ETV Bharat / state

ಅಳಿಯ ಪ್ರತಾಪ್ ಆತ್ಮಹತ್ಯೆ ಬಗ್ಗೆ ಮಾಜಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದೇನು ? - Pratap suicide

ಮಾಜಿ ಸಚಿವ ಬಿ. ಸಿ ಪಾಟೀಲ್ ಅವರು ಅಳಿಯ ಪ್ರತಾಪ್ ಆತ್ಮಹತ್ಯೆಯ ಕುರಿತು ಮಾತನಾಡಿದ್ದಾರೆ.

author img

By ETV Bharat Karnataka Team

Published : Jul 8, 2024, 9:45 PM IST

Updated : Jul 8, 2024, 10:45 PM IST

ex-minister-bc-patil
ಮಾಜಿ ಸಚಿವ ಬಿ ಸಿ ಪಾಟೀಲ್ (ETV Bharat)
ಮಾಜಿ ಸಚಿವ ಬಿ ಸಿ ಪಾಟೀಲ್ (ETV Bharat)

ಶಿವಮೊಗ್ಗ: ಮಾಜಿ ಸಚಿವ ಬಿ ಸಿ ಪಾಟೀಲ್ ಅವರ ಮಗಳ ಗಂಡ ಪ್ರತಾಪ್ ಇಂದು ಮಧ್ಯಾಹ್ನ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಾಪ್ ನನ್ನ ಅಳಿಯ. 2016ರಲ್ಲಿ ನನ್ನ ಮಗಳ ಮದುವೆ ಆಗಿದ್ದರು. ಇವರದು ಚನ್ನಗಿರಿ ತಾಲೂಕು ಕತ್ತಲಗೆರೆ ಗ್ರಾಮ. ನನ್ನ ಹಿರಿಯ ಮಗಳ ಸೌಮ್ಯ ಅವರನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದೆವು. ನಮ್ಮ ಜೊತೆಗೆ ಇದ್ದರು. ಇವರು ನಮ್ಮ ಎಲ್ಲ ವ್ಯವಹಾರವನ್ನು ನೋಡಿಕೊಂಡು ಹೋಗುತ್ತಿದ್ದರು.

ಇಂದು ಬೆಳಗ್ಗೆ ಕತ್ತಲಗೆರೆಗೆ ಹೋಗಿ ಬರುವುದಾಗಿ ಹೇಳಿದ್ರು, ಆಯ್ತು ಎಂದು ಹೇಳಿ ಕಳುಹಿಸಿದ್ದೆ. ಮಧ್ಯಾಹ್ನ 1:45 ಕ್ಕೆ ಪ್ರತಾಪ್ ಅಣ್ಣ ಪ್ರಭು ನನಗೆ ಪೋನ್ ಮಾಡಿದ್ರು, ಪ್ರತಾಪ್ ಎಲ್ಲಿದ್ದಾನೆ, ಸಿಕ್ಕಿದ್ನಾ ಎಂದು ಕೇಳಿದ್ರು. ಇಲ್ಲ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ರು ಎಂದೆ. ಅದಕ್ಕೆ ಪ್ರಭು ಅವರು ಇಲ್ಲ ಪ್ರತಾಪ್ ಗುಳಿಗೆ ತೆಗೆದುಕೊಂಡಿದ್ದಾನೆ. ಫೋನ್ ಸಿಕ್ತಿಲ್ಲ, ನೀವು ಟ್ರಾಕ್ ಮಾಡಿಸಿ ಎಂದು ಹೇಳಿದರು.

ನಾನು ಪೋನ್ ಮಾಡಿದಾಗ ರೀಚ್ ಆಗಲಿಲ್ಲ. ಆ ಮೇಲೆ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಅವರಿಗೆ ಫೋನ್ ಮಾಡಿ ಹೇಳಿದ್ದೆ. ಅವರಿಗೆ ಫೋನ್ ನಂಬರ್ ನೀಡಿದೆ. ಆ ಮೇಲೆ ಹೂನ್ನಾಳಿ ಸಬ್ ಡಿವಿಜನ್ ಹಾಗೂ ಶಿವಮೊಗ್ಗ ಎಸ್ಪಿ ಅವರಿಗೆ ಹೇಳಿದೆ. ನಂತರ ಲೊಕೇಷನ್ ನ್ಯಾಮತಿ ಬಳಿ ಇರುವುದಾಗಿ ಹೇಳಿದ್ರು. ನಾನು ಫೋನ್ ಮಾಡಿದಾಗ ಪೋನ್ ಸಿಕ್ತು. ಆಗ ಅವರು ಫುಲ್​ ವಾಂತಿ ಮಾಡಿಕೊಳ್ಳುತ್ತಿದ್ದರು‌. ಎಲ್ಲಿದ್ದಿಯಾ ಅಂತ ಕೇಳ್ದೆ. ಅವರು ನಾನು ಹೊನ್ನಾಳಿ- ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ ಎಂದು ಹೇಳಿದ್ರು.

ನಂತರ ಎಲ್ಲರಿಗೂ ತಿಳಿಸಿದೆ. ಅಷ್ಟರಲ್ಲಿ ಅವರ ಸಹೋದರ ಪ್ರಭು ಹೊನ್ನಾಳಿ ಆಸ್ಪತ್ರೆಗೆ ಸೇರಿಸಿದ್ದರು. ಆಗ ನಾನು ಡಾಕ್ಟರ್ ಹತ್ತಿರ ಮಾತನಾಡಿದಾಗ, ಅವರು ಜೋಳಕ್ಕೆ ಸಿಂಪಡಿಸುವ ಔಷಧವನ್ನು ಸೇವಿಸಿದ್ದಾರೆ, ಬಹಳ ಗಂಭೀರವಾದ ಸ್ಥಿತಿಯಲ್ಲಿದ್ದಾರೆ ಎಂದರು.

ಆಗ ನಿಮ್ಮಲ್ಲಿ ಆಗದೇ ಹೋದ್ರೆ ಅಲ್ಲಿಂದ ಶಿಫ್ಟ್​ ಮಾಡಿಸಿ ಎಂದೆ. ನಾನು ದಾವಣಗೆರೆಗೆ ಶಿಫ್ಟ್ ಮಾಡಿ ಎಂದೆ. ಅದಕ್ಕೆ ಪ್ರಭು ದಾವಣಗೆರೆ ದೂರ ಆಗುತ್ತದೆ ಎಂದು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದರು. ನಾನು ಶಿಕಾರಿಪುರದ ಬಳಿ ಬರುವಷ್ಟರಲ್ಲಿ ಪ್ರತಾಪ್ ತೀರಿ ಹೋಗಿದ್ದಾರೆ ಎಂದರು. ಪ್ರತಾಪ್​ಗೆ ಮಕ್ಕಳಾಗಿಲ್ಲ ಎಂದು ಕೊರಗಿತ್ತು. ಇದಕ್ಕೆ ಸರೋಗಸಿ ಮಾಡಿಸಲು ಬೆಂಗಳೂರಿನಲ್ಲಿ ಲಾಯರ್ ಅನ್ನು ಸಹ ಭೇಟಿ ಮಾಡಿ ಮಾತನಾಡಿದ್ದೆ. ನನ್ನೊಂದಿಗೆ ಮಾತನಾಡಿದರು ಹಾಗೂ ನನ್ನ ಮಗಳ ಬಳಿ ಸಹ ಮಾತನಾಡಿದರು. ನೀವು ಕೋರ್ಟ್​​ಗೆ ಬಂದು ಹೇಳಬೇಕಾಗುತ್ತದೆ ಎಂದರು. ಆಯ್ತು ಎಂದು ಹೇಳಿದ್ವಿ. ಇದಕ್ಕಾಗಿ ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದೆವು. ಆದರೆ, ಆತ ಕುಡಿತದ ದಾಸನಾಗಿದ್ದ. ನಾಳೆ ಅವರ ಸ್ವಗ್ರಾಮ ಚನ್ನಗಿರಿ ತಾಲೂಕು ಕತ್ತಲಗೆರೆಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಎಂ. ಪಿ ರೇಣುಕಾಚಾರ್ಯ (ETV Bharat)

ಶವಾಗಾರಕ್ಕೆ ಭೇಟಿ ನೀಡಿದ ವಿಜಯೇಂದ್ರ - ರಾಘವೇಂದ್ರ: ಪ್ರತಾಪ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಸಂಸದ ಬಿ. ವೈ ರಾಘವೇಂದ್ರ, ಹೊನ್ನಾಳಿ ಸಂಸದ ಎಂ. ಪಿ ರೇಣುಕಾಚಾರ್ಯ, ಚನ್ನಗಿರಿಯ ಮಾಡಾಳ್ ಮಲ್ಲಿಕಾರ್ಜುನ್ ಸೇರಿ ಅನೇಕ ಬಿಜೆಪಿ ಮುಖಂಡರು ಆಗಮಿಸಿದ್ದರು.

ಪ್ರತಾಪ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಗಮಿಸಿ, ಪ್ರತಾಪ್ ಸಾವಿಗೆ ಬೇಸರ ವ್ಯಕ್ತಪಡಿಸಿದರು. ನಾನು ಶಿಕಾರಿಪುರದ ಪ್ರವಾಸದಲ್ಲಿದ್ದೆ, ವಿಷಯ ತಿಳಿಯುತ್ತಿದ್ದಂತೆಯೇ ಬಂದು ಬಿ. ಸಿ ಪಾಟೀಲ್​ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪ್ರತಾಪ್ ಅಗಲಿಕೆಯ ನೋವು ಅವರ ಕುಟುಂಬಕ್ಕೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವೆ ಎಂದರು.

ಅವರ ಹಿರಿಯ ಅಳಿಯ ರಾಜಕೀಯವಾಗಿ ಆ್ಯಕ್ಟಿವ್ ಆಗಿ ಇದ್ರು. ಅವರ ಎಲ್ಲ ಕೆಲಸವನ್ನು ಅವರೇ ಮಾಡುತ್ತಿದ್ದರು ಎಂದು ನಾನು ಕೇಳಿದ್ದೆ. ಈಗ ಪೋಸ್ಟ್ ಮಾರ್ಟಮ್ ನಡೆಯುತ್ತಿದೆ. ಘಟನೆಗೆ ಕಾರಣ ಏನೆಂದು ತಿಳಿದು ಬರಲಿದೆ ಎಂದು ತಿಳಿಸಿದರು.

ಪ್ರತಾಪ್​ ಚುನಾವಣೆಯಲ್ಲಿ ಓಡಾಡಿಕೊಂಡಿದ್ದರು; ಇದೇ ವೇಳೆ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ, ಬಿ. ಸಿ ಪಾಟೀಲರ ಹಿರಿಯ ಅಳಿಯ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮದ ಮೂಲಕ ನೋಡಿಕೊಂಡು ಅವರಿಗೆ ಧೈರ್ಯ ನೀಡಲು ನಾನು ನನ್ನ ಸಹೋದರ ಬಂದೆವು. ಬಿ. ಸಿ ಪಾಟೀಲ್ ಕ್ಷೇತ್ರ ಹಾಗೂ ಶಿಕಾರಿಪುರ ಅಕ್ಕಪಕ್ಕದ ಕ್ಷೇತ್ರ. ಅವರ ಕ್ಷೇತ್ರಕ್ಕೆ ಹೋದಾಗ ಪ್ರತಾಪ್ ಚುನಾವಣೆಯಲ್ಲಿ ಓಡಾಡಿಕೊಂಡಿದ್ದರು. ಬಿ. ಸಿ ಪಾಟೀಲ್​ಗೆ ಗಂಡು ಮಕ್ಕಳಿಲ್ಲದ ಕಾರಣಕ್ಕೆ ಇವರೆ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಂಡು ಹೋಗುತ್ತಿದ್ದರು‌‌. ಪ್ರತಾಪ್ ಅಳಿಯನು ಆಗಿದ್ದ, ಮನೆ ಮಗನೂ ಆಗಿದ್ದ. ನನ್ನ ಒಳ್ಳೆಯ ಸ್ನೇಹಿತ. ಆತನಿಗೆ ಹೀಗೆ ಆಯ್ತಲ್ಲಾ ಎಂದು ಕೇಳಿ ಬೇಸರವಾಯಿತು‌. ಅದಕ್ಕೆ ಅವರನ್ನು ನೋಡಿಕೊಂಡು ಹೋಗಲು ಬಂದಿದ್ದೇನೆ ಎಂದರು.

ಇದೇ ವೇಳೆ ಮಾತನಾಡಿದ ಹೊನ್ನಾಳಿ ಮಾಜಿ ಶಾಸಕ ಎಂ. ಪಿ ರೇಣುಕಾಚಾರ್ಯ, ಪ್ರತಾಪ್ ಬಿ. ಸಿ ಪಾಟೀಲರ ಮನೆ ಮಗನಂತಿದ್ದ, ಆತನ ಸಾವು ನಮಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ಮನೆ ಮಗನಾಗಿ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕಲ್ಪಿಸಲಿ ಎಂದು ಬೇಡಿಕೊಳ್ಳುವೆ ಎಂದರು.

ಪ್ರತಾಪ್ ಸಾವಿಗೆ ಕಾರಣ ಏನೂ ನನಗೆ ಗೊತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವೆ ಎಂದರು. ಪ್ರತಾಪ್ ಸಹೋದರ ಪ್ರಭು ಅವರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೊನ್ನಾಳಿ ಪೊಲೀಸರು ಯುಡಿಆರ್ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ: ದಾವಣಗೆರೆ SP ಮಾಹಿತಿ - Pratap Kumar Suicide

ಮಾಜಿ ಸಚಿವ ಬಿ ಸಿ ಪಾಟೀಲ್ (ETV Bharat)

ಶಿವಮೊಗ್ಗ: ಮಾಜಿ ಸಚಿವ ಬಿ ಸಿ ಪಾಟೀಲ್ ಅವರ ಮಗಳ ಗಂಡ ಪ್ರತಾಪ್ ಇಂದು ಮಧ್ಯಾಹ್ನ ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಕೆರೆ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಾಪ್ ನನ್ನ ಅಳಿಯ. 2016ರಲ್ಲಿ ನನ್ನ ಮಗಳ ಮದುವೆ ಆಗಿದ್ದರು. ಇವರದು ಚನ್ನಗಿರಿ ತಾಲೂಕು ಕತ್ತಲಗೆರೆ ಗ್ರಾಮ. ನನ್ನ ಹಿರಿಯ ಮಗಳ ಸೌಮ್ಯ ಅವರನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದೆವು. ನಮ್ಮ ಜೊತೆಗೆ ಇದ್ದರು. ಇವರು ನಮ್ಮ ಎಲ್ಲ ವ್ಯವಹಾರವನ್ನು ನೋಡಿಕೊಂಡು ಹೋಗುತ್ತಿದ್ದರು.

ಇಂದು ಬೆಳಗ್ಗೆ ಕತ್ತಲಗೆರೆಗೆ ಹೋಗಿ ಬರುವುದಾಗಿ ಹೇಳಿದ್ರು, ಆಯ್ತು ಎಂದು ಹೇಳಿ ಕಳುಹಿಸಿದ್ದೆ. ಮಧ್ಯಾಹ್ನ 1:45 ಕ್ಕೆ ಪ್ರತಾಪ್ ಅಣ್ಣ ಪ್ರಭು ನನಗೆ ಪೋನ್ ಮಾಡಿದ್ರು, ಪ್ರತಾಪ್ ಎಲ್ಲಿದ್ದಾನೆ, ಸಿಕ್ಕಿದ್ನಾ ಎಂದು ಕೇಳಿದ್ರು. ಇಲ್ಲ ಊರಿಗೆ ಹೋಗುವುದಾಗಿ ಹೇಳಿ ಹೋಗಿದ್ರು ಎಂದೆ. ಅದಕ್ಕೆ ಪ್ರಭು ಅವರು ಇಲ್ಲ ಪ್ರತಾಪ್ ಗುಳಿಗೆ ತೆಗೆದುಕೊಂಡಿದ್ದಾನೆ. ಫೋನ್ ಸಿಕ್ತಿಲ್ಲ, ನೀವು ಟ್ರಾಕ್ ಮಾಡಿಸಿ ಎಂದು ಹೇಳಿದರು.

ನಾನು ಪೋನ್ ಮಾಡಿದಾಗ ರೀಚ್ ಆಗಲಿಲ್ಲ. ಆ ಮೇಲೆ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಅವರಿಗೆ ಫೋನ್ ಮಾಡಿ ಹೇಳಿದ್ದೆ. ಅವರಿಗೆ ಫೋನ್ ನಂಬರ್ ನೀಡಿದೆ. ಆ ಮೇಲೆ ಹೂನ್ನಾಳಿ ಸಬ್ ಡಿವಿಜನ್ ಹಾಗೂ ಶಿವಮೊಗ್ಗ ಎಸ್ಪಿ ಅವರಿಗೆ ಹೇಳಿದೆ. ನಂತರ ಲೊಕೇಷನ್ ನ್ಯಾಮತಿ ಬಳಿ ಇರುವುದಾಗಿ ಹೇಳಿದ್ರು. ನಾನು ಫೋನ್ ಮಾಡಿದಾಗ ಪೋನ್ ಸಿಕ್ತು. ಆಗ ಅವರು ಫುಲ್​ ವಾಂತಿ ಮಾಡಿಕೊಳ್ಳುತ್ತಿದ್ದರು‌. ಎಲ್ಲಿದ್ದಿಯಾ ಅಂತ ಕೇಳ್ದೆ. ಅವರು ನಾನು ಹೊನ್ನಾಳಿ- ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ ಎಂದು ಹೇಳಿದ್ರು.

ನಂತರ ಎಲ್ಲರಿಗೂ ತಿಳಿಸಿದೆ. ಅಷ್ಟರಲ್ಲಿ ಅವರ ಸಹೋದರ ಪ್ರಭು ಹೊನ್ನಾಳಿ ಆಸ್ಪತ್ರೆಗೆ ಸೇರಿಸಿದ್ದರು. ಆಗ ನಾನು ಡಾಕ್ಟರ್ ಹತ್ತಿರ ಮಾತನಾಡಿದಾಗ, ಅವರು ಜೋಳಕ್ಕೆ ಸಿಂಪಡಿಸುವ ಔಷಧವನ್ನು ಸೇವಿಸಿದ್ದಾರೆ, ಬಹಳ ಗಂಭೀರವಾದ ಸ್ಥಿತಿಯಲ್ಲಿದ್ದಾರೆ ಎಂದರು.

ಆಗ ನಿಮ್ಮಲ್ಲಿ ಆಗದೇ ಹೋದ್ರೆ ಅಲ್ಲಿಂದ ಶಿಫ್ಟ್​ ಮಾಡಿಸಿ ಎಂದೆ. ನಾನು ದಾವಣಗೆರೆಗೆ ಶಿಫ್ಟ್ ಮಾಡಿ ಎಂದೆ. ಅದಕ್ಕೆ ಪ್ರಭು ದಾವಣಗೆರೆ ದೂರ ಆಗುತ್ತದೆ ಎಂದು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದರು. ನಾನು ಶಿಕಾರಿಪುರದ ಬಳಿ ಬರುವಷ್ಟರಲ್ಲಿ ಪ್ರತಾಪ್ ತೀರಿ ಹೋಗಿದ್ದಾರೆ ಎಂದರು. ಪ್ರತಾಪ್​ಗೆ ಮಕ್ಕಳಾಗಿಲ್ಲ ಎಂದು ಕೊರಗಿತ್ತು. ಇದಕ್ಕೆ ಸರೋಗಸಿ ಮಾಡಿಸಲು ಬೆಂಗಳೂರಿನಲ್ಲಿ ಲಾಯರ್ ಅನ್ನು ಸಹ ಭೇಟಿ ಮಾಡಿ ಮಾತನಾಡಿದ್ದೆ. ನನ್ನೊಂದಿಗೆ ಮಾತನಾಡಿದರು ಹಾಗೂ ನನ್ನ ಮಗಳ ಬಳಿ ಸಹ ಮಾತನಾಡಿದರು. ನೀವು ಕೋರ್ಟ್​​ಗೆ ಬಂದು ಹೇಳಬೇಕಾಗುತ್ತದೆ ಎಂದರು. ಆಯ್ತು ಎಂದು ಹೇಳಿದ್ವಿ. ಇದಕ್ಕಾಗಿ ಕೋರ್ಟ್ ಅನುಮತಿಗಾಗಿ ಕಾಯುತ್ತಿದ್ದೆವು. ಆದರೆ, ಆತ ಕುಡಿತದ ದಾಸನಾಗಿದ್ದ. ನಾಳೆ ಅವರ ಸ್ವಗ್ರಾಮ ಚನ್ನಗಿರಿ ತಾಲೂಕು ಕತ್ತಲಗೆರೆಯಲ್ಲಿ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಎಂ. ಪಿ ರೇಣುಕಾಚಾರ್ಯ (ETV Bharat)

ಶವಾಗಾರಕ್ಕೆ ಭೇಟಿ ನೀಡಿದ ವಿಜಯೇಂದ್ರ - ರಾಘವೇಂದ್ರ: ಪ್ರತಾಪ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಮೆಗ್ಗಾನ್ ಆಸ್ಪತ್ರೆ ಶವಗಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಸಂಸದ ಬಿ. ವೈ ರಾಘವೇಂದ್ರ, ಹೊನ್ನಾಳಿ ಸಂಸದ ಎಂ. ಪಿ ರೇಣುಕಾಚಾರ್ಯ, ಚನ್ನಗಿರಿಯ ಮಾಡಾಳ್ ಮಲ್ಲಿಕಾರ್ಜುನ್ ಸೇರಿ ಅನೇಕ ಬಿಜೆಪಿ ಮುಖಂಡರು ಆಗಮಿಸಿದ್ದರು.

ಪ್ರತಾಪ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆಯೇ ಮೆಗ್ಗಾನ್ ಆಸ್ಪತ್ರೆಯ ಶವಗಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆಗಮಿಸಿ, ಪ್ರತಾಪ್ ಸಾವಿಗೆ ಬೇಸರ ವ್ಯಕ್ತಪಡಿಸಿದರು. ನಾನು ಶಿಕಾರಿಪುರದ ಪ್ರವಾಸದಲ್ಲಿದ್ದೆ, ವಿಷಯ ತಿಳಿಯುತ್ತಿದ್ದಂತೆಯೇ ಬಂದು ಬಿ. ಸಿ ಪಾಟೀಲ್​ಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪ್ರತಾಪ್ ಅಗಲಿಕೆಯ ನೋವು ಅವರ ಕುಟುಂಬಕ್ಕೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವೆ ಎಂದರು.

ಅವರ ಹಿರಿಯ ಅಳಿಯ ರಾಜಕೀಯವಾಗಿ ಆ್ಯಕ್ಟಿವ್ ಆಗಿ ಇದ್ರು. ಅವರ ಎಲ್ಲ ಕೆಲಸವನ್ನು ಅವರೇ ಮಾಡುತ್ತಿದ್ದರು ಎಂದು ನಾನು ಕೇಳಿದ್ದೆ. ಈಗ ಪೋಸ್ಟ್ ಮಾರ್ಟಮ್ ನಡೆಯುತ್ತಿದೆ. ಘಟನೆಗೆ ಕಾರಣ ಏನೆಂದು ತಿಳಿದು ಬರಲಿದೆ ಎಂದು ತಿಳಿಸಿದರು.

ಪ್ರತಾಪ್​ ಚುನಾವಣೆಯಲ್ಲಿ ಓಡಾಡಿಕೊಂಡಿದ್ದರು; ಇದೇ ವೇಳೆ ಮಾತನಾಡಿದ ಸಂಸದ ಬಿ. ವೈ ರಾಘವೇಂದ್ರ, ಬಿ. ಸಿ ಪಾಟೀಲರ ಹಿರಿಯ ಅಳಿಯ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮದ ಮೂಲಕ ನೋಡಿಕೊಂಡು ಅವರಿಗೆ ಧೈರ್ಯ ನೀಡಲು ನಾನು ನನ್ನ ಸಹೋದರ ಬಂದೆವು. ಬಿ. ಸಿ ಪಾಟೀಲ್ ಕ್ಷೇತ್ರ ಹಾಗೂ ಶಿಕಾರಿಪುರ ಅಕ್ಕಪಕ್ಕದ ಕ್ಷೇತ್ರ. ಅವರ ಕ್ಷೇತ್ರಕ್ಕೆ ಹೋದಾಗ ಪ್ರತಾಪ್ ಚುನಾವಣೆಯಲ್ಲಿ ಓಡಾಡಿಕೊಂಡಿದ್ದರು. ಬಿ. ಸಿ ಪಾಟೀಲ್​ಗೆ ಗಂಡು ಮಕ್ಕಳಿಲ್ಲದ ಕಾರಣಕ್ಕೆ ಇವರೆ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಂಡು ಹೋಗುತ್ತಿದ್ದರು‌‌. ಪ್ರತಾಪ್ ಅಳಿಯನು ಆಗಿದ್ದ, ಮನೆ ಮಗನೂ ಆಗಿದ್ದ. ನನ್ನ ಒಳ್ಳೆಯ ಸ್ನೇಹಿತ. ಆತನಿಗೆ ಹೀಗೆ ಆಯ್ತಲ್ಲಾ ಎಂದು ಕೇಳಿ ಬೇಸರವಾಯಿತು‌. ಅದಕ್ಕೆ ಅವರನ್ನು ನೋಡಿಕೊಂಡು ಹೋಗಲು ಬಂದಿದ್ದೇನೆ ಎಂದರು.

ಇದೇ ವೇಳೆ ಮಾತನಾಡಿದ ಹೊನ್ನಾಳಿ ಮಾಜಿ ಶಾಸಕ ಎಂ. ಪಿ ರೇಣುಕಾಚಾರ್ಯ, ಪ್ರತಾಪ್ ಬಿ. ಸಿ ಪಾಟೀಲರ ಮನೆ ಮಗನಂತಿದ್ದ, ಆತನ ಸಾವು ನಮಗೆ ದಿಗ್ಬ್ರಮೆಯನ್ನುಂಟು ಮಾಡಿದೆ. ಮನೆ ಮಗನಾಗಿ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕಲ್ಪಿಸಲಿ ಎಂದು ಬೇಡಿಕೊಳ್ಳುವೆ ಎಂದರು.

ಪ್ರತಾಪ್ ಸಾವಿಗೆ ಕಾರಣ ಏನೂ ನನಗೆ ಗೊತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುವೆ ಎಂದರು. ಪ್ರತಾಪ್ ಸಹೋದರ ಪ್ರಭು ಅವರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಹೊನ್ನಾಳಿ ಪೊಲೀಸರು ಯುಡಿಆರ್ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಮಾಜಿ ಸಚಿವ ಬಿಸಿ ಪಾಟೀಲ್ ಅಳಿಯ ವಿಷ ಸೇವಿಸಿ ಆತ್ಮಹತ್ಯೆ: ದಾವಣಗೆರೆ SP ಮಾಹಿತಿ - Pratap Kumar Suicide

Last Updated : Jul 8, 2024, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.