ETV Bharat / state

ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

author img

By ETV Bharat Karnataka Team

Published : Mar 11, 2024, 5:51 PM IST

Updated : Mar 11, 2024, 8:08 PM IST

ತಿಂಗಳಿಗಾಗುವಷ್ಟು ರೇಷನ್​, ಎತ್ತುಗಳಿಗೆ ಮೇವಿನ ಜೊತೆಗೆ ಬಂದಿರುವ ರೈತರು, ನ್ಯಾಯ ಸಿಗುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Farmers besiege Belgaum Irrigation Department office with bulls
ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ಎತ್ತುಗಳ ಸಮೇತ ಬೆಳಗಾವಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆಯಿತು.

ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಗುಡನಟ್ಟಿ, ಬೀರಹೊಳಿ ಗ್ರಾಮಗಳ ಸಾವಿರಾರು ರೈತರು ಎತ್ತುಗಳ ಸಮೇತ ಬೆಳಗಾವಿ ಸರ್ದಾರ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಬಳಿಕ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಹಿಡಕಲ್ ಡ್ಯಾಮ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ನೀರಾವರಿ ಇಲಾಖೆ ಕಚೇರಿಗೆ ಎತ್ತುಗಳು ಮತ್ತು ಟ್ರ್ಯಾಕ್ಟರ್ ಸಮೇತ ಆಗಮಿಸಿದ ರೈತರು ಮುತ್ತಿಗೆ ಹಾಕಿದರು.

ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ 396 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ನೀರಾವರಿ ನಿಗಮದ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ. ಎರಡು ವರ್ಷಗಳ ಹಿಂದೆಯೇ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೂ ಪರಿಹಾರ ನೀಡಲು ಅಧಿಕಾರಿಗಳು ಮೀನಮೇಷ ಎನಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

Farmers besiege Belgaum Irrigation Department office with bulls
ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರೈತ ಬಾಳೇಶ ಮಾವನೂರ, "ಎತ್ತುಗಳೊಂದಿಗೆ ಭೂಮಿ ಕಳೆದುಕೊಂಡ ಎಲ್ಲ ರೈತರು ಧರಣಿ ಮಾಡುತ್ತಿದ್ದೇವೆ. ಪರೀಕ್ಷೆ ಮುಗಿದ ಬಳಿಕ ಮಕ್ಕಳು ಕೂಡ ಬರಲಿದ್ದಾರೆ. ಒಂದು ತಿಂಗಳಿಗಾಗುವಷ್ಟು ರೇಷನ್, ಎತ್ತುಗಳಿಗೆ ಮೇವು ತಂದಿದ್ದೇವೆ. ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗೋದಿಲ್ಲ ಎಂದು ಎಚ್ಚರಿಸಿದರು.

ನರಸಿಂಗಪುರ ರೈತ ಮಹಿಳೆ ರೇಖಾ ಗುತ್ತಿ ಮಾತನಾಡಿ, "50 ವರ್ಷಗಳಿಂದ ನಮ್ಮ ಹೊಲದಲ್ಲಿ ನೀರು ನಿಂತಿದೆ. ಈವರೆಗೂ ನಮಗೆ ಪರಿಹಾರ ಸಿಕ್ಕಿಲ್ಲ. ನಾವು ಜೀವನ ಹೇಗೆ ಮಾಡಬೇಕು..? ನಮಗೆ ಸೂಕ್ತ ಪರಿಹಾರವಾದರೂ ಕೊಡಬೇಕು. ಇಲ್ಲವಾದರೆ ನೀರು ಖಾಲಿ ಮಾಡಿಸಿ ನಮ್ಮ ಹೊಲ ನಮಗೆ ಬಿಟ್ಟು ಕೊಡಬೇಕು" ಎಂದು ಒತ್ತಾಯಿಸಿದರು.

ರೈತ ಮಹಿಳೆ ನಾಗವ್ವ ನಾವೆ ಮಾತನಾಡಿ, "50 ವರ್ಷಗಳಿಂದ ಸರ್ಕಾರ ನಮಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಹೊಲದಲ್ಲಿ ನೀರು ಖಾಲಿ ಮಾಡಿ, ಇಲ್ಲ ಪರಿಹಾರ ಕೊಡಿ. ಹೊಲ ಕಳೆದುಕೊಂಡು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಪರಿಹಾರ ಕೊಡದಿದ್ದರೆ ಇಲ್ಲಿಯೇ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗುತ್ತೇವೆ" ಎಂದು ಎಚ್ಚರಿಸಿದರು.

ನೀರಾವರಿ ಇಲಾಖೆ ಕಚೇರಿ ಆವರಣದಲ್ಲೆ ಅಡುಗೆ ಮಾಡಿ ತಿನ್ನುತ್ತಿರುವ ರೈತರು ಊಟ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ದೆಹಲಿ ರೈತ ಹೋರಾಟ ಬೆಂಬಲಿಸಿ ಮಾ.12 ರಂದು ರಾಜ್ಯಾದ್ಯಂತ ಪಂಜಿನ ಪ್ರತಿಭಟನೆ: ಕುರುಬೂರು ಶಾಂತಕುಮಾರ್

ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಆಗ್ರಹಿಸಿ ಎತ್ತುಗಳ ಸಮೇತ ಬೆಳಗಾವಿ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆಯಿತು.

ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಗುಡನಟ್ಟಿ, ಬೀರಹೊಳಿ ಗ್ರಾಮಗಳ ಸಾವಿರಾರು ರೈತರು ಎತ್ತುಗಳ ಸಮೇತ ಬೆಳಗಾವಿ ಸರ್ದಾರ್ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಬಳಿಕ ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಹಿಡಕಲ್ ಡ್ಯಾಮ್ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ನೀರಾವರಿ ಇಲಾಖೆ ಕಚೇರಿಗೆ ಎತ್ತುಗಳು ಮತ್ತು ಟ್ರ್ಯಾಕ್ಟರ್ ಸಮೇತ ಆಗಮಿಸಿದ ರೈತರು ಮುತ್ತಿಗೆ ಹಾಕಿದರು.

ಹಿಡಕಲ್ ಜಲಾಶಯ ಹಿನ್ನೀರಿನಲ್ಲಿ 396 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ನೀರಾವರಿ ನಿಗಮದ ಅಧಿಕಾರಿಗಳು ಪರಿಹಾರ ನೀಡುತ್ತಿಲ್ಲ. ಎರಡು ವರ್ಷಗಳ ಹಿಂದೆಯೇ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಆದರೂ ಪರಿಹಾರ ನೀಡಲು ಅಧಿಕಾರಿಗಳು ಮೀನಮೇಷ ಎನಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

Farmers besiege Belgaum Irrigation Department office with bulls
ಎತ್ತುಗಳೊಂದಿಗೆ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ರೈತ ಬಾಳೇಶ ಮಾವನೂರ, "ಎತ್ತುಗಳೊಂದಿಗೆ ಭೂಮಿ ಕಳೆದುಕೊಂಡ ಎಲ್ಲ ರೈತರು ಧರಣಿ ಮಾಡುತ್ತಿದ್ದೇವೆ. ಪರೀಕ್ಷೆ ಮುಗಿದ ಬಳಿಕ ಮಕ್ಕಳು ಕೂಡ ಬರಲಿದ್ದಾರೆ. ಒಂದು ತಿಂಗಳಿಗಾಗುವಷ್ಟು ರೇಷನ್, ಎತ್ತುಗಳಿಗೆ ಮೇವು ತಂದಿದ್ದೇವೆ. ನ್ಯಾಯ ಸಿಗೋವರೆಗೂ ಇಲ್ಲಿಂದ ಹೋಗೋದಿಲ್ಲ ಎಂದು ಎಚ್ಚರಿಸಿದರು.

ನರಸಿಂಗಪುರ ರೈತ ಮಹಿಳೆ ರೇಖಾ ಗುತ್ತಿ ಮಾತನಾಡಿ, "50 ವರ್ಷಗಳಿಂದ ನಮ್ಮ ಹೊಲದಲ್ಲಿ ನೀರು ನಿಂತಿದೆ. ಈವರೆಗೂ ನಮಗೆ ಪರಿಹಾರ ಸಿಕ್ಕಿಲ್ಲ. ನಾವು ಜೀವನ ಹೇಗೆ ಮಾಡಬೇಕು..? ನಮಗೆ ಸೂಕ್ತ ಪರಿಹಾರವಾದರೂ ಕೊಡಬೇಕು. ಇಲ್ಲವಾದರೆ ನೀರು ಖಾಲಿ ಮಾಡಿಸಿ ನಮ್ಮ ಹೊಲ ನಮಗೆ ಬಿಟ್ಟು ಕೊಡಬೇಕು" ಎಂದು ಒತ್ತಾಯಿಸಿದರು.

ರೈತ ಮಹಿಳೆ ನಾಗವ್ವ ನಾವೆ ಮಾತನಾಡಿ, "50 ವರ್ಷಗಳಿಂದ ಸರ್ಕಾರ ನಮಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಹೊಲದಲ್ಲಿ ನೀರು ಖಾಲಿ ಮಾಡಿ, ಇಲ್ಲ ಪರಿಹಾರ ಕೊಡಿ. ಹೊಲ ಕಳೆದುಕೊಂಡು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಪರಿಹಾರ ಕೊಡದಿದ್ದರೆ ಇಲ್ಲಿಯೇ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗುತ್ತೇವೆ" ಎಂದು ಎಚ್ಚರಿಸಿದರು.

ನೀರಾವರಿ ಇಲಾಖೆ ಕಚೇರಿ ಆವರಣದಲ್ಲೆ ಅಡುಗೆ ಮಾಡಿ ತಿನ್ನುತ್ತಿರುವ ರೈತರು ಊಟ ಮಾಡಿ ಪ್ರತಿಭಟನೆ ಮುಂದುವರಿಸಿದ್ದಾರೆ. ನ್ಯಾಯ ಸಿಗೋವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ದೆಹಲಿ ರೈತ ಹೋರಾಟ ಬೆಂಬಲಿಸಿ ಮಾ.12 ರಂದು ರಾಜ್ಯಾದ್ಯಂತ ಪಂಜಿನ ಪ್ರತಿಭಟನೆ: ಕುರುಬೂರು ಶಾಂತಕುಮಾರ್

Last Updated : Mar 11, 2024, 8:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.