ETV Bharat / sports

ಜಿಂಬಾಬ್ವೆ ಸರಣಿಗೆ ಭಾರತ ತಂಡ ಪ್ರಕಟ: ಶುಭ್​ಮನ್​ ಗಿಲ್​ಗೆ ನಾಯಕತ್ವ, ಮತ್ತೆ ಯಾರಿಗೆಲ್ಲಾ ಚೊಚ್ಚಲ ಅವಕಾಶ? - INDIA SQUAD

author img

By ETV Bharat Karnataka Team

Published : Jun 24, 2024, 7:28 PM IST

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಜುಲೈ 6 ರಿಂದ ಜಿಂಬಾಬ್ವೆ ವಿರುದ್ಧ ನಡೆಯುವ 5 ಪಂದ್ಯಗಳ ಟಿ-20 ಸರಣಿಗೆ ಭಾರತದ ಯುವ ತಂಡವನ್ನು ಪ್ರಕಟಿಸಿದೆ.

ಜಿಂಬಾಬ್ವೆ ಸರಣಿಗೆ ಭಾರತ ತಂಡ ಪ್ರಕಟ
ಜಿಂಬಾಬ್ವೆ ಸರಣಿಗೆ ಭಾರತ ತಂಡ ಪ್ರಕಟ (ETV Bharat)

ಹೈದರಾಬಾದ್: ಟಿ-20 ವಿಶ್ವಕಪ್​ ಬಳಿಕ ನಡೆಯುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಸೋಮವಾರ ಪ್ರಕಟವಾಗಿದೆ. ಪೂರ್ಣ ಯುವ ತಂಡವನ್ನು ಕಟ್ಟಲಾಗಿದ್ದು, ಶುಭ್​ಮನ್ ​​ಗಿಲ್​ ತಂಡದ ಸಾರಥ್ಯ ವಹಿಸಲಿದ್ದಾರೆ. ಐಪಿಎಲ್​ನಲ್ಲಿ ಮಿಂಚಿದ್ದ ವೇಗಿ ತುಷಾರ್​ ದೇಶಪಾಂಡೆ, ಬ್ಯಾಟರ್​ಗಳಾದ ರಿಯಾನ್​ ಪರಾಗ್​, ನಿತೀಶ್​ ರೆಡ್ಡಿ, ಅಭಿಷೇಕ್​ ಶರ್ಮಾಗೆ ಅವಕಾಶ ನೀಡಲಾಗಿದೆ.

ಟಿ-20 ವಿಶ್ವಕಪ್​ನಲ್ಲಿ ಅವಕಾಶ ವಂಚಿತರಾಗಿದ್ದ ಶುಭ್​ಮನ್​​ ಗಿಲ್​, ರಿಂಕುಸಿಂಗ್​​, ಋತುರಾಜ್​ ಗಾಯಕ್ವಾಡ್​ ಜಿಂಬಾಬ್ವೆ ಸರಣಿಯಲ್ಲಿ ಆದ್ಯತೆ ಪಡೆದಿದ್ದಾರೆ. ವಿಶ್ವಕಪ್​​ನಲ್ಲಿ ಇರುವ ತಂಡದ ಪೈಕಿ ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​​ ಮಾತ್ರ ಇಲ್ಲಿದ್ದಾರೆ. ಉಳಿದಂತೆ ಸನ್​​ರೈಸರ್ಸ್​ ಹೈದರಾಬಾದ್​ ಪರ ಮಿಂಚು ಹರಿಸಿದ್ದ ಅಭಿಷೇಕ್​ ಶರ್ಮಾ, ನಿತೀಶ್​ ರೆಡ್ಡಿ, ರಾಜಸ್ಥಾನ ರಾಯಲ್ಸ್​​ನ ಸ್ಟಾರ್​ ರಿಯಾನ್​ ಪರಾಗ್​​, ತಂಡದಲ್ಲಿದ್ದರೂ ಅವಕಾಶ ಸಿಗದೆ ಬೆಂಚು ಕಾಯುತ್ತಿರುವ ಸಂಜು ಸ್ಯಾಮ್ಸನ್​ ಸರಣಿಗೆ ಆಯ್ಕೆಯಾಗಿದ್ದಾರೆ.

ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ ಸ್ಪಿನ್​ ವಿಭಾಗದಲ್ಲಿದ್ದರೆ, ಖಲೀಲ್ ಅಹ್ಮದ್​, ಮುಖೇಶ್​ಕುಮಾರ್​, ತುಷಾರ್​ ದೇಶಪಾಂಡೆ ವೇಗದ ಪಡೆಯಲ್ಲಿದ್ದಾರೆ. ಸಂಜು ಸ್ಯಾಮ್ಸನ್​ ಜೊತೆಗೆ ಧ್ರುವ್​ ಜುರೆಲ್​ಗೆ ವಿಕೆಟ್​ ಕೀಪರ್​ ಆಗಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅವಕಾಶ ನೀಡಿದೆ.

ಸೋಮವಾರ ನಡೆದ ಸಭೆಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಜುಲೈ 6 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಗೆ ಯುವ ಪ್ರತಿಭೆಗಳಿಗೆ ಮಣೆ ಹಾಕಿದೆ. ಎಲ್ಲಾ ಐದು ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ.

ಕಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ರಿಷಬ್​ ಪಂತ್​, ಜಸ್ಪ್ರೀತ್​ ಬುಮ್ರಾ ಸೇರಿದಂತೆ ಇಡೀ ತಂಡಕ್ಕೆ ವಿರಾಮ ನೀಡಲಾಗಿದೆ. ಯಶಸ್ವಿ ಜೈಸ್ವಾಲ್​ ಮತ್ತು ಋತುರಾಜ್​ ಗಾಯಕ್ವಾಡ್​ ಆರಂಭಿರಾಗಿ ಕಣಕ್ಕಿಳಿದರೆ, ಶುಭ್​ಮನ್​ ಗಿಲ್​​ ಮೂರನೇ ಕ್ರಮಾಂಕದಲ್ಲಿ ಆಡಬಹುದು.

ಭಾರತ ತಂಡ ಇಂತಿದೆ: ಶುಭ್​ಮನ್​ ಗಿಲ್​ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಧ್ರುವ ಜುರೆಲ್ (ವಿಕೆಟ್-ಕೀಪರ್), ನಿತೀಶ್ ರೆಡ್ಡಿ, ವಾಶಿಂಗ್ಟನ್​ ಸುಂದರ್​, ರಿಯಾನ್‌ ಪರಾಗ್​, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರಲಿ: ವಾಸಿಮ್ ಅಕ್ರಮ್ - Wasim Akram On Champions Trophy

ಹೈದರಾಬಾದ್: ಟಿ-20 ವಿಶ್ವಕಪ್​ ಬಳಿಕ ನಡೆಯುವ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಸೋಮವಾರ ಪ್ರಕಟವಾಗಿದೆ. ಪೂರ್ಣ ಯುವ ತಂಡವನ್ನು ಕಟ್ಟಲಾಗಿದ್ದು, ಶುಭ್​ಮನ್ ​​ಗಿಲ್​ ತಂಡದ ಸಾರಥ್ಯ ವಹಿಸಲಿದ್ದಾರೆ. ಐಪಿಎಲ್​ನಲ್ಲಿ ಮಿಂಚಿದ್ದ ವೇಗಿ ತುಷಾರ್​ ದೇಶಪಾಂಡೆ, ಬ್ಯಾಟರ್​ಗಳಾದ ರಿಯಾನ್​ ಪರಾಗ್​, ನಿತೀಶ್​ ರೆಡ್ಡಿ, ಅಭಿಷೇಕ್​ ಶರ್ಮಾಗೆ ಅವಕಾಶ ನೀಡಲಾಗಿದೆ.

ಟಿ-20 ವಿಶ್ವಕಪ್​ನಲ್ಲಿ ಅವಕಾಶ ವಂಚಿತರಾಗಿದ್ದ ಶುಭ್​ಮನ್​​ ಗಿಲ್​, ರಿಂಕುಸಿಂಗ್​​, ಋತುರಾಜ್​ ಗಾಯಕ್ವಾಡ್​ ಜಿಂಬಾಬ್ವೆ ಸರಣಿಯಲ್ಲಿ ಆದ್ಯತೆ ಪಡೆದಿದ್ದಾರೆ. ವಿಶ್ವಕಪ್​​ನಲ್ಲಿ ಇರುವ ತಂಡದ ಪೈಕಿ ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್​​ ಮಾತ್ರ ಇಲ್ಲಿದ್ದಾರೆ. ಉಳಿದಂತೆ ಸನ್​​ರೈಸರ್ಸ್​ ಹೈದರಾಬಾದ್​ ಪರ ಮಿಂಚು ಹರಿಸಿದ್ದ ಅಭಿಷೇಕ್​ ಶರ್ಮಾ, ನಿತೀಶ್​ ರೆಡ್ಡಿ, ರಾಜಸ್ಥಾನ ರಾಯಲ್ಸ್​​ನ ಸ್ಟಾರ್​ ರಿಯಾನ್​ ಪರಾಗ್​​, ತಂಡದಲ್ಲಿದ್ದರೂ ಅವಕಾಶ ಸಿಗದೆ ಬೆಂಚು ಕಾಯುತ್ತಿರುವ ಸಂಜು ಸ್ಯಾಮ್ಸನ್​ ಸರಣಿಗೆ ಆಯ್ಕೆಯಾಗಿದ್ದಾರೆ.

ವಾಷಿಂಗ್ಟನ್​ ಸುಂದರ್​, ರವಿ ಬಿಷ್ಣೋಯಿ ಸ್ಪಿನ್​ ವಿಭಾಗದಲ್ಲಿದ್ದರೆ, ಖಲೀಲ್ ಅಹ್ಮದ್​, ಮುಖೇಶ್​ಕುಮಾರ್​, ತುಷಾರ್​ ದೇಶಪಾಂಡೆ ವೇಗದ ಪಡೆಯಲ್ಲಿದ್ದಾರೆ. ಸಂಜು ಸ್ಯಾಮ್ಸನ್​ ಜೊತೆಗೆ ಧ್ರುವ್​ ಜುರೆಲ್​ಗೆ ವಿಕೆಟ್​ ಕೀಪರ್​ ಆಗಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅವಕಾಶ ನೀಡಿದೆ.

ಸೋಮವಾರ ನಡೆದ ಸಭೆಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಜುಲೈ 6 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಸರಣಿಗೆ ಯುವ ಪ್ರತಿಭೆಗಳಿಗೆ ಮಣೆ ಹಾಕಿದೆ. ಎಲ್ಲಾ ಐದು ಪಂದ್ಯಗಳು ಹರಾರೆಯಲ್ಲಿ ನಡೆಯಲಿವೆ.

ಕಾಯಂ ನಾಯಕ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ, ರಿಷಬ್​ ಪಂತ್​, ಜಸ್ಪ್ರೀತ್​ ಬುಮ್ರಾ ಸೇರಿದಂತೆ ಇಡೀ ತಂಡಕ್ಕೆ ವಿರಾಮ ನೀಡಲಾಗಿದೆ. ಯಶಸ್ವಿ ಜೈಸ್ವಾಲ್​ ಮತ್ತು ಋತುರಾಜ್​ ಗಾಯಕ್ವಾಡ್​ ಆರಂಭಿರಾಗಿ ಕಣಕ್ಕಿಳಿದರೆ, ಶುಭ್​ಮನ್​ ಗಿಲ್​​ ಮೂರನೇ ಕ್ರಮಾಂಕದಲ್ಲಿ ಆಡಬಹುದು.

ಭಾರತ ತಂಡ ಇಂತಿದೆ: ಶುಭ್​ಮನ್​ ಗಿಲ್​ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಧ್ರುವ ಜುರೆಲ್ (ವಿಕೆಟ್-ಕೀಪರ್), ನಿತೀಶ್ ರೆಡ್ಡಿ, ವಾಶಿಂಗ್ಟನ್​ ಸುಂದರ್​, ರಿಯಾನ್‌ ಪರಾಗ್​, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರಲಿ: ವಾಸಿಮ್ ಅಕ್ರಮ್ - Wasim Akram On Champions Trophy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.