ETV Bharat / state

ಮೈಸೂರು ಜಂಬೂ ಸವಾರಿಗೆ ಗಜಪಡೆ ರೆಡಿ: ಮಾಜಿ ಕ್ಯಾಪ್ಟನ್​ ಅರ್ಜುನ ಸ್ಥಾನ ತುಂಬಿದ ಧನಂಜಯ - Gajapade Final weight test

ದಸರಾದ ಜಂಬೂಸವಾರಿಗೆ ಗಜಪಡೆ ಸಿದ್ಧವಾಗಿದ್ದು ಇಂದು ಅಂತಿಮ ತೂಕ ಪರೀಕ್ಷೆ ಮಾಡಲಾಗಿದೆ. ಗಜಪಡೆಯ ಹಿಂದಿನ ಹಾಗೂ ಈಗಿನ ತೂಕ ವಿವರ ಹೀಗಿದೆ.

author img

By ETV Bharat Karnataka Team

Published : 3 hours ago

ಮೈಸೂರು ಜಂಬೂ ಸವಾರಿಗೆ ಗಜಪಡೆ ರೆಡಿ
ಮೈಸೂರು ಜಂಬೂ ಸವಾರಿಗೆ ಗಜಪಡೆ ರೆಡಿ (ETV Bharat)

ಮೈಸೂರು: ನಾಡ ಹಬ್ಬ ದಸರಾದ ಜಂಬೂಸವಾರಿಗೆ ಗಜಪಡೆ ಸನ್ನದ್ಧವಾಗಿದ್ದು ಅಂತಿಮ ತೂಕ ಪರೀಕ್ಷೆ ನಡೆಸಲಾಗಿದೆ. ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಅಭಿಮನ್ಯು ಮೊದಲ ಸ್ಥಾನ ಪಡೆದಿದ್ದಾನೆ.

ಇಂದು ದಸರಾ ಜಂಬೂಸವಾರಿ ಹಿನ್ನೆಲೆ ನಡೆಸಿರುವ ಗಜಪಡೆಯ ಅಂತಿಮ ತೂಕ ಪರೀಕ್ಷೆಯಲ್ಲಿ ಅಭಿಮನ್ಯು ಅತಿ ತೂಕದ ಆನೆಯಾಗಿ ಮೊದಲ ಸ್ಥಾನ ಪಡೆದಿದೆ. ಈ ಬಾರಿಯ ಜಂಬೂಸವಾರಿಯಲ್ಲಿ ನಿಶಾನೆಯಾನೆಯಾಗಿ ಅರ್ಜುನನ ಸ್ಥಾನವನ್ನು ಧನಂಜಯ, ನೌಪಥ್‌ ಆನೆಯಾಗಿ ಗೋಪಿ ಆಯ್ಕೆಯಾಗಿದೆ. ಒಟ್ಟು 9 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮೀ ಆನೆಗಳಿದ್ದರೆ, ಚಿನ್ನದ ಅಂಬಾರಿಯನ್ನು ಅಭಿಮನ್ಯು ಈ ಬಾರಿ ಹೊರಲಿದ್ದಾನೆ ಎಂದು ಡಿಸಿಎಫ್‌ ಪ್ರಭುಗೌಡ ಮಾಹಿತಿ ನೀಡಿದರು.

ಡಿಸಿಎಫ್‌ ಪ್ರಭುಗೌಡ ಮಾಹಿತಿ (ETV Bharat)

ಇಂದು ಗಜಪಡೆಯ ಅಂತಿಮ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿದೆ. ಅತಿ ಹೆಚ್ಚು ತೂಕವನ್ನು ಅಂಬಾರಿ ಕ್ಯಾಪ್ಟನ್‌ ಅಭಿಮನ್ಯು ಹೊಂದಿದ್ದಾನೆ. ಹಾಗೇ ಅತಿ ಕಡಿಮೆ ತೂಕವನ್ನು ಕುಮ್ಕಿ ಆನೆ ಲಕ್ಷ್ಮೀ ಹೊಂದಿದೆ. ಅರಮನೆಗೆ ಬಂದ ನಂತರ ಭೀಮಾ ಆನೆ 435 ಕೆಜಿ ಹಾಗೂ ಏಕಲವ್ಯ 364 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

ಆನೆಗಳ ತೂಕ ಪರೀಕ್ಷೆ ವಿವರ ಇಂತಿವೆ:

ಹಳೆಯ ತೂಕ ಪರೀಕ್ಷೆ ಮಾಹಿತಿ :

ಅಭಿಮನ್ಯು 5,560
ಭೀಮ4,945
ಏಕಲವ್ಯ4,730
ಕಂಜನ್4,515
ಧನಂಜಯ5,155
ಲಕ್ಷ್ಮೀ2,480
ವರಲಕ್ಷ್ಮಿ3,495
ರೋಹಿತ3,625
ಗೋಪಿ4,970
ಪ್ರಶಾಂತ4,875
ಹಿರಣ್ಯ2,930
ಮಹೇಂದ್ರ4,910
ಸುಗ್ರೀವ5,190
ದೊಡ್ಡ ಹರವೆ ಲಕ್ಷ್ಮಿ3,485

ಹೊಸ ತೂಕ ಪರೀಕ್ಷೆ ಮಾಹಿತಿ :

ಅಭಿಮನ್ಯು 5820
ಭೀಮ 5545
ಏಕಲವ್ಯ5380
ಕಂಜನ್​5280
ಧನಂಜಯ5255
ಲಕ್ಷ್ಮೀ2625
ವರಲಕ್ಷ್ಮಿ5150
ರೋಹಿತ5095
ಗೋಪಿ4725
ಪ್ರಶಾಂತ3930
ಹಿರಣ್ಯ3570
ಮಹೇಂದ್ರ3555
ಸುಗ್ರೀವ3160
ದೊಡ್ಡ ಹರವೆ ಲಕ್ಷ್ಮಿ2625

ಶ್ರೀರಂಗಪಟ್ಟಣ ದಸರಾದಲ್ಲಿ ಲಕ್ಷ್ಮೀ ಆನೆ ವಿಚಲಿತವಾಗಲು ಕಾರಣ: ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಆನೆಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಲಕ್ಷ್ಮೀ ಆನೆಯನ್ನು ಲಾರಿ ಹತ್ತಿಸಲು ಮುಂದಾದಾಗ, ಆ ಆನೆ ವಿಚಲಿತಗೊಂಡಿತು. ಬಳಿಕ ಕಾವಾಡಿ, ಮಾವುತರು ಸಂಪೂರ್ಣವಾಗಿ ನಿಯಂತ್ರ ಮಾಡಿ, ಲಾರಿ ಹತ್ತಿಸಿದ್ದಾರೆ. ಲಕ್ಷ್ಮೀ ಆನೆಯೂ ಸಹ ಜಂಬೂ ಸವಾರಿಯಲ್ಲಿ ಭಾಗವಹಿಸಲಿದೆ ಎಂದು ಡಿಸಿಎಫ್‌ ಪ್ರಭುಗೌಡ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು ದಸರಾ: ಯೋಗ ಸರಪಳಿಯಲ್ಲಿ 4000ಕ್ಕೂ ಅಧಿಕ ಜನರು ಭಾಗಿ - Yoga In Mysuru Dasara

ಮೈಸೂರು: ನಾಡ ಹಬ್ಬ ದಸರಾದ ಜಂಬೂಸವಾರಿಗೆ ಗಜಪಡೆ ಸನ್ನದ್ಧವಾಗಿದ್ದು ಅಂತಿಮ ತೂಕ ಪರೀಕ್ಷೆ ನಡೆಸಲಾಗಿದೆ. ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಅಭಿಮನ್ಯು ಮೊದಲ ಸ್ಥಾನ ಪಡೆದಿದ್ದಾನೆ.

ಇಂದು ದಸರಾ ಜಂಬೂಸವಾರಿ ಹಿನ್ನೆಲೆ ನಡೆಸಿರುವ ಗಜಪಡೆಯ ಅಂತಿಮ ತೂಕ ಪರೀಕ್ಷೆಯಲ್ಲಿ ಅಭಿಮನ್ಯು ಅತಿ ತೂಕದ ಆನೆಯಾಗಿ ಮೊದಲ ಸ್ಥಾನ ಪಡೆದಿದೆ. ಈ ಬಾರಿಯ ಜಂಬೂಸವಾರಿಯಲ್ಲಿ ನಿಶಾನೆಯಾನೆಯಾಗಿ ಅರ್ಜುನನ ಸ್ಥಾನವನ್ನು ಧನಂಜಯ, ನೌಪಥ್‌ ಆನೆಯಾಗಿ ಗೋಪಿ ಆಯ್ಕೆಯಾಗಿದೆ. ಒಟ್ಟು 9 ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮೀ ಆನೆಗಳಿದ್ದರೆ, ಚಿನ್ನದ ಅಂಬಾರಿಯನ್ನು ಅಭಿಮನ್ಯು ಈ ಬಾರಿ ಹೊರಲಿದ್ದಾನೆ ಎಂದು ಡಿಸಿಎಫ್‌ ಪ್ರಭುಗೌಡ ಮಾಹಿತಿ ನೀಡಿದರು.

ಡಿಸಿಎಫ್‌ ಪ್ರಭುಗೌಡ ಮಾಹಿತಿ (ETV Bharat)

ಇಂದು ಗಜಪಡೆಯ ಅಂತಿಮ ತೂಕ ಪರೀಕ್ಷೆ ಮಾಡಲಾಗಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿದೆ. ಅತಿ ಹೆಚ್ಚು ತೂಕವನ್ನು ಅಂಬಾರಿ ಕ್ಯಾಪ್ಟನ್‌ ಅಭಿಮನ್ಯು ಹೊಂದಿದ್ದಾನೆ. ಹಾಗೇ ಅತಿ ಕಡಿಮೆ ತೂಕವನ್ನು ಕುಮ್ಕಿ ಆನೆ ಲಕ್ಷ್ಮೀ ಹೊಂದಿದೆ. ಅರಮನೆಗೆ ಬಂದ ನಂತರ ಭೀಮಾ ಆನೆ 435 ಕೆಜಿ ಹಾಗೂ ಏಕಲವ್ಯ 364 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

ಆನೆಗಳ ತೂಕ ಪರೀಕ್ಷೆ ವಿವರ ಇಂತಿವೆ:

ಹಳೆಯ ತೂಕ ಪರೀಕ್ಷೆ ಮಾಹಿತಿ :

ಅಭಿಮನ್ಯು 5,560
ಭೀಮ4,945
ಏಕಲವ್ಯ4,730
ಕಂಜನ್4,515
ಧನಂಜಯ5,155
ಲಕ್ಷ್ಮೀ2,480
ವರಲಕ್ಷ್ಮಿ3,495
ರೋಹಿತ3,625
ಗೋಪಿ4,970
ಪ್ರಶಾಂತ4,875
ಹಿರಣ್ಯ2,930
ಮಹೇಂದ್ರ4,910
ಸುಗ್ರೀವ5,190
ದೊಡ್ಡ ಹರವೆ ಲಕ್ಷ್ಮಿ3,485

ಹೊಸ ತೂಕ ಪರೀಕ್ಷೆ ಮಾಹಿತಿ :

ಅಭಿಮನ್ಯು 5820
ಭೀಮ 5545
ಏಕಲವ್ಯ5380
ಕಂಜನ್​5280
ಧನಂಜಯ5255
ಲಕ್ಷ್ಮೀ2625
ವರಲಕ್ಷ್ಮಿ5150
ರೋಹಿತ5095
ಗೋಪಿ4725
ಪ್ರಶಾಂತ3930
ಹಿರಣ್ಯ3570
ಮಹೇಂದ್ರ3555
ಸುಗ್ರೀವ3160
ದೊಡ್ಡ ಹರವೆ ಲಕ್ಷ್ಮಿ2625

ಶ್ರೀರಂಗಪಟ್ಟಣ ದಸರಾದಲ್ಲಿ ಲಕ್ಷ್ಮೀ ಆನೆ ವಿಚಲಿತವಾಗಲು ಕಾರಣ: ಶ್ರೀರಂಗಪಟ್ಟಣ ದಸರಾದಲ್ಲಿ ಮಹೇಂದ್ರ, ಲಕ್ಷ್ಮೀ, ಹಿರಣ್ಯ ಆನೆಗಳು ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಲಕ್ಷ್ಮೀ ಆನೆಯನ್ನು ಲಾರಿ ಹತ್ತಿಸಲು ಮುಂದಾದಾಗ, ಆ ಆನೆ ವಿಚಲಿತಗೊಂಡಿತು. ಬಳಿಕ ಕಾವಾಡಿ, ಮಾವುತರು ಸಂಪೂರ್ಣವಾಗಿ ನಿಯಂತ್ರ ಮಾಡಿ, ಲಾರಿ ಹತ್ತಿಸಿದ್ದಾರೆ. ಲಕ್ಷ್ಮೀ ಆನೆಯೂ ಸಹ ಜಂಬೂ ಸವಾರಿಯಲ್ಲಿ ಭಾಗವಹಿಸಲಿದೆ ಎಂದು ಡಿಸಿಎಫ್‌ ಪ್ರಭುಗೌಡ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು ದಸರಾ: ಯೋಗ ಸರಪಳಿಯಲ್ಲಿ 4000ಕ್ಕೂ ಅಧಿಕ ಜನರು ಭಾಗಿ - Yoga In Mysuru Dasara

ETV Bharat Logo

Copyright © 2024 Ushodaya Enterprises Pvt. Ltd., All Rights Reserved.