ETV Bharat / state

ಹಾಸನ ಪೆನ್​ಡ್ರೈವ್ ಪ್ರಕರಣದ ತನಿಖೆಯಿಂದ ನಿಜ ಸಂಗತಿ ಬಯಲಾಗಲಿದೆ: ವಿನಯ್​ ಕುಲಕರ್ಣಿ - Hasan pen drive case

ಪೆನ್​ಡ್ರೈವ್ ಪ್ರಕರಣವನ್ನು ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ನಾವು ಅಭಿವೃದ್ಧಿ ಹೇಳಿ ಮತ ಕೇಳುತ್ತಿದ್ದೇವೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.

author img

By ETV Bharat Karnataka Team

Published : May 1, 2024, 6:37 PM IST

Updated : May 1, 2024, 11:06 PM IST

Former minister Vinaya Kulkarni spoke to the media.
ಮಾಜಿ ಸಚಿವ ವಿನಯ ಕುಲಕರ್ಣಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿದರು.

ಹಾವೇರಿ: ಮಹಿಳೆಯರ ಮೇಲೆ ದೌರ್ಜನ್ಯದ ಕೃತ್ಯ ಆಗಿದ್ದು ನಿಜ ಅಲ್ವಾ. ಆ ಹೆಣ್ಣುಮಕ್ಕಳ ಪರಿಸ್ಥಿತಿ ಏನು ಎಂದು ಮಾಜಿ ಸಚಿವ ವಿನಯ್​ ಕುಲಕರ್ಣಿ ಪ್ರಶ್ನಿಸಿದ್ದಾರೆ.

ಹಾವೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ವಿಚಾರ ಮಾಡಬೇಕು. ಜರ್ಮನಿಗೆ ಹೋಗಲು ಒಂದೇ ದಿನದಲ್ಲಿ ಹೇಗೆ ವೀಸಾ ಸಿಕ್ಕಿತು. ಈ ವಿಚಾರವನ್ನು ಚುನಾವಣೆಗಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಅಭಿವೃದ್ಧಿ ಹೇಳಿ ಮತ ಕೇಳುತ್ತಿದ್ದೇವೆ ಎಂದು ತಿಳಿಸಿದರು.

''ಆ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು‌. ಎಷ್ಟು ಮಹಿಳೆಯರಿಗೆ ಫ್ಯಾಮಿಲಿ ಇದೆ ಅವರ ಪರಿಸ್ಥಿತಿ ಏನು?.
ಪ್ರಜ್ವಲ ರೇವಣ್ಣ ಯಾಕೆ ವಿಡಿಯೋ ಮಾಡಿಕೊಂಡ, ಹೇಗೆ ಮಾಡಿಕೊಂಡ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖಾ ವರದಿ ಬಂದ ಮೇಲೆ ಎಲ್ಲ ಗೊತ್ತಾಗಲಿದೆ'' ಎಂದರು.

ರಾಜ್ಯ ಸರ್ಕಾರದ ಕುರಿತು ಆರೋಪ ಮಾಡಿರುವ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಮಾತು ಎಂದರೆ ಹುಚ್ಚನ ಕೈಯಲ್ಲಿ ಕಲ್ಲು ಕೊಟ್ಟಂತೆ ಎಂದು ವ್ಯಂಗ್ಯವಾಡಿದರು. ಅವರು ತಮ್ಮ ಪಕ್ಷದವರ ಮೇಲೆ ಬೀಸುತ್ತಾರೆಯೋ ಹಾಗೇ ನಮ್ಮ ಮೇಲೂ ಬೀಸುತ್ತಾರೆ ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ: ಪ್ರಧಾನಿ ನರೇಂದ್ರ ಮೋದಿ 10 ವರ್ಷ ಏನು ಅಭಿವೃದ್ಧಿ ಮಾಡಿದ್ದಾರೆ. ವಾಹನ ಟ್ಯಾಕ್ಸ್​ಗಾಗಿ ಹೈವೇ ಟ್ಯಾಕ್ಸ್ ಕೊಡುತ್ತೇವೆ. ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ ಆಗುತ್ತಿದೆ ಎಂದು ಕುಲಕರ್ಣಿ ಆರೋಪಿಸಿದರು.

ಇದನ್ನೂಓದಿ:ಹಾಸನ‌ ಪೆನ್ ಡ್ರೈವ್ ಪ್ರಕರಣ ಖಂಡಿಸಿ ಬೆಂಗಳೂರಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ - Hassan Pen Drive Case

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿದರು.

ಹಾವೇರಿ: ಮಹಿಳೆಯರ ಮೇಲೆ ದೌರ್ಜನ್ಯದ ಕೃತ್ಯ ಆಗಿದ್ದು ನಿಜ ಅಲ್ವಾ. ಆ ಹೆಣ್ಣುಮಕ್ಕಳ ಪರಿಸ್ಥಿತಿ ಏನು ಎಂದು ಮಾಜಿ ಸಚಿವ ವಿನಯ್​ ಕುಲಕರ್ಣಿ ಪ್ರಶ್ನಿಸಿದ್ದಾರೆ.

ಹಾವೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರ ಬಗ್ಗೆ ವಿಚಾರ ಮಾಡಬೇಕು. ಜರ್ಮನಿಗೆ ಹೋಗಲು ಒಂದೇ ದಿನದಲ್ಲಿ ಹೇಗೆ ವೀಸಾ ಸಿಕ್ಕಿತು. ಈ ವಿಚಾರವನ್ನು ಚುನಾವಣೆಗಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಅಭಿವೃದ್ಧಿ ಹೇಳಿ ಮತ ಕೇಳುತ್ತಿದ್ದೇವೆ ಎಂದು ತಿಳಿಸಿದರು.

''ಆ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು‌. ಎಷ್ಟು ಮಹಿಳೆಯರಿಗೆ ಫ್ಯಾಮಿಲಿ ಇದೆ ಅವರ ಪರಿಸ್ಥಿತಿ ಏನು?.
ಪ್ರಜ್ವಲ ರೇವಣ್ಣ ಯಾಕೆ ವಿಡಿಯೋ ಮಾಡಿಕೊಂಡ, ಹೇಗೆ ಮಾಡಿಕೊಂಡ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ತನಿಖಾ ವರದಿ ಬಂದ ಮೇಲೆ ಎಲ್ಲ ಗೊತ್ತಾಗಲಿದೆ'' ಎಂದರು.

ರಾಜ್ಯ ಸರ್ಕಾರದ ಕುರಿತು ಆರೋಪ ಮಾಡಿರುವ ಯತ್ನಾಳ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಮಾತು ಎಂದರೆ ಹುಚ್ಚನ ಕೈಯಲ್ಲಿ ಕಲ್ಲು ಕೊಟ್ಟಂತೆ ಎಂದು ವ್ಯಂಗ್ಯವಾಡಿದರು. ಅವರು ತಮ್ಮ ಪಕ್ಷದವರ ಮೇಲೆ ಬೀಸುತ್ತಾರೆಯೋ ಹಾಗೇ ನಮ್ಮ ಮೇಲೂ ಬೀಸುತ್ತಾರೆ ಎಂದು ತಿರುಗೇಟು ನೀಡಿದರು.

ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ: ಪ್ರಧಾನಿ ನರೇಂದ್ರ ಮೋದಿ 10 ವರ್ಷ ಏನು ಅಭಿವೃದ್ಧಿ ಮಾಡಿದ್ದಾರೆ. ವಾಹನ ಟ್ಯಾಕ್ಸ್​ಗಾಗಿ ಹೈವೇ ಟ್ಯಾಕ್ಸ್ ಕೊಡುತ್ತೇವೆ. ಅಭಿವೃದ್ಧಿ ನೆಪದಲ್ಲಿ ಹಣ ಲೂಟಿ ಆಗುತ್ತಿದೆ ಎಂದು ಕುಲಕರ್ಣಿ ಆರೋಪಿಸಿದರು.

ಇದನ್ನೂಓದಿ:ಹಾಸನ‌ ಪೆನ್ ಡ್ರೈವ್ ಪ್ರಕರಣ ಖಂಡಿಸಿ ಬೆಂಗಳೂರಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ - Hassan Pen Drive Case

Last Updated : May 1, 2024, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.