ETV Bharat / state

ದಸರಾ ಮಹೋತ್ಸವ: ಕಿರು ಸ್ತಬ್ಧಚಿತ್ರ ತಯಾರಿಸುವ ಆಸಕ್ತಿ ನಿಮಗಿದೆಯೇ? ಇಲ್ಲಿದೆ ಅವಕಾಶ - Tableau Competition

author img

By ETV Bharat Karnataka Team

Published : Sep 3, 2024, 8:58 AM IST

Updated : Sep 3, 2024, 10:54 AM IST

ಕಿರು ಸ್ತಬ್ಧಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ಸ್ತಬ್ಧಚಿತ್ರ ವಿನ್ಯಾಸವನ್ನು ಸಂಪೂರ್ಣ ಪ್ರಮಾಣದ ಸ್ತಬ್ಧಚಿತ್ರವಾಗಿ ಪರಿವರ್ತಿಸಿ ಮೈಸೂರು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.

ಸ್ತಬ್ಧಚಿತ್ರ (ಸಂಗ್ರಹ ಚಿತ್ರ)
ಸ್ತಬ್ಧಚಿತ್ರ (ಸಂಗ್ರಹ ಚಿತ್ರ) (ETV Bharat)

ಮೈಸೂರು: ಮೈಸೂರು ದಸರಾ ಆಚರಣೆಯ ಭಾಗವಾಗಿ ಸ್ತಬ್ಧಚಿತ್ರ ಉಪಸಮಿತಿ ವತಿಯಿಂದ ನಾವೀನ್ಯತೆ ಮತ್ತು ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ಧಚಿತ್ರ ತಯಾರಿಸುವ ಸ್ಪರ್ಧೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ಪರ್ಧೆಯು ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ವಿನ್ಯಾಸಗಳನ್ನು ರಚಿಸುವಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ವಿನ್ಯಾಸವನ್ನು ಪೂರ್ಣಪ್ರಮಾಣದ ಸ್ತಬ್ಧಚಿತ್ರವಾಗಿ ಪರಿವರ್ತಿಸಲಾಗುವುದು ಮತ್ತು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು.

ಭಾಗವಹಿಸುವವರು ಭಾರತೀಯ ನಾಗರಿಕರಾಗಿದ್ದು, ವೈಯಕ್ತಿಕವಾಗಿ ಅಥವಾ ತಂಡವಾಗಿಯೂ (ತಂಡದಲ್ಲಿ ಗರಿಷ್ಟ 4 ಸದಸ್ಯರು) ಪಾಲ್ಗೊಳ್ಳಬಹುದು. ಪ್ರತಿ ಸ್ಪರ್ಧಿ ಅಥವಾ ತಂಡ ಒಂದು ಪ್ರವೇಶವನ್ನು ಮಾತ್ರ ಸಲ್ಲಿಸಬಹುದು. ಸ್ಪರ್ಧಿಗಳು ಸೆಪ್ಟೆಂಬರ್ 13ರೊಳಗೆ https://forms.gle/Ep9Ab2Ghi2dx8NiKA ಅರ್ಜಿ ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು.

ಮಾರ್ಗಸೂಚಿಗಳು: ಕಿರು ಸ್ತಬ್ಧಚಿತ್ರವು ಕರ್ನಾಟಕ ಅಥವಾ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಸಾಮಾಜಿಕ ಅಂಶಗಳನ್ನು, ಭವಿಷ್ಯಾತ್ಮಕ ಅಂಶಗಳನ್ನು ಪ್ರತಿಬಿಂಬಿಸಬೇಕು. ಸ್ಪರ್ಧೆಗೆ ಸಲ್ಲಿಸುವ ವಿನ್ಯಾಸವು ಮೂಲತಃ ಹೊಸದಾಗಿರಬೇಕು. ಹಿಂದಿನ ಯಾವುದೇ ಸ್ಪರ್ಧೆಗೆ ಸಲ್ಲಿಸಿರಬಾರದು. ಗರಿಷ್ಟ 60x60x60 ಸೆಂ.ಮೀ. ಆಯಾಮಗಳನ್ನು ಹೊಂದಿರಬೇಕು. ಪರಿಸರಸ್ನೇಹಿ ಮತ್ತು ನಾವೀನ್ಯ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಕಿರು ಸ್ತಬ್ಧಚಿತ್ರ ಸದೃಢವಾಗಿ ಸ್ವಯಂ ಬೆಂಬಲಿತವಾಗಿಯೂ ಇರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಸ್ಪರ್ಧಾ ಕಿರು ಸ್ತಬ್ಧಚಿತ್ರವನ್ನು ಸೆಪ್ಟೆಂಬರ್ 17ರಂದು ಸಂಜೆ 5 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಕಡ್ಡಾಯವಾಗಿ ಸ್ವತಃ ಸಲ್ಲಿಸಬೇಕು. ಸ್ಪರ್ಧಾ ಕಿರು ಸ್ತಬ್ಧಚಿತ್ರದ ಜೊತೆ 300 ಪದಗಳೊಳಗಿನ ವಿವರಣೆ (ವಿನ್ಯಾಸದ ಪರಿಕಲ್ಪನೆ, ಭವಿಷ್ಯಾತ್ಮಕ ಅಂಶಗಳು, ಮತ್ತು ಪ್ರೇರಣೆ) ಸಲ್ಲಿಸಬೇಕು.

ಬಹುಮಾನಗಳು: ವಿಜೇತ ವ್ಯಕ್ತಿ ಅಥವಾ ತಂಡಕ್ಕೆ ಪ್ರಥಮ ಬಹುಮಾನವಾಗಿ 25,000 ಮತ್ತು ವಿಜೇತ ವಿನ್ಯಾಸವು ಮೈಸೂರು ದಸರಾದ ಸಂಪೂರ್ಣ ಪ್ರಮಾಣದ ಸ್ತಬ್ಧಚಿತ್ರ ಆಗಿ ಪರಿವರ್ತಿಸಲ್ಪಡುತ್ತದೆ. ದ್ವಿತೀಯ ಬಹುಮಾನ ರೂ. 15,000, ತೃತೀಯ ಬಹುಮಾನ ರೂ.10,000 ಹಾಗೂ ಆಯ್ಕೆಯಾದ ಎಲ್ಲಾ ಸ್ಪರ್ಧಿಗಳಿಗೆ ಪಾಲ್ಗೊಳ್ಳುವ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಅತ್ಯುತ್ತಮ 10 ಕಿರು ಸ್ತಬ್ಧಚಿತ್ರಗಳನ್ನು ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಚೇತನ್ ಕುಮಾರ್ ಎಂ. ಅವರ ದೂ.ಸಂ: 8296536692 ಅಥವಾ ಯಶವಂತ್ ಎಂ ಅವರ ದೂ.ಸಂ: 9738405358 ಅನ್ನು ಸಂಪರ್ಕಿಸಬಹುದು ಎಂದು ದಸರಾ ಸ್ತಬ್ಧಚಿತ್ರ ಉಪಸಮಿತಿಯ ಉಪ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದಸರಾ : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ - cultural program Application

ಮೈಸೂರು: ಮೈಸೂರು ದಸರಾ ಆಚರಣೆಯ ಭಾಗವಾಗಿ ಸ್ತಬ್ಧಚಿತ್ರ ಉಪಸಮಿತಿ ವತಿಯಿಂದ ನಾವೀನ್ಯತೆ ಮತ್ತು ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ಧಚಿತ್ರ ತಯಾರಿಸುವ ಸ್ಪರ್ಧೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ಪರ್ಧೆಯು ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ವಿನ್ಯಾಸಗಳನ್ನು ರಚಿಸುವಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ವಿನ್ಯಾಸವನ್ನು ಪೂರ್ಣಪ್ರಮಾಣದ ಸ್ತಬ್ಧಚಿತ್ರವಾಗಿ ಪರಿವರ್ತಿಸಲಾಗುವುದು ಮತ್ತು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುವುದು.

ಭಾಗವಹಿಸುವವರು ಭಾರತೀಯ ನಾಗರಿಕರಾಗಿದ್ದು, ವೈಯಕ್ತಿಕವಾಗಿ ಅಥವಾ ತಂಡವಾಗಿಯೂ (ತಂಡದಲ್ಲಿ ಗರಿಷ್ಟ 4 ಸದಸ್ಯರು) ಪಾಲ್ಗೊಳ್ಳಬಹುದು. ಪ್ರತಿ ಸ್ಪರ್ಧಿ ಅಥವಾ ತಂಡ ಒಂದು ಪ್ರವೇಶವನ್ನು ಮಾತ್ರ ಸಲ್ಲಿಸಬಹುದು. ಸ್ಪರ್ಧಿಗಳು ಸೆಪ್ಟೆಂಬರ್ 13ರೊಳಗೆ https://forms.gle/Ep9Ab2Ghi2dx8NiKA ಅರ್ಜಿ ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು.

ಮಾರ್ಗಸೂಚಿಗಳು: ಕಿರು ಸ್ತಬ್ಧಚಿತ್ರವು ಕರ್ನಾಟಕ ಅಥವಾ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಸಾಮಾಜಿಕ ಅಂಶಗಳನ್ನು, ಭವಿಷ್ಯಾತ್ಮಕ ಅಂಶಗಳನ್ನು ಪ್ರತಿಬಿಂಬಿಸಬೇಕು. ಸ್ಪರ್ಧೆಗೆ ಸಲ್ಲಿಸುವ ವಿನ್ಯಾಸವು ಮೂಲತಃ ಹೊಸದಾಗಿರಬೇಕು. ಹಿಂದಿನ ಯಾವುದೇ ಸ್ಪರ್ಧೆಗೆ ಸಲ್ಲಿಸಿರಬಾರದು. ಗರಿಷ್ಟ 60x60x60 ಸೆಂ.ಮೀ. ಆಯಾಮಗಳನ್ನು ಹೊಂದಿರಬೇಕು. ಪರಿಸರಸ್ನೇಹಿ ಮತ್ತು ನಾವೀನ್ಯ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಕಿರು ಸ್ತಬ್ಧಚಿತ್ರ ಸದೃಢವಾಗಿ ಸ್ವಯಂ ಬೆಂಬಲಿತವಾಗಿಯೂ ಇರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ಸ್ಪರ್ಧಾ ಕಿರು ಸ್ತಬ್ಧಚಿತ್ರವನ್ನು ಸೆಪ್ಟೆಂಬರ್ 17ರಂದು ಸಂಜೆ 5 ಗಂಟೆಗೆ ಜಿಲ್ಲಾ ಪಂಚಾಯತ್ ಕಚೇರಿಗೆ ಕಡ್ಡಾಯವಾಗಿ ಸ್ವತಃ ಸಲ್ಲಿಸಬೇಕು. ಸ್ಪರ್ಧಾ ಕಿರು ಸ್ತಬ್ಧಚಿತ್ರದ ಜೊತೆ 300 ಪದಗಳೊಳಗಿನ ವಿವರಣೆ (ವಿನ್ಯಾಸದ ಪರಿಕಲ್ಪನೆ, ಭವಿಷ್ಯಾತ್ಮಕ ಅಂಶಗಳು, ಮತ್ತು ಪ್ರೇರಣೆ) ಸಲ್ಲಿಸಬೇಕು.

ಬಹುಮಾನಗಳು: ವಿಜೇತ ವ್ಯಕ್ತಿ ಅಥವಾ ತಂಡಕ್ಕೆ ಪ್ರಥಮ ಬಹುಮಾನವಾಗಿ 25,000 ಮತ್ತು ವಿಜೇತ ವಿನ್ಯಾಸವು ಮೈಸೂರು ದಸರಾದ ಸಂಪೂರ್ಣ ಪ್ರಮಾಣದ ಸ್ತಬ್ಧಚಿತ್ರ ಆಗಿ ಪರಿವರ್ತಿಸಲ್ಪಡುತ್ತದೆ. ದ್ವಿತೀಯ ಬಹುಮಾನ ರೂ. 15,000, ತೃತೀಯ ಬಹುಮಾನ ರೂ.10,000 ಹಾಗೂ ಆಯ್ಕೆಯಾದ ಎಲ್ಲಾ ಸ್ಪರ್ಧಿಗಳಿಗೆ ಪಾಲ್ಗೊಳ್ಳುವ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಅತ್ಯುತ್ತಮ 10 ಕಿರು ಸ್ತಬ್ಧಚಿತ್ರಗಳನ್ನು ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಚೇತನ್ ಕುಮಾರ್ ಎಂ. ಅವರ ದೂ.ಸಂ: 8296536692 ಅಥವಾ ಯಶವಂತ್ ಎಂ ಅವರ ದೂ.ಸಂ: 9738405358 ಅನ್ನು ಸಂಪರ್ಕಿಸಬಹುದು ಎಂದು ದಸರಾ ಸ್ತಬ್ಧಚಿತ್ರ ಉಪಸಮಿತಿಯ ಉಪ ವಿಶೇಷಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ದಸರಾ : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನ - cultural program Application

Last Updated : Sep 3, 2024, 10:54 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.