ETV Bharat / sports

ಭಾರತ vs ನ್ಯೂಜಿಲ್ಯಾಂಡ್​ ಟೆಸ್ಟ್‌ಗೆ ಮಳೆ ಅಡ್ಡಿ; ಮೊದಲ ದಿನದಾಟ ಟಾಸ್ ಇಲ್ಲದೆ ರದ್ದು

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್​​ ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದಾಗಿದೆ. ನಾಳೆ ಬೆಳಗ್ಗೆ 8.45ಕ್ಕೆ ಎರಡನೇ ದಿನ ನಿಗದಿ ಮಾಡಲಾಗಿದೆ.

author img

By ETV Bharat Karnataka Team

Published : 2 hours ago

india-vs-new-zealand-1st-test
ಭಾರತ-ನ್ಯೂಜಿಲ್ಯಾಂಡ್​ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಿದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ (IANS)

ಬೆಂಗಳೂರು: ಭಾರತ-ನ್ಯೂಜಿಲ್ಯಾಂಡ್​​ ನಡುವಿನ ಮೊದಲ ಪಂದ್ಯದ ಮೊದಲ ದಿನ ಮಳೆರಾಯನಿಗೆ ಅರ್ಪಿತವಾಗಿದೆ. ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮೊದಲ ದಿನದಾಟವನ್ನು ಟಾಸ್​​ ಇಲ್ಲದೇ ಮುಗಿಸಲಾಯಿತು. ಮೈದಾನದಲ್ಲಿ ನೀರು ನಿಂತಿದ್ದರಿಂದ ಮಧ್ಯಾಹ್ನ 2.30ಕ್ಕೆ ಅಂಪೈರ್​​ಗಳು ದಿನದಾಟವನ್ನು ರದ್ದು ಮಾಡಿದರು.

ಕಳೆದ ಎರಡು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಜಡಿಮಳೆ ಬೆಂಗಳೂರನ್ನು ಹೈರಾಣಾಗಿಸಿದೆ. ಎರಡೂವರೆ ವರ್ಷಗಳ ನಂತರ ಟೆಸ್ಟ್​ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಉಭಯ ತಂಡಗಳ ನಡುವಿನ ಹಣಾಹಣಿಗೆ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ, ವರುಣರಾಯ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಎರಡೂ ತಂಡಗಳು ಆಟಗಾರರು ಹೆಚ್ಚು ಸಮಯವನ್ನು ತಮ್ಮ ಡ್ರೆಸ್ಸಿಂಗ್​ ರೂಮಿನಲ್ಲೇ ಕಳೆದರು. ನಾಯಕರಾದ ರೋಹಿತ್​ ಶರ್ಮಾ, ಟಾಮ್​ ಲ್ಯಾಥಮ್ ಆಗಾಗ್ಗೆ ಹೊರಬಂದು ಮೈದಾನವನ್ನು ವೀಕ್ಷಿಸುತ್ತಿದ್ದರು. ಅಂಪೈರ್​ಗಳು ಕೂಡ ಪದೇ ಪದೆ ಮೈದಾನಕ್ಕಿಳಿದು ವೀಕ್ಷಿಸುತ್ತಿದ್ದರು. ಆದರೆ, ಯಾವುದೇ ಹಂತದಲ್ಲಿಯೂ ಮಳೆ ನಿಲ್ಲದ ಕಾರಣ, ಪಿಚ್​​ ಮೇಲೆ ಹಾಕಿರುವ ಹೊದಿಕೆಯನ್ನು ತೆಗೆಯಲಾಗಲಿಲ್ಲ.

ಬುಧವಾರ ಇಡೀ ದಿನ ತುಂತುರು ಮಳೆ ಸುರಿದಿದ್ದು, ಮಂದ ಬೆಳಕು ಆವರಿಸಿಕೊಂಡಿತ್ತು. ಕ್ರೀಡಾಂಗಣವು ವಿಶ್ವದರ್ಜೆಯ ಸಬ್​​ಏರ್​ ಸಿಸ್ಟಮ್​ ಹೊಂದಿದ್ದರೂ, ಜಿಟಿಜಿಟಿ ಮಳೆ ನೀರನ್ನು ಹೀರಿಕೊಳ್ಳಲು ಸಾಧ್ಯವಿಲ್ಲ ಎಂದು ಪಿಚ್​​ ಕ್ಯುರೇಟರ್​ ಖಚಿತಪಡಿಸಿದರು. ಇದರಿಂದ ಪಂದ್ಯದ ಮೊದಲ ದಿನದಾಟವನ್ನು ರದ್ದು ಮಾಡಲು ಅಂಪೈರ್​ಗಳು ನಿರ್ಧರಿಸಿದರು. ಎರಡನೇ ದಿನವಾದ ಗುರುವಾರ ಬೆಳಗ್ಗೆ 8:45ಕ್ಕೆ ಟಾಸ್​​ ನಿಗದಿಪಡಿಸಲಾಗಿದೆ. ಹವಾಮಾನ ತಿಳಿಯಾದಲ್ಲಿ ಆಟ ಬೆಳಗ್ಗೆ 9:15ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ನಾಳೆಯ ಹವಾಮಾನ ವರದಿ: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನ ನಗರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಈಗಾಗಲೇ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಕೆಲ ಕಚೇರಿಗಳು ಸಿಬ್ಬಂದಿಗೆ ಮನೆಯಿಂದಲೇ ಕೆಲಸಕ್ಕೆ ಸೂಚಿಸಿವೆ. ಹೀಗಾಗಿ, ಮುಂದಿನ ದಿನದಾಟಗಳ ಮೇಲೂ ವರುಣನ ಅವಕೃಪೆ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಳೆ ನಿಂತ ಕೆಲ ನಿಮಿಷಗಳಲ್ಲೇ ಪಂದ್ಯಕ್ಕೆ ರೆಡಿ; ಚಿನ್ನಸ್ವಾಮಿಯಲ್ಲಿದೆ ಅತ್ಯಾಧುನಿಕ 'ಸಬ್​ಏರ್' ತಂತ್ರಜ್ಞಾನ

ಬೆಂಗಳೂರು: ಭಾರತ-ನ್ಯೂಜಿಲ್ಯಾಂಡ್​​ ನಡುವಿನ ಮೊದಲ ಪಂದ್ಯದ ಮೊದಲ ದಿನ ಮಳೆರಾಯನಿಗೆ ಅರ್ಪಿತವಾಗಿದೆ. ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮೊದಲ ದಿನದಾಟವನ್ನು ಟಾಸ್​​ ಇಲ್ಲದೇ ಮುಗಿಸಲಾಯಿತು. ಮೈದಾನದಲ್ಲಿ ನೀರು ನಿಂತಿದ್ದರಿಂದ ಮಧ್ಯಾಹ್ನ 2.30ಕ್ಕೆ ಅಂಪೈರ್​​ಗಳು ದಿನದಾಟವನ್ನು ರದ್ದು ಮಾಡಿದರು.

ಕಳೆದ ಎರಡು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಜಡಿಮಳೆ ಬೆಂಗಳೂರನ್ನು ಹೈರಾಣಾಗಿಸಿದೆ. ಎರಡೂವರೆ ವರ್ಷಗಳ ನಂತರ ಟೆಸ್ಟ್​ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಉಭಯ ತಂಡಗಳ ನಡುವಿನ ಹಣಾಹಣಿಗೆ ಅಭಿಮಾನಿಗಳು ಕಾತರದಿಂದ ಕಾದಿದ್ದರು. ಆದರೆ, ವರುಣರಾಯ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.

ಎರಡೂ ತಂಡಗಳು ಆಟಗಾರರು ಹೆಚ್ಚು ಸಮಯವನ್ನು ತಮ್ಮ ಡ್ರೆಸ್ಸಿಂಗ್​ ರೂಮಿನಲ್ಲೇ ಕಳೆದರು. ನಾಯಕರಾದ ರೋಹಿತ್​ ಶರ್ಮಾ, ಟಾಮ್​ ಲ್ಯಾಥಮ್ ಆಗಾಗ್ಗೆ ಹೊರಬಂದು ಮೈದಾನವನ್ನು ವೀಕ್ಷಿಸುತ್ತಿದ್ದರು. ಅಂಪೈರ್​ಗಳು ಕೂಡ ಪದೇ ಪದೆ ಮೈದಾನಕ್ಕಿಳಿದು ವೀಕ್ಷಿಸುತ್ತಿದ್ದರು. ಆದರೆ, ಯಾವುದೇ ಹಂತದಲ್ಲಿಯೂ ಮಳೆ ನಿಲ್ಲದ ಕಾರಣ, ಪಿಚ್​​ ಮೇಲೆ ಹಾಕಿರುವ ಹೊದಿಕೆಯನ್ನು ತೆಗೆಯಲಾಗಲಿಲ್ಲ.

ಬುಧವಾರ ಇಡೀ ದಿನ ತುಂತುರು ಮಳೆ ಸುರಿದಿದ್ದು, ಮಂದ ಬೆಳಕು ಆವರಿಸಿಕೊಂಡಿತ್ತು. ಕ್ರೀಡಾಂಗಣವು ವಿಶ್ವದರ್ಜೆಯ ಸಬ್​​ಏರ್​ ಸಿಸ್ಟಮ್​ ಹೊಂದಿದ್ದರೂ, ಜಿಟಿಜಿಟಿ ಮಳೆ ನೀರನ್ನು ಹೀರಿಕೊಳ್ಳಲು ಸಾಧ್ಯವಿಲ್ಲ ಎಂದು ಪಿಚ್​​ ಕ್ಯುರೇಟರ್​ ಖಚಿತಪಡಿಸಿದರು. ಇದರಿಂದ ಪಂದ್ಯದ ಮೊದಲ ದಿನದಾಟವನ್ನು ರದ್ದು ಮಾಡಲು ಅಂಪೈರ್​ಗಳು ನಿರ್ಧರಿಸಿದರು. ಎರಡನೇ ದಿನವಾದ ಗುರುವಾರ ಬೆಳಗ್ಗೆ 8:45ಕ್ಕೆ ಟಾಸ್​​ ನಿಗದಿಪಡಿಸಲಾಗಿದೆ. ಹವಾಮಾನ ತಿಳಿಯಾದಲ್ಲಿ ಆಟ ಬೆಳಗ್ಗೆ 9:15ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ.

ನಾಳೆಯ ಹವಾಮಾನ ವರದಿ: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ ಐದು ದಿನ ನಗರದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಈಗಾಗಲೇ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಶಾಲೆಗಳಿಗೆ ರಜೆ ನೀಡಲಾಗಿದೆ. ಕೆಲ ಕಚೇರಿಗಳು ಸಿಬ್ಬಂದಿಗೆ ಮನೆಯಿಂದಲೇ ಕೆಲಸಕ್ಕೆ ಸೂಚಿಸಿವೆ. ಹೀಗಾಗಿ, ಮುಂದಿನ ದಿನದಾಟಗಳ ಮೇಲೂ ವರುಣನ ಅವಕೃಪೆ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಳೆ ನಿಂತ ಕೆಲ ನಿಮಿಷಗಳಲ್ಲೇ ಪಂದ್ಯಕ್ಕೆ ರೆಡಿ; ಚಿನ್ನಸ್ವಾಮಿಯಲ್ಲಿದೆ ಅತ್ಯಾಧುನಿಕ 'ಸಬ್​ಏರ್' ತಂತ್ರಜ್ಞಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.