ETV Bharat / state

ಬೆಳಗಾವಿ: ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಆನೆ ತುಳಿದು ಮಾವುತ ಸಾವು - ELEPHANT ATTACK

ಬೆಳಗಾವಿಯ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದ ಆನೆ ತುಳಿದು ಮಾವುತ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ಆನೆ ತುಳಿತಕ್ಕೆ ಮಾವುತ ಸಾವು
ಆನೆ ತುಳಿದು ಮಾವುತ ಸಾವು (ETV Bharat)
author img

By ETV Bharat Karnataka Team

Published : Dec 23, 2024, 6:13 PM IST

Updated : Dec 23, 2024, 6:25 PM IST

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವಸರ ದೇವಸ್ಥಾನದ ಧೃವ ಎಂಬ ಆನೆ ದಾಳಿಯಿಂದ ಮಾವುತ ಮೃತಪಟ್ಟಿದ್ದಾನೆ. ಅಲಖನೂರ ಗ್ರಾಮದ ಧರೆಪ್ಪ ಭೇವನೂರ (28) ಮೃತರು. ಇಂದು ಬೆಳಗ್ಗೆ 7 ಗಂಟೆಗೆ ಮೇವು ಹಾಕಲು ಬಂದ ಮಾವುತನನ್ನು ಆನೆ ತುಳಿದಿದೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಧೃವ ಆನೆಗೆ ಮದ ಬಂದ ಹಾಗೆ ಆಗಿತ್ತು. ಇಂದು ಬೆಳಗ್ಗೆಯೂ ಕೂಡ ಮದವೇರಿದ ಸಂದರ್ಭದಲ್ಲಿ ಮೇವು ಹಾಕಲು ಬಂದ ಮಾವುತನ ಮೇಲೆ ದಾಳಿ ಮಾಡಿದೆ. ‌ಕರಿಸಿದ್ದೇಶ್ವರ ದೇವಸ್ಥಾನದಲ್ಲಿ 30 ವರ್ಷದ ಗಂಡಾನೆ ಧೃವ ವಾಸವಾಗಿತ್ತು.

ಧರೆಪ್ಪ ಭೇವನೂರಗೆ 10 ದಿನದ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಮೃತನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಹಾರೂಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನೆ ಉರುಳಿಸಿದ ತಾಳೆಮರದ ಗರಿ ಬಡಿದು ಬೈಕ್​ನಲ್ಲಿ ಸಾಗುತ್ತಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿನಿ ಸಾವು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವಸರ ದೇವಸ್ಥಾನದ ಧೃವ ಎಂಬ ಆನೆ ದಾಳಿಯಿಂದ ಮಾವುತ ಮೃತಪಟ್ಟಿದ್ದಾನೆ. ಅಲಖನೂರ ಗ್ರಾಮದ ಧರೆಪ್ಪ ಭೇವನೂರ (28) ಮೃತರು. ಇಂದು ಬೆಳಗ್ಗೆ 7 ಗಂಟೆಗೆ ಮೇವು ಹಾಕಲು ಬಂದ ಮಾವುತನನ್ನು ಆನೆ ತುಳಿದಿದೆ ಎಂದು ತಿಳಿದು ಬಂದಿದೆ.

ನಿನ್ನೆ ರಾತ್ರಿ ಧೃವ ಆನೆಗೆ ಮದ ಬಂದ ಹಾಗೆ ಆಗಿತ್ತು. ಇಂದು ಬೆಳಗ್ಗೆಯೂ ಕೂಡ ಮದವೇರಿದ ಸಂದರ್ಭದಲ್ಲಿ ಮೇವು ಹಾಕಲು ಬಂದ ಮಾವುತನ ಮೇಲೆ ದಾಳಿ ಮಾಡಿದೆ. ‌ಕರಿಸಿದ್ದೇಶ್ವರ ದೇವಸ್ಥಾನದಲ್ಲಿ 30 ವರ್ಷದ ಗಂಡಾನೆ ಧೃವ ವಾಸವಾಗಿತ್ತು.

ಧರೆಪ್ಪ ಭೇವನೂರಗೆ 10 ದಿನದ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಮೃತನ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಹಾರೂಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನೆ ಉರುಳಿಸಿದ ತಾಳೆಮರದ ಗರಿ ಬಡಿದು ಬೈಕ್​ನಲ್ಲಿ ಸಾಗುತ್ತಿದ್ದ ಇಂಜಿನಿಯರಿಂಗ್​ ವಿದ್ಯಾರ್ಥಿನಿ ಸಾವು

Last Updated : Dec 23, 2024, 6:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.