ETV Bharat / sports

ದ್ರಾವಿಡ್​ ಉತ್ತರಾಧಿಕಾರಿಯಾಗಿ ಗೌತಮ್​ ಗಂಭೀರ್​ ಆಯ್ಕೆ?: ಬಿಸಿಸಿಐನಿಂದ ಘೋಷಣೆಯೊಂದೇ ಬಾಕಿ - team India Head Coach

author img

By ETV Bharat Karnataka Team

Published : May 28, 2024, 7:45 PM IST

Updated : May 28, 2024, 7:54 PM IST

ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಗೆ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ದ್ರಾವಿಡ್​ ಉತ್ತರಾಧಿಕಾರಿಯಾಗಿ ಗೌತಮ್​ ಗಂಭೀರ್​ ಆಯ್ಕೆ
ದ್ರಾವಿಡ್​ ಉತ್ತರಾಧಿಕಾರಿಯಾಗಿ ಗೌತಮ್​ ಗಂಭೀರ್​ ಆಯ್ಕೆ (AP Photo)

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆ ನೇಮಕ ಭಾರೀ ನಿರೀಕ್ಷೆ ಮೂಡಿಸಿದೆ. ರಾಹುಲ್​ ದ್ರಾವಿಡ್ ಅವರ ಉತ್ತಾರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಿದೆ. ತಂಡದ ಹೊಸ ಕೋಚ್​ ಆಗಿ ಭಾರತದ ಮಾಜಿ ಕ್ರಿಕೆಟರ್​ ಆಯ್ಕೆಯಾಗಿದ್ದಾಗಿ ತಿಳಿದುಬಂದಿದೆ. ಬಿಸಿಸಿಐ ಶೀಘ್ರವೇ ಈ ಬಗ್ಗೆ ಘೋಷಣೆ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಯು ಭಾರೀ ನಿರೀಕ್ಷೆಯ ಮತ್ತು ಜವಾಬ್ದಾರಿಯ ಹುದ್ದೆಯಾಗಿದೆ. ಕೋಟ್ಯಂತರ ಜನರ ಭಾವನೆಯ ಪ್ರತಿನಿಧಿ ಹುದ್ದೆ ಇದಾಗಿದೆ. ಇಂತಹ ಅತಿದೊಡ್ಡ ಸ್ಥಾನಕ್ಕೆ ಕೆಕೆಆರ್​ ತಂಡದ ಮೆಂಟರ್​ ಆಗಿರುವ ಗೌತಮ್​ ಗಂಭೀರ್​ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ನಿಜ. ಐಪಿಎಲ್​ನಲ್ಲಿ ಕೆಕೆಆರ್​ ತಂಡಕ್ಕೆ ದಶಕದ ಬಳಿಕ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೌತಮ್​ ಗಂಭೀರ್​ ಅವರು ಟೀಂ ಇಂಡಿಯಾ ಕೋಚ್​ ಹುದ್ದೆಗೆ ಅಖೈರುಗೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸದ್ಯದಲ್ಲೇ ಕ್ರಿಕೆಟ್​ ಮಂಡಳಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಗೊತ್ತಾಗಿದೆ.

ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತುಕತೆಯೂ ಪೂರ್ಣಗೊಂಡಿದೆ. ಮಾಜಿ ಕ್ರಿಕೆಟಿಗ ಕೋಚ್​​ ಆದಲ್ಲಿ ಉತ್ತಮ ಎಂಬ ಅಭಿಪ್ರಾಯವೂ ಅಭಿಮಾನಿಗಳಲ್ಲಿದೆ. ನೇಮಕಾತಿ ಬಗ್ಗೆ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ ಎಂದು ಐಪಿಎಲ್​ ಫ್ರಾಂಚೈಸಿಯ ಮಾಲೀಕರೊಬ್ಬರು ತಿಳಿಸಿದ್ದಾಗಿ ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ.

ಜಯ್​ ಶಾ- ಗಂಭೀರ್​ ಮಾತುಕತೆ: ಐಪಿಎಲ್​ ಫೈನಲ್​ ಪಂದ್ಯದ ಬಳಿಕ ಮೈದಾನದಲ್ಲಿ ಗಂಭೀರ್ ಮತ್ತ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮಾತುಕತೆ ನಡೆಸಿದ್ದು ಗಮನ ಸೆಳೆದಿತ್ತು. ಈ ವೇಳೆ ಇಬ್ಬರ ನಡುವಿನ ಚರ್ಚೆಯಲ್ಲಿ 'ನಾವು ದೇಶಕ್ಕಾಗಿ ಇದನ್ನು ಮಾಡಬೇಕು' ಎಂಬ ಮಾತು ಕೇಳಿಬಂದಿತ್ತು. ಇದರಿಂದ ಗಂಭೀರ್​ ಅವರೇ ಮುಂದಿನ ಕೋಚ್​ ಆಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು.

ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಅಷ್ಟು ಸುಲಭವಲ್ಲ. ಕೋಚ್​ ಆದ ಮೇಲೆ ವರ್ಷದ 10 ತಿಂಗಳು ತಂಡದ ಜೊತೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ. ಇನ್ನೂ ಯುವಕನಾಗಿರುವ ಗಂಭೀರ್​ಗೆ ಇದು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಕೆಕೆಆರ್​ ತಂಡದ ಮೆಂಟರ್​ ಆಗಿದ್ದಾಗ ಐಪಿಎಲ್​ನ 2 ತಿಂಗಳ ಅವಧಿಯಲ್ಲಿ 5 ಬಾರಿ ರಜೆ ಹಾಕಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಗೆ ನರೇಂದ್ರ ಮೋದಿ, ಅಮಿತ್​ ಶಾ, ಸಚಿನ್​ರಿಂದ ಅರ್ಜಿ ಸಲ್ಲಿಕೆ! - team India Coach Job

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆ ನೇಮಕ ಭಾರೀ ನಿರೀಕ್ಷೆ ಮೂಡಿಸಿದೆ. ರಾಹುಲ್​ ದ್ರಾವಿಡ್ ಅವರ ಉತ್ತಾರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಿದೆ. ತಂಡದ ಹೊಸ ಕೋಚ್​ ಆಗಿ ಭಾರತದ ಮಾಜಿ ಕ್ರಿಕೆಟರ್​ ಆಯ್ಕೆಯಾಗಿದ್ದಾಗಿ ತಿಳಿದುಬಂದಿದೆ. ಬಿಸಿಸಿಐ ಶೀಘ್ರವೇ ಈ ಬಗ್ಗೆ ಘೋಷಣೆ ಹೊರಡಿಸಲಿದೆ ಎಂದು ಹೇಳಲಾಗುತ್ತಿದೆ.

ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಯು ಭಾರೀ ನಿರೀಕ್ಷೆಯ ಮತ್ತು ಜವಾಬ್ದಾರಿಯ ಹುದ್ದೆಯಾಗಿದೆ. ಕೋಟ್ಯಂತರ ಜನರ ಭಾವನೆಯ ಪ್ರತಿನಿಧಿ ಹುದ್ದೆ ಇದಾಗಿದೆ. ಇಂತಹ ಅತಿದೊಡ್ಡ ಸ್ಥಾನಕ್ಕೆ ಕೆಕೆಆರ್​ ತಂಡದ ಮೆಂಟರ್​ ಆಗಿರುವ ಗೌತಮ್​ ಗಂಭೀರ್​ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ನಿಜ. ಐಪಿಎಲ್​ನಲ್ಲಿ ಕೆಕೆಆರ್​ ತಂಡಕ್ಕೆ ದಶಕದ ಬಳಿಕ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೌತಮ್​ ಗಂಭೀರ್​ ಅವರು ಟೀಂ ಇಂಡಿಯಾ ಕೋಚ್​ ಹುದ್ದೆಗೆ ಅಖೈರುಗೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಸದ್ಯದಲ್ಲೇ ಕ್ರಿಕೆಟ್​ ಮಂಡಳಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ ಎಂದು ಗೊತ್ತಾಗಿದೆ.

ಗೌತಮ್ ಗಂಭೀರ್ ಭಾರತದ ಮುಖ್ಯ ಕೋಚ್ ಆಗುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತುಕತೆಯೂ ಪೂರ್ಣಗೊಂಡಿದೆ. ಮಾಜಿ ಕ್ರಿಕೆಟಿಗ ಕೋಚ್​​ ಆದಲ್ಲಿ ಉತ್ತಮ ಎಂಬ ಅಭಿಪ್ರಾಯವೂ ಅಭಿಮಾನಿಗಳಲ್ಲಿದೆ. ನೇಮಕಾತಿ ಬಗ್ಗೆ ಶೀಘ್ರವೇ ಪ್ರಕಟಣೆ ಹೊರಬೀಳಲಿದೆ ಎಂದು ಐಪಿಎಲ್​ ಫ್ರಾಂಚೈಸಿಯ ಮಾಲೀಕರೊಬ್ಬರು ತಿಳಿಸಿದ್ದಾಗಿ ಕ್ರೀಡಾ ಮಾಧ್ಯಮವೊಂದು ವರದಿ ಮಾಡಿದೆ.

ಜಯ್​ ಶಾ- ಗಂಭೀರ್​ ಮಾತುಕತೆ: ಐಪಿಎಲ್​ ಫೈನಲ್​ ಪಂದ್ಯದ ಬಳಿಕ ಮೈದಾನದಲ್ಲಿ ಗಂಭೀರ್ ಮತ್ತ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಮಾತುಕತೆ ನಡೆಸಿದ್ದು ಗಮನ ಸೆಳೆದಿತ್ತು. ಈ ವೇಳೆ ಇಬ್ಬರ ನಡುವಿನ ಚರ್ಚೆಯಲ್ಲಿ 'ನಾವು ದೇಶಕ್ಕಾಗಿ ಇದನ್ನು ಮಾಡಬೇಕು' ಎಂಬ ಮಾತು ಕೇಳಿಬಂದಿತ್ತು. ಇದರಿಂದ ಗಂಭೀರ್​ ಅವರೇ ಮುಂದಿನ ಕೋಚ್​ ಆಗಲಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು.

ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಅಷ್ಟು ಸುಲಭವಲ್ಲ. ಕೋಚ್​ ಆದ ಮೇಲೆ ವರ್ಷದ 10 ತಿಂಗಳು ತಂಡದ ಜೊತೆಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಕುಟುಂಬದಿಂದ ದೂರ ಉಳಿಯಬೇಕಾಗುತ್ತದೆ. ಇನ್ನೂ ಯುವಕನಾಗಿರುವ ಗಂಭೀರ್​ಗೆ ಇದು ಸಾಧ್ಯವೇ ಎಂಬುದು ಪ್ರಶ್ನೆಯಾಗಿದೆ. ಕೆಕೆಆರ್​ ತಂಡದ ಮೆಂಟರ್​ ಆಗಿದ್ದಾಗ ಐಪಿಎಲ್​ನ 2 ತಿಂಗಳ ಅವಧಿಯಲ್ಲಿ 5 ಬಾರಿ ರಜೆ ಹಾಕಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಗೆ ನರೇಂದ್ರ ಮೋದಿ, ಅಮಿತ್​ ಶಾ, ಸಚಿನ್​ರಿಂದ ಅರ್ಜಿ ಸಲ್ಲಿಕೆ! - team India Coach Job

Last Updated : May 28, 2024, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.