ETV Bharat / state

ಕೋಲಾರ: ಕೆರೆಗೆ ಕಾಲು ಜಾರಿ ಬಿದ್ದು ತಾಯಿ - ಮಗ ಸಾವು

author img

By ETV Bharat Karnataka Team

Published : Mar 8, 2024, 3:21 PM IST

ಕಾಲು ಜಾರಿ ಕೆರೆಗೆ ಬಿದ್ದು ತಾಯಿ - ಮಗ ಸಾವನ್ನಪ್ಪಿರುವ ಘಟನೆ ಶ್ರೀನಿವಾಸಪುರದಲ್ಲಿ ಸಂಭವಿಸಿದೆ.

mother-and-son-died-after-slipping-in-lake
ಕೋಲಾರ: ಕೆರೆಗೆ ಕಾಲು ಜಾರಿ ಬಿದ್ದು ತಾಯಿ-ಮಗ ಸಾವು

ಕೋಲಾರ: ಕೆರೆಗೆ ಕಾಲುಜಾರಿ ಬಿದ್ದು ತಾಯಿ - ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೋಡಿಪಲ್ಲಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಗೀತಾ( 26) ಹಾಗೂ ಯಶವಂತ್ (6) ಮೃತ ತಾಯಿ - ಮಗ ಎಂದು ಗುರುತಿಸಲಾಗಿದೆ. ಮೃತರು ಕೋಡಿಪಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇಂದು ಬೆಳಗ್ಗೆ ತಾಯಿಯೊಂದಿಗೆ ಇಬ್ಬರು ಮಕ್ಕಳು ಕೆರೆ ಬಳಿ ಹೋಗಿದ್ದರು, ಈ ವೇಳೆ, ಮಗ ಯಶವಂತ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಮಗನನ್ನ ರಕ್ಷಣೆ ಮಾಡಲು ತಾಯಿ ಮುಂದಾದ ವೇಳೆ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಶ್ರೀನಿವಾಸಪುರ ಪಟ್ಟಣದ ಮಾರುತಿ ನಗರ ನಿವಾಸಿಗಳಾಗಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೃಷಿ ಹೊಂಡಕ್ಕೆ ಬಿದ್ದ ಮಗಳು; ರಕ್ಷಿಸಲು ಹೋದ ಹೆತ್ತವರೂ ನೀರುಪಾಲು(ಬೆಂಗಳೂರು ಗ್ರಾಮಾಂತರ): ಊಟದ ನಂತರ ಕೈ ತೊಳೆಯಲು ಹೋದ ಮಗಳು ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದು, ಮಗಳ ರಕ್ಷಣೆಗೆ ಹೋದ ಅಪ್ಪ ಅಮ್ಮ ಇಬ್ಬರು ಮಗಳೊಂದಿಗೆ ನೀರುಪಾಲಾಗಿರುವ ಘಟನೆ ಇತ್ತೀಚಿಗೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಘಟನೆಯಲ್ಲಿ ಮರಿಯಪ್ಪ (70), ಮುನಿಯಮ್ಮ (60) ಮತ್ತು ಭಾರತಿ (40) ಸಾವನ್ನಪ್ಪಿದ್ದರು.

ವಿಶೇಷಚೇತನಳಾಗಿದ್ದ ಮಗಳು ಕೈ ತೊಳೆಯಲು ಹೋದಾಗ ನೀರಿಗೆ ಬಿದ್ದಿರುವ ಶಂಕೆ ಇದೆ. ಈ ವೇಳೆ ಮಗಳ ರಕ್ಷಣೆಗೆ ಧಾವಿಸಿದ ಆಕೆಯ ಹೆತ್ತವರು ಸಹ ನೀರುಪಾಲಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನೀರಿನಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದರು. ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಬಳ್ಳಾರಿ: ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು

ಕೋಲಾರ: ಕೆರೆಗೆ ಕಾಲುಜಾರಿ ಬಿದ್ದು ತಾಯಿ - ಮಗ ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕೋಡಿಪಲ್ಲಿ ಗ್ರಾಮದ ಕೆರೆಯಲ್ಲಿ ನಡೆದಿದೆ. ಗೀತಾ( 26) ಹಾಗೂ ಯಶವಂತ್ (6) ಮೃತ ತಾಯಿ - ಮಗ ಎಂದು ಗುರುತಿಸಲಾಗಿದೆ. ಮೃತರು ಕೋಡಿಪಲ್ಲಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇಂದು ಬೆಳಗ್ಗೆ ತಾಯಿಯೊಂದಿಗೆ ಇಬ್ಬರು ಮಕ್ಕಳು ಕೆರೆ ಬಳಿ ಹೋಗಿದ್ದರು, ಈ ವೇಳೆ, ಮಗ ಯಶವಂತ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಮಗನನ್ನ ರಕ್ಷಣೆ ಮಾಡಲು ತಾಯಿ ಮುಂದಾದ ವೇಳೆ ಇಬ್ಬರೂ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಶ್ರೀನಿವಾಸಪುರ ಪಟ್ಟಣದ ಮಾರುತಿ ನಗರ ನಿವಾಸಿಗಳಾಗಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕೃಷಿ ಹೊಂಡಕ್ಕೆ ಬಿದ್ದ ಮಗಳು; ರಕ್ಷಿಸಲು ಹೋದ ಹೆತ್ತವರೂ ನೀರುಪಾಲು(ಬೆಂಗಳೂರು ಗ್ರಾಮಾಂತರ): ಊಟದ ನಂತರ ಕೈ ತೊಳೆಯಲು ಹೋದ ಮಗಳು ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದು, ಮಗಳ ರಕ್ಷಣೆಗೆ ಹೋದ ಅಪ್ಪ ಅಮ್ಮ ಇಬ್ಬರು ಮಗಳೊಂದಿಗೆ ನೀರುಪಾಲಾಗಿರುವ ಘಟನೆ ಇತ್ತೀಚಿಗೆ ಹೊಸಕೋಟೆ ತಾಲೂಕಿನ ಕರಿಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಘಟನೆಯಲ್ಲಿ ಮರಿಯಪ್ಪ (70), ಮುನಿಯಮ್ಮ (60) ಮತ್ತು ಭಾರತಿ (40) ಸಾವನ್ನಪ್ಪಿದ್ದರು.

ವಿಶೇಷಚೇತನಳಾಗಿದ್ದ ಮಗಳು ಕೈ ತೊಳೆಯಲು ಹೋದಾಗ ನೀರಿಗೆ ಬಿದ್ದಿರುವ ಶಂಕೆ ಇದೆ. ಈ ವೇಳೆ ಮಗಳ ರಕ್ಷಣೆಗೆ ಧಾವಿಸಿದ ಆಕೆಯ ಹೆತ್ತವರು ಸಹ ನೀರುಪಾಲಾಗಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ನೀರಿನಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದರು. ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ: ಬಳ್ಳಾರಿ: ಸಾಂಬಾರು ಪಾತ್ರೆಗೆ ಬಿದ್ದು ಮಗು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.