ETV Bharat / international

ಹೆರಿಗೆ ವೇಳೆ ಮುರಿದ ಮಗುವಿನ ಕತ್ತು: ಇದು ವೈದ್ಯರ ನರಹತ್ಯೆ ಎಂದು ವಕೀಲರ ವಾದ

author img

By ETV Bharat Karnataka Team

Published : Feb 8, 2024, 12:00 PM IST

ಜಾರ್ಜಿಯಾದಲ್ಲಿ ಹೆರಿಗೆ ಸಮಯದಲ್ಲಿ ನಡೆದ ಮಗುವಿನ ಸಾವಿನ ಪ್ರಕರಣ ಕುರಿತು ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

decapitated-baby-medical-examiner-rules-death-during-delivery-as-homicide
decapitated-baby-medical-examiner-rules-death-during-delivery-as-homicide

ಅಟ್ಲಾಂಟಾ: ಹೆರಿಗೆ ಸಂದರ್ಭದಲ್ಲಿ ಜಾರ್ಜಿಯಾ ದಂಪತಿಯ ಮಗುವಿನ ಕತ್ತು ಮುರಿದಿರುವಿಕೆ ಪ್ರಕರಣವೂ ವೈದ್ಯಕೀಯ ಪರೀಕ್ಷಕರು ನಡೆಸಿರುವ ನರ ಹತ್ಯೆಯಾಗಿದೆ ಎಂದು ದಂಪತಿಯ ವಕೀಲರು ವಾದಿಸಿದ್ದಾರೆ.

ಜೆಸ್ಸಿಕಾ ರಾಸ್ ಮತ್ತು ಟ್ರೆವಿಯಾನ್ ಇಸಯಾ ಟೇಲರ್ ಸೀನಿಯರ್ ದಂಪತಿಗಳು ಈ ಸಂಬಂಧ ಮೊಕದ್ಧಮೆ ಹೂಡಿದ್ದಾರೆ. ಜೆಸ್ಸಿಕಾ ರಾಸ್​ ಹೆರಿಗೆ ವೇಳೆ ವೈದ್ಯರು ಅಜಾಗರೂಕತೆಯಿಂದ ಮಗುವಿನ ಕತ್ತು ಮುರಿದಿದೆ ಎಂದು ಆಪಾದಿಸಿ ಈ ದಂಪತಿ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಮೊಕದ್ಧಮೆ ಹೂಡಿದ್ದರು. ಆದರೆ, ವೈದ್ಯರು ಮತ್ತು ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದೆ.

ಈ ಪ್ರಕರಣ ಕುರಿತು ಕ್ಲೇಟನ್ ಕೌಂಟಿ ಮೆಡಿಕಲ್​ ಎಕ್ಸಾಮಿನರ್ ಆಫೀಸ್​​ ಬಿಡುಗಡೆ ಮಾಡಿರುವ ವರದಿಯಲ್ಲಿ ಕೂಡ ಮಗುವಿನ ಸಾವಿಗೆ ಕುತ್ತಿಗೆ ಮುರಿತ ಕಾರಣ ಆಗಿದೆ ಎಂಬ ವರದಿ ಬಂದಿದೆ. ಇದರ ಬಳಿಕದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಕೀಲರು, ಇದು ಮಾನವರು ಮಾಡಿದ ಕೆಲಸದಿಂದ ಆಗಿರುವ ಅಪರಾಧ ಎಂದಿದ್ದಾರೆ

ಜೆಸ್ಸಿಕಾ ರೋಸ್​ ಗುಂಡು ಮಗುವಿನ ಹೆರಿಗೆಗೆ ಡಾ ಸೆಂಟ್​ ಜೂಲಿಯನ್​ ಮುಂದಾಳತ್ವ ವಹಿಸಿದ್ದರು. ಆದರೆ, ಅವರು ಸರ್ಜರಿ ಪ್ರಕ್ರಿಯೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಮಗು ಹೊರತೆಗೆಯಲು ಸಾಧ್ಯವಾಗದೇ ಹೋದಾಗಲೂ ಅವರು ಇತರ ವೈದ್ಯರ ಸಹಾಯವನ್ನು ಕೇಳುವ ಬದಲಾಗಿ, ಮಗುವಿನ ತಲೆ ಮತ್ತು ಕುತ್ತಿಗೆ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.

ಆದರೆ, ಈ ಕುರಿತು ಪ್ರತಿವಾದ ಮಂಡಿಸಿರುವ ವೈದ್ಯರೂ ಆಗಿರುವ ವಕೀಲ ರೋಡೆರಿಕ್ ಎಡ್ಮಂಡ್, ಇದು ಸಂಪೂರ್ಣವಾಗಿ ವಿರುದ್ಧ ವಾದವಾಗಿದೆ. ಯಾವುದೇ ಪ್ರಸೂತಿ ತಜ್ಞರು ಈ ರೀತಿ ಮಾಡಲಾರರು. ಈ ಆರೋಪವೂ ಅಸಮಂಜಸವಾದವಾಗಿದ್ದು, ನಂಬಲಾರ್ಹವಾಗಿಲ್ಲ ಎಂದಿದ್ದಾರೆ. ಮಗು ಸಾವಿಗೆ ಮೊದಲೇ ಕತ್ತು ಮುರಿದಿತ್ತು ಎಂಬ ವಾದವನ್ನು ಸೇಂಟ್ ಜೂಲಿಯನ್ ಪರ ವಕೀಲರು ಅಲ್ಲಗಳೆದಿದ್ದಾರೆ. ಈ ಎಲ್ಲಾ ದುರ್ಘಟನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾಗಿ ವರದಿಯಾಗುತ್ತದೆ. ವೈದ್ಯರಿಂದ ಯಾವುದೇ ರೀತಿ ತಪ್ಪು ಆಗದಿದ್ದರೂ ಈ ರೀತಿ ಸಂಭವಿಸಬಹುದು ಎಂದಿದ್ದಾರೆ.

ಮತ್ತೊಬ್ಬ ವಕೀಲ ಸ್ಕಾಟ್​ ಬೈಲೆ ಈ ಕುರಿತು ಸೆಪ್ಟೆಂಬರ್​ನಲ್ಲಿ ಮಾತನಾಡಿದ್ದು, ಪ್ರತಿಯೊಬ್ಬ ವೈದ್ಯರು ಹೆರಿಗೆ ಸಂದರ್ಭದಲ್ಲಿ ಮಗುವಿನ ಕುತ್ತಿಗೆ ಸಿಕ್ಕಿಕೊಂಡಾಗ ಮಾಡುವ ಕ್ರಮವನ್ನೇ ನಿರ್ವಹಿಸಲಾಗಿದೆ. ಅಲ್ಲದೇ, ರಾಸ್​ ಜೀವ ಉಳಿಸುವ ಸಂದರ್ಭದಲ್ಲಿ ಸಿಸೇರಿಯನ್​ ಹೆರಿಗೆ ವೇಳೆ ಮಗುವಿನ ಸಾವಿನ ಬಳಿಕ ತಲೆ ಮತ್ತು ಕುತ್ತಿಗೆ ಮುರಿದಿದೆ ಎಂದಿದ್ದಾರೆ. ಆದರೆ, ರಾಸ್​ ಮತ್ತು ಟೇಲರ್​ ಇದಕ್ಕೆ ಸಂಬಂಧಿಸಿದಂತೆ ಸಲ್ಲದ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಜಾರ್ಜಿಯಾದ ರಿವರ್‌ಡೇಲ್‌ನಲ್ಲಿರುವ ಸೌತ್​​ ರಿಜಿನಲ್​ ಮೆಡಿಕಲ್​ ಸೆಂಟರ್​ನಲ್ಲಿ ಮಗು ಜನಿಸಿದ್ದು, ಆಸ್ಪತ್ರೆ ಕೂಡ ಮಗುವ ಭ್ರೂಣದಲ್ಲಿಯೇ ಸಾವನ್ನಪ್ಪಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಇದರಲ್ಲಿ ಯಾವುದೇ ನಿರ್ಲಕ್ಷ್ಯ ಇಲ್ಲ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ. ಮೊಕದ್ದಮೆ ಹಿನ್ನೆಲೆ ಈ ಪ್ರಕರಣದ ಸಂಬಂಧ ಆಸ್ಪತ್ರೆ ವಕ್ತಾರರಾದ ಮೆಲಿಂಡಾ ಫುಲ್ಕ್ಸ್ ಯಾವುದೇ ಹೇಳಿಕೆ ನೀಡಿಲ್ಲ.

ರಾಸ್​ ದಂಪತಿಗಳು ಈ ಪ್ರಕರಣ ಸಂಬಂಧ ನವೆಂಬರ್​ನಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. ಈ ಕುರಿತು ಮೇಲ್​ನಲ್ಲಿ ತಿಳಿಸಿರುವ ಕ್ಲೇಟನ್ ಪೊಲೀಸ್ ಮೇಜರ್ ಫ್ರಾಂಕ್, ಪ್ರಕರಣ ತನಿಖೆ ನಡೆಯುತ್ತಿದ್ದು, ಇಲಾಖೆಯ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

(ಈ ಲೇಖನದ ಶಿರೋನಾಮೆ ಹೊರತು ಪಡಿಸಿ ಈ ಟಿವಿ ಭಾರತ ಸುದ್ದಿಯ ಸಾರಾಂಶದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ)

ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ; ತಿಂಗಳಲ್ಲಿ 6ನೇ ಘಟನೆ

ಅಟ್ಲಾಂಟಾ: ಹೆರಿಗೆ ಸಂದರ್ಭದಲ್ಲಿ ಜಾರ್ಜಿಯಾ ದಂಪತಿಯ ಮಗುವಿನ ಕತ್ತು ಮುರಿದಿರುವಿಕೆ ಪ್ರಕರಣವೂ ವೈದ್ಯಕೀಯ ಪರೀಕ್ಷಕರು ನಡೆಸಿರುವ ನರ ಹತ್ಯೆಯಾಗಿದೆ ಎಂದು ದಂಪತಿಯ ವಕೀಲರು ವಾದಿಸಿದ್ದಾರೆ.

ಜೆಸ್ಸಿಕಾ ರಾಸ್ ಮತ್ತು ಟ್ರೆವಿಯಾನ್ ಇಸಯಾ ಟೇಲರ್ ಸೀನಿಯರ್ ದಂಪತಿಗಳು ಈ ಸಂಬಂಧ ಮೊಕದ್ಧಮೆ ಹೂಡಿದ್ದಾರೆ. ಜೆಸ್ಸಿಕಾ ರಾಸ್​ ಹೆರಿಗೆ ವೇಳೆ ವೈದ್ಯರು ಅಜಾಗರೂಕತೆಯಿಂದ ಮಗುವಿನ ಕತ್ತು ಮುರಿದಿದೆ ಎಂದು ಆಪಾದಿಸಿ ಈ ದಂಪತಿ ವೈದ್ಯರು ಮತ್ತು ಆಸ್ಪತ್ರೆ ವಿರುದ್ಧ ಮೊಕದ್ಧಮೆ ಹೂಡಿದ್ದರು. ಆದರೆ, ವೈದ್ಯರು ಮತ್ತು ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದೆ.

ಈ ಪ್ರಕರಣ ಕುರಿತು ಕ್ಲೇಟನ್ ಕೌಂಟಿ ಮೆಡಿಕಲ್​ ಎಕ್ಸಾಮಿನರ್ ಆಫೀಸ್​​ ಬಿಡುಗಡೆ ಮಾಡಿರುವ ವರದಿಯಲ್ಲಿ ಕೂಡ ಮಗುವಿನ ಸಾವಿಗೆ ಕುತ್ತಿಗೆ ಮುರಿತ ಕಾರಣ ಆಗಿದೆ ಎಂಬ ವರದಿ ಬಂದಿದೆ. ಇದರ ಬಳಿಕದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಕೀಲರು, ಇದು ಮಾನವರು ಮಾಡಿದ ಕೆಲಸದಿಂದ ಆಗಿರುವ ಅಪರಾಧ ಎಂದಿದ್ದಾರೆ

ಜೆಸ್ಸಿಕಾ ರೋಸ್​ ಗುಂಡು ಮಗುವಿನ ಹೆರಿಗೆಗೆ ಡಾ ಸೆಂಟ್​ ಜೂಲಿಯನ್​ ಮುಂದಾಳತ್ವ ವಹಿಸಿದ್ದರು. ಆದರೆ, ಅವರು ಸರ್ಜರಿ ಪ್ರಕ್ರಿಯೆ ಮಾಡುವಲ್ಲಿ ವಿಫಲರಾಗಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಮಗು ಹೊರತೆಗೆಯಲು ಸಾಧ್ಯವಾಗದೇ ಹೋದಾಗಲೂ ಅವರು ಇತರ ವೈದ್ಯರ ಸಹಾಯವನ್ನು ಕೇಳುವ ಬದಲಾಗಿ, ಮಗುವಿನ ತಲೆ ಮತ್ತು ಕುತ್ತಿಗೆ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿದೆ.

ಆದರೆ, ಈ ಕುರಿತು ಪ್ರತಿವಾದ ಮಂಡಿಸಿರುವ ವೈದ್ಯರೂ ಆಗಿರುವ ವಕೀಲ ರೋಡೆರಿಕ್ ಎಡ್ಮಂಡ್, ಇದು ಸಂಪೂರ್ಣವಾಗಿ ವಿರುದ್ಧ ವಾದವಾಗಿದೆ. ಯಾವುದೇ ಪ್ರಸೂತಿ ತಜ್ಞರು ಈ ರೀತಿ ಮಾಡಲಾರರು. ಈ ಆರೋಪವೂ ಅಸಮಂಜಸವಾದವಾಗಿದ್ದು, ನಂಬಲಾರ್ಹವಾಗಿಲ್ಲ ಎಂದಿದ್ದಾರೆ. ಮಗು ಸಾವಿಗೆ ಮೊದಲೇ ಕತ್ತು ಮುರಿದಿತ್ತು ಎಂಬ ವಾದವನ್ನು ಸೇಂಟ್ ಜೂಲಿಯನ್ ಪರ ವಕೀಲರು ಅಲ್ಲಗಳೆದಿದ್ದಾರೆ. ಈ ಎಲ್ಲಾ ದುರ್ಘಟನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾಗಿ ವರದಿಯಾಗುತ್ತದೆ. ವೈದ್ಯರಿಂದ ಯಾವುದೇ ರೀತಿ ತಪ್ಪು ಆಗದಿದ್ದರೂ ಈ ರೀತಿ ಸಂಭವಿಸಬಹುದು ಎಂದಿದ್ದಾರೆ.

ಮತ್ತೊಬ್ಬ ವಕೀಲ ಸ್ಕಾಟ್​ ಬೈಲೆ ಈ ಕುರಿತು ಸೆಪ್ಟೆಂಬರ್​ನಲ್ಲಿ ಮಾತನಾಡಿದ್ದು, ಪ್ರತಿಯೊಬ್ಬ ವೈದ್ಯರು ಹೆರಿಗೆ ಸಂದರ್ಭದಲ್ಲಿ ಮಗುವಿನ ಕುತ್ತಿಗೆ ಸಿಕ್ಕಿಕೊಂಡಾಗ ಮಾಡುವ ಕ್ರಮವನ್ನೇ ನಿರ್ವಹಿಸಲಾಗಿದೆ. ಅಲ್ಲದೇ, ರಾಸ್​ ಜೀವ ಉಳಿಸುವ ಸಂದರ್ಭದಲ್ಲಿ ಸಿಸೇರಿಯನ್​ ಹೆರಿಗೆ ವೇಳೆ ಮಗುವಿನ ಸಾವಿನ ಬಳಿಕ ತಲೆ ಮತ್ತು ಕುತ್ತಿಗೆ ಮುರಿದಿದೆ ಎಂದಿದ್ದಾರೆ. ಆದರೆ, ರಾಸ್​ ಮತ್ತು ಟೇಲರ್​ ಇದಕ್ಕೆ ಸಂಬಂಧಿಸಿದಂತೆ ಸಲ್ಲದ ಸಾರ್ವಜನಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಜಾರ್ಜಿಯಾದ ರಿವರ್‌ಡೇಲ್‌ನಲ್ಲಿರುವ ಸೌತ್​​ ರಿಜಿನಲ್​ ಮೆಡಿಕಲ್​ ಸೆಂಟರ್​ನಲ್ಲಿ ಮಗು ಜನಿಸಿದ್ದು, ಆಸ್ಪತ್ರೆ ಕೂಡ ಮಗುವ ಭ್ರೂಣದಲ್ಲಿಯೇ ಸಾವನ್ನಪ್ಪಿತ್ತು ಎಂದು ತಿಳಿಸಿದ್ದಾರೆ. ಅಲ್ಲದೇ ಇದರಲ್ಲಿ ಯಾವುದೇ ನಿರ್ಲಕ್ಷ್ಯ ಇಲ್ಲ ಎಂಬ ಆರೋಪವನ್ನು ಅಲ್ಲಗಳೆದಿದ್ದಾರೆ. ಮೊಕದ್ದಮೆ ಹಿನ್ನೆಲೆ ಈ ಪ್ರಕರಣದ ಸಂಬಂಧ ಆಸ್ಪತ್ರೆ ವಕ್ತಾರರಾದ ಮೆಲಿಂಡಾ ಫುಲ್ಕ್ಸ್ ಯಾವುದೇ ಹೇಳಿಕೆ ನೀಡಿಲ್ಲ.

ರಾಸ್​ ದಂಪತಿಗಳು ಈ ಪ್ರಕರಣ ಸಂಬಂಧ ನವೆಂಬರ್​ನಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ. ಈ ಕುರಿತು ಮೇಲ್​ನಲ್ಲಿ ತಿಳಿಸಿರುವ ಕ್ಲೇಟನ್ ಪೊಲೀಸ್ ಮೇಜರ್ ಫ್ರಾಂಕ್, ಪ್ರಕರಣ ತನಿಖೆ ನಡೆಯುತ್ತಿದ್ದು, ಇಲಾಖೆಯ ಯಾವುದೇ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

(ಈ ಲೇಖನದ ಶಿರೋನಾಮೆ ಹೊರತು ಪಡಿಸಿ ಈ ಟಿವಿ ಭಾರತ ಸುದ್ದಿಯ ಸಾರಾಂಶದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ)

ಇದನ್ನೂ ಓದಿ: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ; ತಿಂಗಳಲ್ಲಿ 6ನೇ ಘಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.