ETV Bharat / state

ಬೆಂಗಳೂರು: ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಗೆ ಹಲ್ಲೆ ನಡೆಸಿದ ರೌಡಿಶೀಟರ್ - Rowdy Sheeter Attack

author img

By ETV Bharat Karnataka Team

Published : Sep 16, 2024, 8:46 PM IST

ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂದು ವ್ಯಕ್ತಿಯ ಮೇಲೆ ರೌಡಿಶೀಟರ್ ಒಬ್ಬ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದೇ ವೇಳೆ, ಮತ್ತೋರ್ವನ ಜೊತೆಗೂ ಇದೇ ರೌಡಿಶೀಟರ್​ ಅಮಾನವೀಯವಾಗಿ ವರ್ತಿಸಿರುವ ವಿಡಿಯೋವೊಂದು ವೈರಲ್​ ಆಗಿದೆ.

rowdy sheeter
ರೌಡಿಶೀಟರ್ ಪವನ್ (ETV Bharat)
ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ (ETV Bharat)

ಬೆಂಗಳೂರು: ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವ್ಯಕ್ತಿಯ ಮೇಲೆ ರೌಡಿಶೀಟರ್ ಒಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರ ಬಳಿ ನಡೆದಿದೆ. ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಪವನ್ ಅಲಿಯಾಸ್ ಕಡಬು (28) ಎಂಬಾತನೇ ಹಲ್ಲೆ ನಡೆಸಿರುವ ಆರೋಪಿಯಾಗಿದ್ದಾನೆ.

ವಿಶ್ವಾಸ್​ ಎಂಬಾತನೆ ಹಲ್ಲೆಗೊಳಗಾದ ವ್ಯಕ್ತಿ. ವಿಶ್ವಾಸ್​ ಹಾಗೂ ಆತನ ಸ್ನೇಹಿತನೊಬ್ಬ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕುಪಿತಗೊಂಡು ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿಶ್ವಾಸ್​​ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

ಒಂದು ತಿಂಗಳ ಹಿಂದಿನ ವಿಡಿಯೋ ವೈರಲ್​: ಅಲ್ಲದೇ, ಹಲ್ಲೆ ಘಟನೆ ನಡೆದ ಕೆಲ ಗಂಟೆಗಳಲ್ಲೇ ರೌಡಿಶೀಟರ್ ಪವನ್ ಮತ್ತೋರ್ವ ವ್ಯಕ್ತಿಯ ಮೇಲೆ​ ಹಲ್ಲೆ ಮಾಡಿರುವ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ. ಒಂದು ತಿಂಗಳ ಹಿಂದಿನ ವಿಡಿಯೋ ಇದಾಗಿದ್ದು, ಅರ್ಜುನ್​ ಎಂಬಾತನ ಮೇಲೆ ಪವನ್​ ಹಲ್ಲೆ ನಡೆಸಿದ್ದಾಗಿದೆ. ಅರ್ಜುನ್​ನನ್ನು ಬೆತ್ತಲೆಗೊಳಿಸಿ, ಹೊಡೆದು ಓಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪವನ್​ ಹಾಗೂ ಆತನ ಸ್ನೇಹಿತರ ನಡುವೆಯೇ ಸಮಸ್ಯೆ ಉಂಟಾಗಿ, ಹಳೆಯ ವಿಡಿಯೋ ವೈರಲ್​ ಮಾಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಬಗ್ಗೆ ರೌಡಿಶೀಟರ್​​ ಪವನ್​ಗಾಗಿ ಹುಡುಕಾಟ ನಡೆಯುತ್ತಿದೆ.​ ಹಾಗೂ ವಿಡಿಯೋದಲ್ಲಿ ಹಲ್ಲೆಗೊಳಗಾಗಿರುವ ಅರ್ಜುನ್​ ಕೂಡ ನಾಪತ್ತೆಯಾಗಿದ್ದಾನೆ. ಒಂದು ತಿಂಗಳ ಹಿಂದೆ ಘಟನೆ ನಡೆದರೂ, ಆತ ಕೂಡ ಯಾವುದೇ ದೂರು ನೀಡಿಲ್ಲ. ಇಬ್ಬರೂ ಕೂಡ ಬ್ಯಾಡ್​ ಕ್ಯಾರೆಕ್ಟರ್ಸ್​ ಎಂಬುದು ಗೊತ್ತಾಗಿದೆ. ಇಬ್ಬರನ್ನೂ ಶೀಘ್ರದಲ್ಲೇ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳ: ಹಳೇ ಸ್ಕೂಟರ್ ಬಿಡಿ ಭಾಗ ಕಳ್ಳತನ, ಒಂದೇ ತಿಂಗಳಲ್ಲಿ ಎರಡು ಸಲ ಕೃತ್ಯ! - Scooter Spare Parts Theft

ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ (ETV Bharat)

ಬೆಂಗಳೂರು: ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ವ್ಯಕ್ತಿಯ ಮೇಲೆ ರೌಡಿಶೀಟರ್ ಒಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರ ಬಳಿ ನಡೆದಿದೆ. ರಾಜಗೋಪಾಲನಗರ ಠಾಣೆಯ ರೌಡಿಶೀಟರ್ ಪವನ್ ಅಲಿಯಾಸ್ ಕಡಬು (28) ಎಂಬಾತನೇ ಹಲ್ಲೆ ನಡೆಸಿರುವ ಆರೋಪಿಯಾಗಿದ್ದಾನೆ.

ವಿಶ್ವಾಸ್​ ಎಂಬಾತನೆ ಹಲ್ಲೆಗೊಳಗಾದ ವ್ಯಕ್ತಿ. ವಿಶ್ವಾಸ್​ ಹಾಗೂ ಆತನ ಸ್ನೇಹಿತನೊಬ್ಬ ತನ್ನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕುಪಿತಗೊಂಡು ರೌಡಿಶೀಟರ್ ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ವಿಶ್ವಾಸ್​​ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ.

ಒಂದು ತಿಂಗಳ ಹಿಂದಿನ ವಿಡಿಯೋ ವೈರಲ್​: ಅಲ್ಲದೇ, ಹಲ್ಲೆ ಘಟನೆ ನಡೆದ ಕೆಲ ಗಂಟೆಗಳಲ್ಲೇ ರೌಡಿಶೀಟರ್ ಪವನ್ ಮತ್ತೋರ್ವ ವ್ಯಕ್ತಿಯ ಮೇಲೆ​ ಹಲ್ಲೆ ಮಾಡಿರುವ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ. ಒಂದು ತಿಂಗಳ ಹಿಂದಿನ ವಿಡಿಯೋ ಇದಾಗಿದ್ದು, ಅರ್ಜುನ್​ ಎಂಬಾತನ ಮೇಲೆ ಪವನ್​ ಹಲ್ಲೆ ನಡೆಸಿದ್ದಾಗಿದೆ. ಅರ್ಜುನ್​ನನ್ನು ಬೆತ್ತಲೆಗೊಳಿಸಿ, ಹೊಡೆದು ಓಡಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪವನ್​ ಹಾಗೂ ಆತನ ಸ್ನೇಹಿತರ ನಡುವೆಯೇ ಸಮಸ್ಯೆ ಉಂಟಾಗಿ, ಹಳೆಯ ವಿಡಿಯೋ ವೈರಲ್​ ಮಾಡಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.

ಈ ಬಗ್ಗೆ ರೌಡಿಶೀಟರ್​​ ಪವನ್​ಗಾಗಿ ಹುಡುಕಾಟ ನಡೆಯುತ್ತಿದೆ.​ ಹಾಗೂ ವಿಡಿಯೋದಲ್ಲಿ ಹಲ್ಲೆಗೊಳಗಾಗಿರುವ ಅರ್ಜುನ್​ ಕೂಡ ನಾಪತ್ತೆಯಾಗಿದ್ದಾನೆ. ಒಂದು ತಿಂಗಳ ಹಿಂದೆ ಘಟನೆ ನಡೆದರೂ, ಆತ ಕೂಡ ಯಾವುದೇ ದೂರು ನೀಡಿಲ್ಲ. ಇಬ್ಬರೂ ಕೂಡ ಬ್ಯಾಡ್​ ಕ್ಯಾರೆಕ್ಟರ್ಸ್​ ಎಂಬುದು ಗೊತ್ತಾಗಿದೆ. ಇಬ್ಬರನ್ನೂ ಶೀಘ್ರದಲ್ಲೇ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ಎಸ್.ಗಿರೀಶ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳ: ಹಳೇ ಸ್ಕೂಟರ್ ಬಿಡಿ ಭಾಗ ಕಳ್ಳತನ, ಒಂದೇ ತಿಂಗಳಲ್ಲಿ ಎರಡು ಸಲ ಕೃತ್ಯ! - Scooter Spare Parts Theft

ETV Bharat Logo

Copyright © 2024 Ushodaya Enterprises Pvt. Ltd., All Rights Reserved.