ETV Bharat / sports

ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್​: ಭಾರತದ ಈ ಇಬ್ಬರು ಆಟಗಾರರಿಗೆ ಪ್ಲೇಯಿಂಗ್ ​- 11ರಲ್ಲಿ ಸ್ಥಾನ ಡೌಟ್​! - INDIA vs BANGLADESH TEST MATCH

author img

By ETV Bharat Sports Team

Published : Sep 11, 2024, 5:28 PM IST

ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಹಿರಿ - ಕಿರಿಯರಿಂದ ಕೂಡಿರುವ ತಂಡದಲ್ಲಿ ಯಾರು ಪ್ಲೇಯಿಂಗ್​-11 ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಮಾಜಿ ಕ್ರಿಕೆಟಿಗರೊಬ್ಬರು ಈ ಇಬ್ಬರು ಆಟಗಾರರಿಗೆ ಈಗಲೇ ಗೇಟ್​ಪಾಸ್​ ನೀಡಿದ್ದಾರೆ.

ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್
ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ (X handle)

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಮ್ಯಾಚ್​ ಸೆಪ್ಟೆಂಬರ್ 19 ರಿಂದ 23 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್​​ ಕೊಹ್ಲಿ, ಕೆಎಲ್​ ರಾಹುಲ್​, ರಿಷಬ್​ ಪಂತ್​ ಅವರಂತಹ 'ಬಿಗ್​​ಮ್ಯಾಚರ್​'ಗಳು ತಂಡಕ್ಕೆ ವಾಪಸ್​ ಆಗಿದ್ದು, ಕಿರಿಯ ಆಟಗಾರರು ಸ್ಥಾನ ತೆರವು ಮಾಡಬೇಕಾಗಿದೆ.

ಮೊದಲ ಪಂದ್ಯಕ್ಕೆ ಇನ್ನೂ 7 ದಿನ ಬಾಕಿ ಉಳಿದಿದೆ. ಟೆಸ್ಟ್​ ಋತುವಿನ ಮೊದಲ ಸರಣಿಯಲ್ಲಿ ಪ್ಲೇಯಿಂಗ್​ 11 ಬಗ್ಗೆ ಚರ್ಚೆಗಳು ನಡೆದಿದ್ದು, ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಂಡದಲ್ಲಿ ಆಡುವ ಹನ್ನೊಂದು ಜನರನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಭರವಸೆಯ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.

ಖಾನ್​​, ಜುರೆಲ್​​ಗಿಲ್ಲ ಅವಕಾಶ: ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರು, ಸರ್ಫರಾಜ್ ಖಾನ್ ಮತ್ತು ಧ್ರುವ್​ ಜುರೆಲ್​ ಮೊದಲ ಟೆಸ್ಟ್​ನಲ್ಲಿ ಆಡುವುದು ಅನುಮಾನವಿದೆ. ಕ್ಲಾಸಿಕ್​ ಆಟಗಾರ ಕೆಎಲ್​ ರಾಹುಲ್​ ಪುನರಾಗಮನ ಪಡೆದಿದ್ದಾರೆ. ಅವರಿಗಾಗಿ ಸರ್ಫರಾಜ್​ ಖಾನ್​ ಸ್ಥಾನ ಬಿಟ್ಟುಕೊಡಬೇಕಾಗಿದೆ. ಇನ್ನೊಂದೆಡೆ ಜುರೆಲ್​ ಜಾಗಕ್ಕೆ ಬಿಗ್​ ಹಿಟ್ಟರ್​ ರಿಷಭ್​​ ಪಂತ್​​ ಬರಲಿದ್ದಾರೆ. ಹೀಗಾಗಿ ಇಬ್ಬರು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಿದ್ದಾರೆ.

"ಇದು ಕ್ರಿಕೆಟ್​ನಲ್ಲಿ ಸಾಮಾನ್ಯ. ಯಾವುದೇ ಕಿರಿಯ ಆಟಗಾರ ಉತ್ತಮವಾಗಿ ಲಯದಲ್ಲಿದ್ದರೂ ಹಿರಿಯರಿಗಾಗಿ ಸ್ಥಾನ ಬಿಟ್ಟುಕೊಡಬೇಕು. ಕೆಲವೊಮ್ಮೆ ಇದು ಅತಿರೇಕ ಎನ್ನಿಸಿದರೂ, ಅನಿವಾರ್ಯ. ಇಂತಹ ಸಂದಿಗ್ಧತೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸರ್ಫರಾಜ್​ ಖಾನ್​ ಮತ್ತು ಧ್ರುವ್​​ ಜುರೆಲ್​​ ಅವರಿಗೆ ಬಂದಿದೆ ಎಂದು ಹೇಳಿದ್ದಾರೆ.

ಗಾಯಗೊಂಡಿದ್ದ ಕೆಎಲ್​​ ರಾಹುಲ್​ ಫಿಟ್​ ಆಗಿ ತಂಡಕ್ಕೆ ಮರಳಿದ್ದಾರೆ. ಕಾರು ದುರಂತದಲ್ಲಿ ಬದುಕುಳಿದು ಬಂದಿರುವ ರಿಷಭ್​​ ಪಂತ್​ ಮತ್ತೆ ಕ್ರಿಕೆಟ್​​ ಅಂಗಳದಲ್ಲಿ ಮಿಂಚುತ್ತಿರುವುದು ಸಣ್ಣ ಸಾಧನೆಯಲ್ಲ. ಇಬ್ಬರೂ ಪುನರಾಗಮನದ ಸರಣಿಯಲ್ಲಿ ಮಿಂಚಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್, ಕುಲದೀಪ್ ಯಾದವ್.

ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ; ಹೊಸ ಮುಖಗಳಿಗೆ ಅವಕಾಶ - BCCI Announced Indian Squad

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಮ್ಯಾಚ್​ ಸೆಪ್ಟೆಂಬರ್ 19 ರಿಂದ 23 ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್​​ ಕೊಹ್ಲಿ, ಕೆಎಲ್​ ರಾಹುಲ್​, ರಿಷಬ್​ ಪಂತ್​ ಅವರಂತಹ 'ಬಿಗ್​​ಮ್ಯಾಚರ್​'ಗಳು ತಂಡಕ್ಕೆ ವಾಪಸ್​ ಆಗಿದ್ದು, ಕಿರಿಯ ಆಟಗಾರರು ಸ್ಥಾನ ತೆರವು ಮಾಡಬೇಕಾಗಿದೆ.

ಮೊದಲ ಪಂದ್ಯಕ್ಕೆ ಇನ್ನೂ 7 ದಿನ ಬಾಕಿ ಉಳಿದಿದೆ. ಟೆಸ್ಟ್​ ಋತುವಿನ ಮೊದಲ ಸರಣಿಯಲ್ಲಿ ಪ್ಲೇಯಿಂಗ್​ 11 ಬಗ್ಗೆ ಚರ್ಚೆಗಳು ನಡೆದಿದ್ದು, ಭಾರತದ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು ತಂಡದಲ್ಲಿ ಆಡುವ ಹನ್ನೊಂದು ಜನರನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಭರವಸೆಯ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಅವರನ್ನು ಕೈಬಿಡಲಾಗಿದೆ. ಇದಕ್ಕೆ ಅವರು ಕಾರಣಗಳನ್ನೂ ನೀಡಿದ್ದಾರೆ.

ಖಾನ್​​, ಜುರೆಲ್​​ಗಿಲ್ಲ ಅವಕಾಶ: ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೃಷ್ಣಮಾಚಾರಿ ಶ್ರೀಕಾಂತ್ ಅವರು, ಸರ್ಫರಾಜ್ ಖಾನ್ ಮತ್ತು ಧ್ರುವ್​ ಜುರೆಲ್​ ಮೊದಲ ಟೆಸ್ಟ್​ನಲ್ಲಿ ಆಡುವುದು ಅನುಮಾನವಿದೆ. ಕ್ಲಾಸಿಕ್​ ಆಟಗಾರ ಕೆಎಲ್​ ರಾಹುಲ್​ ಪುನರಾಗಮನ ಪಡೆದಿದ್ದಾರೆ. ಅವರಿಗಾಗಿ ಸರ್ಫರಾಜ್​ ಖಾನ್​ ಸ್ಥಾನ ಬಿಟ್ಟುಕೊಡಬೇಕಾಗಿದೆ. ಇನ್ನೊಂದೆಡೆ ಜುರೆಲ್​ ಜಾಗಕ್ಕೆ ಬಿಗ್​ ಹಿಟ್ಟರ್​ ರಿಷಭ್​​ ಪಂತ್​​ ಬರಲಿದ್ದಾರೆ. ಹೀಗಾಗಿ ಇಬ್ಬರು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಿದ್ದಾರೆ.

"ಇದು ಕ್ರಿಕೆಟ್​ನಲ್ಲಿ ಸಾಮಾನ್ಯ. ಯಾವುದೇ ಕಿರಿಯ ಆಟಗಾರ ಉತ್ತಮವಾಗಿ ಲಯದಲ್ಲಿದ್ದರೂ ಹಿರಿಯರಿಗಾಗಿ ಸ್ಥಾನ ಬಿಟ್ಟುಕೊಡಬೇಕು. ಕೆಲವೊಮ್ಮೆ ಇದು ಅತಿರೇಕ ಎನ್ನಿಸಿದರೂ, ಅನಿವಾರ್ಯ. ಇಂತಹ ಸಂದಿಗ್ಧತೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಸರ್ಫರಾಜ್​ ಖಾನ್​ ಮತ್ತು ಧ್ರುವ್​​ ಜುರೆಲ್​​ ಅವರಿಗೆ ಬಂದಿದೆ ಎಂದು ಹೇಳಿದ್ದಾರೆ.

ಗಾಯಗೊಂಡಿದ್ದ ಕೆಎಲ್​​ ರಾಹುಲ್​ ಫಿಟ್​ ಆಗಿ ತಂಡಕ್ಕೆ ಮರಳಿದ್ದಾರೆ. ಕಾರು ದುರಂತದಲ್ಲಿ ಬದುಕುಳಿದು ಬಂದಿರುವ ರಿಷಭ್​​ ಪಂತ್​ ಮತ್ತೆ ಕ್ರಿಕೆಟ್​​ ಅಂಗಳದಲ್ಲಿ ಮಿಂಚುತ್ತಿರುವುದು ಸಣ್ಣ ಸಾಧನೆಯಲ್ಲ. ಇಬ್ಬರೂ ಪುನರಾಗಮನದ ಸರಣಿಯಲ್ಲಿ ಮಿಂಚಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್​ ಅಶ್ವಿನ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್, ಕುಲದೀಪ್ ಯಾದವ್.

ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಭಾರತ ತಂಡ ಪ್ರಕಟ; ಹೊಸ ಮುಖಗಳಿಗೆ ಅವಕಾಶ - BCCI Announced Indian Squad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.