ETV Bharat / state

ನಕಲಿ ವೆಬ್​ಸೈಟ್​ ಬಗ್ಗೆ ಎಚ್ಚರ ವಹಿಸಲು ಪ್ರವಾಸಿಗರಿಗೆ ಅರಣ್ಯಾಧಿಕಾರಿಗಳ ಸೂಚನೆ - Beware Of Fake Website

author img

By ETV Bharat Karnataka Team

Published : Jun 14, 2024, 3:38 PM IST

ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ರಿಸರ್ವೇಶನ್​ ಮಾಡಿಸಿಕೊಳ್ಳಿ ಅಥವಾ ಸಫಾರಿ ಕೆಂದ್ರಕ್ಕೆ ಬಂದು ಟಿಕೆಟ್​ ಖರೀದಿ ಮಾಡಿಕೊಳ್ಳಿ ಎಂದು ಪ್ರವಾಸಿಗರಿಗೆ ಡಿಸಿಎಫ್‌ ಹರ್ಷ ಕುಮಾರ್‌ ಚಿಕ್ಕನರಗುಂದ ತಿಳಿಸಿದ್ದಾರೆ.

Nagarahole Tiger Reserve
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ (ETV Bharat)

ಮೈಸೂರು: ಅರಣ್ಯ ಇಲಾಖೆಯ ಆನ್​ಲೈನ್‌ ರಿಸರ್ವೇಶನ್ ನಕಲಿ‌ ಖಾತೆ ತೆರೆದು ಪ್ರವಾಸಿಗರ ಹಣ ದೋಚುತ್ತಿದ್ದ ಗ್ಯಾಂಗ್‌ ಮತ್ತೆ ತನ್ನ ಹಳೇಯ ಆಟ ಶುರು ಮಾಡಿದೆ. ಈ ಬಗ್ಗೆ ನಕಲಿ ಆನ್​ಲೈನ್‌ ರಿಸರ್ವೇಶನ್‌ ಮಾಡಿಸದಿರಲು ಅರಣ್ಯ ಇಲಾಖೆ ಪ್ರವಾಸಿಗರನ್ನು ಕೋರಿಕೊಂಡಿದೆ. ಇಂತಹ ಪ್ರಕರಣಗಳಿಂದ ಹಣ ಕಳೆದುಕೊಳ್ಳುವ ಬದಲು ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದೆ.

ಹೆಚ್.ಡಿ.ಕೋಟೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಕನಕೋಟೆ ಸಫಾರಿ ನಾಣಚ್ಚಿ ಮತ್ತು ವೀರನಹೊಸಳ್ಳಿ ಸಫಾರಿ ಕೇಂದ್ರದ ಮೂಲಕ ಸಫಾರಿಗೆ ಹೋಗಲು ಆನ್‌ಲೈನ್‌ ನೋಂದಣಿಗೂ ಮುನ್ನ ಪ್ರವಾಸಿಗರು ನಕಲಿ ನೋಂದಣಿ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಚಿತ್ರ, ಆನೆ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಇರುವ ಖಾಸಗಿ ವೆಬ್​ಸೈಟ್‌ನಲ್ಲಿ ರಿಸರ್ವೇಶನ್‌ (ಕಾಯ್ದಿರಿಸುವಿಕೆ) ಮಾಡಿಕೊಳ್ಳಲಾಗುತ್ತಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋಗಲು ಬಯಸುವವರು ಆನ್‌ಲೈನ್‌ನಲ್ಲಿ ರಿಸರ್ವೇಷನ್‌ ಮಾಡುವ ಸಂದರ್ಭದಲ್ಲಿ ಈ ವೆಬ್​ಸೈಟ್‌ ಬರುತ್ತಿತ್ತು. ಹಾಗಾಗಿ ಪ್ರವಾಸಿಗರು ಈ‌ ವೆಬ್​ಸೈಟ್‌ನಲ್ಲಿ ರಿಸರ್ವೇಶನ್​ ಮಾಡುತ್ತಿದ್ದರು. ಆಗ ಕೆಲವರಿಗೆ ರಿಸರ್ವೇಶನ್‌ ಆಗಿದೆ ಎಂಬ ಮಾಹಿತಿ ಬರುತ್ತಿತ್ತು.

ಇನ್ನೂ ಕೆಲವರಿಗೆ ಖಾತೆಯಿಂದ ಹಣ ಹೋದ ಮೇಲೆ ಮತ್ತಿನ್ನೇನೂ ಮಾಹಿತಿ ಸಿಗುತ್ತಿರಲಿಲ್ಲ. ಹಾಗಾಗಿ ರಿಸರ್ವೇಶನ್‌ ಆಗಿದೆ ಎಂದುಕೊಂಡು, ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬಂದಾಗ ಅವರು ಮೋಸ ಹೋಗಿರುವುದು ಗೊತ್ತಾಗುತ್ತಿತ್ತು. ಈ ರೀತಿ ನೂರಾರು ಮಂದಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾಣಚ್ಚಿ ಸಫಾರಿ ಕೇಂದ್ರದ ಬಳಿ ಬಂದು ದೂರು ಕೊಟ್ಟಾಗ ಎಚ್ಚೆತ್ತುಕೊಂಡ ಹುಣಸೂರು ಉಪ ವಿಭಾಗದ ಡಿಸಿಎಫ್‌ ಹರ್ಷ ಕುಮಾರ್​ ಚಿಕ್ಕನರಗುಂದ ಕೊಡಗು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ 2024 ಜನವರಿಯಲ್ಲೇ ದೂರು ಕೊಟ್ಟಿದ್ದರು.

ಪೊಲೀಸರಿಗೆ ದೂರು ನೀಡದ ನಂತರ ಸ್ವಲ್ಪ ದಿನ ಈ ನಕಲಿ ವೆಬ್​ಸೈಟ್‌ ಹಾವಳಿ ತಪ್ಪಿದ್ದು, ಈಗ ಪುನಃ ಅದೇ ಹಾವಳಿ ಮುಂದುವರೆದಿದೆ. ಹಾಗಾಗಿ ಪ್ರವಾಸಿಗರು ಅಧಿಕೃತ ಅರಣ್ಯ ಇಲಾಖೆಯ ವೈಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ಸಫಾರಿ ಕೇಂದ್ರಕ್ಕೆ ಬಂದು ಟಿಕೆಟ್‌ ಖರೀದಿ ಮಾಡಬೇಕು ಎಂದು ಸಫಾರಿಪ್ರಿಯರಲ್ಲಿ ಡಿಸಿಎಫ್‌ ಹರ್ಷ ಕುಮಾರ್‌ ಚಿಕ್ಕನರಗುಂದ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಾಯಾನೆಯಿಂದ ಬೇರ್ಪಟ್ಟು ಮರಿಯಾನೆ ಅಸ್ವಸ್ಥ: ಆರೈಕೆ ಮಾಡಿ ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ - Calf Reunite With Mother Elephant

ಮೈಸೂರು: ಅರಣ್ಯ ಇಲಾಖೆಯ ಆನ್​ಲೈನ್‌ ರಿಸರ್ವೇಶನ್ ನಕಲಿ‌ ಖಾತೆ ತೆರೆದು ಪ್ರವಾಸಿಗರ ಹಣ ದೋಚುತ್ತಿದ್ದ ಗ್ಯಾಂಗ್‌ ಮತ್ತೆ ತನ್ನ ಹಳೇಯ ಆಟ ಶುರು ಮಾಡಿದೆ. ಈ ಬಗ್ಗೆ ನಕಲಿ ಆನ್​ಲೈನ್‌ ರಿಸರ್ವೇಶನ್‌ ಮಾಡಿಸದಿರಲು ಅರಣ್ಯ ಇಲಾಖೆ ಪ್ರವಾಸಿಗರನ್ನು ಕೋರಿಕೊಂಡಿದೆ. ಇಂತಹ ಪ್ರಕರಣಗಳಿಂದ ಹಣ ಕಳೆದುಕೊಳ್ಳುವ ಬದಲು ಪ್ರವಾಸಿಗರು ಎಚ್ಚರಿಕೆ ವಹಿಸಬೇಕೆಂದು ಮನವಿ ಮಾಡಿದೆ.

ಹೆಚ್.ಡಿ.ಕೋಟೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಕನಕೋಟೆ ಸಫಾರಿ ನಾಣಚ್ಚಿ ಮತ್ತು ವೀರನಹೊಸಳ್ಳಿ ಸಫಾರಿ ಕೇಂದ್ರದ ಮೂಲಕ ಸಫಾರಿಗೆ ಹೋಗಲು ಆನ್‌ಲೈನ್‌ ನೋಂದಣಿಗೂ ಮುನ್ನ ಪ್ರವಾಸಿಗರು ನಕಲಿ ನೋಂದಣಿ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಚಿತ್ರ, ಆನೆ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಇರುವ ಖಾಸಗಿ ವೆಬ್​ಸೈಟ್‌ನಲ್ಲಿ ರಿಸರ್ವೇಶನ್‌ (ಕಾಯ್ದಿರಿಸುವಿಕೆ) ಮಾಡಿಕೊಳ್ಳಲಾಗುತ್ತಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಗೆ ಹೋಗಲು ಬಯಸುವವರು ಆನ್‌ಲೈನ್‌ನಲ್ಲಿ ರಿಸರ್ವೇಷನ್‌ ಮಾಡುವ ಸಂದರ್ಭದಲ್ಲಿ ಈ ವೆಬ್​ಸೈಟ್‌ ಬರುತ್ತಿತ್ತು. ಹಾಗಾಗಿ ಪ್ರವಾಸಿಗರು ಈ‌ ವೆಬ್​ಸೈಟ್‌ನಲ್ಲಿ ರಿಸರ್ವೇಶನ್​ ಮಾಡುತ್ತಿದ್ದರು. ಆಗ ಕೆಲವರಿಗೆ ರಿಸರ್ವೇಶನ್‌ ಆಗಿದೆ ಎಂಬ ಮಾಹಿತಿ ಬರುತ್ತಿತ್ತು.

ಇನ್ನೂ ಕೆಲವರಿಗೆ ಖಾತೆಯಿಂದ ಹಣ ಹೋದ ಮೇಲೆ ಮತ್ತಿನ್ನೇನೂ ಮಾಹಿತಿ ಸಿಗುತ್ತಿರಲಿಲ್ಲ. ಹಾಗಾಗಿ ರಿಸರ್ವೇಶನ್‌ ಆಗಿದೆ ಎಂದುಕೊಂಡು, ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬಂದಾಗ ಅವರು ಮೋಸ ಹೋಗಿರುವುದು ಗೊತ್ತಾಗುತ್ತಿತ್ತು. ಈ ರೀತಿ ನೂರಾರು ಮಂದಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾಣಚ್ಚಿ ಸಫಾರಿ ಕೇಂದ್ರದ ಬಳಿ ಬಂದು ದೂರು ಕೊಟ್ಟಾಗ ಎಚ್ಚೆತ್ತುಕೊಂಡ ಹುಣಸೂರು ಉಪ ವಿಭಾಗದ ಡಿಸಿಎಫ್‌ ಹರ್ಷ ಕುಮಾರ್​ ಚಿಕ್ಕನರಗುಂದ ಕೊಡಗು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ 2024 ಜನವರಿಯಲ್ಲೇ ದೂರು ಕೊಟ್ಟಿದ್ದರು.

ಪೊಲೀಸರಿಗೆ ದೂರು ನೀಡದ ನಂತರ ಸ್ವಲ್ಪ ದಿನ ಈ ನಕಲಿ ವೆಬ್​ಸೈಟ್‌ ಹಾವಳಿ ತಪ್ಪಿದ್ದು, ಈಗ ಪುನಃ ಅದೇ ಹಾವಳಿ ಮುಂದುವರೆದಿದೆ. ಹಾಗಾಗಿ ಪ್ರವಾಸಿಗರು ಅಧಿಕೃತ ಅರಣ್ಯ ಇಲಾಖೆಯ ವೈಬ್​ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಅಥವಾ ಸಫಾರಿ ಕೇಂದ್ರಕ್ಕೆ ಬಂದು ಟಿಕೆಟ್‌ ಖರೀದಿ ಮಾಡಬೇಕು ಎಂದು ಸಫಾರಿಪ್ರಿಯರಲ್ಲಿ ಡಿಸಿಎಫ್‌ ಹರ್ಷ ಕುಮಾರ್‌ ಚಿಕ್ಕನರಗುಂದ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತಾಯಾನೆಯಿಂದ ಬೇರ್ಪಟ್ಟು ಮರಿಯಾನೆ ಅಸ್ವಸ್ಥ: ಆರೈಕೆ ಮಾಡಿ ತಾಯಿ ಮಡಿಲು ಸೇರಿಸಿದ ಅರಣ್ಯ ಇಲಾಖೆ - Calf Reunite With Mother Elephant

ETV Bharat Logo

Copyright © 2024 Ushodaya Enterprises Pvt. Ltd., All Rights Reserved.