ETV Bharat / state

ಜಮೀನಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವ ವಾಟರ್​ಮ್ಯಾನ್ ಪ್ರಕಾಶ್​ ಬಾರ್ಕಿ - WATERMAN PRAKASH BARKI

author img

By ETV Bharat Karnataka Team

Published : Apr 2, 2024, 10:27 AM IST

Updated : Apr 2, 2024, 12:44 PM IST

ಹಾವೇರಿಯ ಹುರುಳಿಕೊಪ್ಪಿ ಗ್ರಾಮದ ಪ್ರಕಾಶ್​ ಬಾರ್ಕಿ ಎಂಬುವವರು ತಮ್ಮ ಜಮೀನಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಬೋರ್​ವೆಲ್​ನಿಂದ ನೀರು ಹರಿಸಿ ಗ್ರಾಮದ ಜನರ, ಪ್ರಾಣಿಗಳ ಬಾಯಾರಿಕೆ ತೀರಿಸುತ್ತಿದ್ದಾರೆ.

ನೀರಿನ ತೊಟ್ಟಿ
ನೀರಿನ ತೊಟ್ಟಿ
ವಾಟರ್​ಮ್ಯಾನ್ ಪ್ರಕಾಶ್​ ಬಾರ್ಕಿ

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಹುರುಳಿಕೊಪ್ಪಿ ಗ್ರಾಮದ ಪ್ರಕಾಶ್​ ಬಾರ್ಕಿ ಇದೀಗ ವಾಟರ್​ಮ್ಯಾನ್ ಎಂತಲೇ ಪ್ರಸಿದ್ಧಿ. ಇದಕ್ಕೆ ಕಾರಣ ಇವರು ತಮ್ಮ ಹೊಲದಲ್ಲಿ ಸಾರ್ವಜನಿಕರಿಗೆ ಮತ್ತು ಪ್ರಾಣಿಪಕ್ಷಿಗಳಿಗೆ ಮಾಡಿರುವ ನೀರಿನ ವ್ಯವಸ್ಥೆ.

ಪ್ರಕಾಶ್ ನೀರಿನ ತೊಟ್ಟಿ ಮಾಡಿ ಜನ ಜಾನುವಾರು ಕಾಡುಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಜಮೀನಲ್ಲಿ 5 ಅಡಿ ಅಗಲ 30 ಅಡಿ ಉದ್ದದ ತೊಟ್ಟಿ ನಿರ್ಮಾಣ ಮಾಡಿದ್ದು, ಅದಕ್ಕೆ ಟಾರ್ಪಲ್​ (ತಾಡಪತ್ರಿ)ಹಾಕಿ ಜಮೀನಿನಲ್ಲಿನ ಕೊಳವೆ ಬಾವಿಯಿಂದ ಪ್ರಕಾಶ ನೀರು ಪೂರೈಸುತ್ತಿದ್ದಾರೆ. ಪ್ರಕಾಶ ಬಾರ್ಕಿ ನಿರ್ಮಿಸಿರುವ ಈ ನೀರಿನ ತೊಟ್ಟಿ ಸುತ್ತಮುತ್ತ ಸುಮಾರು ಎರಡು ಕಿಲೋ ಮೀಟರ್ ಯಾವುದೇ ನೀರಿನ ಮೂಲಗಳಿಲ್ಲಾ. ಇದ್ದ ಹೊಂಡ, ಹಳ್ಳ-ಕೊಳ್ಳಗಳು, ನದಿಗಳು, ಕೆರೆ ಬಾವಿ ಕೆಲ ಕೊಳವೆಬಾವಿಗಳು ಸಹ ನೀರಿಲ್ಲದ ಬತ್ತಿವೆ.

ಹೀಗಾಗಿ ಜನರಿಗೆ ಪ್ರಕಾಶ್​ ನಿರ್ಮಾಣ ಮಾಡಿರುವ ನೀರಿನ ತೊಟ್ಟಿಯೇ ನೀರಿನ ದಾಹ ತೀರಿಸುತ್ತಿದೆ. ಹುರುಳಿಕೊಪ್ಪಿ, ತೊಂಡೂರು ಕಳಲಕೊಂಡ, ತಳ್ಳಳ್ಳಿ, ಹೊಸಳ್ಳಿ ಗ್ರಾಮಗಳ ಕುರಿಗಾಹಿಗಳು ಈ ತೊಟ್ಟಿಯಲ್ಲಿ ಕುರಿಗಳಿಗೆ ನೀರು ಕುಡಿಸುತ್ತಾರೆ. ಜೊತೆಗೆ ಕೊಳವೆಬಾವಿ ನೀರು ಸಿಹಿಯಾಗಿರುವ ಕಾರಣ ಜನರು ಸಹ ಇಲ್ಲಿಯ ನೀರನ್ನು ತುಂಬಿಕೊಳ್ಳುತ್ತಾರೆ. ಜಮೀನಿಗೆ ಬರುವ ಎತ್ತು, ಆಕಳುಗಳು ಇಲ್ಲಿಯೇ ನೀರಿನ ದಾಹ ನೀಗಿಸಿಕೊಳ್ಳುತ್ತವೆ. ಹಗಲು ವೇಳೆ ಜನರು ಅವರ ಸಾಕು ಪ್ರಾಣಿಗಳು ನೀರಿನ ದಾಹ ತೀರಿಸಿಕೊಂಡರೆ ರಾತ್ರಿ ಕಾಡುಪ್ರಾಣಿಗಳು ನೀರು ಕುಡಿಯುತ್ತವೆ. ತೋಳಗಳು, ನರಿ, ಮೊಲಗಳು ಮುಂಜಾನೆ ನವಿಲುಗಳು ಪ್ರಕಾಶ್​ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ನೀರು ಸೇವಿಸುತ್ತವೆ.

ಪ್ರಕಾಶ್ ಸರ್ಕಾರದಿಂದ ಬಂದಂತಹ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದರು. ಪ್ರಕಾಶ್ ಜಮೀನಿನಲ್ಲಿ ಹಾದುಹೋಗುವ ಕುರಿಗಾಹಿಗಳು ರೈತರು ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಪ್ರಕಾಶ್​ ಜಮೀನಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ತಮ್ಮ ಜಮೀನಿಗೆ ಬಳಸಿ ಉಳಿಯುವ ನೀರನ್ನು ತೊಟ್ಟಿಗೆ ಬಿಡಲಾರಂಭಿಸಿದ್ದಾರೆ. ಮೊದ ಮೊದಲು ಕಡಿಮೆ ಕುರಿಗಾಹಿಗಳು ರೈತರು ನೀರಿನ ತೊಟ್ಟಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲಾರಂಭಿಸಿದ್ದಾರೆ.

ನಂತರ ಸುತ್ತಮುತ್ತ ರೈತರಿಗೆ ಕುರಿಗಾಹಿಗಳಿಗೆ ನೀರಿನ ತೊಟ್ಟಿ ನಿರ್ಮಿಸಿದ್ದು ಗೊತ್ತಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಕುರಿಗಳು ತೊಟ್ಟಿಯ ನೀರು ಕುಡಿಯುತ್ತಿವೆ. ಮೊದಲು ಜಮೀನಿಗೆ ನೀರು ಬಿಟ್ಟು ಉಳಿದ ನೀರನ್ನು ತೊಟ್ಟಿಗೆ ಬಿಡುತ್ತಿದ್ದ ಪ್ರಕಾಶ್ ಇದೀಗ ಮೊದಲ ಆದ್ಯತೆಯನ್ನು ತೊಟ್ಟಿಗೆ ನೀಡಿದ್ದಾರೆ. ವಿದ್ಯುತ್ ಇರುವವರೆಗೆ ತೊಟ್ಟಿಯಲ್ಲಿ ನೀರು ತುಂಬಿಸುತ್ತಾರೆ. ಮುಂಜಾನೆ ಜಮೀನಿಗೆ ಹೋಗುವ ಪ್ರಕಾಶ್ ಮುಂಜಾನೆಯಿಂದ ಸಂಜೆಯವರೆಗೆ ನೀರು ತುಂಬಿಸಿ ಮನೆಗೆ ಬರುತ್ತಾರೆ.

ತಾವು ನೀರಿನ ವ್ಯವಸ್ಥೆ ಮಾಡುವಂತೆ ಪ್ರಕಾಶಗೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಪ್ರಕಾಶ್ ನೀರಿನ ತೊಟ್ಟಿ ಮಾಡಿ ನೀರು ತುಂಬಿಸುತ್ತಿರುವುದಕ್ಕೆ ಅಕ್ಕಪಕ್ಕದ ರೈತರು ಸಂತಸ ವ್ಯಕ್ತಪಡಿಸುತ್ತಾರೆ. ಮಳೆಗಾಲ ಆರಂಭವಾಗಿ ಕೆರೆಕಟ್ಟೆಗಳು ತುಂಬುವವರೆಗೆ ಇವರ ಸೇವೆ ನಿರಂತರವಾಗಿರಲಿ ಎನ್ನುತ್ತಾರೆ ರೈತರು.

ಇದನ್ನೂ ಓದಿ: ಶಾಲೆಯಲ್ಲಿ ಉದ್ಯಾನ ನಿರ್ಮಿಸಿ ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ - garden at school

ವಾಟರ್​ಮ್ಯಾನ್ ಪ್ರಕಾಶ್​ ಬಾರ್ಕಿ

ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಹುರುಳಿಕೊಪ್ಪಿ ಗ್ರಾಮದ ಪ್ರಕಾಶ್​ ಬಾರ್ಕಿ ಇದೀಗ ವಾಟರ್​ಮ್ಯಾನ್ ಎಂತಲೇ ಪ್ರಸಿದ್ಧಿ. ಇದಕ್ಕೆ ಕಾರಣ ಇವರು ತಮ್ಮ ಹೊಲದಲ್ಲಿ ಸಾರ್ವಜನಿಕರಿಗೆ ಮತ್ತು ಪ್ರಾಣಿಪಕ್ಷಿಗಳಿಗೆ ಮಾಡಿರುವ ನೀರಿನ ವ್ಯವಸ್ಥೆ.

ಪ್ರಕಾಶ್ ನೀರಿನ ತೊಟ್ಟಿ ಮಾಡಿ ಜನ ಜಾನುವಾರು ಕಾಡುಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಜಮೀನಲ್ಲಿ 5 ಅಡಿ ಅಗಲ 30 ಅಡಿ ಉದ್ದದ ತೊಟ್ಟಿ ನಿರ್ಮಾಣ ಮಾಡಿದ್ದು, ಅದಕ್ಕೆ ಟಾರ್ಪಲ್​ (ತಾಡಪತ್ರಿ)ಹಾಕಿ ಜಮೀನಿನಲ್ಲಿನ ಕೊಳವೆ ಬಾವಿಯಿಂದ ಪ್ರಕಾಶ ನೀರು ಪೂರೈಸುತ್ತಿದ್ದಾರೆ. ಪ್ರಕಾಶ ಬಾರ್ಕಿ ನಿರ್ಮಿಸಿರುವ ಈ ನೀರಿನ ತೊಟ್ಟಿ ಸುತ್ತಮುತ್ತ ಸುಮಾರು ಎರಡು ಕಿಲೋ ಮೀಟರ್ ಯಾವುದೇ ನೀರಿನ ಮೂಲಗಳಿಲ್ಲಾ. ಇದ್ದ ಹೊಂಡ, ಹಳ್ಳ-ಕೊಳ್ಳಗಳು, ನದಿಗಳು, ಕೆರೆ ಬಾವಿ ಕೆಲ ಕೊಳವೆಬಾವಿಗಳು ಸಹ ನೀರಿಲ್ಲದ ಬತ್ತಿವೆ.

ಹೀಗಾಗಿ ಜನರಿಗೆ ಪ್ರಕಾಶ್​ ನಿರ್ಮಾಣ ಮಾಡಿರುವ ನೀರಿನ ತೊಟ್ಟಿಯೇ ನೀರಿನ ದಾಹ ತೀರಿಸುತ್ತಿದೆ. ಹುರುಳಿಕೊಪ್ಪಿ, ತೊಂಡೂರು ಕಳಲಕೊಂಡ, ತಳ್ಳಳ್ಳಿ, ಹೊಸಳ್ಳಿ ಗ್ರಾಮಗಳ ಕುರಿಗಾಹಿಗಳು ಈ ತೊಟ್ಟಿಯಲ್ಲಿ ಕುರಿಗಳಿಗೆ ನೀರು ಕುಡಿಸುತ್ತಾರೆ. ಜೊತೆಗೆ ಕೊಳವೆಬಾವಿ ನೀರು ಸಿಹಿಯಾಗಿರುವ ಕಾರಣ ಜನರು ಸಹ ಇಲ್ಲಿಯ ನೀರನ್ನು ತುಂಬಿಕೊಳ್ಳುತ್ತಾರೆ. ಜಮೀನಿಗೆ ಬರುವ ಎತ್ತು, ಆಕಳುಗಳು ಇಲ್ಲಿಯೇ ನೀರಿನ ದಾಹ ನೀಗಿಸಿಕೊಳ್ಳುತ್ತವೆ. ಹಗಲು ವೇಳೆ ಜನರು ಅವರ ಸಾಕು ಪ್ರಾಣಿಗಳು ನೀರಿನ ದಾಹ ತೀರಿಸಿಕೊಂಡರೆ ರಾತ್ರಿ ಕಾಡುಪ್ರಾಣಿಗಳು ನೀರು ಕುಡಿಯುತ್ತವೆ. ತೋಳಗಳು, ನರಿ, ಮೊಲಗಳು ಮುಂಜಾನೆ ನವಿಲುಗಳು ಪ್ರಕಾಶ್​ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ನೀರು ಸೇವಿಸುತ್ತವೆ.

ಪ್ರಕಾಶ್ ಸರ್ಕಾರದಿಂದ ಬಂದಂತಹ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದರು. ಪ್ರಕಾಶ್ ಜಮೀನಿನಲ್ಲಿ ಹಾದುಹೋಗುವ ಕುರಿಗಾಹಿಗಳು ರೈತರು ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಹೀಗಾಗಿ ಪ್ರಕಾಶ್​ ಜಮೀನಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿದ್ದಾರೆ. ತಮ್ಮ ಜಮೀನಿಗೆ ಬಳಸಿ ಉಳಿಯುವ ನೀರನ್ನು ತೊಟ್ಟಿಗೆ ಬಿಡಲಾರಂಭಿಸಿದ್ದಾರೆ. ಮೊದ ಮೊದಲು ಕಡಿಮೆ ಕುರಿಗಾಹಿಗಳು ರೈತರು ನೀರಿನ ತೊಟ್ಟಿಯಲ್ಲಿ ಜಾನುವಾರುಗಳಿಗೆ ನೀರು ಕುಡಿಸಲಾರಂಭಿಸಿದ್ದಾರೆ.

ನಂತರ ಸುತ್ತಮುತ್ತ ರೈತರಿಗೆ ಕುರಿಗಾಹಿಗಳಿಗೆ ನೀರಿನ ತೊಟ್ಟಿ ನಿರ್ಮಿಸಿದ್ದು ಗೊತ್ತಾಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಕುರಿಗಳು ತೊಟ್ಟಿಯ ನೀರು ಕುಡಿಯುತ್ತಿವೆ. ಮೊದಲು ಜಮೀನಿಗೆ ನೀರು ಬಿಟ್ಟು ಉಳಿದ ನೀರನ್ನು ತೊಟ್ಟಿಗೆ ಬಿಡುತ್ತಿದ್ದ ಪ್ರಕಾಶ್ ಇದೀಗ ಮೊದಲ ಆದ್ಯತೆಯನ್ನು ತೊಟ್ಟಿಗೆ ನೀಡಿದ್ದಾರೆ. ವಿದ್ಯುತ್ ಇರುವವರೆಗೆ ತೊಟ್ಟಿಯಲ್ಲಿ ನೀರು ತುಂಬಿಸುತ್ತಾರೆ. ಮುಂಜಾನೆ ಜಮೀನಿಗೆ ಹೋಗುವ ಪ್ರಕಾಶ್ ಮುಂಜಾನೆಯಿಂದ ಸಂಜೆಯವರೆಗೆ ನೀರು ತುಂಬಿಸಿ ಮನೆಗೆ ಬರುತ್ತಾರೆ.

ತಾವು ನೀರಿನ ವ್ಯವಸ್ಥೆ ಮಾಡುವಂತೆ ಪ್ರಕಾಶಗೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿ ಪ್ರಕಾಶ್ ನೀರಿನ ತೊಟ್ಟಿ ಮಾಡಿ ನೀರು ತುಂಬಿಸುತ್ತಿರುವುದಕ್ಕೆ ಅಕ್ಕಪಕ್ಕದ ರೈತರು ಸಂತಸ ವ್ಯಕ್ತಪಡಿಸುತ್ತಾರೆ. ಮಳೆಗಾಲ ಆರಂಭವಾಗಿ ಕೆರೆಕಟ್ಟೆಗಳು ತುಂಬುವವರೆಗೆ ಇವರ ಸೇವೆ ನಿರಂತರವಾಗಿರಲಿ ಎನ್ನುತ್ತಾರೆ ರೈತರು.

ಇದನ್ನೂ ಓದಿ: ಶಾಲೆಯಲ್ಲಿ ಉದ್ಯಾನ ನಿರ್ಮಿಸಿ ಬಾನಾಡಿಗಳ ಬಾಯಾರಿಕೆ ತೀರಿಸುತ್ತಿರುವ ಸರ್ಕಾರಿ ಶಾಲಾ ಶಿಕ್ಷಕಿ - garden at school

Last Updated : Apr 2, 2024, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.