ETV Bharat / sports

ಆಸೀಸ್​ ವಿರುದ್ಧ ಅಪ್ಘನ್​ ಭರ್ಜರಿ ಜಯ, ಏಕದಿನ ವಿಶ್ವಕಪ್​​ನಲ್ಲೇ ಈ ಫಲಿತಾಂಶ ಬರಬೇಕಿತ್ತು: ಲಾಲ್​ಚಂದ್​ ರಜಪೂತ್ - Lalchand Rajput

author img

By ETV Bharat Karnataka Team

Published : Jun 23, 2024, 10:39 PM IST

ಟಿ20 ವಿಶ್ವಕಪ್​ನ ಸೂಪರ್​-8 ಹಂತದಲ್ಲಿ ಆಸ್ಟ್ರೇಲಿಯಾಗೆ ಅಫ್ಘಾನಿಸ್ತಾನ ಸೋಲಿನ ಶಾಕ್​ ನೀಡಿದ್ದು, ಕ್ರಿಕೆಟ್​ ಲೋಕವನ್ನು ಅಚ್ಚರಿಗೆ ದೂಡಿದೆ. ತಂಡದ ಬಲಾಬಲದ ಬಗ್ಗೆ ಅದರ ಮಾಜಿ ಕೋಚ್​, ಭಾರತದ ಮಾಜಿ ಆಟಗಾರ ಲಾಲ್​ಚಂದ್​ ರಜಪೂತ್​ ಅವರು ಈಟಿವಿ ಭಾರತ​ ಸಿಬ್ಬಂದಿ ನಿಖಿಲ್​ ಬಾಪಟ್​​ ಜೊತೆ ಹಂಚಿಕೊಂಡಿದ್ದಾರೆ.

ಲಾಲ್​ಚಂದ್​ ರಜಪೂತ್
ಲಾಲ್​ಚಂದ್​ ರಜಪೂತ್ (ANI Photo)

ಹೈದರಾಬಾದ್/ಮುಂಬೈ: ಟಿ-20 ವಿಶ್ವಕಪ್​ನಲ್ಲಿ ಅಚ್ಚರಿಯ ಫಲಿತಾಂಶವೆಂದರೆ ಅದು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದ್ದು. ಸೂಪರ್​-8 ನಂತಹ ಮಹತ್ವದ ಹಂತದಲ್ಲಿ ಅಫ್ಘನ್​ ತಂಡ ತೋರಿದ ಪ್ರದರ್ಶನ ಕಾಂಗರೂಗಳಿಗೆ ನಿಜಕ್ಕೂ ಶಾಕ್​ ನೀಡಿದೆ. ಮಾಜಿ ಚಾಂಪಿಯನ್​ ತಂಡ ಸೆಮಿಫೈನಲ್​ಗೆ ತಲುಪಲು ಬಾಕಿ ಉಳಿದ ಭಾರತ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು. ಇಲ್ಲವಾದರಲ್ಲಿ ಮನೆಯ ಹಾದಿ ಹಿಡಿಯಲಿದೆ.

ಆಸೀಸ್​ ವಿರುದ್ಧ ಅಫ್ಘನ್​ ಗೆಲುವು ಕ್ರಿಕೆಟ್​ ಲೋಕದಲ್ಲಿ ಭಾರೀ ಶ್ಲಾಘನೆಗೆ ಒಳಗಾಗಿದೆ. ನಾಯಕ ರಶೀದ್​ ಖಾನ್​ರ ಚಾಣಾಕ್ಷತನ, ಆಟಗಾರರ ಬೆಂಬಲ, ಅದೃಷ್ಟ ಎಲ್ಲವೂ ಸೇರಿ ಗೆಲುವಾಗಿ ಫಲಿತಾಂಶ ಬಂದಿದೆ. ಇನ್ನೊಂದು ಹೆಜ್ಜೆಯಲ್ಲಿ ರಶೀದ್​ ಬಳಗ ಯಶಸ್ಸು ಕಂಡಲ್ಲಿ ಚರಿತ್ರೆ ಸೃಷ್ಟಿಯಾಗೋದು ಮಾತ್ರ ಪಕ್ಕಾ. ಅಂದರೆ, ಭಾರತ ವಿರುದ್ಧ ಆಸ್ಟ್ರೇಲಿಯಾ ಸೋತು, ಬಾಂಗ್ಲಾದೇಶ ವಿರುದ್ಧ ಅಫ್ಘನ್​ ಗೆದ್ದರೆ ತಂಡ ನಾಲ್ಕರ ಘಟ್ಟಕ್ಕೆ ನೇರ ಎಂಟ್ರಿ ಪಡೆದು ಚೊಚ್ಚಲ ಬಾರಿಗೆ ಈ ಸಾಧನೆ ಮಾಡಲಿದೆ.

ಫಲಿತಾಂಶ ತಡವಾಗಿ ಬಂದಿದೆ: ಅನನುಭವಿಗಳ ಗುಂಪಾದ ಅಫ್ಘನ್​ ತಂಡದ ಮಾಜಿ ಮುಖ್ಯ ತರಬೇತುದಾರರಾಗಿದ್ದ ಲಾಲ್​ಚಂದ್​ ರಜಪೂತ್​ ಅವರು ಈ ಸಾಧನೆಯನ್ನು ಕೊಂಡಾಡಿದ್ದಾರೆ. ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸುವ ಚತುರರಿದ್ದಾರೆ ಎಂದು ಹೊಗಳಿದ್ದಾರೆ.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನದ ಗೆಲುವು ದೇಶದ ಇತರ ಆಟಗಾರರು ಕ್ರಿಕೆಟ್​ನಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಲಿದೆ ಎಂದು ರಜಪೂತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಾಜಿ ಆಟಗಾರ ಮತ್ತು ಕ್ರಿಕೆಟ್ ಮ್ಯಾನೇಜರ್ ಆಗಿರುವ ಅವರು, ಆಸೀಸ್​ ವಿರುದ್ಧ ಗೆಲುವು ಕಂಡಿದ್ದು ಅತ್ಯಾಶ್ಚರ್ಯವೇನು ತಂದಿಲ್ಲ. ಇದು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿಯೇ ಬರಬೇಕಿತ್ತು. ಅಲ್ಲಿ ಸಾಧ್ಯವಾಗದೇ ಇಲ್ಲಿ ಫಲಿತಾಂಶ ಬಂದಿದೆ ಅಷ್ಟೇ ಎಂದು ಹೇಳಿದರು.

ಏಕದಿನ ಅಥವಾ ಟಿ20 ಪಂದ್ಯ ಆಗಿರಲಿ ಅಫ್ಘನ್​ ಎದುರು ನಿಜಕ್ಕೂ ಸವಾಲು ಇರುವುದು ಆಸ್ಟ್ರೇಲಿಯಾ ತಂಡಕ್ಕೆ. ಕಾರಣ ಅಫ್ಘನ್​ ತಂಡ ಬಲಿಷ್ಠವಾಗುತ್ತಾ ಸಾಗಿದೆ. ಏಕದಿನ, ಟಿ-20 ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಯಾವಾಗಲೂ ಅಫ್ಘಾನಿಸ್ತಾನದ ವಿರುದ್ಧ ಎಚ್ಚರಿಕೆಯಿಂದ ಆಡಬೇಕು. ಅಫ್ಘನ್​ ಗೆಲುವಿನ ಮೂಲಕ ಗುಂಪು 1 ರಲ್ಲಿ ಸೆಮೀಸ್​ ಹಾದಿ ಮತ್ತಷ್ಟು ರೋಚಕವಾಗಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮೂರು ತಂಡಕ್ಕೂ ಸಮಾನ ಅವಕಾಶವಿದೆ ಎಂದರು.

ರಶೀದ್​ ಖಾನ್​ ಬುದ್ಧಿವಂತ ನಾಯಕ: ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರನ್ನು ರಜಪೂತ್​ ಹೊಗಳಿದರು. ಅವರ ನಾಯಕತ್ವ ಉತ್ತಮವಾಗಿದೆ ಎಂದು ಬಣ್ಣಿಸಿದರು. ರಶೀದ್ ಒಬ್ಬ ಉತ್ತಮ ಕ್ರಿಕೆಟಿಗ ಜೊತೆಗೆ ಚುರುಕಿನ ಮೆದುಳುಳ್ಳ ನಾಯಕ. ಐಪಿಎಲ್ ಸೇರಿದಂತೆ ಹಲವು ಟಿ20 ಕೂಟಗಳಲ್ಲಿ ಭಾಗಿಯಾಗಿ ಉತ್ತಮ ಅನುಭವ ಸಂಪಾದಿಸಿದ್ದಾರೆ. ಗುಲ್ಬದಿನ್​ ನೈಬ್​ರನ್ನು ಸರಿಯಾದ ಸಮಯದಲ್ಲಿ ಬೌಲಿಂಗ್​ ಇಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇದು ಚಾಣಕ್ಯ ನಾಯಕತ್ವದ ಲಕ್ಷಣ ಎಂದು ಗುಣಗಾನ ಮಾಡಿದರು.

ಅಫ್ಘಾನಿಸ್ತಾನದಲ್ಲಿ ಭಾರತದಂತೆಯೇ ಕ್ರಿಕೆಟ್​ ತಂಡವನ್ನು ಅಲ್ಲಿನ ಜನರು ಪ್ರೀತಿಸುತ್ತಾರೆ. ಅವರ ಪಾಲಿಗೆ ಕ್ರಿಕೆಟಿಗರು ಸೂಪರ್‌ಸ್ಟಾರ್‌ಗಳು. ತಂಡ ಎಲ್ಲಿಯೇ ಆಡಲಿ, ಬೆಂಬಲಿಸಲು ಕ್ರೀಡಾಂಗಣದಲ್ಲಿ ಜನರು ನೆರೆದಿರುತ್ತಾರೆ. ಈ ಗೆಲುವು ತಂಡದ ಬದಲಾವಣೆಗೆ ಬುನಾದಿ ಹಾಕಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್​ಸ್ವೀಪ್​: ಇದು 'ಸ್ಮೃತಿ'ಯಲ್ಲಿ ಉಳಿಯುವ ಟೂರ್ನಿ - INDW vs SAW match

ಹೈದರಾಬಾದ್/ಮುಂಬೈ: ಟಿ-20 ವಿಶ್ವಕಪ್​ನಲ್ಲಿ ಅಚ್ಚರಿಯ ಫಲಿತಾಂಶವೆಂದರೆ ಅದು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಗೆಲುವು ಸಾಧಿಸಿದ್ದು. ಸೂಪರ್​-8 ನಂತಹ ಮಹತ್ವದ ಹಂತದಲ್ಲಿ ಅಫ್ಘನ್​ ತಂಡ ತೋರಿದ ಪ್ರದರ್ಶನ ಕಾಂಗರೂಗಳಿಗೆ ನಿಜಕ್ಕೂ ಶಾಕ್​ ನೀಡಿದೆ. ಮಾಜಿ ಚಾಂಪಿಯನ್​ ತಂಡ ಸೆಮಿಫೈನಲ್​ಗೆ ತಲುಪಲು ಬಾಕಿ ಉಳಿದ ಭಾರತ ವಿರುದ್ಧದ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು. ಇಲ್ಲವಾದರಲ್ಲಿ ಮನೆಯ ಹಾದಿ ಹಿಡಿಯಲಿದೆ.

ಆಸೀಸ್​ ವಿರುದ್ಧ ಅಫ್ಘನ್​ ಗೆಲುವು ಕ್ರಿಕೆಟ್​ ಲೋಕದಲ್ಲಿ ಭಾರೀ ಶ್ಲಾಘನೆಗೆ ಒಳಗಾಗಿದೆ. ನಾಯಕ ರಶೀದ್​ ಖಾನ್​ರ ಚಾಣಾಕ್ಷತನ, ಆಟಗಾರರ ಬೆಂಬಲ, ಅದೃಷ್ಟ ಎಲ್ಲವೂ ಸೇರಿ ಗೆಲುವಾಗಿ ಫಲಿತಾಂಶ ಬಂದಿದೆ. ಇನ್ನೊಂದು ಹೆಜ್ಜೆಯಲ್ಲಿ ರಶೀದ್​ ಬಳಗ ಯಶಸ್ಸು ಕಂಡಲ್ಲಿ ಚರಿತ್ರೆ ಸೃಷ್ಟಿಯಾಗೋದು ಮಾತ್ರ ಪಕ್ಕಾ. ಅಂದರೆ, ಭಾರತ ವಿರುದ್ಧ ಆಸ್ಟ್ರೇಲಿಯಾ ಸೋತು, ಬಾಂಗ್ಲಾದೇಶ ವಿರುದ್ಧ ಅಫ್ಘನ್​ ಗೆದ್ದರೆ ತಂಡ ನಾಲ್ಕರ ಘಟ್ಟಕ್ಕೆ ನೇರ ಎಂಟ್ರಿ ಪಡೆದು ಚೊಚ್ಚಲ ಬಾರಿಗೆ ಈ ಸಾಧನೆ ಮಾಡಲಿದೆ.

ಫಲಿತಾಂಶ ತಡವಾಗಿ ಬಂದಿದೆ: ಅನನುಭವಿಗಳ ಗುಂಪಾದ ಅಫ್ಘನ್​ ತಂಡದ ಮಾಜಿ ಮುಖ್ಯ ತರಬೇತುದಾರರಾಗಿದ್ದ ಲಾಲ್​ಚಂದ್​ ರಜಪೂತ್​ ಅವರು ಈ ಸಾಧನೆಯನ್ನು ಕೊಂಡಾಡಿದ್ದಾರೆ. ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸುವ ಚತುರರಿದ್ದಾರೆ ಎಂದು ಹೊಗಳಿದ್ದಾರೆ.

ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನದ ಗೆಲುವು ದೇಶದ ಇತರ ಆಟಗಾರರು ಕ್ರಿಕೆಟ್​ನಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಲಿದೆ ಎಂದು ರಜಪೂತ್ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಾಜಿ ಆಟಗಾರ ಮತ್ತು ಕ್ರಿಕೆಟ್ ಮ್ಯಾನೇಜರ್ ಆಗಿರುವ ಅವರು, ಆಸೀಸ್​ ವಿರುದ್ಧ ಗೆಲುವು ಕಂಡಿದ್ದು ಅತ್ಯಾಶ್ಚರ್ಯವೇನು ತಂದಿಲ್ಲ. ಇದು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿಯೇ ಬರಬೇಕಿತ್ತು. ಅಲ್ಲಿ ಸಾಧ್ಯವಾಗದೇ ಇಲ್ಲಿ ಫಲಿತಾಂಶ ಬಂದಿದೆ ಅಷ್ಟೇ ಎಂದು ಹೇಳಿದರು.

ಏಕದಿನ ಅಥವಾ ಟಿ20 ಪಂದ್ಯ ಆಗಿರಲಿ ಅಫ್ಘನ್​ ಎದುರು ನಿಜಕ್ಕೂ ಸವಾಲು ಇರುವುದು ಆಸ್ಟ್ರೇಲಿಯಾ ತಂಡಕ್ಕೆ. ಕಾರಣ ಅಫ್ಘನ್​ ತಂಡ ಬಲಿಷ್ಠವಾಗುತ್ತಾ ಸಾಗಿದೆ. ಏಕದಿನ, ಟಿ-20 ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ಯಾವಾಗಲೂ ಅಫ್ಘಾನಿಸ್ತಾನದ ವಿರುದ್ಧ ಎಚ್ಚರಿಕೆಯಿಂದ ಆಡಬೇಕು. ಅಫ್ಘನ್​ ಗೆಲುವಿನ ಮೂಲಕ ಗುಂಪು 1 ರಲ್ಲಿ ಸೆಮೀಸ್​ ಹಾದಿ ಮತ್ತಷ್ಟು ರೋಚಕವಾಗಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ಮೂರು ತಂಡಕ್ಕೂ ಸಮಾನ ಅವಕಾಶವಿದೆ ಎಂದರು.

ರಶೀದ್​ ಖಾನ್​ ಬುದ್ಧಿವಂತ ನಾಯಕ: ಅಫ್ಘಾನಿಸ್ತಾನದ ನಾಯಕ ರಶೀದ್ ಖಾನ್ ಅವರನ್ನು ರಜಪೂತ್​ ಹೊಗಳಿದರು. ಅವರ ನಾಯಕತ್ವ ಉತ್ತಮವಾಗಿದೆ ಎಂದು ಬಣ್ಣಿಸಿದರು. ರಶೀದ್ ಒಬ್ಬ ಉತ್ತಮ ಕ್ರಿಕೆಟಿಗ ಜೊತೆಗೆ ಚುರುಕಿನ ಮೆದುಳುಳ್ಳ ನಾಯಕ. ಐಪಿಎಲ್ ಸೇರಿದಂತೆ ಹಲವು ಟಿ20 ಕೂಟಗಳಲ್ಲಿ ಭಾಗಿಯಾಗಿ ಉತ್ತಮ ಅನುಭವ ಸಂಪಾದಿಸಿದ್ದಾರೆ. ಗುಲ್ಬದಿನ್​ ನೈಬ್​ರನ್ನು ಸರಿಯಾದ ಸಮಯದಲ್ಲಿ ಬೌಲಿಂಗ್​ ಇಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇದು ಚಾಣಕ್ಯ ನಾಯಕತ್ವದ ಲಕ್ಷಣ ಎಂದು ಗುಣಗಾನ ಮಾಡಿದರು.

ಅಫ್ಘಾನಿಸ್ತಾನದಲ್ಲಿ ಭಾರತದಂತೆಯೇ ಕ್ರಿಕೆಟ್​ ತಂಡವನ್ನು ಅಲ್ಲಿನ ಜನರು ಪ್ರೀತಿಸುತ್ತಾರೆ. ಅವರ ಪಾಲಿಗೆ ಕ್ರಿಕೆಟಿಗರು ಸೂಪರ್‌ಸ್ಟಾರ್‌ಗಳು. ತಂಡ ಎಲ್ಲಿಯೇ ಆಡಲಿ, ಬೆಂಬಲಿಸಲು ಕ್ರೀಡಾಂಗಣದಲ್ಲಿ ಜನರು ನೆರೆದಿರುತ್ತಾರೆ. ಈ ಗೆಲುವು ತಂಡದ ಬದಲಾವಣೆಗೆ ಬುನಾದಿ ಹಾಕಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್​ಸ್ವೀಪ್​: ಇದು 'ಸ್ಮೃತಿ'ಯಲ್ಲಿ ಉಳಿಯುವ ಟೂರ್ನಿ - INDW vs SAW match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.