ETV Bharat / state

ಮಂಗಳೂರು: ಟ್ರೇಡಿಂಗ್ ಕಂಪನಿಯಲ್ಲಿ ಮಹಿಳಾ ಅಕೌಂಟೆಂಟ್​ನಿಂದ ವಂಚನೆ ಆರೋಪ - Fraud Case

author img

By ETV Bharat Karnataka Team

Published : Aug 28, 2024, 7:39 PM IST

ಮಹಿಳಾ ಅಕೌಂಟೆಂಟ್​ವೊಬ್ಬರು ತಾನು ಸೇವೆ ಸಲ್ಲಿಸುತ್ತಿದ್ದ ಖಾಸಗಿ ಟ್ರೇಡಿಂಗ್​ ಕಂಪನಿಗೆಯೇ ಮೋಸ ಮಾಡಿದ್ದಾರೆ. ಬರೋಬ್ಬರಿ ಮೂರು ವರ್ಷದ ಬಳಿಕ ಪರಿಶೀಲನೆ ವೇಳೆ ಈ ಕೃತ್ಯ ಬಯಲಾಗಿದೆ. ಇದೀಗ ಅಕೌಂಟೆಂಟ್​ ವಿರುದ್ಧ ದೂರು ದಾಖಲಾಗಿದೆ.

FRAUD CASE
ಸಂಗ್ರಹ ಚಿತ್ರ (ETV Bharat)

ಮಂಗಳೂರು: ಖಾಸಗಿ ಟ್ರೇಡಿಂಗ್ ಕಂಪನಿಯಲ್ಲಿನ ಮಹಿಳಾ ಅಕೌಂಟೆಂಟ್​ 48 ಲಕ್ಷ ರೂ. ಹಣಕಾಸು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಮಾಲೀಕ ಕಾವೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಕಂಪನಿಯ ಹಣಕಾಸು ವ್ಯವಹಾರಗಳನ್ನು ಅಕೌಂಟೆಂಟ್ ಪುಷ್ಪಲತಾ ನೋಡಿಕೊಳ್ಳುತ್ತಿದ್ದರು. ಆಗಸ್ಟ್ 23ರಂದು, ಮಾಲೀಕರು ಮತ್ತು ಆಡಿಟರ್ ಸದಾನಂದ ಅವರು ಕಂಪನಿಯ ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆ ನಡೆಸಿದರು. ಈ ಪರಿಶೀಲನೆಯ ವೇಳೆ, ಕಳೆದ ಮೂರು ವರ್ಷಗಳಿಂದ ದೊಡ್ಡ ಹಣಕಾಸು ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ.

ಪರಿಶೀಲನೆಯ ಪ್ರಕಾರ, 2024ರ ಜನವರಿ 11ರಿಂದ 2024ರ ಆಗಸ್ಟ್ 20ರ ವರೆಗೆ, ₹48,83,405 ಮೊತ್ತವನ್ನು ಕಂಪನಿಯ ಸೌತ್ ಇಂಡಿಯನ್ ಬ್ಯಾಂಕ್ ಖಾತೆಯಿಂದ ಅಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಹೆಚ್ಚಿನ ಪರಿಶೀಲನೆಯಿಂದ, ಪುಷ್ಪಲತಾ ಈ ಹಣವನ್ನು ತಮ್ಮ ಪರಿಚಯದ ರಿತೇಶ್ ಎಂಬಾತನ ಖಾತೆಗೆ ವರ್ಗಾಯಿಸಿದ್ದು, ನಂತರ ತಮ್ಮ ಸೌತ್ ಇಂಡಿಯನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ.

ಪುಷ್ಪಲತಾ ಕಂಪನಿಯ ಜಿ.ಎಸ್.ಟಿ ಪಾವತಿಗೆ ಮೀಸಲಾಗಿದ್ದ ₹48,83,405 ಮೊತ್ತವನ್ನು ತಮ್ಮ ಮತ್ತು ರಿತೇಶ್ ಅವರ ಖಾತೆಗೆ ವರ್ಗಾಯಿಸಿ, ವಿಶ್ವಾಸಘಾತುಕ ಮತ್ತು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಕಂಪನಿ ಉಲ್ಲೇಖಿಸಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹಳೇ ನೋಟು ಖರೀದಿ ಹೆಸರಲ್ಲಿ 63 ಲಕ್ಷ ರೂ. ವಂಚನೆ: ಹಣ ಕಳೆದುಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ! - HUBBALLI FRAUD CASE

ಮಂಗಳೂರು: ಖಾಸಗಿ ಟ್ರೇಡಿಂಗ್ ಕಂಪನಿಯಲ್ಲಿನ ಮಹಿಳಾ ಅಕೌಂಟೆಂಟ್​ 48 ಲಕ್ಷ ರೂ. ಹಣಕಾಸು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಂಪನಿಯ ಮಾಲೀಕ ಕಾವೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಕಂಪನಿಯ ಹಣಕಾಸು ವ್ಯವಹಾರಗಳನ್ನು ಅಕೌಂಟೆಂಟ್ ಪುಷ್ಪಲತಾ ನೋಡಿಕೊಳ್ಳುತ್ತಿದ್ದರು. ಆಗಸ್ಟ್ 23ರಂದು, ಮಾಲೀಕರು ಮತ್ತು ಆಡಿಟರ್ ಸದಾನಂದ ಅವರು ಕಂಪನಿಯ ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆ ನಡೆಸಿದರು. ಈ ಪರಿಶೀಲನೆಯ ವೇಳೆ, ಕಳೆದ ಮೂರು ವರ್ಷಗಳಿಂದ ದೊಡ್ಡ ಹಣಕಾಸು ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ.

ಪರಿಶೀಲನೆಯ ಪ್ರಕಾರ, 2024ರ ಜನವರಿ 11ರಿಂದ 2024ರ ಆಗಸ್ಟ್ 20ರ ವರೆಗೆ, ₹48,83,405 ಮೊತ್ತವನ್ನು ಕಂಪನಿಯ ಸೌತ್ ಇಂಡಿಯನ್ ಬ್ಯಾಂಕ್ ಖಾತೆಯಿಂದ ಅಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಹೆಚ್ಚಿನ ಪರಿಶೀಲನೆಯಿಂದ, ಪುಷ್ಪಲತಾ ಈ ಹಣವನ್ನು ತಮ್ಮ ಪರಿಚಯದ ರಿತೇಶ್ ಎಂಬಾತನ ಖಾತೆಗೆ ವರ್ಗಾಯಿಸಿದ್ದು, ನಂತರ ತಮ್ಮ ಸೌತ್ ಇಂಡಿಯನ್ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ.

ಪುಷ್ಪಲತಾ ಕಂಪನಿಯ ಜಿ.ಎಸ್.ಟಿ ಪಾವತಿಗೆ ಮೀಸಲಾಗಿದ್ದ ₹48,83,405 ಮೊತ್ತವನ್ನು ತಮ್ಮ ಮತ್ತು ರಿತೇಶ್ ಅವರ ಖಾತೆಗೆ ವರ್ಗಾಯಿಸಿ, ವಿಶ್ವಾಸಘಾತುಕ ಮತ್ತು ವಂಚನೆ ಮಾಡಿರುವುದಾಗಿ ದೂರಿನಲ್ಲಿ ಕಂಪನಿ ಉಲ್ಲೇಖಿಸಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹಳೇ ನೋಟು ಖರೀದಿ ಹೆಸರಲ್ಲಿ 63 ಲಕ್ಷ ರೂ. ವಂಚನೆ: ಹಣ ಕಳೆದುಕೊಂಡ ನಿವೃತ್ತ ಬ್ಯಾಂಕ್ ಉದ್ಯೋಗಿ! - HUBBALLI FRAUD CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.