ETV Bharat / state

ಸರ್ಕಾರಿ ಯಂತ್ರ ನಿಯಂತ್ರಿಸುವ ಮೂಲಕ ಅಂಕಿ - ಅಂಶಗಳೇ ಸಿಗದಂತೆ ಮಾಡಲಾಗಿದೆ: ಪರಕಾಲ ಪ್ರಭಾಕರ್

author img

By ETV Bharat Karnataka Team

Published : Jan 26, 2024, 9:27 PM IST

Updated : Jan 26, 2024, 10:53 PM IST

ದೇಶೀಯ ಕೈಗಾರಿಕೆಗಳು ಹಿಂದೆಂದಿಗಿಂತಲೂ ತಳಮಟ್ಟಕ್ಕೆ ಕುಸಿದಿವೆ ಎಂದು ಪರಕಾಲ ಪ್ರಭಾಕರ್​ ಹೇಳಿದ್ದಾರೆ.

dr-parakala-prabhakars-did-special-lecture-on-democracy-crisis
ಸರ್ಕಾರಿ ಯಂತ್ರ ನಿಯಂತ್ರಿಸುವ ಮೂಲಕ ಅಂಕಿಅಂಶಗಳೇ ಸಿಗದಂತೆ ಮಾಡಲಾಗಿದೆ: ಪರಕಾಲ ಪ್ರಭಾಕರ್
ರಾಜಕೀಯ ಅರ್ಥಶಾಸ್ತ್ರಜ್ಞ ಡಾ ಪರಕಾಲ ಪ್ರಭಾಕರ್ ಉಪನ್ಯಾಸ

ಮಂಗಳೂರು: ಕೇಂದ್ರದ ಹಣಕಾಸು‌ ಸಚಿವೆ‌ ನಿರ್ಮಲಾ ಸೀತಾರಾಮನ್‌ ಅವರ ಪತಿ ಹಾಗೂ ರಾಜಕೀಯ ಅರ್ಥಶಾಸ್ತ್ರಜ್ಞ ಡಾ ಪರಕಾಲ ಪ್ರಭಾಕರ್ ದೇಶದ ಪ್ರಸಕ್ತ ಅರ್ಥವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾರೆ. ನಗರದ ಟಾಗೋರ್‌ಪಾರ್ಕ್​ನ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಗಣರಾಜ್ಯೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ `ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ' ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಅವರು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದರು.

"ಅಚ್ಚೇದಿನ್, ಸಬ್ ಚಂಗಾಸಿ ಎಂಬ ಹೇಳಿಕೆಯ ನಡುವೆ ದೇಶದ ಆರ್ಥಿಕತೆ ಹದಗೆಡುತ್ತಿದ್ದರೂ, ಪರೋಕ್ಷ ತೆರಿಗೆಯಾದ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿದೆ ಎಂದು ತೋರಿಸಲಾಗುತ್ತಿದೆ. ಈ ಜಿಎಸ್‌ಟಿ ಸಂಗ್ರಹ ಹೆಚ್ಚಳ ತಳ ಮಟ್ಟದ ಆದಾಯ ಗುಂಪುಗಳ ಮೇಲೆ ಭಾರಿ ಹೊಡೆತ ನೀಡುತ್ತಿರುವುದನ್ನು ಮರೆ ಮಾಚಲಾಗುತ್ತಿದೆ. ದೇಶೀಯ ಕೈಗಾರಿಕೆಗಳು ಹಿಂದೆಂದಿಗಿಂತಲೂ ತಳಮಟ್ಟಕ್ಕೆ ಕುಸಿದಿವೆ. ಪ್ರಸಕ್ತ ದೇಶದ ಸಾಲ 150 ಲಕ್ಷ ಕೋಟಿ ರೂ.ಗಳಾಗಿವೆ. ಇದರಲ್ಲಿ ಕಳೆದ 10 ವರ್ಷಗಳಲ್ಲಿನ ಸಾಲ 100 ಲಕ್ಷ ಕೋಟಿ ರೂ.ಗಳು. ಇದು ಪ್ರಜಾಪ್ರಭುತ್ವ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು" ಎಂದು ಪ್ರಭಾಕರ್​ ಎಚ್ಚರಿಸಿದರು.

"ನಾನು 500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ತೀರಾ ಇತ್ತೀಚೆಗೆ ಅಂದರೆ 2022ರ ಜನವರಿಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರು ರೈಲ್ವೆಯ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೈಲಿನಲ್ಲಿ ಜಟಾಪಟಿ ನಡೆಸಿದ್ದು ಸುದ್ದಿಯಾಗಿತ್ತು. 35,000 ಹುದ್ದೆಗಳಿಗಾಗಿ ಅಂದು 1 ಕೋಟಿ 25 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇದು ನನ್ನ ದೇಶದ ಯುವಕರು ಎದುರಿಸುತ್ತಿರುವ ಬಿಕ್ಕಟ್ಟು. ಈ ಬಗ್ಗೆ ಸರ್ಕಾರದಲ್ಲಿ ಅಂಕಿ - ಅಂಶ ಕೇಳಿದರೆ ಖಂಡಿತಾ ಸಿಗುವುದಿಲ್ಲ. ಕೊರೊನಾ ಸಂದರ್ಭ ಸಾವಿಗೀಡಾದವರ ಸಂಖ್ಯೆ, ವಲಸೆ ಕಾರ್ಮಿಕರ ಸಾವಿನ ಬಗ್ಗೆಯೂ ಅಂಕಿ - ಅಂಶ ಸಿಗುವುದಿಲ್ಲ. ಇದು ಇಂದಿನ ವಾಸ್ತವ. ಒಳ್ಳೆಯದು, ಕೆಟ್ಟದು, ತಪ್ಪು ಒಪ್ಪುಗಳಿದ್ದರೂ ಹಿಂದೆಲ್ಲಾ ಭಾರತದ ಅಂಕಿ - ಅಂಶ ಪಾರದರ್ಶಕವಾಗಿತ್ತು. ಆದರೆ, ಪ್ರಸಕ್ತ ಸರ್ಕಾರಿ ಯಂತ್ರವನ್ನೇ ನಿಯಂತ್ರಿಸುವ ಮೂಲಕ ಅಂಕಿ ಅಂಶಗಳೇ ಸಿಗದಂತೆ ಮಾಡಲಾಗಿದೆ" ಎಂದು ಆರೋಪಿಸಿದರು.

"ದೇಶದ ಪ್ರಧಾನಿಯವರು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಎಂದು ಹೇಳುವ ಮೂಲಕ ರಾಜ್ಯಗಳ ಚುನಾವಣೆಯಲ್ಲಿ ಪ್ರಚಾರ ನಡೆಸಿದರೆ, ಕೇಂದ್ರ ಸರ್ಕಾರದ ಇತರ ಸಚಿವರಂತೂ ನೇರವಾಗಿಯೇ ನಮ್ಮ ಪಕ್ಷ ಆಡಳಿತಕ್ಕೆ ಬರದಿದ್ದರೆ ನಿಮಗೆ ಅನುದಾನವೇ ಸಿಗದು ಎಂದು ಬೆದರಿಕೆ ಒಡ್ಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದಾರೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ದೇಶದ ಪ್ರಜಾಪ್ರಭುತ್ವಕ್ಕೆ ಜಾತ್ಯತೀತ ಮೌಲ್ಯವುಳ್ಳ ಜನರೇ ಉತ್ತರದಾಯಿಗಳು. ಮತೀಯವಾದಕ್ಕೆ ಪ್ರತಿರೋಧ ತಗ್ಗಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಅಪಾಯಕ್ಕೆ ಗುರಿಯಾಗಲಿದ್ದು, ದೇಶದಲ್ಲಿ ಸದ್ಯ ಆ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ" ಎಂದು ಹೇಳಿದರು.

ದೇಶದ ವೈವಿಧ್ಯತೆಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಮಾಡಲಾಗುತ್ತಿದೆ: "ಪ್ರಜಾಪ್ರಭುತ್ವ, ಜಾತ್ಯತೀತ ದೇಶದಲ್ಲಿ ಇಂದು ಒಂದು ಧರ್ಮವನ್ನೇ ಶ್ರೇಷ್ಠ ಎಂಬಂತೆ ಬಿಂಬಿಸಲಾಗುತ್ತಿದೆ. ಅವರ ದೇವರನ್ನು ನಂಬದವರು ದೇಶದ್ರೋಹಿಗಳು ಎಂಬ ಮಾತುಗಳು ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದಲೇ ಹೇಳಿಸಲಾಗುತ್ತಿದೆ. ದೇಶದ ಭವ್ಯ ವೈವಿಧ್ಯತೆಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಮಾಡಲಾಗುತ್ತಿದೆ. ಅವರ ದೇವರನ್ನು ನಂಬುವವರು, ಅವರ ಹೇಳಿಕೆಗಳನ್ನು ಒಪ್ಪುವವರು ಮಾತ್ರ ದೇಶ ಪ್ರೇಮಿಗಳು, ಉಳಿದವರು ಖಲಿಸ್ತಾನಿಗಳು, ನಕ್ಸಲರು, ದೇಶದ್ರೋಹಿಗಳು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆ ಮತೀಯವಾದವನ್ನು ಹರಡುವವರಿಗೆ ಅವರದ್ದೇ ಆದ ವ್ಯವಸ್ಥಿತ ಸೈನ್ಯವಿದೆ. ಜಾತ್ಯತೀತರಿಗೆ ಅಂತಹ ಸೈನ್ಯದ ಬಲವಿಲ್ಲ. ಹಾಗಾಗಿ ಪ್ರಜಾಪ್ರಭುತ್ವದ ಜತೆಗೆ ಬಿಕ್ಕಟ್ಟಿಗೆ ಸಿಲುಕಿರುವ ಜನರನ್ನು ನಾವು ರಕ್ಷಿಸಬೇಕಾಗಿದೆ. ನೈಜ ಜಾತ್ಯತೀತರು ಈ ಬಗ್ಗೆ 365 ದಿನಗಳೂ ಹೋರಾಟ ಮುಂದುವರಿಸಬೇಕಾಗಿದೆ" ಎಂದರು.

"ಭಾರತ ನಾಗರಿಕತೆಯನ್ನು ಮರು ಪರಿಷ್ಕರಣೆ ನಡೆಸುವ ಷಡ್ಯಂತ್ರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಒಂದು ನಿರ್ದಿಷ್ಟ ಧರ್ಮ, ಭಾಷೆ, ಜಾತಿ, ಆಹಾರಕ್ಕೆ ಸೀಮಿತಗೊಳಿಸಲಾಗುತ್ತಿದೆ. ಈ ರೀತಿಯ ಭಯ ಸೃಷ್ಟಿಸುವವರು ಒಂದು ರೀತಿಯ ಅಪಾಯಕಾರಿ ವರ್ಗವಾಗಿದ್ದರೆ, ಜಾತ್ಯತೀತರೆಂದು ಕರೆಸಿಕೊಂಡವರು ಹಠಾತ್ತನೆ ಭಕ್ತರಾಗಿ ಬದಲಾಗುವವರು ಅದಕ್ಕಿಂತಲೂ ಅಪಾಯಕಾರಿ ವರ್ಗದವರು" ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ. ವೆಲೇರಿಯನ್ ಅವರು ಡಾ. ಪರಕಾಲ ಪ್ರಭಾಕರ್ ಅವರ `ದಿ ಕ್ರೂಕೆಡ್ ಟಿಂಬರ್ ಆಪ್ ನ್ಯೂ ಇಂಡಿಯಾ' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾರ್ಪೊರೇಟರ್ ವಿನಯರಾಜ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪದ್ಮರಾಜ್, ಪ್ರತಿಷ್ಠಾನದ ಉಪಾಧ್ಯಕ್ಷರಾದ ಬಿ. ಪ್ರಭಾಕರ ಶ್ರೀಯಾನ್ ಉಪಸ್ಥಿತರಿದ್ದರು.

ಇದನ್ನೂ ಓದಿ: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 1069.34 ಕೋಟಿ ಆದಾಯ ಗಳಿಕೆ: ಶಿಲ್ಪಿ ಅಗರ್ವಾಲ್

ರಾಜಕೀಯ ಅರ್ಥಶಾಸ್ತ್ರಜ್ಞ ಡಾ ಪರಕಾಲ ಪ್ರಭಾಕರ್ ಉಪನ್ಯಾಸ

ಮಂಗಳೂರು: ಕೇಂದ್ರದ ಹಣಕಾಸು‌ ಸಚಿವೆ‌ ನಿರ್ಮಲಾ ಸೀತಾರಾಮನ್‌ ಅವರ ಪತಿ ಹಾಗೂ ರಾಜಕೀಯ ಅರ್ಥಶಾಸ್ತ್ರಜ್ಞ ಡಾ ಪರಕಾಲ ಪ್ರಭಾಕರ್ ದೇಶದ ಪ್ರಸಕ್ತ ಅರ್ಥವ್ಯವಸ್ಥೆಯ ಬಗ್ಗೆ ಟೀಕಿಸಿದ್ದಾರೆ. ನಗರದ ಟಾಗೋರ್‌ಪಾರ್ಕ್​ನ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಗಣರಾಜ್ಯೋತ್ಸವದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ `ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿ' ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ಅವರು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿದರು.

"ಅಚ್ಚೇದಿನ್, ಸಬ್ ಚಂಗಾಸಿ ಎಂಬ ಹೇಳಿಕೆಯ ನಡುವೆ ದೇಶದ ಆರ್ಥಿಕತೆ ಹದಗೆಡುತ್ತಿದ್ದರೂ, ಪರೋಕ್ಷ ತೆರಿಗೆಯಾದ ಜಿಎಸ್‌ಟಿ ಸಂಗ್ರಹ ಹೆಚ್ಚಾಗುತ್ತಿದೆ ಎಂದು ತೋರಿಸಲಾಗುತ್ತಿದೆ. ಈ ಜಿಎಸ್‌ಟಿ ಸಂಗ್ರಹ ಹೆಚ್ಚಳ ತಳ ಮಟ್ಟದ ಆದಾಯ ಗುಂಪುಗಳ ಮೇಲೆ ಭಾರಿ ಹೊಡೆತ ನೀಡುತ್ತಿರುವುದನ್ನು ಮರೆ ಮಾಚಲಾಗುತ್ತಿದೆ. ದೇಶೀಯ ಕೈಗಾರಿಕೆಗಳು ಹಿಂದೆಂದಿಗಿಂತಲೂ ತಳಮಟ್ಟಕ್ಕೆ ಕುಸಿದಿವೆ. ಪ್ರಸಕ್ತ ದೇಶದ ಸಾಲ 150 ಲಕ್ಷ ಕೋಟಿ ರೂ.ಗಳಾಗಿವೆ. ಇದರಲ್ಲಿ ಕಳೆದ 10 ವರ್ಷಗಳಲ್ಲಿನ ಸಾಲ 100 ಲಕ್ಷ ಕೋಟಿ ರೂ.ಗಳು. ಇದು ಪ್ರಜಾಪ್ರಭುತ್ವ ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು" ಎಂದು ಪ್ರಭಾಕರ್​ ಎಚ್ಚರಿಸಿದರು.

"ನಾನು 500 ವರ್ಷಗಳ ಹಿಂದಿನ ಇತಿಹಾಸದ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ತೀರಾ ಇತ್ತೀಚೆಗೆ ಅಂದರೆ 2022ರ ಜನವರಿಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಯುವಕರು ರೈಲ್ವೆಯ ತಾಂತ್ರಿಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ರೈಲಿನಲ್ಲಿ ಜಟಾಪಟಿ ನಡೆಸಿದ್ದು ಸುದ್ದಿಯಾಗಿತ್ತು. 35,000 ಹುದ್ದೆಗಳಿಗಾಗಿ ಅಂದು 1 ಕೋಟಿ 25 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಇದು ನನ್ನ ದೇಶದ ಯುವಕರು ಎದುರಿಸುತ್ತಿರುವ ಬಿಕ್ಕಟ್ಟು. ಈ ಬಗ್ಗೆ ಸರ್ಕಾರದಲ್ಲಿ ಅಂಕಿ - ಅಂಶ ಕೇಳಿದರೆ ಖಂಡಿತಾ ಸಿಗುವುದಿಲ್ಲ. ಕೊರೊನಾ ಸಂದರ್ಭ ಸಾವಿಗೀಡಾದವರ ಸಂಖ್ಯೆ, ವಲಸೆ ಕಾರ್ಮಿಕರ ಸಾವಿನ ಬಗ್ಗೆಯೂ ಅಂಕಿ - ಅಂಶ ಸಿಗುವುದಿಲ್ಲ. ಇದು ಇಂದಿನ ವಾಸ್ತವ. ಒಳ್ಳೆಯದು, ಕೆಟ್ಟದು, ತಪ್ಪು ಒಪ್ಪುಗಳಿದ್ದರೂ ಹಿಂದೆಲ್ಲಾ ಭಾರತದ ಅಂಕಿ - ಅಂಶ ಪಾರದರ್ಶಕವಾಗಿತ್ತು. ಆದರೆ, ಪ್ರಸಕ್ತ ಸರ್ಕಾರಿ ಯಂತ್ರವನ್ನೇ ನಿಯಂತ್ರಿಸುವ ಮೂಲಕ ಅಂಕಿ ಅಂಶಗಳೇ ಸಿಗದಂತೆ ಮಾಡಲಾಗಿದೆ" ಎಂದು ಆರೋಪಿಸಿದರು.

"ದೇಶದ ಪ್ರಧಾನಿಯವರು ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಎಂದು ಹೇಳುವ ಮೂಲಕ ರಾಜ್ಯಗಳ ಚುನಾವಣೆಯಲ್ಲಿ ಪ್ರಚಾರ ನಡೆಸಿದರೆ, ಕೇಂದ್ರ ಸರ್ಕಾರದ ಇತರ ಸಚಿವರಂತೂ ನೇರವಾಗಿಯೇ ನಮ್ಮ ಪಕ್ಷ ಆಡಳಿತಕ್ಕೆ ಬರದಿದ್ದರೆ ನಿಮಗೆ ಅನುದಾನವೇ ಸಿಗದು ಎಂದು ಬೆದರಿಕೆ ಒಡ್ಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನೇ ಅಣಕಿಸುತ್ತಿದ್ದಾರೆ. ಈಗಾಗಲೇ ಬಿಕ್ಕಟ್ಟಿನಲ್ಲಿರುವ ದೇಶದ ಪ್ರಜಾಪ್ರಭುತ್ವಕ್ಕೆ ಜಾತ್ಯತೀತ ಮೌಲ್ಯವುಳ್ಳ ಜನರೇ ಉತ್ತರದಾಯಿಗಳು. ಮತೀಯವಾದಕ್ಕೆ ಪ್ರತಿರೋಧ ತಗ್ಗಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಅಪಾಯಕ್ಕೆ ಗುರಿಯಾಗಲಿದ್ದು, ದೇಶದಲ್ಲಿ ಸದ್ಯ ಆ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ" ಎಂದು ಹೇಳಿದರು.

ದೇಶದ ವೈವಿಧ್ಯತೆಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಮಾಡಲಾಗುತ್ತಿದೆ: "ಪ್ರಜಾಪ್ರಭುತ್ವ, ಜಾತ್ಯತೀತ ದೇಶದಲ್ಲಿ ಇಂದು ಒಂದು ಧರ್ಮವನ್ನೇ ಶ್ರೇಷ್ಠ ಎಂಬಂತೆ ಬಿಂಬಿಸಲಾಗುತ್ತಿದೆ. ಅವರ ದೇವರನ್ನು ನಂಬದವರು ದೇಶದ್ರೋಹಿಗಳು ಎಂಬ ಮಾತುಗಳು ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳಿಂದಲೇ ಹೇಳಿಸಲಾಗುತ್ತಿದೆ. ದೇಶದ ಭವ್ಯ ವೈವಿಧ್ಯತೆಯನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಮಾಡಲಾಗುತ್ತಿದೆ. ಅವರ ದೇವರನ್ನು ನಂಬುವವರು, ಅವರ ಹೇಳಿಕೆಗಳನ್ನು ಒಪ್ಪುವವರು ಮಾತ್ರ ದೇಶ ಪ್ರೇಮಿಗಳು, ಉಳಿದವರು ಖಲಿಸ್ತಾನಿಗಳು, ನಕ್ಸಲರು, ದೇಶದ್ರೋಹಿಗಳು ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆ ಮತೀಯವಾದವನ್ನು ಹರಡುವವರಿಗೆ ಅವರದ್ದೇ ಆದ ವ್ಯವಸ್ಥಿತ ಸೈನ್ಯವಿದೆ. ಜಾತ್ಯತೀತರಿಗೆ ಅಂತಹ ಸೈನ್ಯದ ಬಲವಿಲ್ಲ. ಹಾಗಾಗಿ ಪ್ರಜಾಪ್ರಭುತ್ವದ ಜತೆಗೆ ಬಿಕ್ಕಟ್ಟಿಗೆ ಸಿಲುಕಿರುವ ಜನರನ್ನು ನಾವು ರಕ್ಷಿಸಬೇಕಾಗಿದೆ. ನೈಜ ಜಾತ್ಯತೀತರು ಈ ಬಗ್ಗೆ 365 ದಿನಗಳೂ ಹೋರಾಟ ಮುಂದುವರಿಸಬೇಕಾಗಿದೆ" ಎಂದರು.

"ಭಾರತ ನಾಗರಿಕತೆಯನ್ನು ಮರು ಪರಿಷ್ಕರಣೆ ನಡೆಸುವ ಷಡ್ಯಂತ್ರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಒಂದು ನಿರ್ದಿಷ್ಟ ಧರ್ಮ, ಭಾಷೆ, ಜಾತಿ, ಆಹಾರಕ್ಕೆ ಸೀಮಿತಗೊಳಿಸಲಾಗುತ್ತಿದೆ. ಈ ರೀತಿಯ ಭಯ ಸೃಷ್ಟಿಸುವವರು ಒಂದು ರೀತಿಯ ಅಪಾಯಕಾರಿ ವರ್ಗವಾಗಿದ್ದರೆ, ಜಾತ್ಯತೀತರೆಂದು ಕರೆಸಿಕೊಂಡವರು ಹಠಾತ್ತನೆ ಭಕ್ತರಾಗಿ ಬದಲಾಗುವವರು ಅದಕ್ಕಿಂತಲೂ ಅಪಾಯಕಾರಿ ವರ್ಗದವರು" ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ. ವೆಲೇರಿಯನ್ ಅವರು ಡಾ. ಪರಕಾಲ ಪ್ರಭಾಕರ್ ಅವರ `ದಿ ಕ್ರೂಕೆಡ್ ಟಿಂಬರ್ ಆಪ್ ನ್ಯೂ ಇಂಡಿಯಾ' ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾರ್ಪೊರೇಟರ್ ವಿನಯರಾಜ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪದ್ಮರಾಜ್, ಪ್ರತಿಷ್ಠಾನದ ಉಪಾಧ್ಯಕ್ಷರಾದ ಬಿ. ಪ್ರಭಾಕರ ಶ್ರೀಯಾನ್ ಉಪಸ್ಥಿತರಿದ್ದರು.

ಇದನ್ನೂ ಓದಿ: ನೈರುತ್ಯ ರೈಲ್ವೆ ಮೈಸೂರು ವಿಭಾಗದಿಂದ 1069.34 ಕೋಟಿ ಆದಾಯ ಗಳಿಕೆ: ಶಿಲ್ಪಿ ಅಗರ್ವಾಲ್

Last Updated : Jan 26, 2024, 10:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.