ETV Bharat / state

ಪ್ರಜ್ವಲ್​ ಅಶ್ಲೀಲ ವಿಡಿಯೋ ಪ್ರಕರಣ: ಹಾಸನದಲ್ಲಿ 18 ಕಡೆ ಎಸ್​ಐಟಿ ಶೋಧ - PRAJWAL REVANNA CASE

author img

By ETV Bharat Karnataka Team

Published : May 15, 2024, 4:17 PM IST

Updated : May 15, 2024, 4:45 PM IST

ಸಂಸದ ಪ್ರಜ್ವಲ್​ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲಿ 18 ಕಡೆ ಎಸ್ಐಟಿ ತಂಡ ಶೋಧಕಾರ್ಯ ನಡೆಸಿದೆ.

SIT TEAM RAIDED
ಎಸ್​ಐಟಿ ದಾಳಿ (ETV Bharat)

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಹಾಸನದಲ್ಲಿ ಸುಮಾರು 18 ಕಡೆ ಶೋಧ ನಡೆಸಿದ್ದಾರೆ.

ಏಲ್ಲೆಲ್ಲಿ ದಾಳಿ?: ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎನ್ನಲಾದ ಕ್ವಾಲಿಟಿ ಬಾರ್ ಶರತ್​, ವಲ್ಲಭಾಯಿ ರಸ್ತೆ ಪುನೀತ್, ಕೃಷ್ಣ ಹೋಟೆಲ್ ಮಾಲೀಕ ಹೆಚ್.ಪಿ.ಕಿರಣ್, ಭುವನಹಳ್ಳಿಯ ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ಹೊಳೆನರಸೀಪುರದ ಮಾಜಿ ಪುರಸಭಾ ಸದಸ್ಯ ಪುಟ್ಟರಾಜು ಪಾಪಣ್ಣಿ, ಬೇಲೂರು ತಾಲೂಕಿನ ನಲ್ಕೆ ನವೀನ್​ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಡುವಿನ ಕೋಟೆ ಕಾರ್ತಿಕ್, ಚನ್ನರಾಯಪಟ್ಟಣದ ಟಿವಿಎಸ್ ಶೋ ರೂಂ ಮಾಲೀಕ ಶಶಿ, ಬೇಲೂರಿನ ಅರೇಹಳ್ಳಿ ಚೇತನ್ ಗೌಡ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ಶೋಧ ನಡೆಸಿದ್ದಾರೆ.

ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್ಮೆಂಟ್​​ನಲ್ಲಿರುವ ಫ್ಲಾಟ್​ನಲ್ಲಿ ಶೋಧನೆ ನಡೆಸಿದ್ದ ಎಸ್ಐಟಿ ತಂಡ, ಶರತ್ ಅವರ ಐ-ಫೋನ್ ವಶಕ್ಕೆ ಪಡೆದು ಪರಿಶೀಲಿಸಿದೆ. ಆದರೆ, ಅವರ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿ, ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್ಐಟಿ ತಂಡ ಹೇಳಿದೆ. ಇನ್ನು ವಿವಿಧೆಡೆ ಶೋಧ ನಡೆಸಿರುವ ಎಸ್ಐಟಿ, ಮಹತ್ವದ ಸಾಕ್ಷ್ಯ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದೆ.

ಎಸ್ಐಟಿ ನೋಟಿಸ್: ಪೆನ್​ ಡ್ರೈವ್ ಹಂಚಿಕೆ ಸಂಬಂಧ ಹಾಸನದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನವೀನ್​ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ಜೊತೆಗೆ ನಿರೀಕ್ಷಣ ಜಾಮೀನಿನ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದರಿಂದ ಎಸ್ಐಟಿ ಶೋಧಕ್ಕೆ ಮುಂದಾಗಿದೆ.

ಇದನ್ನೂಓದಿ:ಜೈಲಿನಿಂದ ಹೊರಬಂದ ಬೆನ್ನಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್​.ಡಿ.ರೇವಣ್ಣ - HD Revanna visited Chamundi Hill

ಹಾಸನ: ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಹಾಸನದಲ್ಲಿ ಸುಮಾರು 18 ಕಡೆ ಶೋಧ ನಡೆಸಿದ್ದಾರೆ.

ಏಲ್ಲೆಲ್ಲಿ ದಾಳಿ?: ಮಾಜಿ ಶಾಸಕ ಪ್ರೀತಂಗೌಡ ಆಪ್ತರು ಎನ್ನಲಾದ ಕ್ವಾಲಿಟಿ ಬಾರ್ ಶರತ್​, ವಲ್ಲಭಾಯಿ ರಸ್ತೆ ಪುನೀತ್, ಕೃಷ್ಣ ಹೋಟೆಲ್ ಮಾಲೀಕ ಹೆಚ್.ಪಿ.ಕಿರಣ್, ಭುವನಹಳ್ಳಿಯ ಶ್ರೀನಿವಾಸ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರಾದ ಹೊಳೆನರಸೀಪುರದ ಮಾಜಿ ಪುರಸಭಾ ಸದಸ್ಯ ಪುಟ್ಟರಾಜು ಪಾಪಣ್ಣಿ, ಬೇಲೂರು ತಾಲೂಕಿನ ನಲ್ಕೆ ನವೀನ್​ಗೌಡ, ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಡುವಿನ ಕೋಟೆ ಕಾರ್ತಿಕ್, ಚನ್ನರಾಯಪಟ್ಟಣದ ಟಿವಿಎಸ್ ಶೋ ರೂಂ ಮಾಲೀಕ ಶಶಿ, ಬೇಲೂರಿನ ಅರೇಹಳ್ಳಿ ಚೇತನ್ ಗೌಡ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ಶೋಧ ನಡೆಸಿದ್ದಾರೆ.

ಕ್ವಾಲಿಟಿ ಬಾರ್ ಶರತ್ ಅವರ ಬೆಂಗಳೂರಿನ ಗೋಪಾಲನಗರದ ಶೋಭಾ ಅಪಾರ್ಟ್ಮೆಂಟ್​​ನಲ್ಲಿರುವ ಫ್ಲಾಟ್​ನಲ್ಲಿ ಶೋಧನೆ ನಡೆಸಿದ್ದ ಎಸ್ಐಟಿ ತಂಡ, ಶರತ್ ಅವರ ಐ-ಫೋನ್ ವಶಕ್ಕೆ ಪಡೆದು ಪರಿಶೀಲಿಸಿದೆ. ಆದರೆ, ಅವರ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿ, ಎಲೆಕ್ಟ್ರಾನಿಕ್ ವಸ್ತುಗಳು ದೊರಕಿಲ್ಲ ಎಂದು ಎಸ್ಐಟಿ ತಂಡ ಹೇಳಿದೆ. ಇನ್ನು ವಿವಿಧೆಡೆ ಶೋಧ ನಡೆಸಿರುವ ಎಸ್ಐಟಿ, ಮಹತ್ವದ ಸಾಕ್ಷ್ಯ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದೆ.

ಎಸ್ಐಟಿ ನೋಟಿಸ್: ಪೆನ್​ ಡ್ರೈವ್ ಹಂಚಿಕೆ ಸಂಬಂಧ ಹಾಸನದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ನವೀನ್​ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ವಿಚಾರಣೆಗೆ ಹಾಜರಾಗಲು ಎಸ್ಐಟಿ ನೋಟಿಸ್ ನೀಡಿದೆ. ಜೊತೆಗೆ ನಿರೀಕ್ಷಣ ಜಾಮೀನಿನ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದರಿಂದ ಎಸ್ಐಟಿ ಶೋಧಕ್ಕೆ ಮುಂದಾಗಿದೆ.

ಇದನ್ನೂಓದಿ:ಜೈಲಿನಿಂದ ಹೊರಬಂದ ಬೆನ್ನಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಹೆಚ್​.ಡಿ.ರೇವಣ್ಣ - HD Revanna visited Chamundi Hill

Last Updated : May 15, 2024, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.