ETV Bharat / state

ರಾಜ್ಯಾಧ್ಯಕ್ಷರ ತಪ್ಪಿನಿಂದ ದಾವಣಗೆರೆಯಲ್ಲಿ ಬಿಜೆಪಿಗೆ ಸೋಲು: ಬಿ.ಪಿ.ಹರೀಶ್ ವಾಗ್ದಾಳಿ - BJP MLA B P Harish

author img

By ETV Bharat Karnataka Team

Published : Jun 24, 2024, 4:55 PM IST

ಲೋಕಸಭೆ ಚುನಾವಣೆ ಸೋಲಿನ ವಿಚಾರವಾಗಿ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

bjp-mla-b-p-harish
ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ (ETV Bharat)

ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಹೇಳಿಕೆ (ETV Bharat)

ದಾವಣಗೆರೆ: ರಾಜ್ಯಾಧ್ಯಕ್ಷರ ತಪ್ಪಿನಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ. ಲಗಾನ್ ಟೀಮ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರೆ ಸೋಲುತ್ತಿರಲಿಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆ್ಯಂಡ್ ಟೀಮ್ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಅದನ್ನು ರಾಜ್ಯಾಧ್ಯಕ್ಷರು ತಡೆದಿದ್ದರೆ ಕ್ಷೇತ್ರ ಕಾಂಗ್ರೆಸ್ ಬದಲು ಬಿಜೆಪಿ ಪಾಲಾಗುತ್ತಿತ್ತು. ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕು ಎಂಬುದು ನಿಮಗೆ ಈಗ ಗೊತ್ತಾಯಿತೇ? ಎಂದು ವಾಗ್ದಾಳಿ ನಡೆಸಿದರು.

ಈ ಲಗಾನ್ ಟೀಮ್ ನಿರ್ಮಾಣ ಮಾಡಿದ್ದೇ ಇದೇ ರಾಜ್ಯಾಧ್ಯಕ್ಷರು. ಗಾಯಿತ್ರಿ ಸಿದ್ದೇಶ್ವರ್​ಗೆ ಟಿಕೆಟ್ ಕೊಟ್ಟಾಗಲೂ ಲಗಾನ್ ಟೀಮ್ ಮಾತನಾಡಿದ್ರೂ ಕೂಡ ಒಂದು ದಿನವೂ ಯಾವ ನಾಯಕರೂ ಇವರ ವಿರುದ್ಧ ಮಾತಾಡಲಿಲ್ಲ. ಆಗ ಏಕೆ ಮಾತನಾಡಬೇಡಿ ಅಂತ ಹೇಳಿಲ್ಲ ಎಂದು ಪ್ರಶ್ನಿಸಿದರು.

ನನಗೆ ಯಾರೂ ಕೂಡ ಕರೆ ಮಾಡಿ ಮಾತಾಡಿಲ್ಲ. ಕರೆ ಮಾಡಿದರೆ ಮಾತನಾಡಿ ಉತ್ತರ‌ ಕೊಡುವೆ. ಆದರೆ, ಬಿ.ಪಿ.ಹರೀಶ್ ಸತ್ಯ ಮಾತನಾಡಿದ ತಕ್ಷಣ ನಾಲ್ಕು ಗೋಡೆಗಳ ಮಧ್ಯೆ ಮಾತಾಡಿ ಎಂಬುದು ನೆನಪಾಯ್ತಾ?. ಅವರಿಗೆ ಬೇಕಾದವರು ಏನು ಬೇಕಾದರೂ ಮಾತನಾಡಬಹುದಾ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ದಾವಣಗೆರೆ: ದೂಡಾ ಸಭೆಯಲ್ಲಿ ಬಿಜೆಪಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರ ಜಟಾಪಟಿ

ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಹೇಳಿಕೆ (ETV Bharat)

ದಾವಣಗೆರೆ: ರಾಜ್ಯಾಧ್ಯಕ್ಷರ ತಪ್ಪಿನಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ. ಲಗಾನ್ ಟೀಮ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದರೆ ಸೋಲುತ್ತಿರಲಿಲ್ಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆ್ಯಂಡ್ ಟೀಮ್ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಅದನ್ನು ರಾಜ್ಯಾಧ್ಯಕ್ಷರು ತಡೆದಿದ್ದರೆ ಕ್ಷೇತ್ರ ಕಾಂಗ್ರೆಸ್ ಬದಲು ಬಿಜೆಪಿ ಪಾಲಾಗುತ್ತಿತ್ತು. ನಾಲ್ಕು ಗೋಡೆಗಳ ಮಧ್ಯೆ ಮಾತಾಡಬೇಕು ಎಂಬುದು ನಿಮಗೆ ಈಗ ಗೊತ್ತಾಯಿತೇ? ಎಂದು ವಾಗ್ದಾಳಿ ನಡೆಸಿದರು.

ಈ ಲಗಾನ್ ಟೀಮ್ ನಿರ್ಮಾಣ ಮಾಡಿದ್ದೇ ಇದೇ ರಾಜ್ಯಾಧ್ಯಕ್ಷರು. ಗಾಯಿತ್ರಿ ಸಿದ್ದೇಶ್ವರ್​ಗೆ ಟಿಕೆಟ್ ಕೊಟ್ಟಾಗಲೂ ಲಗಾನ್ ಟೀಮ್ ಮಾತನಾಡಿದ್ರೂ ಕೂಡ ಒಂದು ದಿನವೂ ಯಾವ ನಾಯಕರೂ ಇವರ ವಿರುದ್ಧ ಮಾತಾಡಲಿಲ್ಲ. ಆಗ ಏಕೆ ಮಾತನಾಡಬೇಡಿ ಅಂತ ಹೇಳಿಲ್ಲ ಎಂದು ಪ್ರಶ್ನಿಸಿದರು.

ನನಗೆ ಯಾರೂ ಕೂಡ ಕರೆ ಮಾಡಿ ಮಾತಾಡಿಲ್ಲ. ಕರೆ ಮಾಡಿದರೆ ಮಾತನಾಡಿ ಉತ್ತರ‌ ಕೊಡುವೆ. ಆದರೆ, ಬಿ.ಪಿ.ಹರೀಶ್ ಸತ್ಯ ಮಾತನಾಡಿದ ತಕ್ಷಣ ನಾಲ್ಕು ಗೋಡೆಗಳ ಮಧ್ಯೆ ಮಾತಾಡಿ ಎಂಬುದು ನೆನಪಾಯ್ತಾ?. ಅವರಿಗೆ ಬೇಕಾದವರು ಏನು ಬೇಕಾದರೂ ಮಾತನಾಡಬಹುದಾ ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ದಾವಣಗೆರೆ: ದೂಡಾ ಸಭೆಯಲ್ಲಿ ಬಿಜೆಪಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರ ಜಟಾಪಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.