ETV Bharat / sports

ಜಿಂಬಾಬ್ವೆ ವಿರುದ್ಧ 4-1 ಅಂತರದಲ್ಲಿ ಸರಣಿ ಗೆದ್ದ ಭಾರತ ಯುವ ಪಡೆ, ಗಿಲ್​ ನಾಯಕತ್ವಕ್ಕೆ ಫುಲ್​ಮಾರ್ಕ್ಸ್​​ - ZIM vs IND cricket

author img

By ETV Bharat Karnataka Team

Published : Jul 14, 2024, 8:48 PM IST

ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿದ್ದ ಶುಭ್​ಮನ್​​ ಗಿಲ್​ ಸರಣಿ ಜಯ ತಂದುಕೊಟ್ಟರು. ಈ ತಿಂಗಳಾಂತ್ಯದಲ್ಲಿ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.

ಸರಣಿ ಗೆದ್ದ ಭಾರತ ಯುವ ಪಡೆ
ಸರಣಿ ಗೆದ್ದ ಭಾರತ ಯುವ ಪಡೆ (X handle)

ಹರಾರೆ: ಜಿಂಬಾಬ್ವೆ ವಿರುದ್ಧದ ಐದನೇ ಮತ್ತು ಅಂತಿಮ ಟಿ-20 ಪಂದ್ಯವನ್ನು 42 ರನ್​ಗಳಿಂದ ಗೆಲ್ಲುವ ಮೂಲಕ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತ ಯುವ ತಂಡ ಯಶಸ್ವಿಯಾಗಿ ಮುಗಿಸಿತು. 4-1 ಅಂತರದಲ್ಲಿ ಸರಣಿಯನ್ನು ಜಯಿಸಿ, ವಿಶ್ವಕಪ್​ ಕಿರೀಟ ಮುಡಿಗೇರಿಸಿಕೊಂಡ ಬಳಿಕದ ಮೊದಲ ಸಿಹಿ ಅನುಭವಿಸಿತು.

ಈ ತಿಂಗಳ ಕೊನೆಯಲ್ಲಿ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲು ಜಿಂಬಾಬ್ವೆ ಸರಣಿ ಗೆಲುವು ಆತ್ಮವಿಶ್ವಾಸ ವೃದ್ಧಿಸಿತು. ಲಂಕಾ ಪ್ರವಾಸಕ್ಕೆ ಯುವ ಪಡೆಯ ಜೊತೆಗೆ ಹಿರಿಯ ಆಟಗಾರರೂ ಸೇರಿಕೊಳ್ಳಲಿದ್ದಾರೆ.

ಟಿ-20 ವಿಶ್ವಕಪ್​ ತಂಡದಲ್ಲಿದ್ದ ಸಂಜು ಸ್ಯಾಮ್ಸನ್​, ಶಿವಂ ದುಬೆ, ಯಶಸ್ವಿ ಜೈಸ್ವಾಲ್​ ಹೊರತುಪಡಿಸಿ ಎಲ್ಲ ಪ್ರಮುಖ ಆಟಗಾರರಿಗೆ ಸರಣಿಗೆ ವಿಶ್ರಾಂತಿ ನೀಡಿ, ಶುಭ್​ಮನ್​ ಗಿಲ್​ ನೇತೃತ್ವದಲ್ಲಿ ಯುವ ತಂಡವನ್ನು ಜಿಂಬಾಬ್ವೆಗೆ ಕಳುಹಿಸಿತ್ತು. ಇದರ ನೇತೃತ್ವವನ್ನು ಹಂಗಾಮಿ ಕೋಚ್​ ಆಗಿ ವಿವಿಎಸ್​​ ಲಕ್ಷ್ಮಣ್​ ವಹಿಸಿದ್ದರು. ಯುವ ಪಡೆಯಲ್ಲಿ ಖಲೀಲ್​ ಅಹ್ಮದ್​, ಧ್ರುವ್ ಜುರೆಲ್​, ತುಷಾರ್​ ದೇಶಪಾಂಡೆ, ರಿಯಾನ್​ ಪರಾಗ್​, ಅಭಿಷೇಕ್​ ಶರ್ಮಾ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದರು.

ಕ್ರಿಕೆಟ್​ ಶಿಶು ಜಿಂಬಾಬ್ವೆ ವಿರುದ್ಧ ಭಾರತದ ಯುವ ಪ್ರತಿಭೆಗಳು ತಮ್ಮ ತಾಕತ್ತು ತೋರಿಸಿ ಐದು ಪಂದ್ಯಗಳ ಸರಣಿಯನ್ನು 4-1 ರಲ್ಲಿ ಜಯಿಸಿದರು. ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕ ತಮ್ಮನ್ನು ತಿದ್ದಿಕೊಂಡ ತಂಡ ಉಳಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಭಾರತ ತಂಡದ ಸಾರಥ್ಯ ವಹಿಸಿದ್ದ ಗಿಲ್​ ಕೂಡ ನಾಯಕತ್ವದ ಮೊದಲ ಯತ್ನದಲ್ಲೇ ಯಶ ಕಂಡರು.

ಐದನೇ ಪಂದ್ಯದ ಫಲಿತಾಂಶ: ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಗಿಲ್​ (12) ಮತ್ತು ಜೈಸ್ವಾಲ್​ (13) ಇಲ್ಲಿ ವಿಫಲವಾದರು. ಅಭಿಷೇಕ್​ ಶರ್ಮಾ (14) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ತಂಡ ರನ್​ ಬರ ಎದುರಿಸುತ್ತಿದ್ದಾಗ ಮೈದಾನಕ್ಕಿಳಿದ ಸಂಜು ಸ್ಯಾಮ್ಸನ್​, ಜಿಂಬಾಬ್ವೆ ಬೌಲರ್​ಗಳನ್ನು ಬೆಂಡೆತ್ತಿ 45 ಎಸೆತಗಳಲ್ಲಿ 58 ರನ್​ ಬಾರಿಸಿದರು. ಇದರ ಜೊತೆಗೆ ರಿಯಾನ್​ ಪರಾಗ್​ 22, ಶಿವಂ ದುಬೆ 26, ರಿಂಕು ಸಿಂಗ್​ 11 ರನ್​ ಗಳಿಸಿದರು. ಇದರಿಂದ ತಂಡ ನಿಗದಿತ ಓವರ್​ಗಳಲ್ಲಿ 6 ವಿಕೆಟ್​ಗೆ 167 ರನ್​ ದಾಖಲಿಸಿತು.

ಗುರಿ ಬೆನ್ನತ್ತಿದ ಜಿಂಬಾಬ್ವೆಗೆ ಮುಖೇಶ್​​ ಕುಮಾರ್​ ಶಾಕ್​ ನೀಡಿದರು. ಮೊದಲ ಓವರ್​ನ ಮೂರನೇ ಎಸೆತದಲ್ಲೇ ಮಡೆವೆರೆ ವಿಕೆಟ್​ ಕಿತ್ತರು. ಬಳಿಕ ಯಾರೊಬ್ಬರೂ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲವಾದರು. ಡಿಯಾನ್​ ಮೇಯರ್ಸ್​ 34, ಮರುಮನಿ 27, ಫರಜ್​ ಅಕ್ರಮ್​ 27 ರನ್​ ಪೇರಿಸಿದರು. ಸತತ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿ 18.3 ಓವರ್​ಗಳಲ್ಲಿ 125 ರನ್​ ಗಳಿಸಿ ಸರ್ವಪತನ ಕಂಡಿತು. ಭಾರತದ ಪರವಾಗಿ ಮುಖೇಶ್​ ಕುಮಾರ್​ 4 ವಿಕೆಟ್​ ಪಡೆದು ಪ್ರಭಾವಿಯಾದರು.

ಇದನ್ನೂ ಓದಿ; ಚಾಂಪಿಯನ್ಸ್​ ಟ್ರೋಫಿಯ ಎಲ್ಲ ಪಂದ್ಯ ಪಾಕಿಸ್ತಾನದಲ್ಲಿಯೇ ನಡೆಯಲಿ: ಬಿಕ್ಕಟ್ಟು ಸೃಷ್ಟಿಸಿದ ಪಿಸಿಬಿ ಹಠಮಾರಿ ಧೋರಣೆ - Champions Trophy 2025

ಹರಾರೆ: ಜಿಂಬಾಬ್ವೆ ವಿರುದ್ಧದ ಐದನೇ ಮತ್ತು ಅಂತಿಮ ಟಿ-20 ಪಂದ್ಯವನ್ನು 42 ರನ್​ಗಳಿಂದ ಗೆಲ್ಲುವ ಮೂಲಕ ಐದು ಪಂದ್ಯಗಳ ಟಿ-20 ಸರಣಿಯನ್ನು ಭಾರತ ಯುವ ತಂಡ ಯಶಸ್ವಿಯಾಗಿ ಮುಗಿಸಿತು. 4-1 ಅಂತರದಲ್ಲಿ ಸರಣಿಯನ್ನು ಜಯಿಸಿ, ವಿಶ್ವಕಪ್​ ಕಿರೀಟ ಮುಡಿಗೇರಿಸಿಕೊಂಡ ಬಳಿಕದ ಮೊದಲ ಸಿಹಿ ಅನುಭವಿಸಿತು.

ಈ ತಿಂಗಳ ಕೊನೆಯಲ್ಲಿ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮೊದಲು ಜಿಂಬಾಬ್ವೆ ಸರಣಿ ಗೆಲುವು ಆತ್ಮವಿಶ್ವಾಸ ವೃದ್ಧಿಸಿತು. ಲಂಕಾ ಪ್ರವಾಸಕ್ಕೆ ಯುವ ಪಡೆಯ ಜೊತೆಗೆ ಹಿರಿಯ ಆಟಗಾರರೂ ಸೇರಿಕೊಳ್ಳಲಿದ್ದಾರೆ.

ಟಿ-20 ವಿಶ್ವಕಪ್​ ತಂಡದಲ್ಲಿದ್ದ ಸಂಜು ಸ್ಯಾಮ್ಸನ್​, ಶಿವಂ ದುಬೆ, ಯಶಸ್ವಿ ಜೈಸ್ವಾಲ್​ ಹೊರತುಪಡಿಸಿ ಎಲ್ಲ ಪ್ರಮುಖ ಆಟಗಾರರಿಗೆ ಸರಣಿಗೆ ವಿಶ್ರಾಂತಿ ನೀಡಿ, ಶುಭ್​ಮನ್​ ಗಿಲ್​ ನೇತೃತ್ವದಲ್ಲಿ ಯುವ ತಂಡವನ್ನು ಜಿಂಬಾಬ್ವೆಗೆ ಕಳುಹಿಸಿತ್ತು. ಇದರ ನೇತೃತ್ವವನ್ನು ಹಂಗಾಮಿ ಕೋಚ್​ ಆಗಿ ವಿವಿಎಸ್​​ ಲಕ್ಷ್ಮಣ್​ ವಹಿಸಿದ್ದರು. ಯುವ ಪಡೆಯಲ್ಲಿ ಖಲೀಲ್​ ಅಹ್ಮದ್​, ಧ್ರುವ್ ಜುರೆಲ್​, ತುಷಾರ್​ ದೇಶಪಾಂಡೆ, ರಿಯಾನ್​ ಪರಾಗ್​, ಅಭಿಷೇಕ್​ ಶರ್ಮಾ ಇದೇ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದಿದ್ದರು.

ಕ್ರಿಕೆಟ್​ ಶಿಶು ಜಿಂಬಾಬ್ವೆ ವಿರುದ್ಧ ಭಾರತದ ಯುವ ಪ್ರತಿಭೆಗಳು ತಮ್ಮ ತಾಕತ್ತು ತೋರಿಸಿ ಐದು ಪಂದ್ಯಗಳ ಸರಣಿಯನ್ನು 4-1 ರಲ್ಲಿ ಜಯಿಸಿದರು. ಮೊದಲ ಪಂದ್ಯದಲ್ಲಿ ಎದುರಾದ ಸೋಲಿನ ಬಳಿಕ ತಮ್ಮನ್ನು ತಿದ್ದಿಕೊಂಡ ತಂಡ ಉಳಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಭಾರತ ತಂಡದ ಸಾರಥ್ಯ ವಹಿಸಿದ್ದ ಗಿಲ್​ ಕೂಡ ನಾಯಕತ್ವದ ಮೊದಲ ಯತ್ನದಲ್ಲೇ ಯಶ ಕಂಡರು.

ಐದನೇ ಪಂದ್ಯದ ಫಲಿತಾಂಶ: ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ನಾಲ್ಕನೇ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಗಿಲ್​ (12) ಮತ್ತು ಜೈಸ್ವಾಲ್​ (13) ಇಲ್ಲಿ ವಿಫಲವಾದರು. ಅಭಿಷೇಕ್​ ಶರ್ಮಾ (14) ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿದರು. ತಂಡ ರನ್​ ಬರ ಎದುರಿಸುತ್ತಿದ್ದಾಗ ಮೈದಾನಕ್ಕಿಳಿದ ಸಂಜು ಸ್ಯಾಮ್ಸನ್​, ಜಿಂಬಾಬ್ವೆ ಬೌಲರ್​ಗಳನ್ನು ಬೆಂಡೆತ್ತಿ 45 ಎಸೆತಗಳಲ್ಲಿ 58 ರನ್​ ಬಾರಿಸಿದರು. ಇದರ ಜೊತೆಗೆ ರಿಯಾನ್​ ಪರಾಗ್​ 22, ಶಿವಂ ದುಬೆ 26, ರಿಂಕು ಸಿಂಗ್​ 11 ರನ್​ ಗಳಿಸಿದರು. ಇದರಿಂದ ತಂಡ ನಿಗದಿತ ಓವರ್​ಗಳಲ್ಲಿ 6 ವಿಕೆಟ್​ಗೆ 167 ರನ್​ ದಾಖಲಿಸಿತು.

ಗುರಿ ಬೆನ್ನತ್ತಿದ ಜಿಂಬಾಬ್ವೆಗೆ ಮುಖೇಶ್​​ ಕುಮಾರ್​ ಶಾಕ್​ ನೀಡಿದರು. ಮೊದಲ ಓವರ್​ನ ಮೂರನೇ ಎಸೆತದಲ್ಲೇ ಮಡೆವೆರೆ ವಿಕೆಟ್​ ಕಿತ್ತರು. ಬಳಿಕ ಯಾರೊಬ್ಬರೂ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲವಾದರು. ಡಿಯಾನ್​ ಮೇಯರ್ಸ್​ 34, ಮರುಮನಿ 27, ಫರಜ್​ ಅಕ್ರಮ್​ 27 ರನ್​ ಪೇರಿಸಿದರು. ಸತತ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿ 18.3 ಓವರ್​ಗಳಲ್ಲಿ 125 ರನ್​ ಗಳಿಸಿ ಸರ್ವಪತನ ಕಂಡಿತು. ಭಾರತದ ಪರವಾಗಿ ಮುಖೇಶ್​ ಕುಮಾರ್​ 4 ವಿಕೆಟ್​ ಪಡೆದು ಪ್ರಭಾವಿಯಾದರು.

ಇದನ್ನೂ ಓದಿ; ಚಾಂಪಿಯನ್ಸ್​ ಟ್ರೋಫಿಯ ಎಲ್ಲ ಪಂದ್ಯ ಪಾಕಿಸ್ತಾನದಲ್ಲಿಯೇ ನಡೆಯಲಿ: ಬಿಕ್ಕಟ್ಟು ಸೃಷ್ಟಿಸಿದ ಪಿಸಿಬಿ ಹಠಮಾರಿ ಧೋರಣೆ - Champions Trophy 2025

ETV Bharat Logo

Copyright © 2024 Ushodaya Enterprises Pvt. Ltd., All Rights Reserved.