ETV Bharat / sports

ರಣಜಿ: ತಮಿಳುನಾಡಿಗೆ ಇನಿಂಗ್ಸ್​ & 70 ರನ್​ ಸೋಲು, 48ನೇ ಸಲ ಫೈನಲ್​ಗೇರಿದ ಮುಂಬೈ - Ranji Trophy Semi Final

ರಣಜಿ ಟ್ರೋಫಿಯಲ್ಲಿ ಹಿಡಿತ ಮುಂದುವರಿಸಿದ ಮುಂಬೈ 48ನೇ ಬಾರಿಗೆ ಫೈನಲ್​ ತಲುಪಿತು. ಸೆಮಿಫೈನಲ್​ನಲ್ಲಿ ತಮಿಳುನಾಡು ತಂಡವನ್ನು ಇನಿಂಗ್ಸ್​ ಹಾಗೂ 70 ರನ್​ಗಳಿಂದ ಬಗ್ಗುಬಡಿಯಿತು.

ranji-trophy
ranji-trophy
author img

By PTI

Published : Mar 5, 2024, 8:06 AM IST

ಮುಂಬೈ: ರಣಜಿ ಟ್ರೋಫಿ ಇತಿಹಾಸದಲ್ಲೇ ಅತಿ ಯಶಸ್ವಿ ತಂಡವಾದ ಮುಂಬೈ 48ನೇ ಬಾರಿಗೆ ಫೈನಲ್​ ತಲುಪಿತು. ಸೆಮೀಸ್​ನಲ್ಲಿ ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ತಮಿಳುನಾಡು ವಿರುದ್ಧ ಇನಿಂಗ್ಸ್ ಹಾಗೂ 70 ರನ್​ಗಳ ಗೆಲುವು ಸಾಧಿಸಿತು.

41 ಬಾರಿಯ ಚಾಂಪಿಯನ್​ ಮುಂಬೈ ಎದುರು ತಮಿಳುನಾಡು ತಂಡದ ಆಟ ಸಾಕಾಗಲಿಲ್ಲ. ಮೊದಲ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ 146 ಗಳಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿ ಅನುಭವವಿರುವ ವಿಜಯ್​ ಶಂಕರ್​ 44, ವಾಷಿಂಗ್ಟನ್​ ಸುಂದರ್​ 43 ರನ್​ ಗಳಿಸಿದ್ದೇ ತಂಡದ ಅತ್ಯಧಿಕ ಮೊತ್ತ. ತುಷಾರ್​ ದೇಶಪಾಂಡೆ 3, ಶಾರ್ದೂಲ್​ ಠಾಕೂರ್​, ಮುಶೀರ್​ ಖಾನ್​, ತನುಶ್​ ಕೋಟ್ಯಾನ್​ ತಲಾ 2 ವಿಕೆಟ್​ ಪಡೆದರು.

ಶಾರ್ದೂಲ್​ ಠಾಕೂರ್​ ಶತಕ: ಮೊದಲ ದಿನದ ದ್ವಿತೀಯಾರ್ಧದಲ್ಲಿ ತನ್ನ ಮೊದಲ ಇನಿಂಗ್ಸ್​ ಆರಂಭಿಸಿದ ಮುಂಬೈ ಶಾರ್ದೂಲ್​ ಠಾಕೂರ್​(109) ಅವರ ಭರ್ಜರಿ ಶತಕ, ಮುಶೀರ್​ ಖಾನ್​(55), ತನುಶ್​ ಕೋಟ್ಯಾನ್​ರ(ಔಟಾಗದೆ 89) ಅರ್ಧಶತಕದ ನೆರವಿನಿಂದ 378 ರನ್​ ಪೇರಿಸಿ 232 ರನ್​ಗಳ ಮುನ್ನಡೆ ಪಡೆಯಿತು. ಅಷ್ಟೇನೂ ಉತ್ತಮ ಆರಂಭ ಪಡೆಯದ ಮುಂಬೈಗೆ 3ನೇ ಕ್ರಮಾಂಕದಲ್ಲಿ ಆಡಿದ ಮುಶೀರ್​ ಖಾನ್​ ನೆರವಾದರು. ಹಿರಿಯ ಆಟಗಾರ ಅಜಿಂಕ್ಯಾ ರಹಾನೆ (19), ಶ್ರೇಯಸ್​ ಅಯ್ಯರ್​ (3), ಪೃಥ್ವಿ ಶಾ (5) ಬ್ಯಾಟಿಂಗ್​ ಇಲ್ಲೂ ಸದ್ದು ಮಾಡಲಿಲ್ಲ.

106 ರನ್​ಗೆ 7 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಾರ್ದೂಲ್​ ಠಾಕೂರ್​, ತನುಶ್​ ಕೋಟ್ಯಾನ್​ ಆಧರಿಸಿದರು. 2ನೇ ದಿನದಂತ್ಯಕ್ಕೆ 353 ರನ್​ ಗಳಿಸಿ ಸುಸ್ಥಿತಿಯಲ್ಲಿತ್ತು. ಬಳಿಕ ಮೂರನೇ ದಿನದಲ್ಲಿ ತಂಡಕ್ಕೆ 25 ರನ್​ ಸೇರಿಸಿ ಆಲೌಟ್​ ಆಯಿತು. ತನುಶ್​ ಶತಕ ತಪ್ಪಿಸಿಕೊಂಡರು.

2ನೇ ಇನಿಂಗ್ಸ್​ನಲ್ಲೂ ಠುಸ್​: ಮೂರನೇ ದಿನದಲ್ಲಿ 2ನೇ ಇನಿಂಗ್ಸ್​ ಆರಂಭಿಸಿದ ತಮಿಳುನಾಡು ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ಮೊದಲ 10 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಬಾಬಾ ಇಂದ್ರಜಿತ್​ 70 ರನ್​ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದರಿಂದ 162 ರನ್​ಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್​ ಮತ್ತು 70 ರನ್​ಗಳ ಹೀನಾಯ ಸೋಲಿನೊಂದಿಗೆ ಅಭಿಯಾನ ಮುಗಿಸಿತು. ಮೂರೇ ದಿನದಲ್ಲಿ ತಮಿಳುನಾಡು ಕಟ್ಟಿಹಾಕುವ ಮೂಲಕ ಅಧಿಕಾರಯುತವಾಗಿ ಮುಂಬೈ ತಂಡ ಫೈನಲ್​ ತಲುಪಿತು.

ಇನ್ನೊಂದು ಸೆಮೀಸ್​ನಲ್ಲಿ ವಿದರ್ಭ ಮತ್ತು ಮಧ್ಯಪ್ರದೇಶ ತಂಡಗಳು ಸೆಣಸಾಡುತ್ತಿವೆ.

ಇದನ್ನೂ ಓದಿ: ಮಂಧಾನ, ಪೆರ್ರಿ ಅರ್ಧಶತಕಗಳ ವೈಭವ: ಯುಪಿ ವಿರುದ್ಧ ಆರ್​ಸಿಬಿಗೆ 23 ರನ್​ ಗೆಲುವು

ಮುಂಬೈ: ರಣಜಿ ಟ್ರೋಫಿ ಇತಿಹಾಸದಲ್ಲೇ ಅತಿ ಯಶಸ್ವಿ ತಂಡವಾದ ಮುಂಬೈ 48ನೇ ಬಾರಿಗೆ ಫೈನಲ್​ ತಲುಪಿತು. ಸೆಮೀಸ್​ನಲ್ಲಿ ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡ್ ಆಟದ ನೆರವಿನಿಂದ ತಮಿಳುನಾಡು ವಿರುದ್ಧ ಇನಿಂಗ್ಸ್ ಹಾಗೂ 70 ರನ್​ಗಳ ಗೆಲುವು ಸಾಧಿಸಿತು.

41 ಬಾರಿಯ ಚಾಂಪಿಯನ್​ ಮುಂಬೈ ಎದುರು ತಮಿಳುನಾಡು ತಂಡದ ಆಟ ಸಾಕಾಗಲಿಲ್ಲ. ಮೊದಲ ಇನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ 146 ಗಳಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿ ಅನುಭವವಿರುವ ವಿಜಯ್​ ಶಂಕರ್​ 44, ವಾಷಿಂಗ್ಟನ್​ ಸುಂದರ್​ 43 ರನ್​ ಗಳಿಸಿದ್ದೇ ತಂಡದ ಅತ್ಯಧಿಕ ಮೊತ್ತ. ತುಷಾರ್​ ದೇಶಪಾಂಡೆ 3, ಶಾರ್ದೂಲ್​ ಠಾಕೂರ್​, ಮುಶೀರ್​ ಖಾನ್​, ತನುಶ್​ ಕೋಟ್ಯಾನ್​ ತಲಾ 2 ವಿಕೆಟ್​ ಪಡೆದರು.

ಶಾರ್ದೂಲ್​ ಠಾಕೂರ್​ ಶತಕ: ಮೊದಲ ದಿನದ ದ್ವಿತೀಯಾರ್ಧದಲ್ಲಿ ತನ್ನ ಮೊದಲ ಇನಿಂಗ್ಸ್​ ಆರಂಭಿಸಿದ ಮುಂಬೈ ಶಾರ್ದೂಲ್​ ಠಾಕೂರ್​(109) ಅವರ ಭರ್ಜರಿ ಶತಕ, ಮುಶೀರ್​ ಖಾನ್​(55), ತನುಶ್​ ಕೋಟ್ಯಾನ್​ರ(ಔಟಾಗದೆ 89) ಅರ್ಧಶತಕದ ನೆರವಿನಿಂದ 378 ರನ್​ ಪೇರಿಸಿ 232 ರನ್​ಗಳ ಮುನ್ನಡೆ ಪಡೆಯಿತು. ಅಷ್ಟೇನೂ ಉತ್ತಮ ಆರಂಭ ಪಡೆಯದ ಮುಂಬೈಗೆ 3ನೇ ಕ್ರಮಾಂಕದಲ್ಲಿ ಆಡಿದ ಮುಶೀರ್​ ಖಾನ್​ ನೆರವಾದರು. ಹಿರಿಯ ಆಟಗಾರ ಅಜಿಂಕ್ಯಾ ರಹಾನೆ (19), ಶ್ರೇಯಸ್​ ಅಯ್ಯರ್​ (3), ಪೃಥ್ವಿ ಶಾ (5) ಬ್ಯಾಟಿಂಗ್​ ಇಲ್ಲೂ ಸದ್ದು ಮಾಡಲಿಲ್ಲ.

106 ರನ್​ಗೆ 7 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಾರ್ದೂಲ್​ ಠಾಕೂರ್​, ತನುಶ್​ ಕೋಟ್ಯಾನ್​ ಆಧರಿಸಿದರು. 2ನೇ ದಿನದಂತ್ಯಕ್ಕೆ 353 ರನ್​ ಗಳಿಸಿ ಸುಸ್ಥಿತಿಯಲ್ಲಿತ್ತು. ಬಳಿಕ ಮೂರನೇ ದಿನದಲ್ಲಿ ತಂಡಕ್ಕೆ 25 ರನ್​ ಸೇರಿಸಿ ಆಲೌಟ್​ ಆಯಿತು. ತನುಶ್​ ಶತಕ ತಪ್ಪಿಸಿಕೊಂಡರು.

2ನೇ ಇನಿಂಗ್ಸ್​ನಲ್ಲೂ ಠುಸ್​: ಮೂರನೇ ದಿನದಲ್ಲಿ 2ನೇ ಇನಿಂಗ್ಸ್​ ಆರಂಭಿಸಿದ ತಮಿಳುನಾಡು ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ಮೊದಲ 10 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಬಾಬಾ ಇಂದ್ರಜಿತ್​ 70 ರನ್​ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಇದರಿಂದ 162 ರನ್​ಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್​ ಮತ್ತು 70 ರನ್​ಗಳ ಹೀನಾಯ ಸೋಲಿನೊಂದಿಗೆ ಅಭಿಯಾನ ಮುಗಿಸಿತು. ಮೂರೇ ದಿನದಲ್ಲಿ ತಮಿಳುನಾಡು ಕಟ್ಟಿಹಾಕುವ ಮೂಲಕ ಅಧಿಕಾರಯುತವಾಗಿ ಮುಂಬೈ ತಂಡ ಫೈನಲ್​ ತಲುಪಿತು.

ಇನ್ನೊಂದು ಸೆಮೀಸ್​ನಲ್ಲಿ ವಿದರ್ಭ ಮತ್ತು ಮಧ್ಯಪ್ರದೇಶ ತಂಡಗಳು ಸೆಣಸಾಡುತ್ತಿವೆ.

ಇದನ್ನೂ ಓದಿ: ಮಂಧಾನ, ಪೆರ್ರಿ ಅರ್ಧಶತಕಗಳ ವೈಭವ: ಯುಪಿ ವಿರುದ್ಧ ಆರ್​ಸಿಬಿಗೆ 23 ರನ್​ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.