ETV Bharat / sports

ಇದೇ ಕಾರಣಕ್ಕೆ ನಾನು ಟಿ20​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದೆ: 3 ತಿಂಗಳ ಬಳಿಕ ಸತ್ಯ ಬಿಚ್ಚಿಟ್ಟ ರೋಹಿತ್​ ಶರ್ಮಾ​! - Rohit Sharma T20 Retirement Reason

author img

By ETV Bharat Sports Team

Published : 3 hours ago

ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ನಿವೃತ್ತಿ ಘೋಷಿಸಿಸಲು ಕಾರಣ ಏನು ಎಂದು 3 ತಿಂಗಳ ಬಳಿಕ ರೋಹಿತ್​ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಅದೇನೆಂದು ಈ ಸುದ್ದಿಯಲ್ಲಿ ತಿಳಿಯಿರಿ.

ರೋಹಿತ್​ ಶರ್ಮಾ
ರೋಹಿತ್​ ಶರ್ಮಾ (ANI Photos)

ಹೈದರಾಬಾದ್​: ಈ ವರ್ಷ ಭಾರತ ಕ್ರಿಕೆಟ್​ ತಂಡಕ್ಕೆ ಅದೃಷ್ಟದ ವರ್ಷವೆಂದೇ ಹೇಳಲಾಗುತ್ತಿದೆ. ಕಾರಣ 17 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್​ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಜೂನ್​ ತಿಂಗಳಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್​ ಪ್ರವೇಶಿಸಿದ್ದ ಭಾರತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು.

2007ರಲ್ಲಿ ಕ್ಯಾಪ್ಟನ್​ ಕೂಲ್ ಧೋನಿ ನಾಯಕತ್ವದಲ್ಲಿ ಭಾರತ ಕಪ್ ಗೆದ್ದಿದ್ದರೇ, ಇದೀಗ 2024ರಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಇನ್ನು ಈ ಪಂದ್ಯ ಗೆಲ್ಲುತ್ತಿದ್ದಂತೆ ಹಿಂದೂಸ್ಥಾನದ ಪ್ರತಿ ಮನೆಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳಂತೂ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಿ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಖುಷಿಯಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ದಿಢೀರ್​ ನಿವೃತ್ತಿ ಘೋಷಿಸಿ ಕ್ರೀಡಾ ಪ್ರಿಯರಿಗೆ ಶಾಕ್​ ನೀಡಿದ್ದರು. ಕಪ್ ಗೆದ್ದಿದ್ದಕ್ಕೆ ಸಂಭ್ರಮಿಸಬೇಕೋ ಅಥವಾ ಈ ಆಟಗಾರರು ನಿವೃತ್ತಿ ಘೋಷಿಸಿದ್ದಕ್ಕೆ ಬೇಸರಪಡಬೇಕೋ ಎಂದು ಗೊತ್ತಿಲ್ಲದ್ದ ಸ್ಥಿತಿಗೆ ಅಭಿಮಾನಿಗಳು ತಲುಪಿದ್ದರು.

ರೋಹಿತ್​ ನೀಡಿದ ಕಾರಣ: ಇನ್ಮುಂದೆ ರೋಹಿತ್​ ಮತ್ತು ವಿರಾಟ್​ ಇಲ್ಲದೇ ಟಿ20 ಪಂದ್ಯಗಳನ್ನು ಹೇಗೆ ನೋಡುವುದು ಎಂದು ಅಭಿಮಾನಿಗಳು ದುಃಖ ಹೊರಹಾಕಿದ್ದರು. ಆದರೆ, ತಮ್ಮ ನಿವೃತ್ತಿಗೆ ಕಾರಣ ಏನು ಎಂಬುದರ ಬಗ್ಗೆ ರೋಹಿತ್​​ ಶರ್ಮಾ ಎಲ್ಲೂ ಮಾತನಾಡಿರಲಿಲ್ಲ. ಇದೀಗ 3 ತಿಂಗಳ ಬಳಿಕ ಹಿಟ್​ಮ್ಯಾನ್​ ತಮ್ಮ ನಿವೃತ್ತಿಗೆ ಕಾರಣ ತಿಳಿಸಿದ್ದಾರೆ.

ಹೌದು, ಇತ್ತೀಚೆಗಷ್ಟೇ ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ನಡೆದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ವಯಸ್ಸಾಗುತ್ತಿರುವ ಕಾರಣ ಟಿ20ಗೆ ನಿವೃತ್ತಿ ಘೋಷಿಸಿದ್ದೀರಾ ಎಂದು ಆ್ಯಂಕರ್​​ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಹಿಟ್​ಮ್ಯಾನ್​, 17 ವರ್ಷಗಳ ಕಾಲ ಟಿ20 ಸ್ವರೂಪದಲ್ಲಿ ಆಡಿದ್ದೇನೆ. ನನಗೆ ಇನ್ನೂ ಮೂರು ಸ್ವರೂಪದಲ್ಲಿ ಆಡುವ ಸಾಮರ್ಥ್ಯ ಇತ್ತು. ಆದರೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯವಾಗಿತ್ತು. ಅಲ್ಲದೇ ಮುಂದೆ ಇಂತಹ ಅವಕಾಶ ಸಿಗುವುದಿಲ್ಲ ಎಂದು ಭಾವಿಸಿ ಅಂದೇ ನಾನು ವಿದಾಯ ಹೇಳುವ ತೀರ್ಮಾನ ಮಾಡಿ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.

ಸದ್ಯ ರೋಹಿತ್​ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ದ ಟೆಸ್ಟ್​ ಸರಣಿ ಆಡುತ್ತಿದ್ದು, ಮೊದಲ ಪಂದ್ಯವನ್ನು 280 ರನ್​ಗಳಿಂದ ಗೆದ್ದಿರುವ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಸನ್ನಾಹದಲ್ಲಿದೆ.

ಇದನ್ನೂ ಓದಿ: ಕಾನ್ಪುರ ಮೈದಾನದಲ್ಲಿ ಮತ್ತೊಂದು ದಾಖಲೆ ಬರೆದ ಕೊಹ್ಲಿ: ಸಚಿನ್​ ತೆಂಡೂಲ್ಕರ್​ ರೆಕಾರ್ಡ್ ಬ್ರೇಕ್​!​ - Virat kohli breaks Sachin Record

ಹೈದರಾಬಾದ್​: ಈ ವರ್ಷ ಭಾರತ ಕ್ರಿಕೆಟ್​ ತಂಡಕ್ಕೆ ಅದೃಷ್ಟದ ವರ್ಷವೆಂದೇ ಹೇಳಲಾಗುತ್ತಿದೆ. ಕಾರಣ 17 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್​ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಜೂನ್​ ತಿಂಗಳಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಅಜೇಯವಾಗಿ ಫೈನಲ್​ ಪ್ರವೇಶಿಸಿದ್ದ ಭಾರತ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಎತ್ತಿ ಹಿಡಿದಿತ್ತು.

2007ರಲ್ಲಿ ಕ್ಯಾಪ್ಟನ್​ ಕೂಲ್ ಧೋನಿ ನಾಯಕತ್ವದಲ್ಲಿ ಭಾರತ ಕಪ್ ಗೆದ್ದಿದ್ದರೇ, ಇದೀಗ 2024ರಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಇನ್ನು ಈ ಪಂದ್ಯ ಗೆಲ್ಲುತ್ತಿದ್ದಂತೆ ಹಿಂದೂಸ್ಥಾನದ ಪ್ರತಿ ಮನೆಗಳಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಅದರಲ್ಲೂ ಕ್ರಿಕೆಟ್ ಅಭಿಮಾನಿಗಳಂತೂ ಪಟಾಕಿ ಸಿಡಿಸಿ ಸಿಹಿ ತಿನಿಸುಗಳನ್ನು ಹಂಚಿ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಇಷ್ಟೆಲ್ಲ ಖುಷಿಯಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ದಿಢೀರ್​ ನಿವೃತ್ತಿ ಘೋಷಿಸಿ ಕ್ರೀಡಾ ಪ್ರಿಯರಿಗೆ ಶಾಕ್​ ನೀಡಿದ್ದರು. ಕಪ್ ಗೆದ್ದಿದ್ದಕ್ಕೆ ಸಂಭ್ರಮಿಸಬೇಕೋ ಅಥವಾ ಈ ಆಟಗಾರರು ನಿವೃತ್ತಿ ಘೋಷಿಸಿದ್ದಕ್ಕೆ ಬೇಸರಪಡಬೇಕೋ ಎಂದು ಗೊತ್ತಿಲ್ಲದ್ದ ಸ್ಥಿತಿಗೆ ಅಭಿಮಾನಿಗಳು ತಲುಪಿದ್ದರು.

ರೋಹಿತ್​ ನೀಡಿದ ಕಾರಣ: ಇನ್ಮುಂದೆ ರೋಹಿತ್​ ಮತ್ತು ವಿರಾಟ್​ ಇಲ್ಲದೇ ಟಿ20 ಪಂದ್ಯಗಳನ್ನು ಹೇಗೆ ನೋಡುವುದು ಎಂದು ಅಭಿಮಾನಿಗಳು ದುಃಖ ಹೊರಹಾಕಿದ್ದರು. ಆದರೆ, ತಮ್ಮ ನಿವೃತ್ತಿಗೆ ಕಾರಣ ಏನು ಎಂಬುದರ ಬಗ್ಗೆ ರೋಹಿತ್​​ ಶರ್ಮಾ ಎಲ್ಲೂ ಮಾತನಾಡಿರಲಿಲ್ಲ. ಇದೀಗ 3 ತಿಂಗಳ ಬಳಿಕ ಹಿಟ್​ಮ್ಯಾನ್​ ತಮ್ಮ ನಿವೃತ್ತಿಗೆ ಕಾರಣ ತಿಳಿಸಿದ್ದಾರೆ.

ಹೌದು, ಇತ್ತೀಚೆಗಷ್ಟೇ ಯೂಟ್ಯೂಬ್​ ಚಾನೆಲ್​ವೊಂದರಲ್ಲಿ ನಡೆದ ಸಂದರ್ಶನದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ವಯಸ್ಸಾಗುತ್ತಿರುವ ಕಾರಣ ಟಿ20ಗೆ ನಿವೃತ್ತಿ ಘೋಷಿಸಿದ್ದೀರಾ ಎಂದು ಆ್ಯಂಕರ್​​ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಹಿಟ್​ಮ್ಯಾನ್​, 17 ವರ್ಷಗಳ ಕಾಲ ಟಿ20 ಸ್ವರೂಪದಲ್ಲಿ ಆಡಿದ್ದೇನೆ. ನನಗೆ ಇನ್ನೂ ಮೂರು ಸ್ವರೂಪದಲ್ಲಿ ಆಡುವ ಸಾಮರ್ಥ್ಯ ಇತ್ತು. ಆದರೆ ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯವಾಗಿತ್ತು. ಅಲ್ಲದೇ ಮುಂದೆ ಇಂತಹ ಅವಕಾಶ ಸಿಗುವುದಿಲ್ಲ ಎಂದು ಭಾವಿಸಿ ಅಂದೇ ನಾನು ವಿದಾಯ ಹೇಳುವ ತೀರ್ಮಾನ ಮಾಡಿ ಘೋಷಣೆ ಮಾಡಿದೆ ಎಂದು ತಿಳಿಸಿದ್ದಾರೆ.

ಸದ್ಯ ರೋಹಿತ್​ ನಾಯಕತ್ವದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ದ ಟೆಸ್ಟ್​ ಸರಣಿ ಆಡುತ್ತಿದ್ದು, ಮೊದಲ ಪಂದ್ಯವನ್ನು 280 ರನ್​ಗಳಿಂದ ಗೆದ್ದಿರುವ ಟೀಂ ಇಂಡಿಯಾ ಇದೀಗ ಎರಡನೇ ಪಂದ್ಯವನ್ನು ಗೆಲ್ಲುವ ಸನ್ನಾಹದಲ್ಲಿದೆ.

ಇದನ್ನೂ ಓದಿ: ಕಾನ್ಪುರ ಮೈದಾನದಲ್ಲಿ ಮತ್ತೊಂದು ದಾಖಲೆ ಬರೆದ ಕೊಹ್ಲಿ: ಸಚಿನ್​ ತೆಂಡೂಲ್ಕರ್​ ರೆಕಾರ್ಡ್ ಬ್ರೇಕ್​!​ - Virat kohli breaks Sachin Record

ETV Bharat Logo

Copyright © 2024 Ushodaya Enterprises Pvt. Ltd., All Rights Reserved.