ETV Bharat / state

ಚಾಮರಾಜನಗರ: 12 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ, ಎಲ್ಲಾ ಪ್ರಮುಖರನ್ನು ಬೈಯುವುದೇ ಇದರ ವಿಶೇಷತೆ!

author img

By ETV Bharat Karnataka Team

Published : Mar 19, 2024, 11:41 AM IST

ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯಲ್ಲಿ ಎಲ್ಲಾ ಪ್ರಮುಖರನ್ನು ಬಾಯಿಗೆ ಬಂದಹಾಗೆ ಬೈಯಲಾಗುತ್ತದೆ.

12 ವರ್ಷಗೊಳಿಗೊಮ್ಮೆ ನಡೆಯುತ್ತದೆ ಈ ಜಾತ್ರೆ: ಎಲ್ಲಾ ಪ್ರಮುಖರನ್ನು ಬಾಯಿಗೆ ಬಂದಹಾಗೆ ಬೈಯ್ಯುವುದೇ ಇದರ ವಿಶೇಷತೆ!!
12 ವರ್ಷಗೊಳಿಗೊಮ್ಮೆ ನಡೆಯುತ್ತದೆ ಈ ಜಾತ್ರೆ: ಎಲ್ಲಾ ಪ್ರಮುಖರನ್ನು ಬಾಯಿಗೆ ಬಂದಹಾಗೆ ಬೈಯ್ಯುವುದೇ ಇದರ ವಿಶೇಷತೆ!!

ಚಾಮರಾಜನಗರ: ಇಲ್ಲಿಯ ಮಂಗಲ ಎಂಬ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ವಿಶೇಷ ಜಾತ್ರೆ ನಡೆಯುತ್ತದೆ. ಆದರೆ, ಎಲ್ಲಾ ಜಾತ್ರೆಗಳಂತೆ ಸಾಮಾನ್ಯವಾದ ಜಾತ್ರೆ ಇದಾಗಿರದೇ ಒಂದು ಸಮುದಾಯದ ಜನರು ಎಲ್ಲರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದೇ ಈ ಜಾತ್ರೆಯ ವಿಶೇಷತೆ.

ಮಾ.17 ರಿಂದ ಇಂದಿನ ತನಕ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದ್ದು, ಇದು ಹಿರಿಯರ ಹಬ್ಬ ಅಂಥಲೇ ಜನಪ್ರಿಯವಾಗಿದೆ. ಹತ್ತಾರು ಸಮುದಾಯಗಳು ಈ ಗ್ರಾಮದಲ್ಲಿ ನೆಲೆಸಿದ್ದು ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ. ಕುರುಬ ಸಮುದಾಯ ಈ ಜಾತ್ರೆಯ ಆಕರ್ಷಣೆ ಕೇಂದ್ರವಾಗಿದ್ದು, ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಅಶ್ಲೀಲವಾಗಿ, ಕೊಂಕು, ವಿಡಂಬನೆಯಿಂದ ಬಾಜಿ ಕಟ್ಟಿದಂತೆ ಬೈಯುತ್ತಾರೆ.

ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗಲಿದ್ದು ಇವರ ಬೈಗುಳ ಕೇಳಲೆಂದೇ ಅಕ್ಕಪಕ್ಕದ ಊರಿನ ಜನರು ಸೇರಿ ಜಾತ್ರೆಗೆ ಆಗಮಿಸುತ್ತಾರೆ. ಮಂಗಲ ಗ್ರಾಮದ ವಿಪ್ರ ಮುಖಂಡರಾದ ಶ್ರೀಕಂಠಮೂರ್ತಿ ಹಾಗೂ ಉಪ್ಪಾರ ಸಮುದಾಯದ ಯಜಮಾನನಾದ ಕ್ಯಾತಶೆಟ್ಟಿ ಈ ಕುರಿತು ಮಾತನಾಡಿ, ಶತಮಾನಗಳಿಂದಲೂ ಈ ಹಿರಿಯರ ಹಬ್ಬ ಆಚರಣೆಯಲ್ಲಿದ್ದು, ಬೀರೇಶ್ವರ ಸ್ವಾಮಿ ಉತ್ಸವ ಹಾಗೂ ಓಕುಳಿ ಆಡಲಿದ್ದಾರೆ. ಎಲ್ಲಾ ಸಮುದಾಯದವರೂ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಹಬಾಳ್ವೆಗೆ ಮುನ್ನುಡಿ ಬರೆಯುತ್ತಾರೆ. ಕುರುಬ ಸಮುದಾಯದವರು ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ. ಆ ಸಮುದಾಯ ಮಾತ್ರ ಈ ಬೈಗುಳದಲ್ಲಿ ಪಾಲ್ಗೊಳ್ಳಬೇಕು, ಅವರು ಮಾತ್ರ ಬೈಯಲಿದ್ದು, ಇದು ಒಂದು ರೀತಿ ಮನರಂಜನೆಯಾಗಿಯೂ ಕಾಣಲಿದೆ ಎಂದರು.

ಒಟ್ಟಿನಲ್ಲಿ ಜಾತ್ರೆ ಎಂದರೆ ಕೇವಲ ಉತ್ಸವ ಮಾತ್ರ ನಡೆಯುವುದು ಸಾಮಾನ್ಯ. ಆದರೆ, ವಾಚಾಮಗೋಚರವಾಗಿ ಬೈಯುವುದು ಕೂಡ ಇದರ ಭಾಗವಾಗಿರುವುದು ವಿಶೇಷವೇ ಆಗಿದೆ.

ಇದನ್ನೂ ಓದಿ: ಖಾಫ್ರಿ ದೇವರಿಗೆ ಮದ್ಯ, ಸಿಗರೇಟ್ ನೈವೇದ್ಯ: ಕಾರವಾರದಲ್ಲೊಂದು ವಿಶಿಷ್ಟ ಸಂಪ್ರದಾಯ

ಚಾಮರಾಜನಗರ: ಇಲ್ಲಿಯ ಮಂಗಲ ಎಂಬ ಗ್ರಾಮದಲ್ಲಿ 12 ವರ್ಷಗಳಿಗೊಮ್ಮೆ ವಿಶೇಷ ಜಾತ್ರೆ ನಡೆಯುತ್ತದೆ. ಆದರೆ, ಎಲ್ಲಾ ಜಾತ್ರೆಗಳಂತೆ ಸಾಮಾನ್ಯವಾದ ಜಾತ್ರೆ ಇದಾಗಿರದೇ ಒಂದು ಸಮುದಾಯದ ಜನರು ಎಲ್ಲರನ್ನೂ ಬೈದು, ವಿಡಂಬನೆ ಮಾಡಿ ಹಾಸ್ಯದ ಹೊನಲು ಹರಿಸುವುದೇ ಈ ಜಾತ್ರೆಯ ವಿಶೇಷತೆ.

ಮಾ.17 ರಿಂದ ಇಂದಿನ ತನಕ ಅದ್ಧೂರಿಯಾಗಿ ಜಾತ್ರೆ ನಡೆಯುತ್ತಿದ್ದು, ಇದು ಹಿರಿಯರ ಹಬ್ಬ ಅಂಥಲೇ ಜನಪ್ರಿಯವಾಗಿದೆ. ಹತ್ತಾರು ಸಮುದಾಯಗಳು ಈ ಗ್ರಾಮದಲ್ಲಿ ನೆಲೆಸಿದ್ದು ಎಲ್ಲರೂ ಸೇರಿ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಾರೆ. ಕುರುಬ ಸಮುದಾಯ ಈ ಜಾತ್ರೆಯ ಆಕರ್ಷಣೆ ಕೇಂದ್ರವಾಗಿದ್ದು, ಎದುರಿಗೆ ಬಂದ ಪ್ರಮುಖರನ್ನು, ಊರಿನ ಮುಖಂಡರನ್ನು ಅಶ್ಲೀಲವಾಗಿ, ಕೊಂಕು, ವಿಡಂಬನೆಯಿಂದ ಬಾಜಿ ಕಟ್ಟಿದಂತೆ ಬೈಯುತ್ತಾರೆ.

ಇವರ ಬೈಗುಳವನ್ನು ಕೇಳಿ ಎಲ್ಲರೂ ನಕ್ಕು ಸುಮ್ಮನಾಗಲಿದ್ದು ಇವರ ಬೈಗುಳ ಕೇಳಲೆಂದೇ ಅಕ್ಕಪಕ್ಕದ ಊರಿನ ಜನರು ಸೇರಿ ಜಾತ್ರೆಗೆ ಆಗಮಿಸುತ್ತಾರೆ. ಮಂಗಲ ಗ್ರಾಮದ ವಿಪ್ರ ಮುಖಂಡರಾದ ಶ್ರೀಕಂಠಮೂರ್ತಿ ಹಾಗೂ ಉಪ್ಪಾರ ಸಮುದಾಯದ ಯಜಮಾನನಾದ ಕ್ಯಾತಶೆಟ್ಟಿ ಈ ಕುರಿತು ಮಾತನಾಡಿ, ಶತಮಾನಗಳಿಂದಲೂ ಈ ಹಿರಿಯರ ಹಬ್ಬ ಆಚರಣೆಯಲ್ಲಿದ್ದು, ಬೀರೇಶ್ವರ ಸ್ವಾಮಿ ಉತ್ಸವ ಹಾಗೂ ಓಕುಳಿ ಆಡಲಿದ್ದಾರೆ. ಎಲ್ಲಾ ಸಮುದಾಯದವರೂ ಈ ಜಾತ್ರೆಯಲ್ಲಿ ಪಾಲ್ಗೊಂಡು ಸಹಬಾಳ್ವೆಗೆ ಮುನ್ನುಡಿ ಬರೆಯುತ್ತಾರೆ. ಕುರುಬ ಸಮುದಾಯದವರು ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ. ಆ ಸಮುದಾಯ ಮಾತ್ರ ಈ ಬೈಗುಳದಲ್ಲಿ ಪಾಲ್ಗೊಳ್ಳಬೇಕು, ಅವರು ಮಾತ್ರ ಬೈಯಲಿದ್ದು, ಇದು ಒಂದು ರೀತಿ ಮನರಂಜನೆಯಾಗಿಯೂ ಕಾಣಲಿದೆ ಎಂದರು.

ಒಟ್ಟಿನಲ್ಲಿ ಜಾತ್ರೆ ಎಂದರೆ ಕೇವಲ ಉತ್ಸವ ಮಾತ್ರ ನಡೆಯುವುದು ಸಾಮಾನ್ಯ. ಆದರೆ, ವಾಚಾಮಗೋಚರವಾಗಿ ಬೈಯುವುದು ಕೂಡ ಇದರ ಭಾಗವಾಗಿರುವುದು ವಿಶೇಷವೇ ಆಗಿದೆ.

ಇದನ್ನೂ ಓದಿ: ಖಾಫ್ರಿ ದೇವರಿಗೆ ಮದ್ಯ, ಸಿಗರೇಟ್ ನೈವೇದ್ಯ: ಕಾರವಾರದಲ್ಲೊಂದು ವಿಶಿಷ್ಟ ಸಂಪ್ರದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.