ಲೋಕ ಅಚ್ಚರಿಯಿಂದ ತಮ್ಮತ್ತ ನೋಡುವಂತೆ ಮಾಡಿದ್ದಾರೆ.

ಕೊಳಲು ಊದುತ್ತಿರುವಾಗಲೇ ರೋಗಿಗೆ ಯಶಸ್ವಿ ಮೆದುಳು ಆಪರೇಷನ್ (ETV Bharat)

ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ: ರೋಗಿಗೆ ಯಾವುದೇ ತೊಂದರೆ ಆಗದಂತೆ, ಆರಾಮವಾಗಿ ಕೊಳಲು ಊದುತ್ತಾ ಮಲಗಿರುವಾಗಲೇ ಶಸ್ತ್ರಚಿಕಿತ್ಸೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ‌. ಈವರೆಗೂ ಒಟ್ಟು 103 ಮೆದುಳು ಶಸ್ತ್ರ‌ಚಿಕಿತ್ಸೆ ಮಾಡಿರುವ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವೈದ್ಯರ ತಂಡ, ಕೊಳಲು ಊದುತ್ತಿದ್ದ ವ್ಯಕ್ತಿಗೆ ಸುಮಾರು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಸಿದ್ಧಗಿರಿ ಆಸ್ಪತ್ರೆ ಪ್ರಖ್ಯಾತಿ ಪಡೆದುಕೊಂಡಿದೆ. ವೈದ್ಯರ ಸಾಧನೆಗೆ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಆಪರೇಷನ್​ ಸಕ್ಸಸ್​ ಬಗ್ಗೆ ವೈದ್ಯರು ಹೇಳಿದ್ದಿಷ್ಟು: ಆಪರೇಷನ್ ಕುರಿತು ಡಾ.ಶಿವಶಂಕರ್ ಮರಜಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗೆ ಅರವಳಿಕೆ ಇಂಜಕ್ಷನ್ ಕೊಟ್ಟು ಪ್ರಜ್ಞೆ ತಪ್ಪಿಸುತ್ತೇವೆ. ಆಗ ರೋಗಿಗೆ ಯಾವುದೇ ಅರಿವು ಇರುವುದಿಲ್ಲ. ಆದರೆ, ಇಲ್ಲಿ ನಾವು ತಲೆಯ ಮೇಲಿನ‌ ಭಾಗಕ್ಕೆ ಮಾತ್ರ ಅರವಳಿಕೆ ಕೊಟ್ಟಿದ್ದೆವು. ಆ ರೋಗಿಯ‌ ದೇಹದ ಬಾಯಿ, ಮೂಗು, ಕಣ್ಣು, ಕೈ, ಕಾಲುಗಳು ಸೇರಿ ಎಲ್ಲಾ ಭಾಗಗಳು ಕಾರ್ಯನಿರ್ವಹಿಸುತ್ತಿದ್ದವು. ಹೀಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರೋಗಿಗೆ ಕೊಳಲು ನುಡಿಸುವುದು ಹವ್ಯಾಸ. ಹಾಗಾಗಿ, ಅವರಿಗೆ ಕೊಳಲು ನುಡಿಸಲು ಕೊಟ್ಟೆವು. ನಾವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಅವರ ಮೆದುಳಿನಲ್ಲಿದ್ದ ಗಡ್ಡೆ ಹೊರ ತೆಗೆದೆವು" ಎಂದು ವಿವರಿಸಿದರು.

ದೇಶದ 10-12 ಕಡೆ ಮಾತ್ರ ಇಂಥ ಮೆದುಳು ಶಸ್ತ್ರಚಿಕಿತ್ಸೆ: "ದೇಶದ 10-12 ಕಡೆ ಮಾತ್ರ ಇಂಥ ಮೆದುಳು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಅಲ್ಲೆಲ್ಲಾ 10-15 ಲಕ್ಷ ರೂ. ಬಿಲ್ ಆಗುತ್ತದೆ. ಆದರೆ, ನಮ್ಮ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 1 ಲಕ್ಷ 25 ಸಾವಿರ ರೂಪಾಯಿಯಲ್ಲಿ ಮಾಡುತ್ತಿದ್ದೇವೆ. ಇದಕ್ಕೆಲ್ಲಾ ಬಡ ರೋಗಿಗಳ ಮೇಲೆ ಕನೇರಿ ಮಠದ ಸ್ವಾಮೀಜಿ ಕಳಕಳಿಯೇ ಕಾರಣ" ಎಂದು ಹೇಳಿದರು.

ಆಪರೇಷನ್​ ಬಗ್ಗೆ ಶ್ರೀಗಳ ಸಂತಸ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, "ರೋಗಿ ಎಚ್ಚರ ಇರುವಾಗಲೇ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು ಇಡೀ ಏಷಿಯಾದಲ್ಲೇ ಯಾರೂ ಮಾಡಿಲ್ಲ. ಅಂಥ ವಿಶಿಷ್ಟ ದಾಖಲೆಗೆ ನಮ್ಮ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಪಾತ್ರವಾಗಿದೆ. ರೋಗಿಯ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕೊಳಲು ಊದುವಾಗ, ಐಸ್ ಕ್ರೀಮ್ ತಿನ್ನುವಾಗ ಆಪರೇಶನ್ ಮಾಡಲಾಗಿದೆ. ಇನ್ನು ಕೂಲಿ ನಾಲಿ ಮಾಡಿ ಬದುಕು ಸಾಗಿಸುವ ಬಡ ರೋಗಿಗಳ ಶಸ್ತ್ರಚಿಕಿತ್ಸೆಗೆ 1.25 ಲಕ್ಷ ರೂಪಾಯಿಗೆ ಕಡಿಮೆಗೊಳಿಸಿ, ನಮ್ಮ ನಿಧಿಯಿಂದ ಹಣ ಹೊಂದಿಸಿ, ಶೇ.50ರಷ್ಟು ಮಾತ್ರ ಬಿಲ್ ತೆಗೆದುಕೊಳ್ಳಲಾಗುತ್ತಿದೆ" ಎಂದು ತಿಳಿಸಿದರು.

ಕಡಿಮೆ ಖರ್ಚಿನಲ್ಲಿ ಹೇಗೆ ಸಾಧ್ಯ?: "ನಮ್ಮ ವೈದ್ಯರು ಕಂಪನಿ ಜೊತೆಗೆ ನೇರವಾಗಿ ಅತೀ ಕಡಿಮೆ ಬೆಲೆಯಲ್ಲಿ ಔಷಧ ಖರೀದಿಸುತ್ತಾರೆ. ಆಸ್ಪತ್ರೆಯ ಶುಲ್ಕವನ್ನೂ ಹೆಚ್ಚಿಗೆ ತೆಗೆದುಕೊಳ್ಳುವುದಿಲ್ಲ. ಇನ್ನು ಯಂತ್ರೋಪಕರಣಗಳನ್ನು ದಾನಿಗಳಿಂದ ಬಂದ ಹಣದಿಂದ ಖರೀದಿಸುತ್ತೇವೆ. ಹಾಗಾಗಿ, ನಮ್ಮ ಆಸ್ಪತ್ರೆ ಮೇಲೆ ಯಾವುದೇ ಬ್ಯಾಂಕ್ ಲೋನ್ ಇಲ್ಲ. ಪ್ರತಿ ತಿಂಗಳೂ ಕಂತು ತುಂಬಬೇಕು ಎನ್ನುವ ಚಿಂತೆ ಇಲ್ಲ. ಆದ್ದರಿಂದ ಯಾರೂ ಹಣ ಇಲ್ಲವೆಂದು ಚಿಕಿತ್ಸೆ ಇಲ್ಲದೆ ವಾಪಸ್ ಹೋಗಬಾರದೆಂಬುದು ವೈದ್ಯರ ಯೋಚನೆ. ಹಾಗಾಗಿ ಈ ರೀತಿ ಕಡಿಮೆ ಖರ್ಚಿನಲ್ಲಿ ಆಪರೇಶನ್ ಮಾಡಲು ಸಾಧ್ಯವಾಗುತ್ತಿದೆ" ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು: ಲಿವರ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೃದ್ಧರಿಗೆ ಮರು ಜೀವ ನೀಡಿದ ಕೆಆರ್​ ಆಸ್ಪತ್ರೆ ವೈದ್ಯರು - Liver cancer surgery

Last Updated : 6 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.