ETV Bharat / state

ಮೆಡಿಕಲ್ ಕಾಲೇಜು ವಿಚಾರವಾಗಿಯೇ ನಾನು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟೆ: ಡಾ.ಸುಧಾಕರ್​ - Dr K Sudhakar

ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್​ ತಮ್ಮದಾಗಿಸಿಕೊಂಡಿರುವ ಮಾಜಿ ಸಚಿವ ಡಾ.ಕೆ.ಸುಧಾಕರ್​ ಅವರು ಇದು ಭರ್ಜರಿಯಾಗಿ ಮತಬೇಟೆ ಪ್ರಾರಂಭಿಸಿದ್ದಾರೆ.

author img

By ETV Bharat Karnataka Team

Published : Mar 30, 2024, 5:26 PM IST

Updated : Mar 30, 2024, 7:44 PM IST

Dr. K Sudhakar
ಡಾ. ಕೆ.ಸುಧಾಕರ್​

ಚಿಕ್ಕಬಳ್ಳಾಪುರ: ಸಾಕಷ್ಟು ಗೊಂದಲಗಳ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಫೈನಲ್ ಆಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ಒಲಿದು ಬಂದಿದೆ. ಸದ್ಯ ಇಂದು ಗೌರಿಬಿದನೂರಿನಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದು, ಇದೇ ವೇಳೆ ಮಾತನಾಡಿದ ಡಾ.ಕೆ. ಸುಧಾಕರ್ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದರು.

ಡಾ. ಕೆ.ಸುಧಾಕರ್​

ಟಿಕೆಟ್ ಫೈನಲ್ ಆದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಫುಲ್​ ಆ್ಯಕ್ಟಿವ್​ ಆಗಿರುವ ಅಭ್ಯರ್ಥಿ ಸುಧಾಕರ್ ಮತಬೇಟೆ ಶುರು ಮಾಡಿದ್ದಾರೆ. "ನಾನು ಸಂಸದನಾಗಲು ಬೇರೆ ಜಿಲ್ಲೆಯಿಂದ ಬಂದಿಲ್ಲ. ನಮ್ಮ ಕರ್ಮ‌ಭೂಮಿ‌ ಸಹ ಇದೇ, ನನ್ನ ಸಾವಾದರೂ ಇದೇ ಮಣ್ಣಲ್ಲಿ ಆಗುತ್ತೆ. ಲೋಕಸಭಾ ಚುನಾವಣೆಗೆ ಕೇವಲ 25 ದಿನಗಳಿವೆ. ರಾಜ್ಯದ ಜನತೆ ಕಾಂಗ್ರೆಸ್ ಕೊಡುತ್ತಿರುವ ತಾತ್ಕಾಲಿಕ ಗ್ಯಾರಂಟಿಗಳನ್ನು ನಂಬಬೇಡಿ. ಈಗಿರುವ ಸರ್ಕಾರ ಓಂದೂವರೆ ಲಕ್ಷ ಕೋಟಿ‌ ಸಾಲ ಮಾಡಿ ನಮ್ಮ ತಲೆ ಮೇಲೆ ಹಾಕಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ" ಎಂದು ಆರೋಪ ಮಾಡಿದ್ದಾರೆ.

"ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಸಿಗದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ನಾನು ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಈಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಬಂದಿದೆ. ಅದೇ ರೀತಿ ಗೌರಿಬಿದನೂರಿಗೆ ತಾಲೂಕು ಆಸ್ಪತ್ರೆ ಬರಲು ನಾನು ಸಾಕಷ್ಟು ಶ್ರಮವಹಿಸಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಚೀಮುಲ್ ಹಾಲು ಒಕ್ಕೂಟವನ್ನು ಮತ್ತೆ ಕಿತ್ತುಕೊಂಡಿದೆ. ಆದರೆ, ಸೂರ್ಯಚಂದ್ರ ಹುಟ್ಟುವುದು ಎಷ್ಟು‌ ನಿಜವೋ ಅದೇ ರೀತಿಯಾಗಿ ಚೀಮುಲ್ ಮತ್ತೆ ತರುವುದು ನಿಜ" ಎಂದು ಮಾಜಿ ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಂದ್ರಗುತ್ತಿ ದೇವಾಲಯದ ಗಂಟೆ ಬಾರಿಸುವ ಸವಾಲು ಸ್ವೀಕರಿಸಿದ ಕೆ. ಎಸ್. ಈಶ್ವರಪ್ಪ - Lok Sabha Election 2024

ಚಿಕ್ಕಬಳ್ಳಾಪುರ: ಸಾಕಷ್ಟು ಗೊಂದಲಗಳ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಫೈನಲ್ ಆಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಟಿಕೆಟ್ ಒಲಿದು ಬಂದಿದೆ. ಸದ್ಯ ಇಂದು ಗೌರಿಬಿದನೂರಿನಲ್ಲಿ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದು, ಇದೇ ವೇಳೆ ಮಾತನಾಡಿದ ಡಾ.ಕೆ. ಸುಧಾಕರ್ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದರು.

ಡಾ. ಕೆ.ಸುಧಾಕರ್​

ಟಿಕೆಟ್ ಫೈನಲ್ ಆದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಫುಲ್​ ಆ್ಯಕ್ಟಿವ್​ ಆಗಿರುವ ಅಭ್ಯರ್ಥಿ ಸುಧಾಕರ್ ಮತಬೇಟೆ ಶುರು ಮಾಡಿದ್ದಾರೆ. "ನಾನು ಸಂಸದನಾಗಲು ಬೇರೆ ಜಿಲ್ಲೆಯಿಂದ ಬಂದಿಲ್ಲ. ನಮ್ಮ ಕರ್ಮ‌ಭೂಮಿ‌ ಸಹ ಇದೇ, ನನ್ನ ಸಾವಾದರೂ ಇದೇ ಮಣ್ಣಲ್ಲಿ ಆಗುತ್ತೆ. ಲೋಕಸಭಾ ಚುನಾವಣೆಗೆ ಕೇವಲ 25 ದಿನಗಳಿವೆ. ರಾಜ್ಯದ ಜನತೆ ಕಾಂಗ್ರೆಸ್ ಕೊಡುತ್ತಿರುವ ತಾತ್ಕಾಲಿಕ ಗ್ಯಾರಂಟಿಗಳನ್ನು ನಂಬಬೇಡಿ. ಈಗಿರುವ ಸರ್ಕಾರ ಓಂದೂವರೆ ಲಕ್ಷ ಕೋಟಿ‌ ಸಾಲ ಮಾಡಿ ನಮ್ಮ ತಲೆ ಮೇಲೆ ಹಾಕಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ" ಎಂದು ಆರೋಪ ಮಾಡಿದ್ದಾರೆ.

"ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮೆಡಿಕಲ್ ಕಾಲೇಜು ಸಿಗದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ನಾನು ರಾಜೀನಾಮೆ ಕೊಟ್ಟು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೇನೆ. ಈಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಬಂದಿದೆ. ಅದೇ ರೀತಿ ಗೌರಿಬಿದನೂರಿಗೆ ತಾಲೂಕು ಆಸ್ಪತ್ರೆ ಬರಲು ನಾನು ಸಾಕಷ್ಟು ಶ್ರಮವಹಿಸಿದ್ದೇನೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಚೀಮುಲ್ ಹಾಲು ಒಕ್ಕೂಟವನ್ನು ಮತ್ತೆ ಕಿತ್ತುಕೊಂಡಿದೆ. ಆದರೆ, ಸೂರ್ಯಚಂದ್ರ ಹುಟ್ಟುವುದು ಎಷ್ಟು‌ ನಿಜವೋ ಅದೇ ರೀತಿಯಾಗಿ ಚೀಮುಲ್ ಮತ್ತೆ ತರುವುದು ನಿಜ" ಎಂದು ಮಾಜಿ ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಂದ್ರಗುತ್ತಿ ದೇವಾಲಯದ ಗಂಟೆ ಬಾರಿಸುವ ಸವಾಲು ಸ್ವೀಕರಿಸಿದ ಕೆ. ಎಸ್. ಈಶ್ವರಪ್ಪ - Lok Sabha Election 2024

Last Updated : Mar 30, 2024, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.