ETV Bharat / sports

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಚೆಂಡು ವಿರೂಪಗೊಳಿಸಿತ್ತು: ಪಾಕ್ ಮಾಜಿ ಕ್ಯಾಪ್ಟನ್ ಇಂಜಮಾಮ್ ಆರೋಪ - T20 World Cup 2024

author img

By ETV Bharat Karnataka Team

Published : Jun 26, 2024, 2:19 PM IST

2024ರ ಟಿ20 ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದ ವೇಳೆ ಭಾರತವು ಚೆಂಡನ್ನು ವಿರೂಪಗೊಳಿಸಿತ್ತು ಎಂದು ಇಂಜಮಾಮ್ ಉಲ್ ಹಕ್ ಆರೋಪಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ನ ಮಾಜಿ ಕ್ಯಾಪ್ಟನ್ ಇಂಜಮಾಮ್ ಉಲ್ ಹಕ್
ಪಾಕಿಸ್ತಾನ ಕ್ರಿಕೆಟ್​ನ ಮಾಜಿ ಕ್ಯಾಪ್ಟನ್ ಇಂಜಮಾಮ್ ಉಲ್ ಹಕ್ (File Photo: Inzamam-ul-Haq (IANS Photos))

ಹೈದರಾಬಾದ್: 2024ರ ಟಿ20 ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದ ವೇಳೆ ಭಾರತವು ಚೆಂಡನ್ನು ವಿರೂಪಗೊಳಿಸಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗಂಭೀರ ಆರೋಪ ಮಾಡಿದ್ದಾರೆ.

ಸೇಂಟ್ ಲೂಸಿಯಾದ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 24 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದ ವೇಳೆಯಲ್ಲಿ ಚೆಂಡು ವಿರೂಪಗೊಳಿಸಲಾಗಿತ್ತು ಎಂದು ಆರೋಪಿಸಿರುವ ಹಕ್, 16ನೇ ಓವರ್​ನಲ್ಲಿ ಅರ್ಷ್​ದೀಪ್​ ಅವರು ಎರಡನೇ ಸ್ಪೆಲ್​ನ ಬೌಲಿಂಗ್ ಮಾಡಲು ಬಂದಾಗ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಆ ಸಂದರ್ಭದಲ್ಲಿ ಚೆಂಡಿಗೆ ಏನೋ ಮಾಡಲಾಯಿತು. ಇದರಿಂದಾಗಿಯೇ ಭಾರತದ ಎಡಗೈ ವೇಗಿ ಅರ್ಷ್​ದೀಪ್ ಸಿಂಗ್ ಆಸ್ಟ್ರೇಲಿಯಾದ ಇನ್ನಿಂಗ್ಸ್​ನಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಭಾರತದ ಪರ ಅರ್ಷ್​ದೀಪ್ 37ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಅವರು ಇನ್ನಿಂಗ್ಸ್ ನ ಮೊದಲ ಓವರ್​ನಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿ, 18 ನೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಮತ್ತು ಟಿಮ್ ಡೇವಿಡ್ ಅವರನ್ನು ಕೂಡ ಪವಿಲಿಯನ್​ಗೆ ಕಳುಹಿಸಿದ್ದರು. ಆದರೆ ಅರ್ಷ್​ದೀಪ್ ತನ್ನ ಎರಡು ಓವರ್​ಗಳ ಎರಡನೇ ಸ್ಪೆಲ್​ ಆರಂಭಿಸಿದಾಗ ಏನೋ ನಡೆದಿದೆ ಎಂದು ಇಂಜಮಾಮ್ ಹೇಳಿದ್ದು, ಇಂಥ ಘಟನೆಗಳ ಬಗ್ಗೆ ನಿಗಾ ವಹಿಸುವಂತೆ ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

"ಅರ್ಷ್​ದೀಪ್ ಸಿಂಗ್ 15ನೇ ಓವರ್​ನಲ್ಲಿ ಬೌಲಿಂಗ್ ಮಾಡುತ್ತಿರುವಾಗಲೇ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿತ್ತು ಎಂಬ ಅಂಶವನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಷ್ಟು ಬೇಗನೆ ಹೊಸ ಚೆಂಡು ರಿವರ್ಸ್​ ಸ್ವಿಂಗ್ ಆಗಲಾರಂಭಿಸುವುದು ಹೇಗೆ? 12 ರಿಂದ 13ನೇ ಓವರ್ ವೇಳೆಗೇ ಚೆಂಡು ರಿವರ್ಸ್​ ಸ್ವಿಂಗ್​ಗೆ ಸಿದ್ಧವಾಗಿತ್ತು. ಅಂಪೈರ್​ಗಳು ಇಂಥ ವಿಷಯಗಳ ಬಗ್ಗೆ ಕಣ್ಣು ತೆರೆದು ನೋಡಬೇಕು. ರಿವರ್ಸ್ ಸ್ವಿಂಗ್ ಬಗ್ಗೆ ನಮಗೂ ಒಂದಿಷ್ಟು ಗೊತ್ತಿದೆ. ಅಂದರೆ ಅರ್ಷ್​ದೀಪ್​ ಸಿಂಗ್​ಗೆ ಅಷ್ಟು ಬೇಗನೆ ರಿವರ್ಸ್​ ಸ್ವಿಂಗ್ ಮಾಡಲು ಸಾಧ್ಯವಾಗಿದೆ ಎಂದಾದರೆ ಚೆಂಡಿಗೆ ಏನೋ ಮಾಡಲಾಗಿತ್ತು ಎಂದರ್ಥ" ಎಂದು ಇಂಜಮಾಮ್ ಪಾಕಿಸ್ತಾನದ 24 ನ್ಯೂಸ್ ಚಾನೆಲ್​ನ 'ವಿಶ್ವಕಪ್ ಹಂಗಾಮಾ' ಕಾರ್ಯಕ್ರಮದಲ್ಲಿ ಹೇಳಿದರು.

ಸೂಪರ್ 8 ಪಂದ್ಯದ ವೇಳೆ ರೋಹಿತ್ ಶರ್ಮಾ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿದ್ದರಿಂದ ಭಾರತ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು ಮತ್ತು ಸೂರ್ಯಕುಮಾರ್ ಯಾದವ್ ಚುರುಕಿನ ವೇಗದಲ್ಲಿ 31 ರನ್ ಗಳಿಸಿದರು. ಭಾರತೀಯ ಬೌಲರ್​ಗಳು ಆಸ್ಟ್ರೇಲಿಯಾವನ್ನು 181/7 ಕ್ಕೆ ಸೀಮಿತಗೊಳಿಸಿದರು. ಭಾರತದ ಪರ ಅರ್ಷ್​ದೀಪ್ 3 ವಿಕೆಟ್ ಮತ್ತು ಕುಲ್ದೀಪ್ 2 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : ಭಾರತದೊಂದಿಗೆ ಶಾಶ್ವತ ದ್ವೇಷ ಬಯಸುವುದಿಲ್ಲ: ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್ - India Pakistan Relations

ಹೈದರಾಬಾದ್: 2024ರ ಟಿ20 ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದ ವೇಳೆ ಭಾರತವು ಚೆಂಡನ್ನು ವಿರೂಪಗೊಳಿಸಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗಂಭೀರ ಆರೋಪ ಮಾಡಿದ್ದಾರೆ.

ಸೇಂಟ್ ಲೂಸಿಯಾದ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 24 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದ ವೇಳೆಯಲ್ಲಿ ಚೆಂಡು ವಿರೂಪಗೊಳಿಸಲಾಗಿತ್ತು ಎಂದು ಆರೋಪಿಸಿರುವ ಹಕ್, 16ನೇ ಓವರ್​ನಲ್ಲಿ ಅರ್ಷ್​ದೀಪ್​ ಅವರು ಎರಡನೇ ಸ್ಪೆಲ್​ನ ಬೌಲಿಂಗ್ ಮಾಡಲು ಬಂದಾಗ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಆ ಸಂದರ್ಭದಲ್ಲಿ ಚೆಂಡಿಗೆ ಏನೋ ಮಾಡಲಾಯಿತು. ಇದರಿಂದಾಗಿಯೇ ಭಾರತದ ಎಡಗೈ ವೇಗಿ ಅರ್ಷ್​ದೀಪ್ ಸಿಂಗ್ ಆಸ್ಟ್ರೇಲಿಯಾದ ಇನ್ನಿಂಗ್ಸ್​ನಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಭಾರತದ ಪರ ಅರ್ಷ್​ದೀಪ್ 37ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಅವರು ಇನ್ನಿಂಗ್ಸ್ ನ ಮೊದಲ ಓವರ್​ನಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿ, 18 ನೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಮತ್ತು ಟಿಮ್ ಡೇವಿಡ್ ಅವರನ್ನು ಕೂಡ ಪವಿಲಿಯನ್​ಗೆ ಕಳುಹಿಸಿದ್ದರು. ಆದರೆ ಅರ್ಷ್​ದೀಪ್ ತನ್ನ ಎರಡು ಓವರ್​ಗಳ ಎರಡನೇ ಸ್ಪೆಲ್​ ಆರಂಭಿಸಿದಾಗ ಏನೋ ನಡೆದಿದೆ ಎಂದು ಇಂಜಮಾಮ್ ಹೇಳಿದ್ದು, ಇಂಥ ಘಟನೆಗಳ ಬಗ್ಗೆ ನಿಗಾ ವಹಿಸುವಂತೆ ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

"ಅರ್ಷ್​ದೀಪ್ ಸಿಂಗ್ 15ನೇ ಓವರ್​ನಲ್ಲಿ ಬೌಲಿಂಗ್ ಮಾಡುತ್ತಿರುವಾಗಲೇ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿತ್ತು ಎಂಬ ಅಂಶವನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಷ್ಟು ಬೇಗನೆ ಹೊಸ ಚೆಂಡು ರಿವರ್ಸ್​ ಸ್ವಿಂಗ್ ಆಗಲಾರಂಭಿಸುವುದು ಹೇಗೆ? 12 ರಿಂದ 13ನೇ ಓವರ್ ವೇಳೆಗೇ ಚೆಂಡು ರಿವರ್ಸ್​ ಸ್ವಿಂಗ್​ಗೆ ಸಿದ್ಧವಾಗಿತ್ತು. ಅಂಪೈರ್​ಗಳು ಇಂಥ ವಿಷಯಗಳ ಬಗ್ಗೆ ಕಣ್ಣು ತೆರೆದು ನೋಡಬೇಕು. ರಿವರ್ಸ್ ಸ್ವಿಂಗ್ ಬಗ್ಗೆ ನಮಗೂ ಒಂದಿಷ್ಟು ಗೊತ್ತಿದೆ. ಅಂದರೆ ಅರ್ಷ್​ದೀಪ್​ ಸಿಂಗ್​ಗೆ ಅಷ್ಟು ಬೇಗನೆ ರಿವರ್ಸ್​ ಸ್ವಿಂಗ್ ಮಾಡಲು ಸಾಧ್ಯವಾಗಿದೆ ಎಂದಾದರೆ ಚೆಂಡಿಗೆ ಏನೋ ಮಾಡಲಾಗಿತ್ತು ಎಂದರ್ಥ" ಎಂದು ಇಂಜಮಾಮ್ ಪಾಕಿಸ್ತಾನದ 24 ನ್ಯೂಸ್ ಚಾನೆಲ್​ನ 'ವಿಶ್ವಕಪ್ ಹಂಗಾಮಾ' ಕಾರ್ಯಕ್ರಮದಲ್ಲಿ ಹೇಳಿದರು.

ಸೂಪರ್ 8 ಪಂದ್ಯದ ವೇಳೆ ರೋಹಿತ್ ಶರ್ಮಾ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿದ್ದರಿಂದ ಭಾರತ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು ಮತ್ತು ಸೂರ್ಯಕುಮಾರ್ ಯಾದವ್ ಚುರುಕಿನ ವೇಗದಲ್ಲಿ 31 ರನ್ ಗಳಿಸಿದರು. ಭಾರತೀಯ ಬೌಲರ್​ಗಳು ಆಸ್ಟ್ರೇಲಿಯಾವನ್ನು 181/7 ಕ್ಕೆ ಸೀಮಿತಗೊಳಿಸಿದರು. ಭಾರತದ ಪರ ಅರ್ಷ್​ದೀಪ್ 3 ವಿಕೆಟ್ ಮತ್ತು ಕುಲ್ದೀಪ್ 2 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ : ಭಾರತದೊಂದಿಗೆ ಶಾಶ್ವತ ದ್ವೇಷ ಬಯಸುವುದಿಲ್ಲ: ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್ - India Pakistan Relations

ETV Bharat Logo

Copyright © 2024 Ushodaya Enterprises Pvt. Ltd., All Rights Reserved.