ETV Bharat / state

ರಾಜ್ಯ ಬಿಜೆಪಿ ಬಂಡಾಯ ಶಮನಕ್ಕೆ ಆರ್​ಎಸ್​​ಎಸ್ ರಂಗ ಪ್ರವೇಶ: ನಾಳೆ ಮಹತ್ವದ ಸಭೆ - RSS Meeting

author img

By ETV Bharat Karnataka Team

Published : Sep 11, 2024, 1:26 PM IST

ರಾಜ್ಯ ಬಿಜೆಪಿಯಲ್ಲಿರುವ ಬಂಡಾಯವನ್ನು ಶಮನಗೊಳಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಭೆ ಆಯೋಜನೆ ಮಾಡಲಾಗಿದೆ. ರಾಜ್ಯ ಬಿಜೆಪಿಯ 40 ಪ್ರಮುಖ ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಬುಲಾವ್ ನೀಡಲಾಗಿದೆ.

RSS meeting
ಆರ್​ಎಸ್​​ಎಸ್, ಬಿಜೆಪಿ (ETV Bharat)

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಕಡೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​​ಎಸ್) ಎಂಟ್ರಿ ಕೊಟ್ಟಿದೆ. ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪ್ರಮುಖ ನಾಯಕರಿಗೆ ಬುಲಾವ್ ನೀಡಲಾಗಿದ್ದು, ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಗುರುವಾರ ಮಹತ್ವದ ಸಭೆ ನಡೆಸಲಿದೆ. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಿದೆ.

ನಾಳೆ ನಗರದ ಹೊರವಲಯದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ ಬಿಜೆಪಿ ನಾಯಕರ ಜೊತೆ ಆರ್​ಎಸ್​​ಎಸ್ ಸಭೆ ನಡೆಸಲಿದೆ. ಆರ್​ಎಸ್​​ಎಸ್ ಸರ ಸಹಕಾರ್ಯವಾಹ ಮುಕುಂದ್, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಸಮಾಧಾನಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಸುನೀಲ್ ಕುಮಾರ್ ಸೇರಿ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಯೋಗೇಶ್ವರ್​​ಗೆ ಟಿಕೆಟ್ ಕೊಡುವಂತೆ ಮನವಿ: 2023ರ ಸೋಲಿನ ನಂತರ ಆರ್​ಎಸ್​​ಎಸ್ ರಾಜ್ಯ ಬಿಜೆಪಿಗೆ ಸಲಹೆ ಕೊಡುವುದನ್ನು ನಿಲ್ಲಿಸಿದಂತಿತ್ತು. ಏಕಪಕ್ಷೀಯವಾಗಿ ವಿಜಯೇಂದ್ರರನ್ನು ಹೈಕಮಾಂಡ್ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಿದೆ. ಇದಾದ ನಂತರ ಪಕ್ಷದ ಸೀನಿಯರ್ ಗುಂಪಿನಲ್ಲಿ ತಳಮಳವಿದೆ. ಚನ್ನಪಟ್ಟಣ ಚುನಾವಣೆ ವಿಷಯದಲ್ಲಿ ವಿಜಯೇಂದ್ರರನ್ನು ಬಿಟ್ಟು ಅಶೋಕ್, ಬೆಲ್ಲದ್, ಬೊಮ್ಮಾಯಿ ನೇತೃತ್ವದಲ್ಲಿ ದೆಹಲಿಗೆ ಹೋಗಿ ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಸಭೆ ನಡೆಸಿ, ಸಿ.ಪಿ. ಯೋಗೇಶ್ವರ್​​ಗೆ ಟಿಕೆಟ್ ಕೊಡಿ ಎನ್ನುವ ಮನವಿ ಮಾಡಲಾಗಿದೆ. ವಿಜಯೇಂದ್ರರನ್ನು ಬಿಟ್ಟು ಈ ಸಭೆ ನಡೆಸಲಾಗಿದೆ, ಹಿರಿಯರಿಗೆ ವಿಜಯೇಂದ್ರ ಒಪ್ಪಿತವಲ್ಲ ಎನ್ನುವುದಕ್ಕೆ ಇದು ನಿದರ್ಶನ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ವಿಜಯೇಂದ್ರರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತರ ಹಲವರು ಕೂಡ ವಿರೋಧಿಸುತ್ತಿದ್ದಾರೆ. ಹಾಗಾಗಿ, ಬಣ ರಾಜಕೀಯ ಶಕ್ತಿ ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಂಡಾಯ ನಾಯಕರ ಸಭೆ: ಮೈಸೂರು ಪಾದಯಾತ್ರೆಗೂ ವಿರೋಧ ವ್ಯಕ್ತವಾಗಿತ್ತು, ಒಮ್ಮತದ ನಿರ್ಧಾರವಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ನಂತರ ಬೆಳಗಾವಿಯಲ್ಲಿ ಬಂಡಾಯ ನಾಯಕರ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಪ್ರಮುಖವಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಅರಸಿಕೇರಿ‌ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್. ಆರ್. ಸಂತೋಷ್ ಸೇರಿ ಹಲವು‌ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಂಡಾಯ ನಾಯಕರಿಂದ ಹಲವು ಬೇಡಿಕೆ: ಮೊದಲಿಂದಲೂ ವಿಜಯೇಂದ್ರ ನಾಯಕತ್ವ ಒಪ್ಪದ ಈ ನಾಯಕರು ಹೈಕಮಾಂಡ್​ಗೆ ಅವರ ವಿರುದ್ಧ ದೂರು ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆ ಉದ್ದೇಶದಿಂದಲೇ ಮೈಸೂರು ಪಾದಯಾತ್ರೆಯಲ್ಲಿ ಇವರೆಲ್ಲ ಭಾಗಿಯಾಗಿರಲಿಲ್ಲ. ಅಲ್ಲದೆ ಮತ್ತೊಂದು ಪಾದಯಾತ್ರೆಯ ನಿರ್ಧಾರ ಪ್ರಕಟಿಸಿದ್ದರು. ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಆಗಬೇಕು. ಕೋರ್ ಕಮಿಟಿ ಬೇಗ ನೇಮಕವಾಗಬೇಕು. ಕೆಲ ಪದಾಧಿಕಾರಿಗಳ ಬದಲಾವಣೆಯಾಗಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಬಂಡಾಯ ನಾಯಕರು ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಆರ್​ಎಸ್​​ಎಸ್ ನಾಯಕ ಮುಕುಂದ್​ರನ್ನು ಸಿ.ಟಿ.ರವಿ, ಆರ್​​.ಅಶೋಕ್, ಅರವಿಂದ ಲಿಂಬಾವಳಿ ಭೇಟಿಯಾಗಿದ್ದರು. ಒಳಜಗಳಕ್ಕೆ ಇತಿಶ್ರೀ ಆಗಬೇಕು ಎನ್ನುವ ಮನವಿ ಮಾಡಿದ್ದರು. ಹೀಗಾಗಿ ಸಂಘ ಇದೀಗ ಬಿಜೆಪಿಯ ಆಂತರಿಕ ವಿದ್ಯಮಾನಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಈಗಾಗಲೇ ಸಂಘದ ಪ್ರಮುಖರು ವೈಯಕ್ತಿಕವಾಗಿ ಎಲ್ಲರನ್ನೂ ಕರೆಸಿ ಮಾತುಕತೆ ನಡೆಸಿದ್ದಾರೆ. ಸಮಸ್ಯೆಗಳನ್ನು ಆಲಿಸಿದ್ದಾರೆ. ಇದೀಗ ಕ್ಲೈಮ್ಯಾಕ್ಸ್ ಎನ್ನುವಂತೆ ಎಲ್ಲ ನಾಯಕರನ್ನು ಒಟ್ಟಿಗೆ ಕರೆಸಿ ಕೂರಿಸಿ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ರೇಸ್​ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಸಿಎಂ: ಸಚಿವ ದಿನೇಶ್ ಗುಂಡೂರಾವ್ - Dinesh Gundurao

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಬಂಡಾಯ ಶಮನಕ್ಕೆ ಕಡೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​​ಎಸ್) ಎಂಟ್ರಿ ಕೊಟ್ಟಿದೆ. ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಪ್ರಮುಖ ನಾಯಕರಿಗೆ ಬುಲಾವ್ ನೀಡಲಾಗಿದ್ದು, ಸಂಘದ ಪ್ರಮುಖರ ಉಪಸ್ಥಿತಿಯಲ್ಲಿ ಗುರುವಾರ ಮಹತ್ವದ ಸಭೆ ನಡೆಸಲಿದೆ. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಯಲಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಿದೆ.

ನಾಳೆ ನಗರದ ಹೊರವಲಯದ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾ ಕೇಂದ್ರದಲ್ಲಿ ಬಿಜೆಪಿ ನಾಯಕರ ಜೊತೆ ಆರ್​ಎಸ್​​ಎಸ್ ಸಭೆ ನಡೆಸಲಿದೆ. ಆರ್​ಎಸ್​​ಎಸ್ ಸರ ಸಹಕಾರ್ಯವಾಹ ಮುಕುಂದ್, ಹಿರಿಯ ಪ್ರಚಾರಕ ಸುಧೀರ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಸಮಾಧಾನಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಸುನೀಲ್ ಕುಮಾರ್ ಸೇರಿ ಪ್ರಮುಖ ನಾಯಕರಿಗೆ ಆಹ್ವಾನ ನೀಡಲಾಗಿದೆ.

ಯೋಗೇಶ್ವರ್​​ಗೆ ಟಿಕೆಟ್ ಕೊಡುವಂತೆ ಮನವಿ: 2023ರ ಸೋಲಿನ ನಂತರ ಆರ್​ಎಸ್​​ಎಸ್ ರಾಜ್ಯ ಬಿಜೆಪಿಗೆ ಸಲಹೆ ಕೊಡುವುದನ್ನು ನಿಲ್ಲಿಸಿದಂತಿತ್ತು. ಏಕಪಕ್ಷೀಯವಾಗಿ ವಿಜಯೇಂದ್ರರನ್ನು ಹೈಕಮಾಂಡ್ ರಾಜ್ಯದ ಅಧ್ಯಕ್ಷರನ್ನಾಗಿ ಮಾಡಿದೆ. ಇದಾದ ನಂತರ ಪಕ್ಷದ ಸೀನಿಯರ್ ಗುಂಪಿನಲ್ಲಿ ತಳಮಳವಿದೆ. ಚನ್ನಪಟ್ಟಣ ಚುನಾವಣೆ ವಿಷಯದಲ್ಲಿ ವಿಜಯೇಂದ್ರರನ್ನು ಬಿಟ್ಟು ಅಶೋಕ್, ಬೆಲ್ಲದ್, ಬೊಮ್ಮಾಯಿ ನೇತೃತ್ವದಲ್ಲಿ ದೆಹಲಿಗೆ ಹೋಗಿ ಕೇಂದ್ರ ಸಚಿವ ಜೋಶಿ ಮನೆಯಲ್ಲಿ ಸಭೆ ನಡೆಸಿ, ಸಿ.ಪಿ. ಯೋಗೇಶ್ವರ್​​ಗೆ ಟಿಕೆಟ್ ಕೊಡಿ ಎನ್ನುವ ಮನವಿ ಮಾಡಲಾಗಿದೆ. ವಿಜಯೇಂದ್ರರನ್ನು ಬಿಟ್ಟು ಈ ಸಭೆ ನಡೆಸಲಾಗಿದೆ, ಹಿರಿಯರಿಗೆ ವಿಜಯೇಂದ್ರ ಒಪ್ಪಿತವಲ್ಲ ಎನ್ನುವುದಕ್ಕೆ ಇದು ನಿದರ್ಶನ ಎನ್ನಲಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿ ವಿಜಯೇಂದ್ರರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇತರ ಹಲವರು ಕೂಡ ವಿರೋಧಿಸುತ್ತಿದ್ದಾರೆ. ಹಾಗಾಗಿ, ಬಣ ರಾಜಕೀಯ ಶಕ್ತಿ ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಂಡಾಯ ನಾಯಕರ ಸಭೆ: ಮೈಸೂರು ಪಾದಯಾತ್ರೆಗೂ ವಿರೋಧ ವ್ಯಕ್ತವಾಗಿತ್ತು, ಒಮ್ಮತದ ನಿರ್ಧಾರವಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ನಂತರ ಬೆಳಗಾವಿಯಲ್ಲಿ ಬಂಡಾಯ ನಾಯಕರ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಪ್ರಮುಖವಾಗಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಿ.ಪಿ. ಹರೀಶ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪ್ರತಾಪ್ ಸಿಂಹ, ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಅರಸಿಕೇರಿ‌ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎನ್. ಆರ್. ಸಂತೋಷ್ ಸೇರಿ ಹಲವು‌ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಬಂಡಾಯ ನಾಯಕರಿಂದ ಹಲವು ಬೇಡಿಕೆ: ಮೊದಲಿಂದಲೂ ವಿಜಯೇಂದ್ರ ನಾಯಕತ್ವ ಒಪ್ಪದ ಈ ನಾಯಕರು ಹೈಕಮಾಂಡ್​ಗೆ ಅವರ ವಿರುದ್ಧ ದೂರು ನೀಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆ ಉದ್ದೇಶದಿಂದಲೇ ಮೈಸೂರು ಪಾದಯಾತ್ರೆಯಲ್ಲಿ ಇವರೆಲ್ಲ ಭಾಗಿಯಾಗಿರಲಿಲ್ಲ. ಅಲ್ಲದೆ ಮತ್ತೊಂದು ಪಾದಯಾತ್ರೆಯ ನಿರ್ಧಾರ ಪ್ರಕಟಿಸಿದ್ದರು. ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಆಗಬೇಕು. ಕೋರ್ ಕಮಿಟಿ ಬೇಗ ನೇಮಕವಾಗಬೇಕು. ಕೆಲ ಪದಾಧಿಕಾರಿಗಳ ಬದಲಾವಣೆಯಾಗಬೇಕು. ಜವಾಬ್ದಾರಿ ಸ್ಥಾನದಲ್ಲಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಬಂಡಾಯ ನಾಯಕರು ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಆರ್​ಎಸ್​​ಎಸ್ ನಾಯಕ ಮುಕುಂದ್​ರನ್ನು ಸಿ.ಟಿ.ರವಿ, ಆರ್​​.ಅಶೋಕ್, ಅರವಿಂದ ಲಿಂಬಾವಳಿ ಭೇಟಿಯಾಗಿದ್ದರು. ಒಳಜಗಳಕ್ಕೆ ಇತಿಶ್ರೀ ಆಗಬೇಕು ಎನ್ನುವ ಮನವಿ ಮಾಡಿದ್ದರು. ಹೀಗಾಗಿ ಸಂಘ ಇದೀಗ ಬಿಜೆಪಿಯ ಆಂತರಿಕ ವಿದ್ಯಮಾನಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತಿದೆ. ಈಗಾಗಲೇ ಸಂಘದ ಪ್ರಮುಖರು ವೈಯಕ್ತಿಕವಾಗಿ ಎಲ್ಲರನ್ನೂ ಕರೆಸಿ ಮಾತುಕತೆ ನಡೆಸಿದ್ದಾರೆ. ಸಮಸ್ಯೆಗಳನ್ನು ಆಲಿಸಿದ್ದಾರೆ. ಇದೀಗ ಕ್ಲೈಮ್ಯಾಕ್ಸ್ ಎನ್ನುವಂತೆ ಎಲ್ಲ ನಾಯಕರನ್ನು ಒಟ್ಟಿಗೆ ಕರೆಸಿ ಕೂರಿಸಿ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಸೂಚಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ರೇಸ್​ನಲ್ಲಿ ಯಾರೂ ಇಲ್ಲ, ಸಿದ್ದರಾಮಯ್ಯನವರೇ ಸಿಎಂ: ಸಚಿವ ದಿನೇಶ್ ಗುಂಡೂರಾವ್ - Dinesh Gundurao

ETV Bharat Logo

Copyright © 2024 Ushodaya Enterprises Pvt. Ltd., All Rights Reserved.