ETV Bharat / state

ಜನರಲ್ಲಿ ಭಯ ಹುಟ್ಟಿಸಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು - king cobra captured

author img

By ETV Bharat Karnataka Team

Published : Jul 28, 2024, 6:39 PM IST

ಚಿಕ್ಕಮಗಳೂರು ಜಿಲ್ಲೆಯ ಕಳಸದ ಸಂಸೆ ಗ್ರಾ. ಪಂ ವ್ಯಾಪ್ತಿಯ ಪಾತಿ ಗುಡ್ಡದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ನಂತರ ಅದನ್ನು ಕಳಸದ ಹೊರವಲಯದ ಅರಣ್ಯಕ್ಕೆ ಬಿಡಲಾಗಿದೆ.

13-feet-king-cobra-captured-in-kalasa-released-into-wild
ಜನರಲ್ಲಿ ಭಯ ಹುಟ್ಟಿಸಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ (ETV Bharat)
ಜನರಲ್ಲಿ ಭಯ ಹುಟ್ಟಿಸಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ (ETV Bharat)

ಚಿಕ್ಕಮಗಳೂರು : ಒಂದು ಕಡೆ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದರೆ, ಇನ್ನೊಂದು ಕಡೆ ಸರಿಸೃಪಗಳು ಹಾಗೂ ಭಾರಿ ಗಾತ್ರದ ಹಾವುಗಳು ಹೊರ ಬಂದು ಜನರಲ್ಲಿ ಇನ್ನಷ್ಟು ಭಯದ ವಾತಾವರಣ ನಿರ್ಮಾಣ ಮಾಡಿವೆ.

ಒಂದು ವಾರದಿಂದ ಭಯ ಹುಟ್ಟಿಸಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸತತ ಕಾರ್ಯಾಚರಣೆಯ ಬಳಿಕ ಸೆರೆ ‌ ಹಿಡಿಯಲಾಗಿದೆ. ಜಿಲ್ಲೆಯ ಕಳಸದ ಸಂಸೆ ಗ್ರಾ. ಪಂ ವ್ಯಾಪ್ತಿಯ ಪಾತಿ ಗುಡ್ಡದಲ್ಲಿ‌ ಈ ಘಟನೆ ನಡೆದಿದ್ದು, ಕಾಳಿಂಗ ಸರ್ಪದ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು.

ಪ್ರತಿನಿತ್ಯ ಇದೇ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಭಾರಿ ಗಾತ್ರದ ಕಾಳಿಂಗ ಸರ್ಪ ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರಲ್ಲಿ ಹಾಗೂ ರಸ್ತೆಯಲ್ಲಿ ಸಾಗುವ ಜನರಲ್ಲಿ ಪ್ರತಿನಿತ್ಯ ಭಯ ಹುಟ್ಟಿಸಿತ್ತು. ಪದೇ ಪದೆ ಇದೇ ಭಾಗದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆ ಈ ರಸ್ತೆಯಲ್ಲಿ ಕೆಲವರು ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕಿ ವಾಪಸ್ ಹೋಗುತ್ತಿದ್ದರು. ಇಂದು ಮತ್ತೆ ಈ ಕಾಳಿಂಗ ಸರ್ಪ ಸ್ಥಳೀಯರಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ ಹಿನ್ನೆಲೆ ಕೂಡಲೇ ಸ್ಥಳೀಯರು ಕಳಸದ ಉರಗತಜ್ಞ ರಿಜ್ವಾನ್ ಅವರಿಗೆ ಸುದ್ದಿ ಮುಟ್ಟಿಸಿದ್ದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ರಿಜ್ವಾನ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆಯೂ ಒಂದು ಗಂಟೆಗೂ ಅಧಿಕಕಾಲ ನಿರಂತರ ಕಾರ್ಯಾಚರಣೆ ಮಾಡಿ, ಸಿಬ್ಬಂದಿ ನೇತೃತ್ವದಲ್ಲಿ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ.

ಈ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ ವೇಳೆ ಇದರ ಆರ್ಭಟವನ್ನು ನೋಡಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಂತರ ಸೆರೆಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ಸಮಕ್ಷಮದಲ್ಲಿ ಕಳಸ ತಾಲೂಕಿನ ಹೊರ ವಲಯದ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ : ತೋಟದಲ್ಲಿ ಬೀಡುಬಿಟ್ಟ ಕಾಳಿಂಗ ಸರ್ಪ: ಕಾರ್ಯಾಚರಣೆ ವೇಳೆ ಎಸ್ಕೇಪ್ - King Cobra Video

ಜನರಲ್ಲಿ ಭಯ ಹುಟ್ಟಿಸಿದ್ದ ಭಾರಿ ಗಾತ್ರದ ಕಾಳಿಂಗ ಸರ್ಪ ಸೆರೆ (ETV Bharat)

ಚಿಕ್ಕಮಗಳೂರು : ಒಂದು ಕಡೆ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದ್ದರೆ, ಇನ್ನೊಂದು ಕಡೆ ಸರಿಸೃಪಗಳು ಹಾಗೂ ಭಾರಿ ಗಾತ್ರದ ಹಾವುಗಳು ಹೊರ ಬಂದು ಜನರಲ್ಲಿ ಇನ್ನಷ್ಟು ಭಯದ ವಾತಾವರಣ ನಿರ್ಮಾಣ ಮಾಡಿವೆ.

ಒಂದು ವಾರದಿಂದ ಭಯ ಹುಟ್ಟಿಸಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸತತ ಕಾರ್ಯಾಚರಣೆಯ ಬಳಿಕ ಸೆರೆ ‌ ಹಿಡಿಯಲಾಗಿದೆ. ಜಿಲ್ಲೆಯ ಕಳಸದ ಸಂಸೆ ಗ್ರಾ. ಪಂ ವ್ಯಾಪ್ತಿಯ ಪಾತಿ ಗುಡ್ಡದಲ್ಲಿ‌ ಈ ಘಟನೆ ನಡೆದಿದ್ದು, ಕಾಳಿಂಗ ಸರ್ಪದ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು.

ಪ್ರತಿನಿತ್ಯ ಇದೇ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಭಾರಿ ಗಾತ್ರದ ಕಾಳಿಂಗ ಸರ್ಪ ತೋಟದ ಕೆಲಸಕ್ಕೆ ಹೋಗುವ ಕಾರ್ಮಿಕರಲ್ಲಿ ಹಾಗೂ ರಸ್ತೆಯಲ್ಲಿ ಸಾಗುವ ಜನರಲ್ಲಿ ಪ್ರತಿನಿತ್ಯ ಭಯ ಹುಟ್ಟಿಸಿತ್ತು. ಪದೇ ಪದೆ ಇದೇ ಭಾಗದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆ ಈ ರಸ್ತೆಯಲ್ಲಿ ಕೆಲವರು ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕಿ ವಾಪಸ್ ಹೋಗುತ್ತಿದ್ದರು. ಇಂದು ಮತ್ತೆ ಈ ಕಾಳಿಂಗ ಸರ್ಪ ಸ್ಥಳೀಯರಿಗೆ ಕಾಣಿಸಿಕೊಂಡು ಭಯ ಹುಟ್ಟಿಸಿದ ಹಿನ್ನೆಲೆ ಕೂಡಲೇ ಸ್ಥಳೀಯರು ಕಳಸದ ಉರಗತಜ್ಞ ರಿಜ್ವಾನ್ ಅವರಿಗೆ ಸುದ್ದಿ ಮುಟ್ಟಿಸಿದ್ದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ರಿಜ್ವಾನ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆಯೂ ಒಂದು ಗಂಟೆಗೂ ಅಧಿಕಕಾಲ ನಿರಂತರ ಕಾರ್ಯಾಚರಣೆ ಮಾಡಿ, ಸಿಬ್ಬಂದಿ ನೇತೃತ್ವದಲ್ಲಿ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ.

ಈ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವ ವೇಳೆ ಇದರ ಆರ್ಭಟವನ್ನು ನೋಡಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಂತರ ಸೆರೆಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ಸಮಕ್ಷಮದಲ್ಲಿ ಕಳಸ ತಾಲೂಕಿನ ಹೊರ ವಲಯದ ಅರಣ್ಯಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ : ತೋಟದಲ್ಲಿ ಬೀಡುಬಿಟ್ಟ ಕಾಳಿಂಗ ಸರ್ಪ: ಕಾರ್ಯಾಚರಣೆ ವೇಳೆ ಎಸ್ಕೇಪ್ - King Cobra Video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.