ETV Bharat / sports

ವಿಶ್ವಕಪ್​ ಎತ್ತಿ ಹಿಡಿದ ಬಳಿಕ ಪಿಚ್​​ ಮೇಲಿನ ಮಣ್ಣು ತಿಂದು 'ಗೆಲುವಿನ ರುಚಿ' ಸವಿದ ರೋಹಿತ್​ ಶರ್ಮಾ - Rohit Sharma

author img

By PTI

Published : Jul 1, 2024, 9:04 AM IST

ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ, ಭಾರತಕ್ಕೆ ಟಿ20 ವಿಶ್ವಕಪ್​ ಗೆಲ್ಲಿಸಿಕೊಡುವ ಮೂಲಕ ಚುಟುಕು ಮಾದರಿಗೆ ವಿದಾಯ ಹೇಳಿದ್ದಾರೆ. ಇದಕ್ಕೂ ಮೊದಲು ಅವರ ನಡೆಯೊಂದು ಭಾರೀ ಸದ್ದು ಮಾಡುತ್ತಿದೆ.

ಮಣ್ಣು ತಿಂದು ಗೆಲುವಿನ ರುಚಿ ಸವಿದ ರೋಹಿತ್​ ಶರ್ಮಾ
ಮಣ್ಣು ತಿಂದು ಗೆಲುವಿನ ರುಚಿ ಸವಿದ ರೋಹಿತ್​ ಶರ್ಮಾ (ETV Bharat)

ಬಾರ್ಬಡೋಸ್(ವೆಸ್ಟ್​ ಇಂಡೀಸ್​): ಗೆಲುವಿನ ಧನ್ಯತೆಯೇ ಹಾಗೆ. ಹಠ ಹಿಡಿದು ಸಾಧಿಸಿದ ಬಳಿಕ ಅದರಿಂದ ಬರುವ ಖುಷಿಗೆ ಪಾರವೇ ಇರುವುದಿಲ್ಲ. ಅಲ್ಲಿ ಉಂಟಾಗುವ ಧನ್ಯತಾಭಾವಕ್ಕೆ ಬೆಲೆಕಟ್ಟಲಾಗದು. ಟಿ-20 ವಿಶ್ವಕಪ್​ ಗೆಲುವಿನ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್​ ಶರ್ಮಾ ಇಂಥದ್ದೇ ಮನಸ್ಥಿತಿಗೆ ಒಳಗಾಗಿದ್ದರು.

ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​​ನಲ್ಲಿ ನಡೆದ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸಿ 17 ವರ್ಷಗಳ ಬಳಿಕ ಮತ್ತೊಂದು ವಿಶ್ವಕಪ್​ ಎತ್ತಿ ಹಿಡಿಯಿತು. 11 ವರ್ಷಗಳ ಐಸಿಸಿ ಟ್ರೋಫಿ ಬರವೂ ನೀಗಿತು. ಇದು ಆಟಗಾರರು ಸೇರಿ ಭಾರತೀಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಗಮನ ಸೆಳೆದ ರೋಹಿತ್​ ನಡೆ: ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿ ವಿಶ್ವಕಪ್​​ ಗೆಲುವು ಸಿಕ್ಕ ಬಳಿಕ ದೀರ್ಘ ಕಾಯುವಿಕೆಗೆ ವಿರಾಮ ಸಿಕ್ಕಂತೆ ಮೈದಾನದಲ್ಲೇ ರೋಹಿತ್​ ಶರ್ಮಾ ಮಲಗಿದರು. ಹಾರ್ದಿಕ್​ ಪಾಂಡ್ಯ, ವಿರಾಟ್​ ಕೊಹ್ಲಿ, ಮಹಮದ್​ ಸಿರಾಜ್ ಕಣ್ಣುಗಳಲ್ಲಿ​ ಆನಂದಭಾಷ್ಪ ಸುರಿಯುತ್ತಿತ್ತು. ಪಾಂಡ್ಯ ಅಂತೂ ಚಿಕ್ಕ ಮಗುವಿನಂತೆ ಕಣ್ಣೀರು ಹಾಕುತ್ತಿದ್ದರು.

ಎಲ್ಲರಿಗೂ ಹಸ್ತಲಾಘವ ಮಾಡಿದ ಬಳಿಕ ನಾಯಕ ರೋಹಿತ್​ ಶರ್ಮಾ, ಪಿಚ್​ ಬಳಿಗೆ ಬಂದು ಅಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಅಗಿದರು. ಎರಡು ಬಾರಿ ಇದನ್ನು ಮಾಡಿದರು. ಇದು 'ಗೆಲುವಿನ ಸವಿ' ಎಂಬುದರ ದ್ಯೋತಕವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಧೂಳೆಬ್ಬಿಸಿದೆ.

ನೊವಾಕ್​ ಜೊಕೊವಿಕ್​​ ಮಾದರಿ: ರೋಹಿತ್​ ಶರ್ಮಾ ಪಿಚ್​ ಮೇಲಿನ ಮಣ್ಣನ್ನು ತಿಂದಿದ್ದು, ಕ್ರೀಡೆಯಲ್ಲಿ ಇದು ಮೊದಲೇನಲ್ಲ. ಈ ಹಿಂದೆ ವಿಂಬಲ್ಡನ್​ ಟೆನಿಸ್​ ಟೂರ್ನಿಯಲ್ಲಿ ಟೆನಿಸ್ಸಿಗ ನೊವಾಕ್​ ಜೊಕೊವಿಕ್​ ಮಣ್ಣನ್ನು ಬಾಯಿಗೆ ಹಾಕಿಕೊಂಡಿದ್ದರು. ಇನ್ನೊಮ್ಮೆ ಎರಡು ದಳಗಳ ಹುಲ್ಲಿನ ಗರಿಕೆಯನ್ನು ಅಗಿದಿದ್ದರು. ನೊವಾಕ್​​ರ ಈ ಮಾದರಿಯನ್ನು ಫೋಟೋ ಮತ್ತು ವೀಡಿಯೋ ಜರ್ನಲಿಸ್ಟ್‌ಗಳು ತುಂಬಾ ಬಯಸುತ್ತಾರೆ.

ಮೂರು ಬಾರಿ ಫೇಲ್​, ನಾಲ್ಕನೇ ಯತ್ನದಲ್ಲಿ ಪಾಸ್​: ಐಸಿಸಿ ಟೂರ್ನಿಗಳಲ್ಲಿ ರೋಹಿತ್​ ಶರ್ಮಾ ನಾಯಕತ್ವ ಅಗ್ನಿಪರೀಕ್ಷೆಗೆ ಒಳಗಾಗಿತ್ತು. 2022 ರ ಟಿ-20 ವಿಶ್ವಕಪ್​ನಲ್ಲಿ ಸೆಮಿಫೈನಲ್​ ತಲುಪಿದ್ದಾಗ, ಇಂಗ್ಲೆಂಡ್​ ಎದುರು ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು. 2023 ರಲ್ಲಿ ಟೆಸ್ಟ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ತಲುಪಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡು ಟ್ರೋಫಿಯಿಂದ ವಂಚಿತವಾಯಿತು. ಬಳಿಕದ ಏಕದಿನ ವಿಶ್ವಕಪ್​​​ನಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್​ ತಲುಪಿದ ಬಳಿಕ ಅಲ್ಲಿಯೂ ಆಸ್ಟ್ರೇಲಿಯಾ ಎದುರು ಸೋತು ವಿಶ್ವಕಪ್​ ಕಳೆದುಕೊಂಡಿತು.

2024ರ ಟಿ-20 ವಿಶ್ವಕಪ್​ ಅನ್ನು ಶತಾಯಗತಾಯ ಗೆಲ್ಲಲೇಬೇಕು ಎಂಬ ಹಠದೊಂದಿಗೆ ಆಡಿದ ಟೀಮ್​ ಇಂಡಿಯಾ ಅದರಲ್ಲಿ ಸಫಲತೆ ಕಂಡಿದೆ. ಶರ್ಮಾ ನಾಯಕತ್ವದಲ್ಲಿ ನಾಲ್ಕು ಐಸಿಸಿ ಟ್ರೋಫಿಗಳಲ್ಲಿ 3ರಲ್ಲಿ ಸೋಲು ಕಂಡಿದ್ದರೆ, ಒಂದರಲ್ಲಿ ಗೆಲುವಿನ ಸಿಹಿ ಅನುಭವಿಸಿದೆ.

ಇದನ್ನೂ ಓದಿ: ಟಿ-20 ಚಾಂಪಿಯನ್​ ಭಾರತ ತಂಡಕ್ಕೆ ₹ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ - BCCI Announces Prize Money

ಬಾರ್ಬಡೋಸ್(ವೆಸ್ಟ್​ ಇಂಡೀಸ್​): ಗೆಲುವಿನ ಧನ್ಯತೆಯೇ ಹಾಗೆ. ಹಠ ಹಿಡಿದು ಸಾಧಿಸಿದ ಬಳಿಕ ಅದರಿಂದ ಬರುವ ಖುಷಿಗೆ ಪಾರವೇ ಇರುವುದಿಲ್ಲ. ಅಲ್ಲಿ ಉಂಟಾಗುವ ಧನ್ಯತಾಭಾವಕ್ಕೆ ಬೆಲೆಕಟ್ಟಲಾಗದು. ಟಿ-20 ವಿಶ್ವಕಪ್​ ಗೆಲುವಿನ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್​ ಶರ್ಮಾ ಇಂಥದ್ದೇ ಮನಸ್ಥಿತಿಗೆ ಒಳಗಾಗಿದ್ದರು.

ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​​ನಲ್ಲಿ ನಡೆದ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 7 ರನ್​ಗಳಿಂದ ಸೋಲಿಸಿ 17 ವರ್ಷಗಳ ಬಳಿಕ ಮತ್ತೊಂದು ವಿಶ್ವಕಪ್​ ಎತ್ತಿ ಹಿಡಿಯಿತು. 11 ವರ್ಷಗಳ ಐಸಿಸಿ ಟ್ರೋಫಿ ಬರವೂ ನೀಗಿತು. ಇದು ಆಟಗಾರರು ಸೇರಿ ಭಾರತೀಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.

ಗಮನ ಸೆಳೆದ ರೋಹಿತ್​ ನಡೆ: ದಕ್ಷಿಣ ಆಫ್ರಿಕಾವನ್ನು ಕಟ್ಟಿಹಾಕಿ ವಿಶ್ವಕಪ್​​ ಗೆಲುವು ಸಿಕ್ಕ ಬಳಿಕ ದೀರ್ಘ ಕಾಯುವಿಕೆಗೆ ವಿರಾಮ ಸಿಕ್ಕಂತೆ ಮೈದಾನದಲ್ಲೇ ರೋಹಿತ್​ ಶರ್ಮಾ ಮಲಗಿದರು. ಹಾರ್ದಿಕ್​ ಪಾಂಡ್ಯ, ವಿರಾಟ್​ ಕೊಹ್ಲಿ, ಮಹಮದ್​ ಸಿರಾಜ್ ಕಣ್ಣುಗಳಲ್ಲಿ​ ಆನಂದಭಾಷ್ಪ ಸುರಿಯುತ್ತಿತ್ತು. ಪಾಂಡ್ಯ ಅಂತೂ ಚಿಕ್ಕ ಮಗುವಿನಂತೆ ಕಣ್ಣೀರು ಹಾಕುತ್ತಿದ್ದರು.

ಎಲ್ಲರಿಗೂ ಹಸ್ತಲಾಘವ ಮಾಡಿದ ಬಳಿಕ ನಾಯಕ ರೋಹಿತ್​ ಶರ್ಮಾ, ಪಿಚ್​ ಬಳಿಗೆ ಬಂದು ಅಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಅಗಿದರು. ಎರಡು ಬಾರಿ ಇದನ್ನು ಮಾಡಿದರು. ಇದು 'ಗೆಲುವಿನ ಸವಿ' ಎಂಬುದರ ದ್ಯೋತಕವಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಧೂಳೆಬ್ಬಿಸಿದೆ.

ನೊವಾಕ್​ ಜೊಕೊವಿಕ್​​ ಮಾದರಿ: ರೋಹಿತ್​ ಶರ್ಮಾ ಪಿಚ್​ ಮೇಲಿನ ಮಣ್ಣನ್ನು ತಿಂದಿದ್ದು, ಕ್ರೀಡೆಯಲ್ಲಿ ಇದು ಮೊದಲೇನಲ್ಲ. ಈ ಹಿಂದೆ ವಿಂಬಲ್ಡನ್​ ಟೆನಿಸ್​ ಟೂರ್ನಿಯಲ್ಲಿ ಟೆನಿಸ್ಸಿಗ ನೊವಾಕ್​ ಜೊಕೊವಿಕ್​ ಮಣ್ಣನ್ನು ಬಾಯಿಗೆ ಹಾಕಿಕೊಂಡಿದ್ದರು. ಇನ್ನೊಮ್ಮೆ ಎರಡು ದಳಗಳ ಹುಲ್ಲಿನ ಗರಿಕೆಯನ್ನು ಅಗಿದಿದ್ದರು. ನೊವಾಕ್​​ರ ಈ ಮಾದರಿಯನ್ನು ಫೋಟೋ ಮತ್ತು ವೀಡಿಯೋ ಜರ್ನಲಿಸ್ಟ್‌ಗಳು ತುಂಬಾ ಬಯಸುತ್ತಾರೆ.

ಮೂರು ಬಾರಿ ಫೇಲ್​, ನಾಲ್ಕನೇ ಯತ್ನದಲ್ಲಿ ಪಾಸ್​: ಐಸಿಸಿ ಟೂರ್ನಿಗಳಲ್ಲಿ ರೋಹಿತ್​ ಶರ್ಮಾ ನಾಯಕತ್ವ ಅಗ್ನಿಪರೀಕ್ಷೆಗೆ ಒಳಗಾಗಿತ್ತು. 2022 ರ ಟಿ-20 ವಿಶ್ವಕಪ್​ನಲ್ಲಿ ಸೆಮಿಫೈನಲ್​ ತಲುಪಿದ್ದಾಗ, ಇಂಗ್ಲೆಂಡ್​ ಎದುರು ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದು ಮುಖಭಂಗ ಅನುಭವಿಸಿತ್ತು. 2023 ರಲ್ಲಿ ಟೆಸ್ಟ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ ತಲುಪಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡು ಟ್ರೋಫಿಯಿಂದ ವಂಚಿತವಾಯಿತು. ಬಳಿಕದ ಏಕದಿನ ವಿಶ್ವಕಪ್​​​ನಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್​ ತಲುಪಿದ ಬಳಿಕ ಅಲ್ಲಿಯೂ ಆಸ್ಟ್ರೇಲಿಯಾ ಎದುರು ಸೋತು ವಿಶ್ವಕಪ್​ ಕಳೆದುಕೊಂಡಿತು.

2024ರ ಟಿ-20 ವಿಶ್ವಕಪ್​ ಅನ್ನು ಶತಾಯಗತಾಯ ಗೆಲ್ಲಲೇಬೇಕು ಎಂಬ ಹಠದೊಂದಿಗೆ ಆಡಿದ ಟೀಮ್​ ಇಂಡಿಯಾ ಅದರಲ್ಲಿ ಸಫಲತೆ ಕಂಡಿದೆ. ಶರ್ಮಾ ನಾಯಕತ್ವದಲ್ಲಿ ನಾಲ್ಕು ಐಸಿಸಿ ಟ್ರೋಫಿಗಳಲ್ಲಿ 3ರಲ್ಲಿ ಸೋಲು ಕಂಡಿದ್ದರೆ, ಒಂದರಲ್ಲಿ ಗೆಲುವಿನ ಸಿಹಿ ಅನುಭವಿಸಿದೆ.

ಇದನ್ನೂ ಓದಿ: ಟಿ-20 ಚಾಂಪಿಯನ್​ ಭಾರತ ತಂಡಕ್ಕೆ ₹ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ - BCCI Announces Prize Money

ETV Bharat Logo

Copyright © 2024 Ushodaya Enterprises Pvt. Ltd., All Rights Reserved.