ETV Bharat / state

ನಕಲಿ ಎಕೆ47, ಮೈತುಂಬಾ ಚಿನ್ನ, ಚೆಲುವೆಯರ ಜೊತೆ ಬಿಲ್ಡಪ್! ಭೀತಿ ಹುಟ್ಟಿಸಿದ 'ರೀಲ್ಸ್ ಸ್ಟಾರ್' ಅರೆಸ್ಟ್‌ - Reels Star Arrest

author img

By ETV Bharat Karnataka Team

Published : Jul 2, 2024, 11:22 AM IST

Updated : Jul 2, 2024, 12:21 PM IST

ನಕಲಿ ಎಕೆ 47 ಹಿಡಿದಿರುವ ಗನ್‌ಮ್ಯಾನ್​ಗಳನ್ನು ನಿಲ್ಲಿಸಿ, 'ಭಾಯ್'​ ಎಂದೊಡನೆ ನಾಲ್ಕು ಡೈಲಾಗ್​ ಹೊಡೆದು ರೀಲ್ಸ್ ಕಂಪ್ಲೀಟ್​ ಮಾಡುತ್ತಿದ್ದ ಅರುಣ್​​​ ಕಟಾರೆ ಎಂಬ ಶೋಕಿರಾಜನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಅರುಣ್​ ಕಟಾರೆ
ಬಂಧಿತ ಆರೋಪಿ ಅರುಣ್​ ಕಟಾರೆ (Arun Kathare official Instagram account)

ಬೆಂಗಳೂರು: ರೀಲ್ಸ್​ ಗೀಳಿಗಾಗಿ ಗನ್‌​ ಮ್ಯಾನ್​ಗಳಿಗೆ ನಕಲಿ ಎಕೆ47 ಗನ್ ಕೊಡಿಸಿ, ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿದ್ದ ಅರುಣ್​ ಕಟಾರೆ(26) ಎಂಬಾತನನ್ನು ನಗರದ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಜೂನ್ 9ರಂದು ಆರೋಪಿ, ನಕಲಿ ಗನ್‌ ಹಿಡಿದು ಬಾಡಿಗಾರ್ಡ್‌ಗಳೊಂದಿಗೆ ಕೊತ್ತನೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿಯ ಲೀಲಾ ಹೋಟೆಲ್​ ಬಳಿ ಬಂದಿದ್ದಾನೆ. ಆತನನ್ನು ಕಂಡು‌ ಆತಂಕಗೊಂಡ ಸಾರ್ವಜನಿಕರು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಚಿತ್ರದುರ್ಗ ಮೂಲದ ಆರೋಪಿ, ಮೈ ತುಂಬಾ ನಕಲಿ ಚಿನ್ನಾಭರಣ ಧರಿಸುತ್ತಾನೆ. ನಕಲಿ ಗನ್‌ ಹಿಡಿದ ಬಾಡಿಗಾರ್ಡ್‌ಗಳೊಂದಿಗೆ ಸುತ್ತಾಡುತ್ತಾನೆ. ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳೊಂದಿಗೆ ರೀಲ್ಸ್ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾನೆ. ಈ ಮೂಲಕ ಬಿಲ್ಡಪ್‌ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರನ್ನೂ ಸಂಪಾದಿಸಿದ್ದಾನೆ.

ಆದರೆ, ಇದೀಗ ಆರೋಪಿಯನ್ನು ಬಂಧಿಸಿರುವ ಕೊತ್ತನೂರು ಠಾಣಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು? - New Criminal Laws

ಬೆಂಗಳೂರು: ರೀಲ್ಸ್​ ಗೀಳಿಗಾಗಿ ಗನ್‌​ ಮ್ಯಾನ್​ಗಳಿಗೆ ನಕಲಿ ಎಕೆ47 ಗನ್ ಕೊಡಿಸಿ, ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿದ್ದ ಅರುಣ್​ ಕಟಾರೆ(26) ಎಂಬಾತನನ್ನು ನಗರದ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಜೂನ್ 9ರಂದು ಆರೋಪಿ, ನಕಲಿ ಗನ್‌ ಹಿಡಿದು ಬಾಡಿಗಾರ್ಡ್‌ಗಳೊಂದಿಗೆ ಕೊತ್ತನೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿಯ ಲೀಲಾ ಹೋಟೆಲ್​ ಬಳಿ ಬಂದಿದ್ದಾನೆ. ಆತನನ್ನು ಕಂಡು‌ ಆತಂಕಗೊಂಡ ಸಾರ್ವಜನಿಕರು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಚಿತ್ರದುರ್ಗ ಮೂಲದ ಆರೋಪಿ, ಮೈ ತುಂಬಾ ನಕಲಿ ಚಿನ್ನಾಭರಣ ಧರಿಸುತ್ತಾನೆ. ನಕಲಿ ಗನ್‌ ಹಿಡಿದ ಬಾಡಿಗಾರ್ಡ್‌ಗಳೊಂದಿಗೆ ಸುತ್ತಾಡುತ್ತಾನೆ. ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳೊಂದಿಗೆ ರೀಲ್ಸ್ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾನೆ. ಈ ಮೂಲಕ ಬಿಲ್ಡಪ್‌ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರನ್ನೂ ಸಂಪಾದಿಸಿದ್ದಾನೆ.

ಆದರೆ, ಇದೀಗ ಆರೋಪಿಯನ್ನು ಬಂಧಿಸಿರುವ ಕೊತ್ತನೂರು ಠಾಣಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: 3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು? - New Criminal Laws

Last Updated : Jul 2, 2024, 12:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.