ETV Bharat / state

ಸಿಡಿಮದ್ದು ತಾಲೀಮಿನ ಅಂತಿಮ ಪರೀಕ್ಷೆಯಲ್ಲಿ ಗಜಪಡೆ‌, ಅಶ್ವಪಡೆ ಪಾಸ್; ಜಂಬೂ ಸವಾರಿಗೆ ರೆಡಿ - Mysuru Dasara 2024

author img

By ETV Bharat Karnataka Team

Published : 2 hours ago

ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆ ಹಾಗೂ ಅಶ್ವಪಡೆಗೆ 3ನೇ ಹಂತದ ಸಿಡಿಮದ್ದು ತಾಲೀಮನ್ನು ಇಂದು ನಡೆಸಲಾಯಿತು.

Elephants
ಮೈಸೂರು ದಸರಾ ಆನೆಗಳು (ETV Bharat)

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ-2024ದ ಜಂಬೂಸವಾರಿಗೆ ಗಜಪಡೆ ಹಾಗೂ ಅಶ್ವಪಡೆಗೆ ಇಂದು ಸಿಡಿಮದ್ದು ತಾಲೀಮಿನ ಅಂತಿಮ ತರಬೇತಿ ನಡೆಯಿತು. ಇದರಲ್ಲಿ ಗಜಪಡೆ ಮತ್ತು ಅಶ್ವಪಡೆಗಳು ಪಾಸಾಗಿದ್ದು, ಜಂಬೂ ಸವಾರಿ ಮೆರವಣಿಗೆಗೆ ಸಿದ್ಧಗೊಂಡಿವೆ.

ವಸ್ತು ಪ್ರದರ್ಶನ ಪಾರ್ಕಿಂಗ್‌ ಸ್ಥಳದಲ್ಲಿ ಅಶ್ವಪಡೆ ಹಾಗೂ ಗಜಪಡೆಗೆ ಸಿಡಿಮದ್ದು ತಾಲೀಮಿನ 3ನೇ ಹಾಗೂ ಅಂತಿಮ ತಾಲೀಮು ನಡೆಸಲಾಯಿತು. ಈ ತಾಲೀಮಿನಲ್ಲಿ ಹಿರಿಯ ಆನೆ ವರಲಕ್ಷ್ಮೀ ಹೊರತುಪಡಿಸಿ 13 ಆನೆಗಳು ಭಾಗವಹಿಸಿದ್ದವು. ಇದರ ಜೊತೆಗೆ ಅಶ್ವದಳದ 30 ಕುದುರೆಗಳಿದ್ದವು.

ಮೈಸೂರು ದಸರಾ ಮಹೋತ್ಸವದ ಸಿದ್ಧತೆ (ETV Bharat)

ಕುಶಾಲತೋಪು ಸಿಡಿಸಲು 7 ಫಿರಂಗಿಗಳನ್ನು ಬಳಸಲಾಯಿತು. ಮೂರು ಬಾರಿ 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಭಾಗವಹಿಸಿದ್ದರು.

ಮುಖ್ಯ ಅರಣ್ಯಾಧಿಕಾರಿ ಡಾ.ಮಾಲತಿ ಪ್ರಿಯ ಮಾತನಾಡಿ, "ಎಲ್ಲ ಆನೆಗಳು ಆರೋಗ್ಯವಾಗಿವೆ. ಶ್ರೀರಂಗಪಟ್ಟಣ ದಸರಾ ಮೆರವಣಿಗೆಗೆ ಮರದ ಅಂಬಾರಿ ಹೊರಲು ಮಹೇಂದ್ರ ಆನೆ ಹಾಗೂ ಕುಮ್ಕಿ ಆನೆ ಹಿರಣ್ಯ ಮತ್ತು ಲಕ್ಷ್ಮಿ ಆನೆಯನ್ನು ಆಯ್ಕೆ ಮಾಡಲಾಗಿದೆ" ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್​ ಮಾತನಾಡಿ, "ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ಗಜಪಡೆ ಹಾಗೂ ಅಶ್ವದಳ ಭಾಗವಹಿಸಲಿದ್ದು, ಜಂಬೂ ಸವಾರಿ ಸಂದರ್ಭದಲ್ಲಿ ಶಬ್ದಕ್ಕೆ ಹೆದರದಂತೆ ಇಂದು ಅಂತಿಮ ಹಂತದ ತಾಲೀಮು ನಡೆಸಲಾಯಿತು" ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು: ದಸರಾ ಸಿಡಿಮದ್ದು, ಆರಂಭದಲ್ಲಿ ಹೆದರದ ಗಜಪಡೆ 4ನೇ ಹಂತದ ತಾಲೀಮಿನಲ್ಲಿ ಗಲಿಬಿಲಿ - DASARA ELEPHANTS AFRAID

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ-2024ದ ಜಂಬೂಸವಾರಿಗೆ ಗಜಪಡೆ ಹಾಗೂ ಅಶ್ವಪಡೆಗೆ ಇಂದು ಸಿಡಿಮದ್ದು ತಾಲೀಮಿನ ಅಂತಿಮ ತರಬೇತಿ ನಡೆಯಿತು. ಇದರಲ್ಲಿ ಗಜಪಡೆ ಮತ್ತು ಅಶ್ವಪಡೆಗಳು ಪಾಸಾಗಿದ್ದು, ಜಂಬೂ ಸವಾರಿ ಮೆರವಣಿಗೆಗೆ ಸಿದ್ಧಗೊಂಡಿವೆ.

ವಸ್ತು ಪ್ರದರ್ಶನ ಪಾರ್ಕಿಂಗ್‌ ಸ್ಥಳದಲ್ಲಿ ಅಶ್ವಪಡೆ ಹಾಗೂ ಗಜಪಡೆಗೆ ಸಿಡಿಮದ್ದು ತಾಲೀಮಿನ 3ನೇ ಹಾಗೂ ಅಂತಿಮ ತಾಲೀಮು ನಡೆಸಲಾಯಿತು. ಈ ತಾಲೀಮಿನಲ್ಲಿ ಹಿರಿಯ ಆನೆ ವರಲಕ್ಷ್ಮೀ ಹೊರತುಪಡಿಸಿ 13 ಆನೆಗಳು ಭಾಗವಹಿಸಿದ್ದವು. ಇದರ ಜೊತೆಗೆ ಅಶ್ವದಳದ 30 ಕುದುರೆಗಳಿದ್ದವು.

ಮೈಸೂರು ದಸರಾ ಮಹೋತ್ಸವದ ಸಿದ್ಧತೆ (ETV Bharat)

ಕುಶಾಲತೋಪು ಸಿಡಿಸಲು 7 ಫಿರಂಗಿಗಳನ್ನು ಬಳಸಲಾಯಿತು. ಮೂರು ಬಾರಿ 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಭಾಗವಹಿಸಿದ್ದರು.

ಮುಖ್ಯ ಅರಣ್ಯಾಧಿಕಾರಿ ಡಾ.ಮಾಲತಿ ಪ್ರಿಯ ಮಾತನಾಡಿ, "ಎಲ್ಲ ಆನೆಗಳು ಆರೋಗ್ಯವಾಗಿವೆ. ಶ್ರೀರಂಗಪಟ್ಟಣ ದಸರಾ ಮೆರವಣಿಗೆಗೆ ಮರದ ಅಂಬಾರಿ ಹೊರಲು ಮಹೇಂದ್ರ ಆನೆ ಹಾಗೂ ಕುಮ್ಕಿ ಆನೆ ಹಿರಣ್ಯ ಮತ್ತು ಲಕ್ಷ್ಮಿ ಆನೆಯನ್ನು ಆಯ್ಕೆ ಮಾಡಲಾಗಿದೆ" ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್​ ಮಾತನಾಡಿ, "ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ಗಜಪಡೆ ಹಾಗೂ ಅಶ್ವದಳ ಭಾಗವಹಿಸಲಿದ್ದು, ಜಂಬೂ ಸವಾರಿ ಸಂದರ್ಭದಲ್ಲಿ ಶಬ್ದಕ್ಕೆ ಹೆದರದಂತೆ ಇಂದು ಅಂತಿಮ ಹಂತದ ತಾಲೀಮು ನಡೆಸಲಾಯಿತು" ಎಂದು ಹೇಳಿದರು.

ಇದನ್ನೂ ಓದಿ: ಮೈಸೂರು: ದಸರಾ ಸಿಡಿಮದ್ದು, ಆರಂಭದಲ್ಲಿ ಹೆದರದ ಗಜಪಡೆ 4ನೇ ಹಂತದ ತಾಲೀಮಿನಲ್ಲಿ ಗಲಿಬಿಲಿ - DASARA ELEPHANTS AFRAID

ETV Bharat Logo

Copyright © 2024 Ushodaya Enterprises Pvt. Ltd., All Rights Reserved.