ETV Bharat / state

ಪಂಚಮಸಾಲಿ ಮತಗಳ ಮೇಲೆ ಬಿಜೆಪಿ-ಕಾಂಗ್ರೆಸ್ ಕಣ್ಣು: ದಿಢೀರ್ ಕೂಡಲಸಂಗಮ ಶ್ರೀ ಭೇಟಿಯಾದ ಶೆಟ್ಟರ್ - Jagdish Shettar

author img

By ETV Bharat Karnataka Team

Published : Mar 30, 2024, 2:10 PM IST

ಬೆಳಗಾವಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅನ್ನು ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಭೇಟಿಯಾಗಿದ್ದಾರೆ.

ಕೂಡಲಸಂಗಮ ಶ್ರೀ ಭೇಟಿಯಾದ ಶೆಟ್ಟರ್
ಕೂಡಲಸಂಗಮ ಶ್ರೀ ಭೇಟಿಯಾದ ಶೆಟ್ಟರ್

ಬೆಳಗಾವಿ : ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುತ್ರ ಮೃಣಾಲ್ ಗೆಲ್ಲಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪಂಚಮಸಾಲಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೊಂದೆಡೆ ಸಚಿವೆ ಹೆಬ್ಬಾಳ್ಕರ್‌ ತಂತ್ರಕ್ಕೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರತಿತಂತ್ರ ರೂಪಿಸುತ್ತಿದ್ದಾರೆ.

2ಎ ಮೀಸಲಾತಿ ಹೋರಾಟದ ಬಳಿಕ ಪಂಚಮಸಾಲಿ ಸಮಾಜ ಹೆಚ್ಚಿನ‌ ಪ್ರಮಾಣದಲ್ಲಿ ಸಂಘಟಿತವಾಗಿದೆ. 2ಎ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮುಂಚೂಣಿಯಲ್ಲಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ ಪಂಚಮಸಾಲಿ ಮತಗಳಿವೆ. ಹಾಗಾಗಿ, ಪುತ್ರನ ಗೆಲುವಿಗೆ ಪಂಚಮಸಾಲಿ ಸಮಾಜದ ಮುಖಂಡರನ್ನು ಸಂಪರ್ಕಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್, ಅವರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

ಹೆಬ್ಬಾಳ್ಕರ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಜಗದೀಶ್ ಶೆಟ್ಟರ್ ದಿಢೀರ್ ಎಂದು ಬೆಳಗಾವಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಅವರನ್ನು ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಭೇಟಿ ವೇಳೆ ಶ್ರೀಗಳ ಜೊತೆ ಶೆಟ್ಟರ್ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್​ ಪಾಟೀಲ ಸೇರಿ ಸ್ಥಳೀಯ ಪಂಚಮಸಾಲಿ ಮುಖಂಡರು ಜಗದೀಶ ಶೆಟ್ಟರ್ ಗೆ ಸಾಥ್ ಕೊಟ್ಟರು.

ಪಂಚಮಸಾಲಿ ಮತಗಳನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಕೂಡ ಮಾಸ್ಟರ್ ಪ್ಲಾನ್ ರೂಪಿಸಿದೆ. ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ ಹಾಗು ಇನ್ನು ಮುಂತಾದ ನಾಯಕರನ್ನು ಪ್ರಚಾರಕ್ಕೆ ಆಹ್ವಾನಿಸಿ ಮತಬೇಟೆಗೆ ಕಮಲ ಪಾಳೆಯ ಸಜ್ಜಾಗಿದೆ. ಉಭಯ ನಾಯಕರನ್ನು ಈಗಾಗಲೇ ಜಗದೀಶ್ ಶೆಟ್ಟರ್ ಸಂಪರ್ಕಿಸಿದ್ದಾರೆ. ಇನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಡಾ. ವಿಶ್ವನಾಥ ಪಾಟೀಲ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಜಗದೀಶ ಶೆಟ್ಟರ್, ಅವರ ಮೂಲಕವೂ ಪಂಚಮಸಾಲಿ ಮತಗಳನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.

ಬೆಳಗಾವಿ ಲೋಕಸಭೆ ಗೆಲುವಿನ ನಿರ್ಣಾಯಕರಾಗಿರುವ ಪಂಚಮಸಾಲಿ ಮತಗಳ ಮೇಲೆ ಈಗ ಇಬ್ಬರೂ ಅಭ್ಯರ್ಥಿಗಳ ಕಣ್ಣು ನೆಟ್ಟಿದ್ದು, ಅಂತಿಮವಾಗಿ ಪಂಚಮಸಾಲಿಗರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಪ್ರಹ್ಲಾದ್ ಜೋಶಿ ಅಭ್ಯರ್ಥಿಯಾಗಿರುವುದಕ್ಕೆ ಅಭ್ಯಂತರವಿಲ್ಲ: ಮೂಜಗು ಶ್ರೀ ಸ್ಪಷ್ಟನೆ - Moojagu Shri Clarification

ಬೆಳಗಾವಿ : ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುತ್ರ ಮೃಣಾಲ್ ಗೆಲ್ಲಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪಂಚಮಸಾಲಿ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೊಂದೆಡೆ ಸಚಿವೆ ಹೆಬ್ಬಾಳ್ಕರ್‌ ತಂತ್ರಕ್ಕೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರತಿತಂತ್ರ ರೂಪಿಸುತ್ತಿದ್ದಾರೆ.

2ಎ ಮೀಸಲಾತಿ ಹೋರಾಟದ ಬಳಿಕ ಪಂಚಮಸಾಲಿ ಸಮಾಜ ಹೆಚ್ಚಿನ‌ ಪ್ರಮಾಣದಲ್ಲಿ ಸಂಘಟಿತವಾಗಿದೆ. 2ಎ ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮುಂಚೂಣಿಯಲ್ಲಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಅಧಿಕ ಪಂಚಮಸಾಲಿ ಮತಗಳಿವೆ. ಹಾಗಾಗಿ, ಪುತ್ರನ ಗೆಲುವಿಗೆ ಪಂಚಮಸಾಲಿ ಸಮಾಜದ ಮುಖಂಡರನ್ನು ಸಂಪರ್ಕಿಸುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್, ಅವರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ.

ಹೆಬ್ಬಾಳ್ಕರ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಜಗದೀಶ್ ಶೆಟ್ಟರ್ ದಿಢೀರ್ ಎಂದು ಬೆಳಗಾವಿಯಲ್ಲಿ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಅವರನ್ನು ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಭೇಟಿ ವೇಳೆ ಶ್ರೀಗಳ ಜೊತೆ ಶೆಟ್ಟರ್ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್​ ಪಾಟೀಲ ಸೇರಿ ಸ್ಥಳೀಯ ಪಂಚಮಸಾಲಿ ಮುಖಂಡರು ಜಗದೀಶ ಶೆಟ್ಟರ್ ಗೆ ಸಾಥ್ ಕೊಟ್ಟರು.

ಪಂಚಮಸಾಲಿ ಮತಗಳನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಕೂಡ ಮಾಸ್ಟರ್ ಪ್ಲಾನ್ ರೂಪಿಸಿದೆ. ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ ಯತ್ನಾಳ, ಮುರುಗೇಶ ನಿರಾಣಿ ಹಾಗು ಇನ್ನು ಮುಂತಾದ ನಾಯಕರನ್ನು ಪ್ರಚಾರಕ್ಕೆ ಆಹ್ವಾನಿಸಿ ಮತಬೇಟೆಗೆ ಕಮಲ ಪಾಳೆಯ ಸಜ್ಜಾಗಿದೆ. ಉಭಯ ನಾಯಕರನ್ನು ಈಗಾಗಲೇ ಜಗದೀಶ್ ಶೆಟ್ಟರ್ ಸಂಪರ್ಕಿಸಿದ್ದಾರೆ. ಇನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಡಾ. ವಿಶ್ವನಾಥ ಪಾಟೀಲ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವ ಜಗದೀಶ ಶೆಟ್ಟರ್, ಅವರ ಮೂಲಕವೂ ಪಂಚಮಸಾಲಿ ಮತಗಳನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.

ಬೆಳಗಾವಿ ಲೋಕಸಭೆ ಗೆಲುವಿನ ನಿರ್ಣಾಯಕರಾಗಿರುವ ಪಂಚಮಸಾಲಿ ಮತಗಳ ಮೇಲೆ ಈಗ ಇಬ್ಬರೂ ಅಭ್ಯರ್ಥಿಗಳ ಕಣ್ಣು ನೆಟ್ಟಿದ್ದು, ಅಂತಿಮವಾಗಿ ಪಂಚಮಸಾಲಿಗರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಪ್ರಹ್ಲಾದ್ ಜೋಶಿ ಅಭ್ಯರ್ಥಿಯಾಗಿರುವುದಕ್ಕೆ ಅಭ್ಯಂತರವಿಲ್ಲ: ಮೂಜಗು ಶ್ರೀ ಸ್ಪಷ್ಟನೆ - Moojagu Shri Clarification

ETV Bharat Logo

Copyright © 2024 Ushodaya Enterprises Pvt. Ltd., All Rights Reserved.