ETV Bharat / state

ಹು -ಧಾ ಮಹಾನಗರ ಪಾಲಿಕೆ ಆಯುಕ್ತರ ಹೆಗಲೇರಿದ ಗೌನ್: ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದ ಹಿಂದಿನ ಇಬ್ಬರು ಮೇಯರ್​​​​​​​ಗಳು! - Hubli Dharwad New Mayor wore Gown

ಬಿಜೆಪಿ ಮೇಯರ್​ಗಳೇ ಪರಿಚಯಿಸಿದ್ದ ಸಂಪ್ರದಾಯವನ್ನು ಇದೀಗ ಅದೇ ಪಕ್ಷದ ಹೊಸ ಮೇಯರ್​ ಗೌನ್​ ಧರಿಸುವ ಮೂಲಕ ಮುರಿದಿದ್ದಾರೆ.

author img

By ETV Bharat Karnataka Team

Published : Jul 3, 2024, 4:05 PM IST

Updated : Jul 3, 2024, 5:25 PM IST

Hubli Dharwad New Mayor wearing gown put full stop to tradition of previous two mayors
ಹು-ಧಾ ಮಹಾನಗರ ಪಾಲಿಕೆ ಆಯುಕ್ತರ ಹೆಗಲೇರಿದ ಗೌನ್ (ETV Bharat)

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ರಾಮಪ್ಪ ಬಡಿಗೇರ್ ಹಾಗೂ ಉಪಮೇಯರ್ ಆಗಿ ದುರ್ಗಮ್ಮ ಬಿಜವಾಡ ಅವರು ಆಯ್ಕೆಯಾಗಿದ್ದಾರೆ. ಆದರೆ ಆಯ್ಕೆಯಾಗುತ್ತಿದಂತೆ ಮೇಯರ್ ಗೌನ್ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಮೇಯರ್ ರಾಮಪ್ಪ ಬಡಿಗೇರ್ (ETV Bharat)

ಕಳೆದ ಎರಡು ಅವಧಿಯಲ್ಲಿ ಮೇಯರ್ ಆಗಿದ್ದಂತಹ ಈರೇಶ ಅಂಚಟಗೇರಿ ಹಾಗೂ ವೀಣಾ ಬರದ್ವಾಡ್ ಅವರು ಮೇಯರ್ ಗೌನ್ ಧರಿಸದೇ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದರು. ಆದರೆ ಇದೀಗ ನೂತನವಾಗಿ ಆಯುಕ್ತರಾದಂತಹ ರಾಮಣ್ಣ ಬಡಿಗೇರ್ ಅವರು ಎರಡು ವರ್ಷಗಳ ಬಳಿಕ ಮತ್ತೆ ಮೇಯರ್ ಗೌನ್ ಧರಿಸುವ ಮೂಲಕ ಹೊಸತಕ್ಕೆ ಸಾಕ್ಷಿಯಾಗಿದ್ದಾರೆ.

2022ರಲ್ಲಿ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಗೌನ್​ ಧರಿಸುವುದನ್ನು ತಿರಸ್ಕರಿಸಿದ್ದರು. ಬ್ರಿಟಿಷ್ ಸಂಸ್ಕೃತಿಯ ಗೌನ್​ ಇದು. ಗುಲಾಮಗಿರಿಯ ಸಂಕೇತ. ತಾವೇ ಶ್ರೇಷ್ಠ ಎಂಬುದನ್ನು ತೋರಿಸುತ್ತದೆ. ಪಾಲಿಕೆ ಆಡಳಿತದಲ್ಲಿ ಇಂತಹ ಗುಲಾಮಗಿರಿಯ ಸಂಸ್ಕೃತಿ ಸರಿಯಲ್ಲ ಎಂದು ಗೌನ್​ ಧರಿಸುವುದನ್ನು ಬಿಟ್ಟಿದ್ದರು. ಅಷ್ಟೇ ಅಲ್ಲದೆ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಯಾರೇ ಬಂದರೂ ಗೌನ್​ ಧರಿಸದೇ ಅವರನ್ನು ಸ್ವಾಗತಿಸಿದ್ದರು. ರಾಷ್ಟ್ರಪತಿಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಗೌನ್​ ಧರಿಸದೆಯೇ ಸನ್ಮಾನಿಸಿದ್ದರು.

ಮುಂದೆ ಸಾಮಾನ್ಯ ಸಭೆಗಳಲ್ಲೂ ಗೌನ್​ ಧರಿಸದೇ ಪಾಲ್ಗೊಂಡಿದ್ದರು. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದರಿಂದ ಎರಡ್ಮೂರು ಸಾಮಾನ್ಯ ಸಭೆಗಳಲ್ಲಿ ಭಾರಿ ಕೋಲಾಹಲ ಉಂಟಾಗಿ ಸಭೆಯೇ ಮೊಟಕುಗೊಂಡಿದ್ದ ಉದಾಹರಣೆಗಳಿವೆ. ಆಡಳಿತ ಪಕ್ಷದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೂ ಅಂಚಟಗೇರಿ ಮಾತ್ರ ಗೌನ್​ ಧರಿಸುವ ಗೋಜಿಗೆ ಹೋಗಿರಲಿಲ್ಲ. ಕೊನೆಗೆ ಸರ್ಕಾರಕ್ಕೆ ಅವರೇ ಪತ್ರ ಬರೆದು ಗೌನ್​ ಧರಿಸುವುದು ಕಡ್ಡಾಯವೇ ಎಂದು ಪ್ರಶ್ನಿಸಿದ್ದರು. ಸರ್ಕಾರ ಗೌನ್​ ಧರಿಸುವುದು ಕಡ್ಡಾಯವಲ್ಲ. ಅದು ಮೇಯರ್ ಆದವರ ವಿವೇಚನೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿತ್ತು.

ಈ ವಿಚಾರದಲ್ಲಿ ಅಂಚಟಗೇರಿ ಯಶಸ್ವಿ ಕೂಡ ಆಗಿದ್ದರು. ಗೌನ್ ತಿರಸ್ಕರಿಸಿದ ಮೊದಲ ಮೇಯರ್ ಎಂದು ಹೆಸರು ಪಡೆದಿದ್ದರು. ಇದು ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಈರೇಶ ಅಂಚಟಗೇರಿ ನಂತರ ವೀಣಾ ಬರದ್ವಾಡ ಕೂಡ ಗೌನ್​ ಧರಿಸಿರಲಿಲ್ಲ. ಅಂಚಟಗೇರಿ ಅವರ ಹಾದಿಯೇ ಹಿಡಿದಿದ್ದರು.

ಮತ್ತೆ ಗೌನ್ ಸಂಪ್ರದಾಯಕ್ಕೆ ಜೀವ ತುಂಬಿದ ರಾಮಣ್ಣ ಬಡಿಗೇರ್: ಇದೀಗ ರಾಮಣ್ಣ ಬಡಿಗೇರ ನಾಲ್ಕು ದಿನದ ಹಿಂದೆಯಷ್ಟೇ ನೂತನ ಮೇಯರ್ ಆಗಿದ್ದಾರೆ. ಇವರು ಗೌನ್​ ಧರಿಸುತ್ತಾರೋ ಇಲ್ಲವೋ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. "ನಾನು ಗೌನ್​ ಧರಿಸುತ್ತೇನೆ. ಮೇಯರ್ ಎಂದರೆ ಮಹಾನಗರದ ಪ್ರಥಮ ಪ್ರಜೆ. ಅದು ನಮಗೆ ಕೊಡುವ ಗೌರವ ಅಲ್ಲ. ಹುದ್ದೆಗೆ ಕೊಡುವಂತಹ ಗೌರವ. ಹೀಗಾಗಿ ಗೌನು ಧರಿಸುತ್ತೇನೆ. ಮೇಯರ್ ಹುದ್ದೆಗೆ ತನ್ನದೇ ಆದ ಗೌರವವಿದೆ. ಗೌನ್​ ಧರಿಸುವುದು ಆ ಹುದ್ದೆಗೆ ಕೊಡುವ ಗೌರವ ಸೂಚಕ. ಈ ಹಿಂದೆ ಅಂಚಟಗೇರಿ, ಬರದ್ವಾಡ ಏಕೆ ಬಿಟ್ಟಿದ್ದರು ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ನಾನು ಮಾತ್ರ ಗೌನ್​ ಧರಿಸುತ್ತೇನೆ" ಎಂದು ರಾಮಣ್ಣ ಬಡಿಗೇರ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿ ಮೇಯರ್‌ ಪರಿಚಯಿಸಿದ್ದ ಹೊಸ ಸಂಪ್ರದಾಯವನ್ನು ಅದೇ ಪಕ್ಷದವರು ಮುರಿದಂತಾಗಿದೆ. ಇದು ಮಹಾನಗರ ಪಾಲಿಕೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ತಾರ್ಕಿಕ ಅಂತ್ಯ ಕಂಡ ಹು - ಧಾ ಮಹಾನಗರ ಪಾಲಿಕೆ ಗೌನ್ ಗಲಾಟೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನೂತನ ಮೇಯರ್ ಆಗಿ ರಾಮಪ್ಪ ಬಡಿಗೇರ್ ಹಾಗೂ ಉಪಮೇಯರ್ ಆಗಿ ದುರ್ಗಮ್ಮ ಬಿಜವಾಡ ಅವರು ಆಯ್ಕೆಯಾಗಿದ್ದಾರೆ. ಆದರೆ ಆಯ್ಕೆಯಾಗುತ್ತಿದಂತೆ ಮೇಯರ್ ಗೌನ್ ವಿಷಯ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

ಮೇಯರ್ ರಾಮಪ್ಪ ಬಡಿಗೇರ್ (ETV Bharat)

ಕಳೆದ ಎರಡು ಅವಧಿಯಲ್ಲಿ ಮೇಯರ್ ಆಗಿದ್ದಂತಹ ಈರೇಶ ಅಂಚಟಗೇರಿ ಹಾಗೂ ವೀಣಾ ಬರದ್ವಾಡ್ ಅವರು ಮೇಯರ್ ಗೌನ್ ಧರಿಸದೇ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದರು. ಆದರೆ ಇದೀಗ ನೂತನವಾಗಿ ಆಯುಕ್ತರಾದಂತಹ ರಾಮಣ್ಣ ಬಡಿಗೇರ್ ಅವರು ಎರಡು ವರ್ಷಗಳ ಬಳಿಕ ಮತ್ತೆ ಮೇಯರ್ ಗೌನ್ ಧರಿಸುವ ಮೂಲಕ ಹೊಸತಕ್ಕೆ ಸಾಕ್ಷಿಯಾಗಿದ್ದಾರೆ.

2022ರಲ್ಲಿ ಮೇಯರ್ ಆಗಿದ್ದ ಈರೇಶ ಅಂಚಟಗೇರಿ ಗೌನ್​ ಧರಿಸುವುದನ್ನು ತಿರಸ್ಕರಿಸಿದ್ದರು. ಬ್ರಿಟಿಷ್ ಸಂಸ್ಕೃತಿಯ ಗೌನ್​ ಇದು. ಗುಲಾಮಗಿರಿಯ ಸಂಕೇತ. ತಾವೇ ಶ್ರೇಷ್ಠ ಎಂಬುದನ್ನು ತೋರಿಸುತ್ತದೆ. ಪಾಲಿಕೆ ಆಡಳಿತದಲ್ಲಿ ಇಂತಹ ಗುಲಾಮಗಿರಿಯ ಸಂಸ್ಕೃತಿ ಸರಿಯಲ್ಲ ಎಂದು ಗೌನ್​ ಧರಿಸುವುದನ್ನು ಬಿಟ್ಟಿದ್ದರು. ಅಷ್ಟೇ ಅಲ್ಲದೆ, ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಯಾರೇ ಬಂದರೂ ಗೌನ್​ ಧರಿಸದೇ ಅವರನ್ನು ಸ್ವಾಗತಿಸಿದ್ದರು. ರಾಷ್ಟ್ರಪತಿಗಳಿಗೆ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಗೌನ್​ ಧರಿಸದೆಯೇ ಸನ್ಮಾನಿಸಿದ್ದರು.

ಮುಂದೆ ಸಾಮಾನ್ಯ ಸಭೆಗಳಲ್ಲೂ ಗೌನ್​ ಧರಿಸದೇ ಪಾಲ್ಗೊಂಡಿದ್ದರು. ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ಇದರಿಂದ ಎರಡ್ಮೂರು ಸಾಮಾನ್ಯ ಸಭೆಗಳಲ್ಲಿ ಭಾರಿ ಕೋಲಾಹಲ ಉಂಟಾಗಿ ಸಭೆಯೇ ಮೊಟಕುಗೊಂಡಿದ್ದ ಉದಾಹರಣೆಗಳಿವೆ. ಆಡಳಿತ ಪಕ್ಷದಲ್ಲೂ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದರೂ ಅಂಚಟಗೇರಿ ಮಾತ್ರ ಗೌನ್​ ಧರಿಸುವ ಗೋಜಿಗೆ ಹೋಗಿರಲಿಲ್ಲ. ಕೊನೆಗೆ ಸರ್ಕಾರಕ್ಕೆ ಅವರೇ ಪತ್ರ ಬರೆದು ಗೌನ್​ ಧರಿಸುವುದು ಕಡ್ಡಾಯವೇ ಎಂದು ಪ್ರಶ್ನಿಸಿದ್ದರು. ಸರ್ಕಾರ ಗೌನ್​ ಧರಿಸುವುದು ಕಡ್ಡಾಯವಲ್ಲ. ಅದು ಮೇಯರ್ ಆದವರ ವಿವೇಚನೆಗೆ ಬಿಟ್ಟ ವಿಷಯ ಎಂದು ಸ್ಪಷ್ಟಪಡಿಸಿತ್ತು.

ಈ ವಿಚಾರದಲ್ಲಿ ಅಂಚಟಗೇರಿ ಯಶಸ್ವಿ ಕೂಡ ಆಗಿದ್ದರು. ಗೌನ್ ತಿರಸ್ಕರಿಸಿದ ಮೊದಲ ಮೇಯರ್ ಎಂದು ಹೆಸರು ಪಡೆದಿದ್ದರು. ಇದು ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿತ್ತು. ಈರೇಶ ಅಂಚಟಗೇರಿ ನಂತರ ವೀಣಾ ಬರದ್ವಾಡ ಕೂಡ ಗೌನ್​ ಧರಿಸಿರಲಿಲ್ಲ. ಅಂಚಟಗೇರಿ ಅವರ ಹಾದಿಯೇ ಹಿಡಿದಿದ್ದರು.

ಮತ್ತೆ ಗೌನ್ ಸಂಪ್ರದಾಯಕ್ಕೆ ಜೀವ ತುಂಬಿದ ರಾಮಣ್ಣ ಬಡಿಗೇರ್: ಇದೀಗ ರಾಮಣ್ಣ ಬಡಿಗೇರ ನಾಲ್ಕು ದಿನದ ಹಿಂದೆಯಷ್ಟೇ ನೂತನ ಮೇಯರ್ ಆಗಿದ್ದಾರೆ. ಇವರು ಗೌನ್​ ಧರಿಸುತ್ತಾರೋ ಇಲ್ಲವೋ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. "ನಾನು ಗೌನ್​ ಧರಿಸುತ್ತೇನೆ. ಮೇಯರ್ ಎಂದರೆ ಮಹಾನಗರದ ಪ್ರಥಮ ಪ್ರಜೆ. ಅದು ನಮಗೆ ಕೊಡುವ ಗೌರವ ಅಲ್ಲ. ಹುದ್ದೆಗೆ ಕೊಡುವಂತಹ ಗೌರವ. ಹೀಗಾಗಿ ಗೌನು ಧರಿಸುತ್ತೇನೆ. ಮೇಯರ್ ಹುದ್ದೆಗೆ ತನ್ನದೇ ಆದ ಗೌರವವಿದೆ. ಗೌನ್​ ಧರಿಸುವುದು ಆ ಹುದ್ದೆಗೆ ಕೊಡುವ ಗೌರವ ಸೂಚಕ. ಈ ಹಿಂದೆ ಅಂಚಟಗೇರಿ, ಬರದ್ವಾಡ ಏಕೆ ಬಿಟ್ಟಿದ್ದರು ಗೊತ್ತಿಲ್ಲ. ಅದು ಅವರ ವೈಯಕ್ತಿಕ ವಿಚಾರ. ನಾನು ಮಾತ್ರ ಗೌನ್​ ಧರಿಸುತ್ತೇನೆ" ಎಂದು ರಾಮಣ್ಣ ಬಡಿಗೇರ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ಪಾಲಿಕೆಯಲ್ಲಿ ಬಿಜೆಪಿ ಮೇಯರ್‌ ಪರಿಚಯಿಸಿದ್ದ ಹೊಸ ಸಂಪ್ರದಾಯವನ್ನು ಅದೇ ಪಕ್ಷದವರು ಮುರಿದಂತಾಗಿದೆ. ಇದು ಮಹಾನಗರ ಪಾಲಿಕೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ತಾರ್ಕಿಕ ಅಂತ್ಯ ಕಂಡ ಹು - ಧಾ ಮಹಾನಗರ ಪಾಲಿಕೆ ಗೌನ್ ಗಲಾಟೆ

Last Updated : Jul 3, 2024, 5:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.