ETV Bharat / state

ಬೆಂಗಳೂರು: ಹಾಲು ತರಲು ಬೈಕ್​ನಲ್ಲಿ ಹೋಗುತ್ತಿದ್ದ ಬಾಲಕ ಬಸ್‌ಗೆ ಸಿಲುಕಿ ಸಾವು - Bike Accident

ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿ ಬಸ್​ಗೆ ಸಿಲುಕಿ ಬೈಕ್​ನಲ್ಲಿ ಹೋಗುತ್ತಿದ್ದ ಬಾಲಕನೊಬ್ಬ ಮೃತಪಟ್ಟಿದ್ದಾನೆ.

author img

By ETV Bharat Karnataka Team

Published : Apr 5, 2024, 6:45 PM IST

ಅಪ್ರಾಪ್ತ ಬಸ್​ ಗೆ ಸಿಲುಕಿ ಸಾವು
ಅಪ್ರಾಪ್ತ ಬಸ್​ ಗೆ ಸಿಲುಕಿ ಸಾವು

ಆನೇಕಲ್: ಮೂರು ದಿನದಿಂದೀಚೆಗೆ ಒಂದೇ ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಂದು ಮನೆಗೆ ಹಾಲು ತರಲು ಬೈಕ್​ನಲ್ಲಿ ಹೋಗುತ್ತಿದ್ದ ಬಾಲಕ ಬಸ್‌ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಶುಕ್ರವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಆನೇಕಲ್-ಚಂದಾಪುರ ಮುಖ್ಯರಸ್ತೆಯ ಪೊಲೀಸ್ ನಿವಾಸದೆದುರು ಘಟನೆ ಜರುಗಿದೆ.

ಮೃತನನ್ನು ಕಲಬುರಗಿ ಮೂಲದ ಆನೇಕಲ್ ಮೆಹಬೂಬ್ ಎಂಬವರ ಎರಡನೇ ಮಗ ಶಾಭಾಜ್ (17) ಎಂದು ಗುರುತಿಸಲಾಗಿದೆ. ಆನೇಕಲ್‌ ಎಎಸ್​ಟಿ ಶಾಲೆಯಲ್ಲಿ ಶಾಭಾಜ್ ವ್ಯಾಸಂಗ ಮಾಡುತ್ತಿದ್ದನು. ಬೆಳಗ್ಗೆ ಹಾಲು ತರಲು ಬೈಕ್‌ನಲ್ಲಿ ಹೊರಟಿದ್ದ. ವೆಂಕಟೇಶ್ವರ ಚಿತ್ರಮಂದಿರದ ಕಡೆಯಿಂದ ಆನೇಕಲ್ ಕಡೆ ತೆರಳುವ ವೇಳೆ ಬಲಗಡೆ ಪಾದಚಾರಿ ಮಾರ್ಗವಿಲ್ಲದ್ದರಿಂದ ಯುವಕ‌ನೊಬ್ಬ ರಸ್ತೆಯ ಎಡ ಬದಿ‌ಯಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಇನ್ನೊಂದೆಡೆ ಬಲಬದಿ ಪಕ್ಕದಲ್ಲಿಯೇ ಬಸ್ ಬಂದಿರುವುದರಿಂದ ಎಡಬದಿ ಯುವಕನಿಗೆ ಡಿಕ್ಕಿ‌ ಹೊಡೆದು ಬೈಕ್​ನೊಂದಿಗೆ ಬಾಲಕ ಕೆಳಗಡೆ ಬಿದ್ದಿದ್ದಾನೆ. ಕ್ಷಣಮಾತ್ರದಲ್ಲೇ ಬಸ್ ಆತನ​ ತಲೆ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೈಕ್​ ಸವಾರನ ಮೇಲೆ ಕೋಲೆ ಬಸವ ದಾಳಿ: ಮತ್ತೊಂದೆಡೆ, ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಫೂಲ್ ಬಳಿ ಬೈಕ್​ ಸವಾರನ ಮೇಲೆ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದ ಕೋಲೆ ಬಸವ ಏಕಾಏಕಿ ದಾಳಿ ನಡೆಸಿದೆ. ಬೈಕ್ ಸವಾರ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಬಂಟ್ವಾಳ: ಅಪಘಾತದಲ್ಲಿ ಸಹಾಯ ಮಾಡಲು ತೆರಳಿದವರ ಬೈಕ್​ಗಳ​ ಮೇಲೆ ಹರಿದ ಲಾರಿ - ROAD ACCIDENT

ಆನೇಕಲ್: ಮೂರು ದಿನದಿಂದೀಚೆಗೆ ಒಂದೇ ರಸ್ತೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಸಾವನ್ನಪ್ಪಿದ ಘಟನೆ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಇಂದು ಮನೆಗೆ ಹಾಲು ತರಲು ಬೈಕ್​ನಲ್ಲಿ ಹೋಗುತ್ತಿದ್ದ ಬಾಲಕ ಬಸ್‌ ಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಶುಕ್ರವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಆನೇಕಲ್-ಚಂದಾಪುರ ಮುಖ್ಯರಸ್ತೆಯ ಪೊಲೀಸ್ ನಿವಾಸದೆದುರು ಘಟನೆ ಜರುಗಿದೆ.

ಮೃತನನ್ನು ಕಲಬುರಗಿ ಮೂಲದ ಆನೇಕಲ್ ಮೆಹಬೂಬ್ ಎಂಬವರ ಎರಡನೇ ಮಗ ಶಾಭಾಜ್ (17) ಎಂದು ಗುರುತಿಸಲಾಗಿದೆ. ಆನೇಕಲ್‌ ಎಎಸ್​ಟಿ ಶಾಲೆಯಲ್ಲಿ ಶಾಭಾಜ್ ವ್ಯಾಸಂಗ ಮಾಡುತ್ತಿದ್ದನು. ಬೆಳಗ್ಗೆ ಹಾಲು ತರಲು ಬೈಕ್‌ನಲ್ಲಿ ಹೊರಟಿದ್ದ. ವೆಂಕಟೇಶ್ವರ ಚಿತ್ರಮಂದಿರದ ಕಡೆಯಿಂದ ಆನೇಕಲ್ ಕಡೆ ತೆರಳುವ ವೇಳೆ ಬಲಗಡೆ ಪಾದಚಾರಿ ಮಾರ್ಗವಿಲ್ಲದ್ದರಿಂದ ಯುವಕ‌ನೊಬ್ಬ ರಸ್ತೆಯ ಎಡ ಬದಿ‌ಯಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಇನ್ನೊಂದೆಡೆ ಬಲಬದಿ ಪಕ್ಕದಲ್ಲಿಯೇ ಬಸ್ ಬಂದಿರುವುದರಿಂದ ಎಡಬದಿ ಯುವಕನಿಗೆ ಡಿಕ್ಕಿ‌ ಹೊಡೆದು ಬೈಕ್​ನೊಂದಿಗೆ ಬಾಲಕ ಕೆಳಗಡೆ ಬಿದ್ದಿದ್ದಾನೆ. ಕ್ಷಣಮಾತ್ರದಲ್ಲೇ ಬಸ್ ಆತನ​ ತಲೆ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೈಕ್​ ಸವಾರನ ಮೇಲೆ ಕೋಲೆ ಬಸವ ದಾಳಿ: ಮತ್ತೊಂದೆಡೆ, ಮಹಾಲಕ್ಷ್ಮೀ ಲೇಔಟ್ ಸ್ವಿಮ್ಮಿಂಗ್ ಫೂಲ್ ಬಳಿ ಬೈಕ್​ ಸವಾರನ ಮೇಲೆ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದ ಕೋಲೆ ಬಸವ ಏಕಾಏಕಿ ದಾಳಿ ನಡೆಸಿದೆ. ಬೈಕ್ ಸವಾರ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಕಳೆದ ವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಬಂಟ್ವಾಳ: ಅಪಘಾತದಲ್ಲಿ ಸಹಾಯ ಮಾಡಲು ತೆರಳಿದವರ ಬೈಕ್​ಗಳ​ ಮೇಲೆ ಹರಿದ ಲಾರಿ - ROAD ACCIDENT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.