ಇಂದಿನ ಪಂಚಾಂಗ
29-02-2024, ಗುರುವಾರ
ಸಂವತ್ಸರ: ಶುಭಕೃತ್
ಆಯನ: ಉತ್ತರಾಯಣ
ಮಾಸ : ಮಾಘ
ಪಕ್ಷ : ಕೃಷ್ಣ
ತಿಥಿ : ಪಂಚಮಿ
ನಕ್ಷತ್ರ: ಚಿತ್ರ
ಸೂರ್ಯೋದಯ: ಮುಂಜಾನೆ 06:34 ಗಂಟೆಗೆ
ಅಮೃತಕಾಲ : ಮುಂಜಾನೆ 09:32 ರಿಂದ 11:01 ಗಂಟೆವರೆಗೆ
ರಾಹುಕಾಲ : ಮಧ್ಯಾಹ್ನ 13:59 ರಿಂದ 15:28 ಗಂಟೆವರೆಗೆ
ದುರ್ಮುಹೂರ್ತಂ: ಮಧ್ಯಾಹ್ನ 10:34 ರಿಂದ 11:22 ಗಂಟೆವರೆಗೆ ಹಾಗೂ ಮಧ್ಯಾಹ್ನ 15:22 ರಿಂದ 16:10 ಗಂಟೆವರೆಗೆ
ಸೂರ್ಯಾಸ್ತ: ಸಂಜೆ 06:26 ಗಂಟೆಗೆ
ವರ್ಜ್ಯಂ: ಸಂಜೆ 18:15 ರಿಂದ 19:50 ಗಂಟೆವರೆಗೆ
ಇಂದಿನ ರಾಶಿ ಭವಿಷ್ಯ :
ಮೇಷ : ನೀವು ಇಂದು ನಿಮ್ಮ ನೋಟ ಹಾಗೂ ನಿಮ್ಮ ಸಾಮರ್ಥ್ಯಗಳಿಂದಾಗಿ ಪ್ರತಿಯೊಬ್ಬರ ಗಮನ ಸೆಳೆಯುತ್ತೀರಿ. ನಿಮ್ಮನ್ನು ನೀವು ನವೋತ್ಸಾಹಗೊಳಿಸಲು ನೀವು ಅತ್ಯುತ್ತಮ ಪ್ರಯತ್ನ ನಡೆಸಬೇಕು. ನೀವು ಪಡೆದ ಶಕ್ತಿಯಿಂದ ನೀವು ಸಾಕಷ್ಟು ಸಾಧನೆ ಮಾಡುತ್ತೀರಿ.
ವೃಷಭ : ಇದು ಅತ್ಯಂತ ದೃಢವಾಗಿರಲು ಅಥವಾ ಬೇಡಿಕೆಯಿಂದಿರಲು ಒಳ್ಳೆಯ ದಿನವಲ್ಲ. ನೀವು ಸಂಘರ್ಷಗಳು, ವಾದ-ವಿವಾದಗಳು ಮತ್ತು ಬಿಕ್ಕಟ್ಟುಗಳಿಂದ ದೂರ ಇರುವುದು ಸೂಕ್ತ. ನೀವು ತಿಕ್ಕಾಟ ತಪ್ಪಿಸದೇ ಇದ್ದಲ್ಲಿ ನೀವು ಹೆಜ್ಜೆ ಹಿಂದೆ ಇರಿಸಬೇಕಾಗುತ್ತದೆ. ಮುಖಭಂಗ ಮತ್ತು ಆತ್ಮಗೌರವಕ್ಕೆ ಧಕ್ಕೆಯನ್ನು ತಪ್ಪಿಸಲಾಗದು.
ಮಿಥುನ : ಅದೃಷ್ಟದೇವತೆ ನಿಮ್ಮತ್ತ ಕೃಪೆ ಬೀರುವ ಸಾಧ್ಯತೆ ಇದೆ. ನೀವು ಸಾಮಾನ್ಯವಾಗಿ ಸಂಕೋಚದವರು. ಆದರೆ ಇದು ಮತ್ತೊಂದು ದಿನದಂತಲ್ಲ. ನೀವು ಸಕ್ರಿಯರಾಗಿರುತ್ತೀರಿ ಮತ್ತು ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಶಕ್ತರಾಗುತ್ತೀರಿ. ಈ ತಾತ್ಕಾಲಿಕ ಬದಲಾವಣೆ ನಿಮ್ಮ ಅಹಂಗೆ ಸಾಕಷ್ಟು ಒಳ್ಳೆಯದು ಮಾಡುತ್ತದೆ.
ಕರ್ಕಾಟಕ : ನಿಮ್ಮ ಉದ್ಯೋಗದ ಜೀವನ ಪ್ರಮುಖ ಕ್ಷಣ ತಲುಪಲಿದೆ. ನೀವು ವರ್ಗಾವಣೆ, ಬಡ್ತಿ ಅಥವಾ ವೇತನ ಹೆಚ್ಚಳ ನಿರೀಕ್ಷಿಸಬಹುದು. ಇದರೊಂದಿಗೆ ನಿಮ್ಮ ಜವಾಬ್ದಾರಿಗಳೂ ಹೆಚ್ಚಲಿವೆ. ಹೊಸ ಉದ್ಯೋಗದ ಸಾಧ್ಯತೆ ಇದೆ. ನೀವು ಆಕರ್ಷಕ ಉದ್ಯೋಗದ ಆಫರ್ ನಿರಾಕರಿಸುತ್ತೀರಿ.
ಸಿಂಹ : ಮರುಅನ್ವೇಷಣೆ ಮತ್ತು ಪುನರುಜ್ಜೀವನ ಈ ಎರಡು ಪದಗಳು ಇಂದು ನಿಮ್ಮ ವಿಚಾರಪರತೆಯನ್ನು ನಿರ್ದೇಶಿಸುತ್ತವೆ. ಒಬ್ಬರ ರಿಪೇರಿ ಎಂದರೆ ಸದಾ ಹೊಸದಕ್ಕೆ ಸಂಬಂಧಿಸಿದಾಗಿರಬೇಕು ಎಂದೇನೂ ಅಲ್ಲ; ಹಿಂದಕ್ಕೆ ಹೊರಳುನೋಟ ಕೂಡಾ ಸಾಮಾನ್ಯವಾಗಿ ಜ್ಞಾನ ನೀಡುವಂತಹುದು.
ಕನ್ಯಾ : ಇಂದು, ನೀವು ಸಮಾನವಾಗಿ ವ್ಯಾಪಾರ ಮತ್ತು ಮನರಂಜನೆಯನ್ನು ಸಮತೋಲನ ಮಾಡುತ್ತೀರಿ. ಈ ದಿನ ಕೊನೆಯಿರದ ಜನಸಂದಣಿ ಉಂಟಾಗುತ್ತಿರುತ್ತದೆ. ಜೇಬು ಖಾಲಿಯಾಗುವುದು ನೀವು ಏನನ್ನೂ ಮಾಡದೆ ಕಳೆಯುವ ಕಾಲದ ಪ್ರಮಾಣ ಆಧರಿಸಿರುತ್ತದೆ. ಆದರೆ, ನೀವು ವಿವೇಚನೆಯಿಂದ ಖರ್ಚು ಮಾಡುವುದು ಸೂಕ್ತ ಮತ್ತು ಅದು ನಿಮಗೆ ಚಿಂತೆ ಉಂಟು ಮಾಡದೇ ಇರಲಿ.
ತುಲಾ : ಸಂಪರ್ಕ ಮತ್ತು ಅಭಿವ್ಯಕ್ತಿ ಇವು ನೀವು ಇಂದು ಕೆಲಸದಲ್ಲಿ ಇರಿಸಿಕೊಳ್ಳಬೇಕಾದ ಎರಡು ಅಂಶಗಳು. ನೀವು ಎರಡೂ ವಿಷಯಗಳನ್ನು ಅತ್ಯುತ್ತಮವಾಗಿ ಮಾಡಬಲ್ಲಿರಿ. ಅದು ಟೆಲಿಫೋನ್ನಲ್ಲಿ ವ್ಯಾಪಾರದ ಮಾತುಕತೆ, ಬರಹ ಅಥವಾ ಸಭೆಗಳಾಗಿರಲಿ. ಇಂದು ಜನರನ್ನು ಪಡೆಯುವುದು ಸಮಸ್ಯೆಯೇ ಅಲ್ಲ.
ವೃಶ್ಚಿಕ : ಬಾಂಧವ್ಯಗಳನ್ನು ನೋಡುವ ವಿಧಾನಕ್ಕೆ ಸಂಪೂರ್ಣ ಹೊಸ ಆಯಾಮ ಸೇರ್ಪಡೆ ಮಾಡಲು ಇಂದು ಪ್ರಯತ್ನಿಸಿ. ಮಾರ್ಪಡಿಸಬಲ್ಲವರಾಗುವುದು ನಿಮ್ಮ ಹತ್ತಿರದವರ ಬಾಂಧವ್ಯಗಳಲ್ಲಿನ ಸುಕ್ಕುಗಳನ್ನು ನಯ ಮಾಡಬಲ್ಲದು. ಆದರೆ ಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳುವ ಬಗ್ಗೆ ಜಾಗರೂಕರಾಗಿರಿ.
ಧನು : ಸೊಗಸಾದ, ಸುಲಭದ ಮತ್ತು ಸಂತೋಷದ ದಿನ ನಿಮಗಾಗಿ ಕಾದಿದೆ. ನಿಮ್ಮ ವೃತ್ತಿಪರ ನಡವಳಿಕೆ ಅದರಲ್ಲೂ ನೀವು ಸಂಕೀರ್ಣ ಸಮಸ್ಯೆಗಳ ನಿಭಾಯಿಸುವುದರ ಕುರಿತು ನಿಮಗೆ ಹೆಚ್ಚು ಶ್ಲಾಘನೆಯನ್ನು ತರುತ್ತದೆ. ಜನರ ಭಾವನೆಗಳನ್ನು ನೀವು ಸಮತೋಲನ ಮಾಡುವ ವಿಧಾನ ನಿಮಗೆ ಹಲವು ಮಿತ್ರರನ್ನು ಮಾಡಿಕೊಳ್ಳಲು ನೆರವಾಗುತ್ತದೆ.
ಮಕರ : ಗತಕಾಲದ ನೆನಪುಗಳು ನಿಮ್ಮ ಮನಸ್ಸಿನಲ್ಲಿ ಹಳೆಯದರ ಹಂಬಲ ತರುತ್ತವೆ. ಹಳೆಯ ಗೆಳೆಯರೊಂದಿಗೆ ಸಂಪರ್ಕದಲ್ಲಿರಲು ಒತ್ತಾಯಿಸುತ್ತವೆ. ಮತ್ತೊಂದೆಡೆ, ನಿಮ್ಮ ಪ್ರೀತಿಪಾತ್ರರು ನೀವು ಕೊಡುವುದಕ್ಕಿಂತ ಹೆಚ್ಚು ಒತ್ತಾಯಿಸುತ್ತಾರೆ. ಆದರೆ, ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಕೆಲ ಹಗುರ ಕ್ಷಣಗಳನ್ನು ಆನಂದಿಸುವುದು ನಿಮ್ಮ ಭಾರ ಇಳಿಸುತ್ತದೆ ಮತ್ತು ಮುಂದಿನ ದಿನಕ್ಕೆ ನಿಮಗೆ ಶಕ್ತಿ ತುಂಬುತ್ತದೆ.
ಕುಂಭ : ಇಂದು ಸಂತೋಷ ಮತ್ತು ನೋವಿನ ದಿನ. ಸ್ವಚ್ಛಗೊಳಿಸುವುದು, ಆಹಾರ ಕೊಳ್ಳುವುದು, ಅಡುಗೆ ಮಾಡುವುದರಿಂದ ಯಾವುದೇ ಆದರೂ ನಿಮ್ಮನ್ನು ಅತ್ಯಂತ ಒತ್ತಡದಲ್ಲಿರಿಸುತ್ತದೆ. ನಂತರ, ನೀವು ಶಾಂತಗೊಳಿಸುವ ಮಸಾಜ್ ಮೂಲಕ ನೆಮ್ಮದಿ ಪಡೆಯಬಹುದು. ನೋವಿನ ನಂತರ ಆನಂದಕ್ಕೆ ನೀವು ಕೃತಜ್ಞರಾಗಿರುತ್ತೀರಿ.
ಮೀನ : ನೀವು ಸ್ವಭಾವತಃ ಮುಂಗೋಪಿ ಅಥವಾ ಅಸೂಯೆ ಉಳ್ಳವರಲ್ಲ. ಆದರೆ, ಇಂದು ಈ ಎರಡನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಒಳ್ಳೆಯದು. ಯಾರೋ ಒಬ್ಬರು ಇಂದು ನಿಮ್ಮ ಘನತೆಗೆ ಧಕ್ಕೆಯುಂಟು ಮಾಡಬಹುದು ಅಥವಾ ನಿಮ್ಮ ಹೆಸರು ಕೆಡಿಸಬಹುದು. ಆದರೆ, ಪ್ರಚೋದನೆಯನ್ನು ಎದುರಿಸುವ ಅತ್ಯುತ್ತಮ ವಿಧಾನವೆಂದರೆ ತಾಳ್ಮೆ ಕಳೆದುಕೊಳ್ಳದೆ ಸಹಜವಾಗಿ ಮುಂದುವರೆಯುವುದು.