ETV Bharat / state

ಹಬ್ಬದ ಸಮಯದಲ್ಲಿ ಮಾತ್ರ ಬಿದಿರನ ಮೊರಕ್ಕೆ ಬೇಡಿಕೆ; ಕುಲಕಸುಬನ್ನೇ ನಂಬಿಕೊಂಡವರ ಸ್ಥಿತಿ ಅತಂತ್ರ - Bamboo mora

author img

By ETV Bharat Karnataka Team

Published : Sep 5, 2024, 5:49 PM IST

ಸಾಂಪ್ರದಾಯಿಕ ಬಿದಿರು ಮೊರಗಳ ಜಾಗದಲ್ಲಿ ಪ್ಲಾಸ್ಟಿಕ್​ ಮೊರಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಮಾತ್ರ ಬಿದಿರಿನ ಮೊರಕ್ಕೆ ಬೇಡಿಕೆ ಇರುತ್ತೆ. ಇನ್ನುಳಿದ ದಿನಗಳಲ್ಲಿ ಇವುಗಳನ್ನ ಕೇಳುವವರೇ ಇರುವುದಿಲ್ಲ. ಹೀಗಾಗಿ ಕುಲಕಸುಬನ್ನೇ ನಂಬಿಕೊಂಡು ಬಂದಿರುವ ಕುಟುಂಬದವರ ಬದುಕು ಈಗ ಅತಂತ್ರವಾಗಿದೆ.

Bamboo mora
ಬಿದಿರಿನ ಮೊರ ತಯಾರಕರು (ETV Bharat)
ಬಿದಿರಿನ ಮೊರ ತಯಾರಕ ಸಿದ್ದರಾಜು ಮಾತನಾಡಿದ್ದಾರೆ (ETV Bharat)

ಮೈಸೂರು : ಗೌರಿ-ಗಣೇಶ ಹಬ್ಬವನ್ನ ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಈ ಆಚರಣೆಗೆ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನ ಖರೀದಿಸುವುದು ವಾಡಿಕೆ. ಅದರಲ್ಲೂ ಗೌರಿ ಹಬ್ಬದ ದಿನ ಮದುವೆಯಾದ ತಮ್ಮ ಹೆಣ್ಣು ಮಕ್ಕಳಿಗೆ ತವರಿನ ಕಡೆಯಿಂದ ಬಾಗಿನ ಕೊಡುವುದು ವಾಡಿಕೆ. ಇಂತಹ ಬಾಗಿನದ ಸಂದರ್ಭದಲ್ಲಿ ಹೊಸದಾಗಿ ಮದುವೆಯಾದ ಮಗಳಿಗೆ ತಂದೆ-ತಾಯಿ ತವರು ಮನೆಯಿಂದ ಮಗಳ ಗಂಡನ ಮನೆಗೆ ಹೋಗಿ ಬಿದಿರಿನ ಮೊರದಲ್ಲಿ ಬಾಗಿನ ಕೊಡುತ್ತಾರೆ. ಇಂತಹ ಬಿದಿರಿನ ಮೊರಕ್ಕೆ ಈ ಹಬ್ಬದ ವೇಳೆ ತುಂಬಾ ಬೇಡಿಕೆಯಿದೆ. ಆದರೆ ಇದನ್ನ ತಯಾರಿಸುವ ಕುಟುಂಬದವರ ಬದುಕಿಗೆ ನೆಲೆ ಇಲ್ಲದಂತಾಗಿದೆ.

ಈ ಬಗ್ಗೆ ಬಿದಿರಿನ ಮೊರ ತಯಾರಕ ಸಿದ್ದರಾಜು ಮಾತನಾಡಿ, 'ಮಡಿಕೇರಿಯಿಂದ ಬಿದಿರು ತರಿಸಬೇಕು, ಅದನ್ನು ಬ್ಲಾಕ್​ ಅಲ್ಲಿ ಮಾರಬೇಕು. ಅದರಿಂದ ನಮಗೂ ಏನು ಲಾಭ ಸಿಗಲ್ಲ. ಒಂದು ಜತೆ ಬಿದಿರಿನ ಮೊರಕ್ಕೆ 150 ರಿಂದ 200 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ನಮಗೆ ಮಾಮೂಲಿ ರೇಟ್​ನಲ್ಲಿ 100 ರೂ. ಸಿಗುತ್ತೆ. ಈಗ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಿಂದ ಬಿದಿರು ತರಲು ಹಿಂಸೆಯಾಗುತ್ತೆ. ಅದರಿಂದಾಗಿ ನಮಗೆ ರೇಟ್​ ಜಾಸ್ತಿಯಾಗುತ್ತೆ. ಇಲ್ಲಿಯೂ ದುಬಾರಿ​ಯಾಗುತ್ತೆ. ಇದರಲ್ಲಿ ನಮಗೆ ಏನೂ ಸಿಗಲ್ಲ. ಮಳೆಬಂದು ಮಡಿಕೇರಿ, ಭಾಗಮಂಡಲದಲ್ಲಿ ಮುಚ್ಚಿಹೋದ್ರೆ ನಮಗೆ ಅದೂ ಇಲ್ಲದಂತಾಗುತ್ತೆ. ಆದರೂ ಕುಲ ಕಸುಬನ್ನು ಬಿಡಬಾರದು ಎಂದು ಇದನ್ನು ಮಾಡಿಕೊಂಡು ಬಂದಿದ್ದೇವೆ' ಎಂದಿದ್ದಾರೆ.

ಈ ಕುರಿತು ಮೊರ ತಯಾರಕರಾದ ನಿಂಗಮ್ಮ ಅವರು ಮಾತನಾಡಿ, 'ಈಗ ಒಂದು ತಿಂಗಳಲ್ಲಿ ವ್ಯಾಪಾರ ಚೆನ್ನಾಗಿ ಆಗುತ್ತೆ. ನಂತರದ ತಿಂಗಳಲ್ಲಿ ಅಷ್ಟೇನೂ ವ್ಯಾಪಾರ ಆಗಲ್ಲ. ಯಾವ ಸರ್ಕಾರ ಬಂದ್ರೂ ನಮಗೆ ಸೌಲಭ್ಯವಿಲ್ಲ. ಬಾಗಿನ ಕೊಡುವವರು ಇದನ್ನ ತೆಗೆದುಕೊಂಡು ಹೋಗ್ತಾರೆ. ನಮಗೆ ತುಂಬಾ ಕಷ್ಟ ಇದೆ. ಆದರೆ ಈ ಕಸುಬನ್ನು ಬಿಡುವ ಹಾಗಿಲ್ಲ. ಗೌರಿ ಹಬ್ಬದ ಸಮಯದಲ್ಲಿ ಪರವಾಗಿಲ್ಲ, ಆದ್ರೆ ಬೇರೆ ದಿನಗಳಲ್ಲಿ ಊಟಕ್ಕೂ ಬಡ್ಡಿ ಸಾಲ ಮಾಡಬೇಕಾಗಿದೆ' ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪ್ಲಾಸ್ಟಿಕ್‌ ಮೊರದ ಪೈಪೋಟಿ : ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಬಿದಿರಿನ ಮೊರ ಇರುತ್ತಿತ್ತು. ಮನೆಯಲ್ಲಿ ಆಹಾರ ಪದಾರ್ಥಗಳನ್ನ ಸಂಸ್ಕರಿಸಲು ಇದೇ ಬಿದಿರಿನ ಮೊರವನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಮನೆಯಲ್ಲೂ ಬಿದಿರಿನ ಮೊರ ಇರುತ್ತಿತ್ತು. ಜತೆಗೆ ರೈತರು ತಮ್ಮ ದವಸ-ಧಾನ್ಯಗಳನ್ನ ಸಂಸ್ಕರಣೆ ಮಾಡಲು ಇದೇ ಮೊರ ಬಳಸುತ್ತಿದ್ದರು. ಆದರೆ, ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ಕಡಿಮೆ ದರದಲ್ಲಿ ಪ್ಲಾಸ್ಟಿಕ್‌ ಮೊರಗಳು ಬಂದಿವೆ. ಇದರಿಂದಾಗಿ ದುಬಾರಿ ಬೆಲೆಯ ಬಿದಿರಿನ ಮೊರಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಉತ್ತಮ ಮುಂಗಾರು: ಮಾರುಕಟ್ಟೆಯಲ್ಲಿ ವಹಿವಾಟು ಜೋರು, ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ - Ganesha festival

ಬಿದಿರಿನ ಮೊರ ತಯಾರಕ ಸಿದ್ದರಾಜು ಮಾತನಾಡಿದ್ದಾರೆ (ETV Bharat)

ಮೈಸೂರು : ಗೌರಿ-ಗಣೇಶ ಹಬ್ಬವನ್ನ ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಈ ಆಚರಣೆಗೆ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನ ಖರೀದಿಸುವುದು ವಾಡಿಕೆ. ಅದರಲ್ಲೂ ಗೌರಿ ಹಬ್ಬದ ದಿನ ಮದುವೆಯಾದ ತಮ್ಮ ಹೆಣ್ಣು ಮಕ್ಕಳಿಗೆ ತವರಿನ ಕಡೆಯಿಂದ ಬಾಗಿನ ಕೊಡುವುದು ವಾಡಿಕೆ. ಇಂತಹ ಬಾಗಿನದ ಸಂದರ್ಭದಲ್ಲಿ ಹೊಸದಾಗಿ ಮದುವೆಯಾದ ಮಗಳಿಗೆ ತಂದೆ-ತಾಯಿ ತವರು ಮನೆಯಿಂದ ಮಗಳ ಗಂಡನ ಮನೆಗೆ ಹೋಗಿ ಬಿದಿರಿನ ಮೊರದಲ್ಲಿ ಬಾಗಿನ ಕೊಡುತ್ತಾರೆ. ಇಂತಹ ಬಿದಿರಿನ ಮೊರಕ್ಕೆ ಈ ಹಬ್ಬದ ವೇಳೆ ತುಂಬಾ ಬೇಡಿಕೆಯಿದೆ. ಆದರೆ ಇದನ್ನ ತಯಾರಿಸುವ ಕುಟುಂಬದವರ ಬದುಕಿಗೆ ನೆಲೆ ಇಲ್ಲದಂತಾಗಿದೆ.

ಈ ಬಗ್ಗೆ ಬಿದಿರಿನ ಮೊರ ತಯಾರಕ ಸಿದ್ದರಾಜು ಮಾತನಾಡಿ, 'ಮಡಿಕೇರಿಯಿಂದ ಬಿದಿರು ತರಿಸಬೇಕು, ಅದನ್ನು ಬ್ಲಾಕ್​ ಅಲ್ಲಿ ಮಾರಬೇಕು. ಅದರಿಂದ ನಮಗೂ ಏನು ಲಾಭ ಸಿಗಲ್ಲ. ಒಂದು ಜತೆ ಬಿದಿರಿನ ಮೊರಕ್ಕೆ 150 ರಿಂದ 200 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ನಮಗೆ ಮಾಮೂಲಿ ರೇಟ್​ನಲ್ಲಿ 100 ರೂ. ಸಿಗುತ್ತೆ. ಈಗ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಿಂದ ಬಿದಿರು ತರಲು ಹಿಂಸೆಯಾಗುತ್ತೆ. ಅದರಿಂದಾಗಿ ನಮಗೆ ರೇಟ್​ ಜಾಸ್ತಿಯಾಗುತ್ತೆ. ಇಲ್ಲಿಯೂ ದುಬಾರಿ​ಯಾಗುತ್ತೆ. ಇದರಲ್ಲಿ ನಮಗೆ ಏನೂ ಸಿಗಲ್ಲ. ಮಳೆಬಂದು ಮಡಿಕೇರಿ, ಭಾಗಮಂಡಲದಲ್ಲಿ ಮುಚ್ಚಿಹೋದ್ರೆ ನಮಗೆ ಅದೂ ಇಲ್ಲದಂತಾಗುತ್ತೆ. ಆದರೂ ಕುಲ ಕಸುಬನ್ನು ಬಿಡಬಾರದು ಎಂದು ಇದನ್ನು ಮಾಡಿಕೊಂಡು ಬಂದಿದ್ದೇವೆ' ಎಂದಿದ್ದಾರೆ.

ಈ ಕುರಿತು ಮೊರ ತಯಾರಕರಾದ ನಿಂಗಮ್ಮ ಅವರು ಮಾತನಾಡಿ, 'ಈಗ ಒಂದು ತಿಂಗಳಲ್ಲಿ ವ್ಯಾಪಾರ ಚೆನ್ನಾಗಿ ಆಗುತ್ತೆ. ನಂತರದ ತಿಂಗಳಲ್ಲಿ ಅಷ್ಟೇನೂ ವ್ಯಾಪಾರ ಆಗಲ್ಲ. ಯಾವ ಸರ್ಕಾರ ಬಂದ್ರೂ ನಮಗೆ ಸೌಲಭ್ಯವಿಲ್ಲ. ಬಾಗಿನ ಕೊಡುವವರು ಇದನ್ನ ತೆಗೆದುಕೊಂಡು ಹೋಗ್ತಾರೆ. ನಮಗೆ ತುಂಬಾ ಕಷ್ಟ ಇದೆ. ಆದರೆ ಈ ಕಸುಬನ್ನು ಬಿಡುವ ಹಾಗಿಲ್ಲ. ಗೌರಿ ಹಬ್ಬದ ಸಮಯದಲ್ಲಿ ಪರವಾಗಿಲ್ಲ, ಆದ್ರೆ ಬೇರೆ ದಿನಗಳಲ್ಲಿ ಊಟಕ್ಕೂ ಬಡ್ಡಿ ಸಾಲ ಮಾಡಬೇಕಾಗಿದೆ' ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪ್ಲಾಸ್ಟಿಕ್‌ ಮೊರದ ಪೈಪೋಟಿ : ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಬಿದಿರಿನ ಮೊರ ಇರುತ್ತಿತ್ತು. ಮನೆಯಲ್ಲಿ ಆಹಾರ ಪದಾರ್ಥಗಳನ್ನ ಸಂಸ್ಕರಿಸಲು ಇದೇ ಬಿದಿರಿನ ಮೊರವನ್ನು ಉಪಯೋಗಿಸುತ್ತಿದ್ದರು. ಪ್ರತಿಯೊಂದು ಮನೆಯಲ್ಲೂ ಬಿದಿರಿನ ಮೊರ ಇರುತ್ತಿತ್ತು. ಜತೆಗೆ ರೈತರು ತಮ್ಮ ದವಸ-ಧಾನ್ಯಗಳನ್ನ ಸಂಸ್ಕರಣೆ ಮಾಡಲು ಇದೇ ಮೊರ ಬಳಸುತ್ತಿದ್ದರು. ಆದರೆ, ಇತ್ತೀಚಿಗೆ ಮಾರುಕಟ್ಟೆಗಳಲ್ಲಿ ಕಡಿಮೆ ದರದಲ್ಲಿ ಪ್ಲಾಸ್ಟಿಕ್‌ ಮೊರಗಳು ಬಂದಿವೆ. ಇದರಿಂದಾಗಿ ದುಬಾರಿ ಬೆಲೆಯ ಬಿದಿರಿನ ಮೊರಕ್ಕೆ ಬೇಡಿಕೆ ಕಡಿಮೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಉತ್ತಮ ಮುಂಗಾರು: ಮಾರುಕಟ್ಟೆಯಲ್ಲಿ ವಹಿವಾಟು ಜೋರು, ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ - Ganesha festival

ETV Bharat Logo

Copyright © 2024 Ushodaya Enterprises Pvt. Ltd., All Rights Reserved.