ETV Bharat / state

ಶಿರೂರು ಗುಡ್ಡ ಕುಸಿತದಲ್ಲಿ ಮಾಲೀಕನ ಕಳೆದುಕೊಂಡು ಮರುಗುತ್ತಿದ್ದ ಶ್ವಾನಕ್ಕೆ ಎಸ್‌ಪಿ ಆಸರೆ - Shirur Hill Collapse Tragedy

author img

By ETV Bharat Karnataka Team

Published : Aug 16, 2024, 4:02 PM IST

ಶಿರೂರು ಗುಡ್ಡ ಕುಸಿತದಲ್ಲಿ ತನ್ನನ್ನು ಸಾಕಿದ್ದ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಆಸರೆ ಕಲ್ಪಿಸಿದ್ದಾರೆ.

SP gave shelter to orphan dog
ನಿಯತ್ತಿನ ಶ್ವಾನಕ್ಕೆ ಎಸ್ಪಿ ಆಸರೆ (ETV Bharat)
ತನ್ನನ್ನು ಸಾಕಿ ಸಲಹಿದ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನಕ್ಕೆ ಆಸರೆ ನೀಡಿದ ಎಸ್‌ಪಿ (ETV Bharat)

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಮಣ್ಣಿನಡಿ ಸಿಲುಕಿ ದಾರುಣ ಸಾವು ಕಂಡ ಲಕ್ಷಣ ನಾಯ್ಕ ಕುಟುಂಬದ ಸಾವಿನಿಂದ ಕಂಗಾಲಾಗಿದ್ದ ಶ್ವಾನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು ಆಸರೆ ಕಲ್ಪಿಸಿದ್ದಾರೆ.

ಜುಲೈ 16ರಂದು ಶಿರೂರಿನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿತ್ತು. ಲಕ್ಷ್ಮಣ ಹಾಗೂ ಶಾಂತಿ ದಂಪತಿ ಮತ್ತು ಮಕ್ಕಳಾದ ರೋಷನ್, ಆವಂತಿಕಾ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದರು. ಲಕ್ಷ್ಮಣ ನಾಯ್ಕ ಅವರು ಸಾಕಿದ ಶ್ವಾನ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಿತ್ತು. ಕಣ್ಣೆದುರೇ ನಡೆದ ಭಯಾನಕ ಘಟನೆಯಿಂದ ಮರುಕದಲ್ಲಿದ್ದ ಈ ಶ್ವಾನ, ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳದಲ್ಲೇ ಇದ್ದು ತನ್ನವರಿಗಾಗಿ ಹಪಹಪಿಸುತ್ತಿತ್ತು.

ಶ್ವಾನದ ಮೂಕರೋದನೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಮುಳುಗುತಜ್ಞ ಈಶ್ವರ ಮಲ್ಪೆ ಸೇರಿದಂತೆ ಹಲವರಲ್ಲಿ ಬೇಸರ ಉಂಟುಮಾಡಿತ್ತು. ಇವೆಲ್ಲವುಗಳ ನಡುವೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು ಏಕಾಂಗಿಯಾದ ಶ್ವಾನಕ್ಕೆ ಆಸರೆ ಒದಗಿಸಿದ್ದಾರೆ. ಜೊತೆಗೆ, ಶ್ವಾನಕ್ಕೆ ಲಕ್ಷ್ಮಣ ನಾಯ್ಕ ಅವರ ಮಗ ರೋಷನ್ ಅವರ ಹೆಸರನ್ನೇ ಇಟ್ಟಿದ್ದಾರೆ.

ಇದನ್ನೂ ಓದಿ: ಗಾಜಾ ಮೇಲೆ ಮುಂದುವರೆದ ಇಸ್ರೇಲ್​ ದಾಳಿ; ಮಕ್ಕಳನ್ನು ಕಳೆದುಕೊಂಡ ಪೋಷಕರು, ಅನಾಥ ಮಕ್ಕಳ ರೋಧನೆ - Israels bombardment on gaza

ತನ್ನನ್ನು ಸಾಕಿ ಸಲಹಿದ ಕುಟುಂಬವನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನಕ್ಕೆ ಆಸರೆ ನೀಡಿದ ಎಸ್‌ಪಿ (ETV Bharat)

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಮಣ್ಣಿನಡಿ ಸಿಲುಕಿ ದಾರುಣ ಸಾವು ಕಂಡ ಲಕ್ಷಣ ನಾಯ್ಕ ಕುಟುಂಬದ ಸಾವಿನಿಂದ ಕಂಗಾಲಾಗಿದ್ದ ಶ್ವಾನಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು ಆಸರೆ ಕಲ್ಪಿಸಿದ್ದಾರೆ.

ಜುಲೈ 16ರಂದು ಶಿರೂರಿನಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿತ್ತು. ಲಕ್ಷ್ಮಣ ಹಾಗೂ ಶಾಂತಿ ದಂಪತಿ ಮತ್ತು ಮಕ್ಕಳಾದ ರೋಷನ್, ಆವಂತಿಕಾ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದರು. ಲಕ್ಷ್ಮಣ ನಾಯ್ಕ ಅವರು ಸಾಕಿದ ಶ್ವಾನ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಿತ್ತು. ಕಣ್ಣೆದುರೇ ನಡೆದ ಭಯಾನಕ ಘಟನೆಯಿಂದ ಮರುಕದಲ್ಲಿದ್ದ ಈ ಶ್ವಾನ, ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳದಲ್ಲೇ ಇದ್ದು ತನ್ನವರಿಗಾಗಿ ಹಪಹಪಿಸುತ್ತಿತ್ತು.

ಶ್ವಾನದ ಮೂಕರೋದನೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಮುಳುಗುತಜ್ಞ ಈಶ್ವರ ಮಲ್ಪೆ ಸೇರಿದಂತೆ ಹಲವರಲ್ಲಿ ಬೇಸರ ಉಂಟುಮಾಡಿತ್ತು. ಇವೆಲ್ಲವುಗಳ ನಡುವೆ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಅವರು ಏಕಾಂಗಿಯಾದ ಶ್ವಾನಕ್ಕೆ ಆಸರೆ ಒದಗಿಸಿದ್ದಾರೆ. ಜೊತೆಗೆ, ಶ್ವಾನಕ್ಕೆ ಲಕ್ಷ್ಮಣ ನಾಯ್ಕ ಅವರ ಮಗ ರೋಷನ್ ಅವರ ಹೆಸರನ್ನೇ ಇಟ್ಟಿದ್ದಾರೆ.

ಇದನ್ನೂ ಓದಿ: ಗಾಜಾ ಮೇಲೆ ಮುಂದುವರೆದ ಇಸ್ರೇಲ್​ ದಾಳಿ; ಮಕ್ಕಳನ್ನು ಕಳೆದುಕೊಂಡ ಪೋಷಕರು, ಅನಾಥ ಮಕ್ಕಳ ರೋಧನೆ - Israels bombardment on gaza

ETV Bharat Logo

Copyright © 2024 Ushodaya Enterprises Pvt. Ltd., All Rights Reserved.