ETV Bharat / state

ತುಮಕೂರು: ₹3 ಲಕ್ಷ ಮೌಲ್ಯದ ಒಡವೆ ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ - gold ornaments bag returned

author img

By ETV Bharat Karnataka Team

Published : Jun 5, 2024, 8:19 PM IST

ಪ್ರಯಾಣಿಕರೊಬ್ಬರು ಬಸ್​ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಒಡವೆಯನ್ನು ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ
ಒಡವೆಯನ್ನು ಹಿಂತಿರುಗಿಸಿ ಮಾದರಿಯಾದ ಕಂಡಕ್ಟರ್, ಚಾಲಕ (ETV Bharat)

ತುಮಕೂರು: ಬಸ್​ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆಯನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಬಸ್​ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಒಡವೆ ಹಿಂತಿರುಗಿಸಿದ ಕೆಜಿಎಫ್ ಘಟಕದ ಕಂಡಕ್ಟರ್​ ಕಲ್ಲಪ್ಪ ಹನುಮಂತ್ ಕವಣಿ ಮತ್ತು ಚಾಲಕ ಸಂತೋಷ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದೋನಿಯಿಂದ ಪ್ರಯಾಣಿಸಿದ್ದ ಪ್ರಮೀಳಾ ಎಂಬವರು ಬಳ್ಳಾರಿಯಲ್ಲಿ ತಮ್ಮ ಬ್ಯಾಗ್​ಅನ್ನು ಬಸ್​ನಲ್ಲೇ ಬಿಟ್ಟು ಇಳಿದಿದ್ದರು. ಬಸ್​ನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಕಂಡಕ್ಟರ್​ ಹಾಗೂ ಚಾಲಕ, ಶಿರಾ ಘಟಕಕ್ಕೆ ಬಂದು ಘಟಕದ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಹೊಸಪೇಟೆ, ಬಳ್ಳಾರಿ ಹಾಗೂ ಶಿರಾ ಡಿಪೋಗಳ ಮುಖ್ಯಸ್ಥರ ಸಹಕಾರದಿಂದ ಶಿರಾ ಘಟಕದಲ್ಲಿ ತಮ್ಮ ಬ್ಯಾಗ್​ ಇರುವ ಮಾಹಿತಿ ಪ್ರಮೀಳಾ ಅವರಿಗೆ ಸಿಕ್ಕಿದೆ. ಬಳಿಕ ಅವರು ಶಿರಾಕ್ಕೆ ಆಗಮಿಸಿ ತಮ್ಮ ಆಭರಣಗಳಿರುವ ಬ್ಯಾಗ್ ಸ್ವೀಕರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತುಮಕೂರು: ಬಸ್​ನಲ್ಲಿ ಬಿಟ್ಟು ಹೋಗಿದ್ದ 3 ಲಕ್ಷ ರೂ. ಮೌಲ್ಯದ ಒಡವೆಯನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಕಂಡಕ್ಟರ್ ಹಾಗೂ ಬಸ್​ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಒಡವೆ ಹಿಂತಿರುಗಿಸಿದ ಕೆಜಿಎಫ್ ಘಟಕದ ಕಂಡಕ್ಟರ್​ ಕಲ್ಲಪ್ಪ ಹನುಮಂತ್ ಕವಣಿ ಮತ್ತು ಚಾಲಕ ಸಂತೋಷ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅದೋನಿಯಿಂದ ಪ್ರಯಾಣಿಸಿದ್ದ ಪ್ರಮೀಳಾ ಎಂಬವರು ಬಳ್ಳಾರಿಯಲ್ಲಿ ತಮ್ಮ ಬ್ಯಾಗ್​ಅನ್ನು ಬಸ್​ನಲ್ಲೇ ಬಿಟ್ಟು ಇಳಿದಿದ್ದರು. ಬಸ್​ನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಕಂಡಕ್ಟರ್​ ಹಾಗೂ ಚಾಲಕ, ಶಿರಾ ಘಟಕಕ್ಕೆ ಬಂದು ಘಟಕದ ಮುಖ್ಯಸ್ಥರಿಗೆ ವಿಷಯ ತಿಳಿಸಿದ್ದಾರೆ. ನಂತರ ಹೊಸಪೇಟೆ, ಬಳ್ಳಾರಿ ಹಾಗೂ ಶಿರಾ ಡಿಪೋಗಳ ಮುಖ್ಯಸ್ಥರ ಸಹಕಾರದಿಂದ ಶಿರಾ ಘಟಕದಲ್ಲಿ ತಮ್ಮ ಬ್ಯಾಗ್​ ಇರುವ ಮಾಹಿತಿ ಪ್ರಮೀಳಾ ಅವರಿಗೆ ಸಿಕ್ಕಿದೆ. ಬಳಿಕ ಅವರು ಶಿರಾಕ್ಕೆ ಆಗಮಿಸಿ ತಮ್ಮ ಆಭರಣಗಳಿರುವ ಬ್ಯಾಗ್ ಸ್ವೀಕರಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಹಾವೇರಿಯ ಹೆಗ್ಗೇರಿ ಕೆರೆಗಾಗಿ ಬದುಕನ್ನೇ ಮುಡಿಪಿಟ್ಟ ಈ ಪರಿಸರಪ್ರೇಮಿಗೊಂದು ಸೆಲ್ಯೂಟ್! - World Environment Day

ETV Bharat Logo

Copyright © 2024 Ushodaya Enterprises Pvt. Ltd., All Rights Reserved.