ETV Bharat / state

ಮಹಾ ಕುಂಭಮೇಳಕ್ಕೆ ರಾಜ್ಯದಿಂದ ಸಾವಿರಾರು ಜನರ ಪ್ರಯಾಣ: ನೈಋತ್ಯ ರೈಲ್ವೆಗೆ ಲಾಭವೆಷ್ಟು? - MAHA KUMBH MELA

ಪ್ರಯಾಗ್​ರಾಜ್ ಮಹಾ​ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದಾರೆ. ನೈಋತ್ಯ ರೈಲ್ವೆಯಿಂದಲೂ ಸಹ ವಿಶೇಷ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ಉತ್ತಮ ನಿರ್ವಹಣೆ ತೋರುವಲ್ಲಿ ಯಶಸ್ವಿಯಾಗಿದೆ.

south-western-railway-reaps-huge-profits-from-maha-kumbh-mela-special-trips
ಮಹಾ ಕುಂಭಮೇಳ, ನೈಋತ್ಯ ರೈಲ್ವೆ ಪ್ರಯಾಣಿಕರು (ETV Bharat)
author img

By ETV Bharat Karnataka Team

Published : Feb 21, 2025, 8:00 PM IST

ಹುಬ್ಬಳ್ಳಿ: ಪ್ರಯಾಗ್​​​ರಾಜ್​ ಮಹಾ ಕುಂಭಮೇಳಕ್ಕೆ ದೇಶಾದ್ಯಂತವಲ್ಲದೆ, ವಿದೇಶಗಳಿಂದಲೂ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇದೇ ವೇಳೆ, ನೈಋತ್ಯ ರೈಲ್ವೆಯು ಮೂರು ವಿಭಾಗಗಳಾದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಿಂದ 20 ಪ್ಯಾಸೆಂಜರ್ ಟ್ರಿಪ್​​ಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗಮನ ಸೆಳೆದಿದೆ.

ಮೂರು ವಿಭಾಗಗಳಿಂದ ಒಟ್ಟು 45,568 ಪ್ರಯಾಣಿಕರು ಮಹಾ ಕುಂಭಕ್ಕೆ ತೆರಳಿದ್ದಾರೆ. ಈ ವಿಶೇಷ ಟ್ರಿಪ್​ಗಳಿಂದ ರೈಲ್ವೆಯು 4,95,14,078 ರೂಪಾಯಿ ಆದಾಯ ಗಳಿಸಿದೆ (26 ಡಿಸೆಂಬರ್ 2024 ರಿಂದ 24ರ ಫೆಬ್ರವರಿ 2025 ವರೆಗೆ). ಇದು ಇಲಾಖೆಯ ದಕ್ಷತೆ ಮತ್ತು ಉತ್ತಮ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

south-western-railway-reaps-huge-profits-from-maha-kumbh-mela-special-trips
ಕುಂಭಮೇಳದ ಮಾರ್ಗಸೂಚಿಗಳೊಂದಿಗೆ ಪ್ರಯಾಣಿಕರು (ETV Bharat)

ಈ ರೈಲುಗಳು ಅತ್ಯಂತ ಜನಪ್ರಿಯವಾಗಿದ್ದು, ಸರಾಸರಿ 143.8% ಸೀಟ್ ಭರ್ತಿಯಾಗಿರುವುದು ಅವುಗಳ ಬಲವಾದ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಈ ಸಾಧನೆಯು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಮತ್ತು ಉತ್ತಮ ಗುಣಮಟ್ಟದ ಸೇವೆ ಒದಗಿಸಲು ನೈಋತ್ಯ ರೈಲ್ವೆಯ ಸಮರ್ಪಣೆಯನ್ನು ಇನ್ನಷ್ಟು ಬಲಪಡಿಸುತ್ತದೆ. ವಿಶೇಷ ಟ್ರಿಪ್​​ಗಳು ಪ್ರಯಾಣಿಕರನ್ನು ಕುಂಭಮೇಳಕ್ಕೆ ಸಂಪರ್ಕಿಸಲು ಸಹಾಯ ಮಾಡಿವೆ. ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ಒದಗಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

south-western-railway-reaps-huge-profits-from-maha-kumbh-mela-special-trips
ಕುಂಭಮೇಳದ ಮಾರ್ಗಸೂಚಿ ವಿತರಣೆ (ETV Bharat)

ನೈಋತ್ಯ ರೈಲ್ವೆ ತನ್ನ ಮೂರು ವಿಭಾಗಗಳಲ್ಲಿ ಪ್ರಯಾಣಿಕರಿಗೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕುಂಭಮೇಳದ ಮಾರ್ಗಸೂಚಿಗಳನ್ನು ಒಳಗೊಂಡ ಕಿರುಪುಸ್ತಕಗಳನ್ನು ವಿತರಿಸಿದೆ ಎಂದು ನೈರುತ್ಯ ರೈಲ್ವೆ ‌ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ: ಗೋಕರ್ಣ, ಮುರುಡೇಶ್ವರಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ

ಹುಬ್ಬಳ್ಳಿ: ಪ್ರಯಾಗ್​​​ರಾಜ್​ ಮಹಾ ಕುಂಭಮೇಳಕ್ಕೆ ದೇಶಾದ್ಯಂತವಲ್ಲದೆ, ವಿದೇಶಗಳಿಂದಲೂ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಇದೇ ವೇಳೆ, ನೈಋತ್ಯ ರೈಲ್ವೆಯು ಮೂರು ವಿಭಾಗಗಳಾದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಿಂದ 20 ಪ್ಯಾಸೆಂಜರ್ ಟ್ರಿಪ್​​ಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಗಮನ ಸೆಳೆದಿದೆ.

ಮೂರು ವಿಭಾಗಗಳಿಂದ ಒಟ್ಟು 45,568 ಪ್ರಯಾಣಿಕರು ಮಹಾ ಕುಂಭಕ್ಕೆ ತೆರಳಿದ್ದಾರೆ. ಈ ವಿಶೇಷ ಟ್ರಿಪ್​ಗಳಿಂದ ರೈಲ್ವೆಯು 4,95,14,078 ರೂಪಾಯಿ ಆದಾಯ ಗಳಿಸಿದೆ (26 ಡಿಸೆಂಬರ್ 2024 ರಿಂದ 24ರ ಫೆಬ್ರವರಿ 2025 ವರೆಗೆ). ಇದು ಇಲಾಖೆಯ ದಕ್ಷತೆ ಮತ್ತು ಉತ್ತಮ ಕಾರ್ಯಾಚರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

south-western-railway-reaps-huge-profits-from-maha-kumbh-mela-special-trips
ಕುಂಭಮೇಳದ ಮಾರ್ಗಸೂಚಿಗಳೊಂದಿಗೆ ಪ್ರಯಾಣಿಕರು (ETV Bharat)

ಈ ರೈಲುಗಳು ಅತ್ಯಂತ ಜನಪ್ರಿಯವಾಗಿದ್ದು, ಸರಾಸರಿ 143.8% ಸೀಟ್ ಭರ್ತಿಯಾಗಿರುವುದು ಅವುಗಳ ಬಲವಾದ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಈ ಸಾಧನೆಯು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಮತ್ತು ಉತ್ತಮ ಗುಣಮಟ್ಟದ ಸೇವೆ ಒದಗಿಸಲು ನೈಋತ್ಯ ರೈಲ್ವೆಯ ಸಮರ್ಪಣೆಯನ್ನು ಇನ್ನಷ್ಟು ಬಲಪಡಿಸುತ್ತದೆ. ವಿಶೇಷ ಟ್ರಿಪ್​​ಗಳು ಪ್ರಯಾಣಿಕರನ್ನು ಕುಂಭಮೇಳಕ್ಕೆ ಸಂಪರ್ಕಿಸಲು ಸಹಾಯ ಮಾಡಿವೆ. ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ಒದಗಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

south-western-railway-reaps-huge-profits-from-maha-kumbh-mela-special-trips
ಕುಂಭಮೇಳದ ಮಾರ್ಗಸೂಚಿ ವಿತರಣೆ (ETV Bharat)

ನೈಋತ್ಯ ರೈಲ್ವೆ ತನ್ನ ಮೂರು ವಿಭಾಗಗಳಲ್ಲಿ ಪ್ರಯಾಣಿಕರಿಗೆ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಕುಂಭಮೇಳದ ಮಾರ್ಗಸೂಚಿಗಳನ್ನು ಒಳಗೊಂಡ ಕಿರುಪುಸ್ತಕಗಳನ್ನು ವಿತರಿಸಿದೆ ಎಂದು ನೈರುತ್ಯ ರೈಲ್ವೆ ‌ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಶಿವರಾತ್ರಿ: ಗೋಕರ್ಣ, ಮುರುಡೇಶ್ವರಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.