ETV Bharat / state

ಗದಗ ಭೀಕರ ಅಪಘಾತ: ಮಗ-ಸೊಸೆ, ಮೊಮ್ಮಕ್ಕಳ ಸಾವು ತಿಳಿಯದೇ ದಾರಿ ಕಾಯುತ್ತಿದ್ದಾರೆ ವೃದ್ಧ ದಂಪತಿ - Gadag accident

author img

By ETV Bharat Karnataka Team

Published : Aug 18, 2024, 1:31 PM IST

ಇಂದು ಗದಗದಲ್ಲಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ ಇದರ ಅರಿವೇ ಇಲ್ಲದ ಮೃತರ ತಂದೆ-ತಾಯಿಯ ಕಣ್ಣುಗಳು ಮಕ್ಕಳ ಬರುವಿಕೆಗಾಗಿ ಹಾತೊರೆಯುತ್ತಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಮಗಳು, ತಾಯಿ, ತಂದೆ, ಮಗ
ಅಪಘಾತದಲ್ಲಿ ಸಾವನ್ನಪ್ಪಿದ ಮಗಳು, ತಾಯಿ, ತಂದೆ, ಮಗ (ETV Bharat)

ಹಾವೇರಿ: ಗದಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ ಕುಟುಂಬದ ಆಧಾರಸ್ತಂಭಗಳನ್ನೇ ಬಲಿ ಪಡೆದಿದೆ. ಭೀಕರ ಅಪಘಾತದಲ್ಲಿ ಮರಣ ಹೊಂದಿರುವ ಮೃತರ ತಂದೆ-ತಾಯಿಗೆ ಮಗ-ಸೊಸೆ, ಮೊಮ್ಮಕ್ಕಳು ಸಾವನ್ನಪ್ಪಿರುವ ವಿಚಾರವನ್ನು ತಿಳಿಸದೇ ಮರೆಮಾಚಲಾಗಿದೆ. ಈ ವಿಚಾರ ಗೊತ್ತಾದರೆ ಹಿರಿಯ ಜೀವಗಳಿಗೂ ಅಪಾಯವಾಗಬಹುದು ಎಂಬ ದೃಷ್ಟಿಯಿಂದ ಈ ವಿಷಯವನ್ನು ತಿಳಿಸಿಲ್ಲ ಎನ್ನಲಾಗ್ತಿದೆ.

ಹೌದು, ಇಂದು ಬೆಳಗ್ಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಬಸ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಹಾವೇರಿ ನಗರದ ದಂಪತಿ ರುದ್ರಪ್ಪ ಅಂಗಡಿ (55), ಪತ್ನಿ ರಾಜೇಶ್ವರಿ (45) ಹಾಗೂ ಅವರ ಮಗಳು ಐಶ್ವರ್ಯ (16) ಮತ್ತು ಮಗ ವಿಜಯ (12) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ತಂದೆ-ತಾಯಿಗೆ ವಿಚಾರ ತಿಳಿಸದ ಕುಟಂಬಸ್ಥರು: ಯಜಮಾನ ರುದ್ರಪ್ಪ ಅಂಗಡಿ ಹಾವೇರಿಯ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮೃತ ರುದ್ರಪ್ಪ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಪಘಾತ ಘಟನೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಸ್ನೇಹಿತರು ರುದ್ರಪ್ಪ ಮನೆಗೆ ಆಗಮಿಸುತ್ತಿದ್ದಾರೆ. ಮನೆಯಲ್ಲಿ ರುದ್ರಪ್ಪ ತಂದೆ-ತಾಯಿ ಇದ್ದು, ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅಪಘಾತದ ವಿಷಯ ತಂದೆ-ತಾಯಿಗೆ ಇನ್ನೂ ತಿಳಿಸಿಲ್ಲ.

ಸುದ್ದಿ ತಿಳಿಯದೆ ಮಕ್ಕಳು, ಮೊಮ್ಮಕ್ಕಳ ದಾರಿ ಕಾಯುತ್ತಿರುವ ವೃದ್ಧ ದಂಪತಿ: ಕಲ್ಲಾಪೂರ ಬಸವೇಶ್ವರ ದೇವಸ್ಥಾನ ಜಾತ್ರೆಗೆ ತೆರಳಿದ್ದು ಮರಳಿ ಬರುತ್ತಾರೆ ಎಂದು ದಾರಿ ಕಾಯುತ್ತಿರುವ ಆ ಹಿರಿಯ ಜೀವಗಳಿಗೆ ಮಕ್ಕಳು, ಮೊಮ್ಮಕ್ಕಳು ಇನ್ನಿಲ್ಲ ಎಂಬ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂಬ ಆತಂಕ ಕುಟುಂಬಸ್ಥರಿಗೆ ಕಾಡುತ್ತಿದೆ. ತಮಗೆ ಕೊಳ್ಳಿ ಇಡಬೇಕಾಗಿದ್ದ ಮಕ್ಕಳಿಗೇ ಈಗ ಪೋಷಕರೇ ಮೋಕ್ಷ ನೀಡುವಂತಾಗಿದೆ. ದೇವರ ದರ್ಶನ ಪಡೆದು ಮನೆಗೆ ವಾಪಸ್​ ಆಗಬೇಕಿದ್ದ ಕುಟುಂಬದ ನಾಲ್ವರು ಸದಸ್ಯರು ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.

ಇನ್ನು, ಈ ಮಧ್ಯೆ ಮರಣೋತ್ತರ ಪರೀಕ್ಷೆ ನಂತರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹಗಳನ್ನು ಹಾವೇರಿಗೆ ತರಲಾಗುತ್ತದೆ. ನಂತರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಗದಗ; ಕಾರಿನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬಕ್ಕೆ ಬಸ್​ ಡಿಕ್ಕಿ, ಒಂದೇ ಕುಟುಂಬದ ನಾಲ್ವರು ಸಾವು! - 4 people died in an accident

ಹಾವೇರಿ: ಗದಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತ ಕುಟುಂಬದ ಆಧಾರಸ್ತಂಭಗಳನ್ನೇ ಬಲಿ ಪಡೆದಿದೆ. ಭೀಕರ ಅಪಘಾತದಲ್ಲಿ ಮರಣ ಹೊಂದಿರುವ ಮೃತರ ತಂದೆ-ತಾಯಿಗೆ ಮಗ-ಸೊಸೆ, ಮೊಮ್ಮಕ್ಕಳು ಸಾವನ್ನಪ್ಪಿರುವ ವಿಚಾರವನ್ನು ತಿಳಿಸದೇ ಮರೆಮಾಚಲಾಗಿದೆ. ಈ ವಿಚಾರ ಗೊತ್ತಾದರೆ ಹಿರಿಯ ಜೀವಗಳಿಗೂ ಅಪಾಯವಾಗಬಹುದು ಎಂಬ ದೃಷ್ಟಿಯಿಂದ ಈ ವಿಷಯವನ್ನು ತಿಳಿಸಿಲ್ಲ ಎನ್ನಲಾಗ್ತಿದೆ.

ಹೌದು, ಇಂದು ಬೆಳಗ್ಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಬಳಿ ಬಸ್​ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕಾರಿನಲ್ಲಿದ್ದ ಹಾವೇರಿ ನಗರದ ದಂಪತಿ ರುದ್ರಪ್ಪ ಅಂಗಡಿ (55), ಪತ್ನಿ ರಾಜೇಶ್ವರಿ (45) ಹಾಗೂ ಅವರ ಮಗಳು ಐಶ್ವರ್ಯ (16) ಮತ್ತು ಮಗ ವಿಜಯ (12) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ತಂದೆ-ತಾಯಿಗೆ ವಿಚಾರ ತಿಳಿಸದ ಕುಟಂಬಸ್ಥರು: ಯಜಮಾನ ರುದ್ರಪ್ಪ ಅಂಗಡಿ ಹಾವೇರಿಯ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮೃತ ರುದ್ರಪ್ಪ ವಿದ್ಯುತ್ ಗುತ್ತಿಗೆದಾರರ ಸಂಘದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಪಘಾತ ಘಟನೆ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಸ್ನೇಹಿತರು ರುದ್ರಪ್ಪ ಮನೆಗೆ ಆಗಮಿಸುತ್ತಿದ್ದಾರೆ. ಮನೆಯಲ್ಲಿ ರುದ್ರಪ್ಪ ತಂದೆ-ತಾಯಿ ಇದ್ದು, ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಅಪಘಾತದ ವಿಷಯ ತಂದೆ-ತಾಯಿಗೆ ಇನ್ನೂ ತಿಳಿಸಿಲ್ಲ.

ಸುದ್ದಿ ತಿಳಿಯದೆ ಮಕ್ಕಳು, ಮೊಮ್ಮಕ್ಕಳ ದಾರಿ ಕಾಯುತ್ತಿರುವ ವೃದ್ಧ ದಂಪತಿ: ಕಲ್ಲಾಪೂರ ಬಸವೇಶ್ವರ ದೇವಸ್ಥಾನ ಜಾತ್ರೆಗೆ ತೆರಳಿದ್ದು ಮರಳಿ ಬರುತ್ತಾರೆ ಎಂದು ದಾರಿ ಕಾಯುತ್ತಿರುವ ಆ ಹಿರಿಯ ಜೀವಗಳಿಗೆ ಮಕ್ಕಳು, ಮೊಮ್ಮಕ್ಕಳು ಇನ್ನಿಲ್ಲ ಎಂಬ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಎಂಬ ಆತಂಕ ಕುಟುಂಬಸ್ಥರಿಗೆ ಕಾಡುತ್ತಿದೆ. ತಮಗೆ ಕೊಳ್ಳಿ ಇಡಬೇಕಾಗಿದ್ದ ಮಕ್ಕಳಿಗೇ ಈಗ ಪೋಷಕರೇ ಮೋಕ್ಷ ನೀಡುವಂತಾಗಿದೆ. ದೇವರ ದರ್ಶನ ಪಡೆದು ಮನೆಗೆ ವಾಪಸ್​ ಆಗಬೇಕಿದ್ದ ಕುಟುಂಬದ ನಾಲ್ವರು ಸದಸ್ಯರು ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ.

ಇನ್ನು, ಈ ಮಧ್ಯೆ ಮರಣೋತ್ತರ ಪರೀಕ್ಷೆ ನಂತರ ಮಧ್ಯಾಹ್ನ 2 ಗಂಟೆ ವೇಳೆಗೆ ಮೃತದೇಹಗಳನ್ನು ಹಾವೇರಿಗೆ ತರಲಾಗುತ್ತದೆ. ನಂತರ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಗದಗ; ಕಾರಿನಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಕುಟುಂಬಕ್ಕೆ ಬಸ್​ ಡಿಕ್ಕಿ, ಒಂದೇ ಕುಟುಂಬದ ನಾಲ್ವರು ಸಾವು! - 4 people died in an accident

ETV Bharat Logo

Copyright © 2024 Ushodaya Enterprises Pvt. Ltd., All Rights Reserved.