ETV Bharat / state

ತಂದೆಯ ಅನಾರೋಗ್ಯ ಲೆಕ್ಕಿಸದೇ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಬೆಳಗಾವಿ ವೀರಯೋಧ - Kargil Vijay Diwas

author img

By ETV Bharat Karnataka Team

Published : Jul 26, 2024, 11:17 AM IST

ತಂದೆಯ ಅನಾರೋಗ್ಯವನ್ನೂ ಲೆಕ್ಕಿಸದೇ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ಬೆಳಗಾವಿ ವೀರಯೋಧನ ಮನದಾಳದ ಮಾತುಗಳು ಇಲ್ಲಿವೆ.

ETV BHARAT INTERVIEW  SOLDIER SANJU VENKAPPA GAAVADA  KARGIL WAR  BELAGAVI
ಮಾಜಿ ವೀರ ಯೋಧ ಸಂಜು ಗಾವಡಾ ಕುಟುಂಬ (ETV Bharat)
ಬೆಳಗಾವಿ ವೀರಯೋಧನ ಮನದಾಳದ ಮಾತು (ETV Bharat)

ಬೆಳಗಾವಿ: ಕಾರ್ಗಿಲ್ ವಿಜಯೋತ್ಸವಕ್ಕೆ ಇಂದು 25 ವರ್ಷ.‌ ಈ ಸಂದರ್ಭದಲ್ಲಿ ಬೆಳಗಾವಿಯ ವೀರಯೋಧರ ಕಾಣಿಕೆ ಸುತ್ತ್ಯಾರ್ಹ. ಶತ್ರುಗಳ ಗುಂಡಿಗೆ ಕೆಚ್ಚೆದೆ ಕೊಟ್ಟು ನೂರಾರು ಯೋಧರು ಹುತಾತ್ಮರಾಗಿದ್ದರೆ, ಅದೆಷ್ಟೋ ಸೈನಿಕರು ವೈರಿಗಳ ವಿರುದ್ಧ ಕಾದಾಡಿ, ಅವರನ್ನು ಬೇಟೆಯಾಡಿದ್ದಾರೆ. ಅಂಥವರ ಪೈಕಿ ಒಬ್ಬರ ಕಥೆ ಇಲ್ಲಿದೆ. ಇವರು ತಮ್ಮ ತಂದೆಯ ಅನಾರೋಗ್ಯವನ್ನೂ ಲೆಕ್ಕಿಸದೇ ಯುದ್ಧದಲ್ಲಿ ಹೋರಾಡಿದ್ದರೆಂಬುದು ವಿಶೇಷ.

ಹೌದು, ಇವರ ಹೆಸರು ಸಂಜು ವೆಂಕಪ್ಪ ಗಾವಡಾ. ಖಾನಾಪುರ ತಾಲ್ಲೂಕಿನ ಭಾಟೆವಾಡಿ ಗ್ರಾಮದವರು. ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯ ನಗರದಲ್ಲಿ‌ ವಾಸಿಸುತ್ತಿರುವ ಸಂಜು, ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ‌ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು, ಇದೀಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾಗುವ ಮುನ್ನ ರಜೆಯ ಮೇಲೆ ಸಂಜು ಗಾವಡಾ‌ ಊರಿಗೆ ಬಂದಿದ್ದರು.‌ ಇದೇ ಸಮಯಕ್ಕೆ ಸಂಜು ಅವರ ತಂದೆ ಅನಾರೋಗ್ಯದಿಂದ ಘಟಪ್ರಭಾದ ಕೆಎಚ್ಐ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ತಕ್ಷಣವೇ ಕರ್ತವ್ಯಕ್ಕೆ ಮರಳುವಂತೆ ಸೇನಾಧಿಕಾರಿಗಳಿಂದ ಪತ್ರ ಬಂದಿತ್ತು. ಒಂದು ಕ್ಷಣವೂ ಹಿಂದೆ ಮುಂದೆ ನೋಡದ ಸಂಜು, ರಜೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ತಂದೆಯನ್ನು ವೈದ್ಯರು ನೋಡಿಕೊಳ್ಳುತ್ತಾರೆ ಎಂದು ಯುದ್ಧಕ್ಕೆ ಹೊರಟುನಿಂತರು. ಬೋಫೋರ್ಸ್ ಯೂನಿಟ್​ನಲ್ಲಿ ಇವರು ರೆಡಿಯೋ ಆಪರೇಟರ್ ಆಗಿದ್ದರು.

'ಈಟಿವಿ ಭಾರತ'ದ ಜೊತೆಗೆ ಈ ಕುರಿತು ಮಾತನಾಡಿದ ಸಂಜು ಗಾವಡಾ, "114 ಮೀಡಿಯಮ್ ರೆಜಿಮೆಂಟ್ ಬೋಫೋರ್ಸ್ ಯೂನಿಟ್​ನಲ್ಲಿ ರೆಡಿಯೋ ಆಪರೇಟರ್ ಆಗಿದ್ದೆ. ಬೋಫೋರ್ಸ್ ಯೂನಿಟ್ ಕಾರ್ಗಿಲ್ ಹೀರೋ. ಸಂಪರ್ಕ ಯುದ್ಧದ ಕೀಲಿಕೈ (ಕಮ್ಯುನಿಲೇಶನ್ ಇಸ್ ದಿ ಕೀ‌ ಆಫ್ ವಾರ್) ಎಂದು ಕರೆಯುತ್ತಾರೆ. ನಮ್ಮ ಸೇನೆಯ ಇನ್‌ಫ್ಯಾಂಟರಿ ಯೂನಿಟ್ ಯುದ್ಧ ಮಾಡುತ್ತಿರುತ್ತದೆ. ಅದರಲ್ಲಿ ನಮ್ಮ ಬೋಫೋರ್ಟ್ ಅಧಿಕಾರಿಗಳು ಇರುತ್ತಾರೆ. ಸೈನಿಕರಿಗೆ ಯುದ್ಧಕ್ಕೆ ಏನು ಫೈರ್ ಸಪೋರ್ಟ್ ಬೇಕು, ಯುದ್ಧ ಸಾಮಗ್ರಿ, ಊಟ, ನೀರು‌ ಸೇರಿದಂತೆ ಅವರಿಗೆೇನು ಅವಶ್ಯಕತೆ‌ ಇದೆಯೋ ಆ ಕುರಿತು ನಮಗೆ ಕೋಡ್ ಮೂಲಕ ತಿಳಿಸುತ್ತಾರೆ. ಅದನ್ನು ನಾವು ಡಿಕೋಡ್ ಮಾಡಿ, ಮೇಲಧಿಕಾರಿಗಳಿಗೆ ತಿಳಿಸುತ್ತೇವೆ. ಅವರು ಸೈನಿಕರಿಗೆ ಏನು ಅವಶ್ಯಕತೆ ಇವೆಯೋ ಅವುಗಳನ್ನು ತಕ್ಷಣವೇ ಪೂರೈಸುತ್ತಿದ್ದರು" ಎಂದು ವಿವರಿಸಿದರು.

"ಒಮ್ಮೆ ಯೂನಿಫಾರ್ಮ್ ಹಾಕಿ, ಯುದ್ಧಕ್ಕಿಳಿದ ಮೇಲೆ ತಂದೆ-ತಾಯಿ, ಸಂಬಂಧಿಕರು, ಮನೆ, ಊರು ಯಾವುದೂ ನಮಗೆ ತಲೆಯಲ್ಲಿ ಇರಲ್ಲ. ಆಗ ನಮಗೆ ತಲೆಯಲ್ಲಿ ಇದ್ದದ್ದು ದೇಶ ಒಂದೇ. ಯುದ್ಧದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಗೆಲ್ಲೋದು ಒಂದೇ ನಮ್ಮ ಮುಂದಿದ್ದ ಗುರಿ ಎಂದ ಸಂಜು ಗಾವಡಾ, ಕಾರ್ಗಿಲ್ ಯುದ್ಧ ಗೆದ್ದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಮತ್ತೊಂದೆಡೆ ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲ ಯೋಧರು ಹುತಾತ್ಮರಾಗಿದ್ದಕ್ಕೆ ದುಃಖವೂ ಇತ್ತು" ಎಂದು ಭಾವುಕರಾದರು.

"ನನಗೆ ಇಬ್ಬರು ಗಂಡು‌ ಮಕ್ಕಳು. ಇಬ್ಬರೂ ಕೂಡ‌ ನಾವು ಸೇನೆಗೆ ಹೋಗುತ್ತೇವೆ ಎನ್ನುತ್ತಾರೆ. ಇಬ್ಬರೂ ಸೇನೆ ಸೇರಿಕೊಂಡರೂ ಯಾವುದೇ ಅಭ್ಯಂತರ ಇಲ್ಲ. ಇದು ನನಗೆ ಮತ್ತಷ್ಟು‌ ಹೆಮ್ಮೆ ತರುತ್ತದೆ. ದೇಶ ಸೇವೆಯ ಪರಂಪರೆ ಇದೇ ರೀತಿ ಮುಂದುವರಿಬೇಕು. ಭಾರತೀಯ ಸೈನ್ಯಕ್ಕೆ ದೇಶದ ಪ್ರತಿ ಮನೆಯಿಂದ ಒಬ್ಬರು‌ ಸೇರಬೇಕು" ಎಂದು ಸಂಜು‌ ಗಾವಡಾ ಆಶಯ ವ್ಯಕ್ತಪಡಿಸಿದರು.

ETV Bharat Interview  Soldier Sanju Venkappa Gaavada  Kargil War  Belagavi
ಬೆಳಗಾವಿ ವೀರಯೋಧ ಸಂಜು ಗಾವಡಾ (ETV Bharat)

ಸಂಜು ಪತ್ನಿ ತನುಜಾ ಗಾವಡಾ ಮಾತನಾಡಿ, "ನಮ್ಮ ಯಜಮಾನರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ಸೈನಿಕನ ಮದುವೆ ಆಗಬೇಕು ಎಂಬುದು ನನ್ನ ಕನಸಾಗಿತ್ತು. ಅದು ಈಡೇರಿದ್ದು, ನನ್ನ ಜೀವನದ ಪ್ರತಿ ಕ್ಷಣವೂ ಹೆಮ್ಮೆ ಪಡುತ್ತೇನೆ" ಎಂದು ಹರ್ಷ ವ್ಯಕ್ತಪಡಿಸಿದರು‌.

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ; ಮೋದಿಗೆ ವಿಶೇಷ ಗಿಫ್ಟ್​ - Deve Gowda meets Modi

ಬೆಳಗಾವಿ ವೀರಯೋಧನ ಮನದಾಳದ ಮಾತು (ETV Bharat)

ಬೆಳಗಾವಿ: ಕಾರ್ಗಿಲ್ ವಿಜಯೋತ್ಸವಕ್ಕೆ ಇಂದು 25 ವರ್ಷ.‌ ಈ ಸಂದರ್ಭದಲ್ಲಿ ಬೆಳಗಾವಿಯ ವೀರಯೋಧರ ಕಾಣಿಕೆ ಸುತ್ತ್ಯಾರ್ಹ. ಶತ್ರುಗಳ ಗುಂಡಿಗೆ ಕೆಚ್ಚೆದೆ ಕೊಟ್ಟು ನೂರಾರು ಯೋಧರು ಹುತಾತ್ಮರಾಗಿದ್ದರೆ, ಅದೆಷ್ಟೋ ಸೈನಿಕರು ವೈರಿಗಳ ವಿರುದ್ಧ ಕಾದಾಡಿ, ಅವರನ್ನು ಬೇಟೆಯಾಡಿದ್ದಾರೆ. ಅಂಥವರ ಪೈಕಿ ಒಬ್ಬರ ಕಥೆ ಇಲ್ಲಿದೆ. ಇವರು ತಮ್ಮ ತಂದೆಯ ಅನಾರೋಗ್ಯವನ್ನೂ ಲೆಕ್ಕಿಸದೇ ಯುದ್ಧದಲ್ಲಿ ಹೋರಾಡಿದ್ದರೆಂಬುದು ವಿಶೇಷ.

ಹೌದು, ಇವರ ಹೆಸರು ಸಂಜು ವೆಂಕಪ್ಪ ಗಾವಡಾ. ಖಾನಾಪುರ ತಾಲ್ಲೂಕಿನ ಭಾಟೆವಾಡಿ ಗ್ರಾಮದವರು. ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯ ನಗರದಲ್ಲಿ‌ ವಾಸಿಸುತ್ತಿರುವ ಸಂಜು, ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ‌ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು, ಇದೀಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಪಾಕಿಸ್ತಾನದ ವಿರುದ್ಧ ಯುದ್ಧ ಪ್ರಾರಂಭವಾಗುವ ಮುನ್ನ ರಜೆಯ ಮೇಲೆ ಸಂಜು ಗಾವಡಾ‌ ಊರಿಗೆ ಬಂದಿದ್ದರು.‌ ಇದೇ ಸಮಯಕ್ಕೆ ಸಂಜು ಅವರ ತಂದೆ ಅನಾರೋಗ್ಯದಿಂದ ಘಟಪ್ರಭಾದ ಕೆಎಚ್ಐ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ತಕ್ಷಣವೇ ಕರ್ತವ್ಯಕ್ಕೆ ಮರಳುವಂತೆ ಸೇನಾಧಿಕಾರಿಗಳಿಂದ ಪತ್ರ ಬಂದಿತ್ತು. ಒಂದು ಕ್ಷಣವೂ ಹಿಂದೆ ಮುಂದೆ ನೋಡದ ಸಂಜು, ರಜೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ, ತಂದೆಯನ್ನು ವೈದ್ಯರು ನೋಡಿಕೊಳ್ಳುತ್ತಾರೆ ಎಂದು ಯುದ್ಧಕ್ಕೆ ಹೊರಟುನಿಂತರು. ಬೋಫೋರ್ಸ್ ಯೂನಿಟ್​ನಲ್ಲಿ ಇವರು ರೆಡಿಯೋ ಆಪರೇಟರ್ ಆಗಿದ್ದರು.

'ಈಟಿವಿ ಭಾರತ'ದ ಜೊತೆಗೆ ಈ ಕುರಿತು ಮಾತನಾಡಿದ ಸಂಜು ಗಾವಡಾ, "114 ಮೀಡಿಯಮ್ ರೆಜಿಮೆಂಟ್ ಬೋಫೋರ್ಸ್ ಯೂನಿಟ್​ನಲ್ಲಿ ರೆಡಿಯೋ ಆಪರೇಟರ್ ಆಗಿದ್ದೆ. ಬೋಫೋರ್ಸ್ ಯೂನಿಟ್ ಕಾರ್ಗಿಲ್ ಹೀರೋ. ಸಂಪರ್ಕ ಯುದ್ಧದ ಕೀಲಿಕೈ (ಕಮ್ಯುನಿಲೇಶನ್ ಇಸ್ ದಿ ಕೀ‌ ಆಫ್ ವಾರ್) ಎಂದು ಕರೆಯುತ್ತಾರೆ. ನಮ್ಮ ಸೇನೆಯ ಇನ್‌ಫ್ಯಾಂಟರಿ ಯೂನಿಟ್ ಯುದ್ಧ ಮಾಡುತ್ತಿರುತ್ತದೆ. ಅದರಲ್ಲಿ ನಮ್ಮ ಬೋಫೋರ್ಟ್ ಅಧಿಕಾರಿಗಳು ಇರುತ್ತಾರೆ. ಸೈನಿಕರಿಗೆ ಯುದ್ಧಕ್ಕೆ ಏನು ಫೈರ್ ಸಪೋರ್ಟ್ ಬೇಕು, ಯುದ್ಧ ಸಾಮಗ್ರಿ, ಊಟ, ನೀರು‌ ಸೇರಿದಂತೆ ಅವರಿಗೆೇನು ಅವಶ್ಯಕತೆ‌ ಇದೆಯೋ ಆ ಕುರಿತು ನಮಗೆ ಕೋಡ್ ಮೂಲಕ ತಿಳಿಸುತ್ತಾರೆ. ಅದನ್ನು ನಾವು ಡಿಕೋಡ್ ಮಾಡಿ, ಮೇಲಧಿಕಾರಿಗಳಿಗೆ ತಿಳಿಸುತ್ತೇವೆ. ಅವರು ಸೈನಿಕರಿಗೆ ಏನು ಅವಶ್ಯಕತೆ ಇವೆಯೋ ಅವುಗಳನ್ನು ತಕ್ಷಣವೇ ಪೂರೈಸುತ್ತಿದ್ದರು" ಎಂದು ವಿವರಿಸಿದರು.

"ಒಮ್ಮೆ ಯೂನಿಫಾರ್ಮ್ ಹಾಕಿ, ಯುದ್ಧಕ್ಕಿಳಿದ ಮೇಲೆ ತಂದೆ-ತಾಯಿ, ಸಂಬಂಧಿಕರು, ಮನೆ, ಊರು ಯಾವುದೂ ನಮಗೆ ತಲೆಯಲ್ಲಿ ಇರಲ್ಲ. ಆಗ ನಮಗೆ ತಲೆಯಲ್ಲಿ ಇದ್ದದ್ದು ದೇಶ ಒಂದೇ. ಯುದ್ಧದಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ವಿರುದ್ಧ ಗೆಲ್ಲೋದು ಒಂದೇ ನಮ್ಮ ಮುಂದಿದ್ದ ಗುರಿ ಎಂದ ಸಂಜು ಗಾವಡಾ, ಕಾರ್ಗಿಲ್ ಯುದ್ಧ ಗೆದ್ದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಮತ್ತೊಂದೆಡೆ ನಮ್ಮ ಜೊತೆಗೆ ಕೆಲಸ ಮಾಡುತ್ತಿದ್ದ ಕೆಲ ಯೋಧರು ಹುತಾತ್ಮರಾಗಿದ್ದಕ್ಕೆ ದುಃಖವೂ ಇತ್ತು" ಎಂದು ಭಾವುಕರಾದರು.

"ನನಗೆ ಇಬ್ಬರು ಗಂಡು‌ ಮಕ್ಕಳು. ಇಬ್ಬರೂ ಕೂಡ‌ ನಾವು ಸೇನೆಗೆ ಹೋಗುತ್ತೇವೆ ಎನ್ನುತ್ತಾರೆ. ಇಬ್ಬರೂ ಸೇನೆ ಸೇರಿಕೊಂಡರೂ ಯಾವುದೇ ಅಭ್ಯಂತರ ಇಲ್ಲ. ಇದು ನನಗೆ ಮತ್ತಷ್ಟು‌ ಹೆಮ್ಮೆ ತರುತ್ತದೆ. ದೇಶ ಸೇವೆಯ ಪರಂಪರೆ ಇದೇ ರೀತಿ ಮುಂದುವರಿಬೇಕು. ಭಾರತೀಯ ಸೈನ್ಯಕ್ಕೆ ದೇಶದ ಪ್ರತಿ ಮನೆಯಿಂದ ಒಬ್ಬರು‌ ಸೇರಬೇಕು" ಎಂದು ಸಂಜು‌ ಗಾವಡಾ ಆಶಯ ವ್ಯಕ್ತಪಡಿಸಿದರು.

ETV Bharat Interview  Soldier Sanju Venkappa Gaavada  Kargil War  Belagavi
ಬೆಳಗಾವಿ ವೀರಯೋಧ ಸಂಜು ಗಾವಡಾ (ETV Bharat)

ಸಂಜು ಪತ್ನಿ ತನುಜಾ ಗಾವಡಾ ಮಾತನಾಡಿ, "ನಮ್ಮ ಯಜಮಾನರು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದಕ್ಕೆ ನನಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ಸೈನಿಕನ ಮದುವೆ ಆಗಬೇಕು ಎಂಬುದು ನನ್ನ ಕನಸಾಗಿತ್ತು. ಅದು ಈಡೇರಿದ್ದು, ನನ್ನ ಜೀವನದ ಪ್ರತಿ ಕ್ಷಣವೂ ಹೆಮ್ಮೆ ಪಡುತ್ತೇನೆ" ಎಂದು ಹರ್ಷ ವ್ಯಕ್ತಪಡಿಸಿದರು‌.

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಹೆಚ್​ಡಿ ದೇವೇಗೌಡ, ಕುಮಾರಸ್ವಾಮಿ; ಮೋದಿಗೆ ವಿಶೇಷ ಗಿಫ್ಟ್​ - Deve Gowda meets Modi

ETV Bharat Logo

Copyright © 2024 Ushodaya Enterprises Pvt. Ltd., All Rights Reserved.